ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ತಲೆ ನೋವಾಗಿ ಪರಿಣಮಿಸಿರುವ ಉಗ್ರರ ಹೆಡೆಮುರಿ ಕಟ್ಟಲು ಬಿಎಸ್ಎಫ್ ಸ್ನೈಪರ್ಗಳೊಂದಿಗೆ ಈಗ ರಾಷ್ಟ್ರೀಯ ಭದ್ರತಾ ಪಡೆ(ಎನ್ಎಸ್ಜಿ) ಯೋಧರು ಸೇರಿಕೊಂಡಿದ್ದು, ಇನ್ನು ಮುಂದೆ ಅಕ್ಷರಶಃ ಉಗ್ರರನ್ನು ಬೇಟೆಯಾಡುವುದು ನಿಶ್ಚಿತ.
ಶ್ರೀನಗರದ ಬಳಿಯಿರುವ ಹುಮಾಹಾ ಪ್ರದೇಶದಲ್ಲಿರುವ ಗಡಿ ಭದ್ರತಾ ಪಡೆ(ಬಿಎಸ್ಎಫ್)ಯಲ್ಲಿ ಬಿಎಸ್ಎಫ್ ಯೋಧರು ಬೀಡು ಬಿಟ್ಟಿದ್ದು, ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಎನ್ಎಸ್ಜಿ ಕಮಾಂಡೋಗಳ ಟ್ರೇಡ್ ಮಾರ್ಕ್ ಬ್ಲಾಕ್ ಯೂನಿಫಾರಂ ಧರಿಸಿರುವ ಯೋಧರು ತರಬೇತಿಯಲ್ಲಿ ನಿರತರಾಗಿದ್ದಾರೆ.
ಸುಮಾರು 24ಕ್ಕೂ ಅಧಿಕ ಯೋಧರು 2 ವಾರಗಳ ಕಾಲ ಇಲ್ಲಿ ವಿಶೇಷ ತರಬೇತಿ ಪಡೆಯಲಿದ್ದಾರೆ. ಇನ್ನು, ಗೃಹ ಸಚಿವಾಲಯದ ಮಾಹಿತಿಯಂತೆ, ಸುಮಾರು 100 ಕಮಾಂಡೋಗಳಿಗೆ ಈ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಅತ್ಯಂತ ಪ್ರಮುಖವಾಗಿ anti-hijack drills ಎಂಬ ವಿಶೇಷ ತರಬೇತಿ ನೀಡಲಾಗತ್ತಿದ್ದು, ಇವರನ್ನು ವಿಶೇಷವಾಗಿ ಅತಿ ಸೂಕ್ಷ್ಮವಾದ ವಿಮಾನ ನಿಲ್ದಾಣಗಳಲ್ಲಿ ನಿಯೋಜನೆ ಮಾಡಲಾಗುತ್ತದೆ ಎನ್ನಲಾಗಿದೆ.
ಸದ್ಯ ಈ ಯೋಧರನ್ನು ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ಸೇನಾಧಿಕಾರಿಯೊಬ್ಬರು, ಎನ್ಎಸ್ಜಿ ಕಮಾಂಡೋಗಳು ಭದ್ರತೆಗೆ ನಿಯೋಜನೆಗೊಳ್ಳುವುದರಿಂದ ನಮ್ಮ ಸೈನಿಕರ ಸಾವಿನ ಸಂಖ್ಯೆ ಕಡಿಮೆಯಾಗುವ ಜೊತೆಯಲ್ಲಿ, ಶತ್ರುಗಳ ವಿರುದ್ಧ ನಮ್ಮ ಬಲವೂ ಸಹ ಹೆಚ್ಚುತ್ತದೆ ಎಂದಿದ್ದಾರೆ.
ಎನ್ಎಸ್ಜಿ ಸ್ನೈಪರ್ಗಳು ವಾಲ್ ರಾಡಾರ್, ಸ್ನೈಪರ್ ರೈಫಲ್, ಕಾರ್ನರ್ ರೂಟ್ ಅಸಾಲ್ಟ್ ವೆಫನ್ ಗಳನ್ನು ಬಳಸಿ ಕಾರ್ಯಾಚರಣೆ ನಡೆಸುತ್ತಾರೆ. ಇದು ಯೋಧರ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.
ಜಮ್ಮು ಕಾಶ್ಮೀರದಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದ ಹಿನ್ನೆಲೆಯಲ್ಲಿ ಮೆಹಬೂಬಾ ಮುಫ್ತಿ ಸರ್ಕಾರ ಪತನಗೊಂಡು, ಹೀಗಾಗಿ, ರಾಜ್ಯಪಾಲರ ಆಡಳಿತ ಜಾರಿಯಲ್ಲಿರುವುದರಿಂದ ರಾಜ್ಯದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ.
Discussion about this post