ಸಾಗರ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವೀಡಿಯೋಗಳನ್ನು ಹರಿಯಬಿಟ್ಟು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕನೋರ್ವವನ್ನು ಬಂಧಿಸಲಾಗಿದೆ.
ನಿನ್ನೆ ಸಾಗರದಲ್ಲಿ ಟಿಪ್ಪು ಸಹಾರ ಸಂಘಟನೆಯಿಂದ ’ಜಾರ್ಕಾಂಡ್ನಲ್ಲಿ ಮುಸ್ಲಿಂ ಯುವಕನ ಹತ್ಯೆ ನಡೆದಿದೆ’ ಎಂದು ಆರೋಪಿಸಿ ಪ್ರತಿಭಟನೆ ನಡೆದಿತ್ತು. ಸೂಕ್ತ ಪೋಲೀಸ್ ಭದ್ರತೆಯೊಂದಿಗೆ ನಡೆದಿದ್ದ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಆದರೆ, ಅದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, ಸುಫಿಯಾನ್ ಎಂಬ ಯುವಕನು ಟಿಕ್ಟಾಕ್ ಮೊಬೈಲ್ ಆಪ್ ಬಳಸಿ ಅದರಲ್ಲಿ ನಿನ್ನೆ ನಡೆದ ಪ್ರತಿಭಟನೆಯ ವೀಡಿಯೋ ಜೊತೆ ಆರ್’ಎಸ್’ಎಸ್ ಸೇರಿದಂತೆ ಹಿಂದೂ ಸಂಘಟನೆಗಳನ್ನು ಅವಹೇಳನ ಮಾಡಿ ಕೂಗಿದ ಘೋಷಣೆಗಳನ್ನು ಸೇರಿಸಿ ವೀಡಿಯೋ ಎಡೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಬಿಟ್ಟಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಮೂಲಕ ಸಾಗರದಲ್ಲಿ ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ಮಾಡಿದ್ದಾನೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಹಿಂದೂ ಸಂಘಟನೆಗಳಿಂದ ಮಾಹಿತಿ ತಿಳಿದ ಸಾಗರ ನಗರ ಪೇಟೆ ಠಾಣೆ ಪೋಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
Discussion about this post