No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Tuesday, August 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ನಾದ ಕಲ್ಪ

ದೇವರ ನಾಡಿನ ಪ್ರಶಾಂತ ಗೋ ಭೂಮಿಯಲ್ಲಿ ಸಂಗೀತದ ರಸದೌತಣ

kalpa News by kalpa News
November 12, 2025
in ನಾದ ಕಲ್ಪ
0
ದೇವರ ನಾಡಿನ ಪ್ರಶಾಂತ ಗೋ ಭೂಮಿಯಲ್ಲಿ ಸಂಗೀತದ ರಸದೌತಣ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಕೇರಳ  |

ಇಲ್ಲಿನ ಬೇಕಲ್ ಗೋಕುಲಂ ಗೋಶಾಲೆಯಲ್ಲಿ ಪ್ರತಿ ವರ್ಷ ದೀಪಾವಳಿಯ ಉತ್ಸವ ಬಹಳ ವಿಶೇಷ. ಅಂತೆಯೇ, ಈ ವರ್ಷದ ಉತ್ಸವ ಹದಿಮೂರು ದಿವಸ ವರುಣನ ಮಳೆಯ ಝರಿಯ ನಡುವೆ ನಡೆದಿದ್ದು ವಿಶೇಷ.

ದೇವರ ನಾಡಿನಲ್ಲಿ ಸಂಗೀತದ ನವರಸದ ಝರಿ ಎಲ್ಲರನ್ನೂ ನಂದಗೋಕುಲಕ್ಕೆ ಕೊಂಡೊಯ್ದ ಅನುಭವ. ನಿರಾತಂಕವಾಗಿ ಗಾನಸುಧೆಯಲ್ಲೇ ಲಯಿಸಿರುವ ಇಲ್ಲಿನ ಗೋವುಗಳು ನಿಜಕ್ಕೂ ಧನ್ಯ. ಇಡೀ ದಿನ ಅನವರತ ಸಂಗೀತದ ಸುರಿಮಳೆ ಇದಕ್ಕೆ ಈ ಬಾರಿ ಪೂರಕ.

ಕಛೇರಿಗಳನ್ನು ನಡೆಸಿಕೊಟ್ಟವರು ನಮ್ಮ ನಾಡಿನ ಹೆಸರಾಂತ ಕಲಾವಿದರಿಂದ ಹಿಡಿದು ಉದಯೋನ್ಮುಖ ಪ್ರತಿಭೆಗಳವರೆಗೂ ಎಲ್ಲ ಕಲಾವಿದರೂ ಗೋಪೂಜೆಯನ್ನು ಮಾಡಿ ಕಾರ್ಯಕ್ರಮವನ್ನು ನಡೆಸಿಕೊಡುವುದು ಇಲ್ಲಿಯ ಕ್ರಮ. ಈ ಕಾರ್ಯಕ್ರಮಕ್ಕೆ ಕಲಾವಿದರನ್ನು ಆಹ್ವಾನಿಸುವುದರಿಂದ ಹಿಡಿದು, ವೇಳಾಪಟ್ಟಿಗಳ ಆಯೋಜನೆ, ಸಭೆಯ ವಿನ್ಯಾಸ ಹಾಗೂ ಪೂರ್ವ ಸಿದ್ಧತೆಗಳು, ಎಲ್ಲ ಕಲಾವಿದರು ಹಾಗೂ ಪರಿವಾರದವರಿಗೆ ಊಟ ಹಾಗೂ ವಸತಿ ಸೌಕರ್ಯ ಒದಗಿಸುವ ಹೊಣೆ, ಬರುವ ಎಲ್ಲ ರಸಿಕ ಬಂಧುಗಳಿಗೂ (ಸಾವಿರ ಸಂಖ್ಯೆಯ ಜನಸ್ತೋಮ) ಊಟ ಉಪಹಾರಗಳ ವ್ಯವಸ್ಥೆ ಹೀಗೆ ಪ್ರತಯೊಂದು ವಿಚಾರವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಉತ್ಸವದ ಯಶಸ್ಸಿನ ಹೆಗ್ಗಳಿಕೆ ಅವರದ್ದು.

ಇನ್ನು, ಇವೆಲ್ಲದರೊಂದಿಗೆ ದೀಪಾವಳಿಯ ಆಚರಣೆ, ಗೋವುಗಳ ಪಾಲನೆ, ಇತ್ಯಾದಿ. ಒಂದು ಕಾರ್ಯಕ್ರಮದ ಸಮರ್ಪಕ ಆಚರಣೆಗೆ ಅತ್ಯುತ್ತಮ ತಂಡ ಅವಶ್ಯಕ. ಇಂತಹ ತಂಡವನ್ನು ನಿರ್ಮಿಸಿ ಅದಕ್ಕೆ ಮಾರ್ಗದರ್ಶನ ನೀಡುತ್ತಿರುವವರು ಬೇಕಲ್ ಗೋಕುಲಂ ಗೋಶಾಲೆಯ ಸಂಸ್ಥಾಪಕರಾದ ಶ್ರೀ ವಿಷ್ಣುಪ್ರಸಾದ್ ಹೆಬ್ಬಾರ್ ಹಾಗೂ ಶ್ರೀಮತಿ ನಾಗರತ್ನ ಹೆಬ್ಬಾರ್ ದಂಪತಿಗಳು.

ವಿಷ್ಣು ಪ್ರಸಾದವರು ನಾಡಿನ ಹೆಸರಾಂತ ಜ್ಯೋತಿಷಿಗಳು. ಡಾ.ನಾಗರತ್ನ ಹೆಬ್ಬಾರ್ ಲಂಡನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವೀಧರರು. ನಮ್ಮ ನಾಡಿನ ಶ್ರೇಷ್ಠ ಕಲೆಗಳಾದ ಸಂಗೀತ ನೃತ್ಯಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ಈ ದಂಪತಿಗಳ ಸೇವೆ ಶ್ಲಾಘನೀಯ, ಅನುಕರಣೀಯವಾದುದು.
2021ರಿಂದ ಬೇಕಲ್ ಗೋಕುಲಂ ಗೋಶಾಲೆಯ ಪರಂಪರ ವಿದ್ಯಾಪೀಠ, ದೀಪಾವಳಿಯಲ್ಲಿ ಗೋಪೂಜೆ ಹಾಗೂ ಸಂಗೀತೋತ್ಸವಗಳನ್ನು ಪ್ರಾರಂಭಿಸಿದೆ.
ಗೋವುಗಳು ನಲಿಯುತ್ತಿರುವಲ್ಲಿ ಶ್ರೀ ಕೃಷ್ಣನ ಸಾನ್ನಿಧ್ಯ ಖಂಡಿತ. ಬರುವ ವರ್ಷ ಏಪ್ರಿಲ್ ವೇಳೆಗೆ ಇಲ್ಲಿ ಶ್ರೀ ಕೃಷ್ಣನ ದೇವಸ್ಥಾನವೂ ನಿರ್ಮಾಣವಾಗಲಿದೆ. ಈ ವಿನೂತನ ಪ್ರಕೃತಿಯ ಪರಿಸರದಲ್ಲಿ ಅಕ್ಟೋಬರ್ ಇಪ್ಪತ್ತರಿಂದ ನವೆಂಬರ್ ಒಂದರವರೆಗೆ ಹದಿಮೂರು ದಿವಸ ಬೆಳಗಿನ ಎಂಟು ಗಂಟೆಯಿಂದ ರಾತ್ರಿ ಹನ್ನೊಂದು ಗಂಟಿಯವರೆಗೂ ಸತತವಾಗಿ ಸಂಗೀತದ ರಸದೌತಣ ನಡೆಯಿತು. ಅತ್ಯುತ್ತಮ ಧ್ವನಿವರ್ದಕ, ವೀಡಿಯೋಗಳು, ಕಾರ್ಯಕ್ರಮಗಳ ನೇರಪ್ರಸಾರದೊಂದಿಗೆ ಇದೊಂದು ಮಾದರಿ ಕಾರ್ಯಕ್ರಮ.

ಸಂಗೀತ ಕಲಾನಿಧಿ, ಪದ್ಮವಿಭೂಷಣ, ವಿ.ಟಿ.ವಿ.ಗೋಪಾಲಕೃಷ್ಣ, ಭರತನಾಟ್ಯದ ಮೇರು ಕಲಾವಿದರಾದ ಪದ್ಮವಿಭೂಷಣ ಗುರು ಡಾ. ಪದ್ಮ ಸುಬ್ರಹ್ಮಣ್ಯಮ್, ಡ್ರಮ್ಸ್ ಮಾಂತ್ರಿಕರಾದ ಪದ್ಮಶ್ರೀ, ಕಲೈಮಾಮಣಿ ಡಾ. ಶಿವಮಣಿ, ಸಂಗೀತ ವಿದ್ಯಾನಿಧಿ ಮಾನ್ಯ ಡಾ.ವಿದ್ಯಾಭೂಷಣರು, ಭಾಗವಹಿಸಿ ಕಾರ್ಯಕ್ರಮ ನೀಡಿದ್ದು ಯುವ ಕಲಾವಿದರಿಗೆ ಸ್ಫೂರ್ತಿದಾಯಕವಾಗಿತ್ತು.

ವಿ.ಅಭಿಷೇಕ್ ರಘುರಾಮ್, ಬೆಂಗಳೂರು ಸಹೋದರರು, ವಿ.ಪಟ್ಟಾಬಿರಾಮ ಪಂಡಿತ್, ಚಿತ್ರವೀಣ ಗಣೇಶ್, ವೀಣಾ ವಿದ್ವಾಂಸರುಗಳಾದ ಶ್ರೀ ಎ. ಅನಂತಪದ್ಮನಾಭ, ವಿದುಷಿ ಶ್ರೀಮತಿ ಜಯಲಕ್ಷ್ಮಿ ಶೇಖಋ, ವಿ.ಆರ್.ಕೆ.ಪದ್ಮನಾಭ, ಶ್ರೀ ರಾಜೇಶ್ ವೈದ್ಯ, ವಿ.ಕಣ್ಣನ್ ಬಾಲಕೃಷ್ಣನ್, ವಿ.ಮುಡಿಗೊಂಡಾನ್ ರಮೇಶ್, ವಿ.ಯೋಗವಂದನ, ಬೋನಾಲ ಶಂಕರ ಪ್ರಕಾಶ್, ವಿ.ಸುಕನ್ಯ ರಾಮಗೋಪಾಲ್, ವಿ. ಚೆಂಕೊಟ್ಟೆ ಹರಿಹರ ಸುಬ್ರಹ್ಮಣ್ಯಂ ತಂಡ, ವಿ. ಶಿವಶ್ರೀ ಸ್ಕಂದ ಪ್ರಸಾದ್ ಮುಂತಾದ ಸಂಗೀತದ-ನೃತ್ಯದ ದಿಗ್ಗಜರುಗಳಿಂದ ಹಿಡಿದು ಉದಯೋನ್ಮುಖ ಕಲಾವಿದರವರೆಗೂ ಅನೇಕ ಕಛೇರಿಗಳು ನಡೆಯಿತು.

ವಿ.ಎಸ್.ವಿ.ಸಹನ, ಶ್ರೀ ರಮಣ ಬಾಲಚಂದರ್, ಕು.ಚಾರುಲತ ಚಂದ್ರಶೇಖರ್, ಪಾವನ ಆಚಾರ್ಯ ಮತ್ತು ತಂಡ, ಸ್ನೇಹ ಗೋಮತಿ, ವೈ.ಜಿ.ಶ್ರೀಲತಾ ನಿಕ್ಷಿತ್, ವಿ. ಎಮನಿ ಲಲಿತ ಕೃಷ್ಣ, ವಿ.ಪೂರ್ಣ ಕೃಷ್ಣ, ಮುಂತಾದ ವೈಣಿಕರಿಂದ ಸುಶ್ರಾವ್ಯವಾದ ವೀಣಾನಾದದ ವೈಭವವಾದರೆ, ವಿ. ಪರೂರ್ ಎಂ.ಎ. ಕೃಷ್ಣಸ್ವಾಮಿ, ವಿ. ಅನಂತ ಬಾಲ ಸುಬ್ರಹ್ಮಣ್ಯ, ವಿ.ಅನಂತಲಕ್ಷ್ಮಿ, ವಿ. ವಿಟ್ಟಲ್ ರಾಮಮೂರ್ತಿ, ವಿ.ಬಿ. ಅನಂತಕೃಷ್ಣ, ಶ್ರೇಯ ಅನಂತ್, ಮುಂತಾದ ಘನ ವೈಲಿನ್ ವಾದನದ ಸುನಾದ ಹರಿಯುತ್ತಿರಲು, ವಿ. ಜಯಂತ್, ವಿ. ಶ್ರುತಿ ಸಾಗರ್, ವಿ. ಚಂದನ್ ಕುಮಾರ್ ಮತ್ತು ಅನೇಕ ಸುಮಧುರ ವೇಣುನಾದ ಮೊಳಗುತ್ತಿರಲು, ಮ್ಯಾಂಡೊಲಿನ್, ನಾದಸ್ವರ, ಸ್ಯಾಕ್ಸೊಫೋನ್, ಕೀಬೋರ್ಡ್, ಘಟತರಂಗ, ಕಛೇರಿಗಳು, ಎಂಬತ್ತಕ್ಕೂ ಮೀರಿ ಉತ್ತಮ ಹಾಡುಗಾರಿಕೆ ಕಛೇರಿಗಳು, ಅನೇಕ ನೃತ್ಯ ಕಾರ್ಯಕ್ರಮಗಳು, ಸಮೂಹ ಗಾಯನ, ಭಜನೆ, ನಾಮ ಸಂಕೀರ್ತನೆ, ಹಿಂದುಸ್ತಾನಿ ಗಾಯನ, ಇವೆಲ್ಲಕ್ಕೂ ಉತ್ತಮ ವೈಲಿನ್, ಮೃದಂಗ, ಖಂಜಿರ, ಮೋರ್ಸಿಂಗ್ ವಾದ್ಯಗಳ ಸಹಕಾರ, ಹೀಗೆ ಈ ಸಂಗೀತ ಝರಿಯು ಎಲ್ಲರ ಮನ ತಣಿಸಿತು. ಪ್ರತಿದಿನ ಪ್ರೇಕ್ಷಕರ ಸಂಖ್ಯೆ ಏಳೆಂಟು ಸಾವಿರ ಮೀರಿತ್ತು.ಡಾ.ಪದ್ಮ ಸುಬ್ರಹ್ಮಣ್ಯಂ ಕಲಾ ಸರಸ್ವತಿ. ಅವರ ಅದ್ಭುತ ನೃತ್ಯ ಕಾರ್ಯಕ್ರಮ ವರ್ಣಿಸಲು ಶಬ್ದಗಳು ಸಾಲದು. ಅವರ ಹಿರಿಯ ವಯಸ್ಸಿನಲ್ಲಿ (83 ಅಷ್ಟೆ!) ಇರುವ ಉತ್ಸಾಹ, ವೇದಿಕೆಯಲ್ಲಿ ಕಲಾಪ್ರದರ್ಶನದ ಪರಿಪೂರ್ಣತೆ, ಅಸಾಧಾರಣ ನೃತ್ಯ ಸಂಯೋಜನೆ ಪ್ರೇಕ್ಷಕರನ್ನು ರಸಾನುಭವದ ಪರಾಕಾಷ್ಟತೆಗೆ ತಲುಪಿಸಿತು.

ಕಿಕ್ಕಿರಿದ ಜನಸ್ತೋಮ ಸಂತಸದಿಂದ ಮಾಡುತ್ತಿದ್ದ ಕರತಾಡನ ಮುಗಿಲುಮುಟ್ಟಿತು. ಮೀರಾಬಾಯಿಯ ಭಜನ್ ‘ಪಗಗುಂಗುರು’ ವರ್ಣಕ್ಕೆ ಅಳವಡಿಸಿದ ಅದ್ಭುತ ಪ್ರಸ್ತುತಿ ಇವರ ಕಾರ್ಯಕ್ರಮದ ಮುಖ್ಯ ಬಂಧ. ಈ ನೃತ್ಯಕ್ಕೆ ಮೊದಲು ಇವರ ಶಿಷ್ಯರಾದ ಮಹತಿ ಕಣ್ಣನ್ ಹಾಗೂ ರಮ್ಯ ವೆಂಕಟರಾಮನ್ ಪ್ರಕೃತಿಯಿಂದ ಪರ ಎಂಬ ಶೀರ್ಷಿಕೆಯಡಿ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿದರು.

ದೀಪಾವಳಿ ಸಂಗೀತೋತ್ಸವದ ಕಡೆಯ ಕಾರ್ಯಕ್ರಮ ಮರೆಯಲಾಗದ ಡ್ರಮ್ಸ್ ಶಿವಮಣಿಯವರ ‘ಶಿವತರಂಗಂ’. ಡ್ರಮ್ಸ್, ಆಕ್ಟೋಬಾನ್, ಡರ್ಬೂಕಾ, ಉಡುಕ್ಕೆ, ಹೊಸ ವಿನ್ಯಾಸದ ಘಟ, ಖಂಜಿರ, ಶೇಕರ್ಸ್, ಕಿಕ್ ಡ್ರಮ್, ಸ್ನೇರ್ ಡ್ರಮ್ ಗಳು, ಟಾಬೋರ್, ಬಾಸ್ ಡ್ರಮ್, ಸಿಂಬಲ್ಸ್, ಹೀಗೆ ಇಪತ್ತಕ್ಕೂ ಹೆಚ್ಚು ತಾಳವಾದ್ಯಗಳನ್ನು ಬಳಸಿ ನೀಡಿದ ವಿಶೇಷ ಕಾರ್ಯಕ್ರಮ.

ವಿಷ್ಣುಪ್ರಸಾದ್ ಹೆಬ್ಬಾರ್ ಅವರ ವಿಶೇಷ ಪರಿಕಲ್ಪನೆಯ ಅಪರೂಪದ ಕಾರ್ಯಕ್ರಮ ನಂದೀಶಂ , ಉತ್ತಮ ಹೊಸ ಪ್ರಯೋಗ. ಕೇರಳದ ಪ್ರಸಿದ್ಧ ಪಂಚವಾದ್ಯಗಳಾದ ‘ತಿಮಿಲ’, ಮದ್ದಳಂ’, ‘ಇಡಕ್ಕ’, ‘ಲದ್ದಳಂ’, ಕೊಂಬುಗಳೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ವಾದ್ಯಗಳಾದ ವೀಣೆ, ವೃಲಿನ್, ಮೃದಂಗ, ಘಟ, ಖಂಜಿರಗಳ ಮೇಳೈಕೆಯ ಮೊದಲ ಪ್ರಯತ್ನವೇ ಅದ್ಭುತ ಯಶಸ್ಸನ್ನು ಕಂಡಿತು.ಶ್ರೀ ಮುತ್ತುಸ್ವಾಮಿ ದೀಕ್ಷಿತರ ನಾಟ ರಾಗದ ‘ಮಹಾಗಣಪತಿಂ’ ಇಂದ ಪ್ರಾರಂಭಿಸಿ, ದೇವಸ್ಥಾನದ ರಥೋತ್ಸವದಲ್ಲಿ ನಾದಸ್ವರದಲ್ಲಿ ನುಡಿಸುವ ಗಂಭೀರನಾಟ ರಾಗದ ಮಲ್ಲಾರಿ, ಪುರಂದರದಾಸರ ಚಂದ್ರಚೂಡಶಿವ ದರ್ಬಾರಿಕಾನಡದಲ್ಲಿ, ಗುರು ವಿಷ್ಣುಪ್ರಸಾದ್ ಹೆಬ್ಬಾರ್ ಅವರ ಶಿವ ಹಾಗೂ ಗೋವನ್ನು ಕುರಿತಾದ ರಚನೆಗಳನ್ನು ‘ನಂದೀಶಂ’ ತಂಡ ಸೊಗಸಾಗಿ ಪ್ರಸ್ತುತ ಪಡಿಸಿದರು.

ಪದ್ಮವಿಭೂಷಣ ವಿ.ಟಿ.ವಿ. ಗೋಪಾಲಕೃಷ್ಣ ಅವರ ರೋಮಾಂಚಕ ಕಛೇರಿ ಸದಾ ಕಿವಿಯಲ್ಲಿ ಮೊಳಗುತ್ತಿರುತ್ತದೆ.ಅಸಾಧಾರಣ ಪಾಂಡಿತ್ಯದಿಂದ ಕೂಡಿದ ಪ್ರಸ್ತುತಿ ವಿ.ಮೂಳಿಕುಲಮ್ ಕೆ.ಆರ್. ಹರಿಕೃಷ್ಣ. ವಿದ್ವತ್ಪೂರ್ಣ ಕಛೇರಿಗಳನ್ನು ನೀಡಿದ ಎಲ್ಲ ಗಣ್ಯ ಕಲಾವಿದರಿಗೆ ಅಭಿನಂದನೆಗಳು ಸಲ್ಲುತ್ತದೆ.

ಕಡೆಯ ದಿನದಂದು ಈ ವರ್ಷದ ಗೋಶಾಲೆಯ ಪುರಸ್ಕಾರಗಳನ್ನು ನೀಡಲಾಯಿತು. ಈ ವರ್ಷದ ಗೌರವಗಳಿಗೆ ಪಾತ್ರರಾದ ಕಲಾವಿದರುಗಳು, ‘ಪರಂಪರ ವಿಭೂಷಣ, ಟಿ.ವಿ.ಗೋಪಾಲಕೃಷ್ಣ, ‘ಪರಂಪರ ಶ್ರೀ’ ಡಾ.ಶಿವಮಣಿ, ‘ಪರಂಪರ ಗುರುರತ್ನ ‘ವಿ.ಎ. ಅನಂತಪದ್ಮನಾಭನ್, ‘ಪರಂಪರ ಯುವ ಪ್ರತಿಭ ‘ ವಿ.ಶಿವಶ್ರೀ ಸ್ಕಂದಪ್ರಸಾದ್, ‘ಪರಂಪರ ಬಾಲ ಪ್ರತಿಭ’, ರಾಘವ್ ಕೃಷ್ಣ, ಮ್ಯಾಂಡೊಲಿನ್.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2025/09/Vedic-Maths-New.mp4
https://kalpa.news/wp-content/uploads/2024/04/VID-20240426-WA0008.mp4

Tags: BekalDanceDeepavaliKannada News WebsiteKeralaLatest News KannadaMusic Concertಕೇರಳಗೋಕುಲಂ ಗೋಶಾಲೆಗೋಪೂಜೆದೀಪಾವಳಿನಂದಗೋಕುಲನೃತ್ಯಬೇಕಲ್ಸಂಗೀತಸಂಗೀತೋತ್ಸವ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

SAIL-VISLನಲ್ಲಿ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂವಹನ ಕಾರ್ಯಕ್ರಮ

Next Post

ನ.16 | ನಟನಂ ಬಾಲನಾಟ್ಯ ಕೇಂದ್ರದ ವಿದ್ಯಾರ್ಥಿನಿ ಪ್ರೀತಿ ರಂಗಪ್ರವೇಶ

kalpa News

kalpa News

Next Post
ನ.16 | ನಟನಂ ಬಾಲನಾಟ್ಯ ಕೇಂದ್ರದ ವಿದ್ಯಾರ್ಥಿನಿ ಪ್ರೀತಿ ರಂಗಪ್ರವೇಶ

ನ.16 | ನಟನಂ ಬಾಲನಾಟ್ಯ ಕೇಂದ್ರದ ವಿದ್ಯಾರ್ಥಿನಿ ಪ್ರೀತಿ ರಂಗಪ್ರವೇಶ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL