ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಒಂದನೆ ಹಂತದ ಲಸಿಕೆ ಕಾರ್ಯಕ್ರಮ ಮುಕ್ತಯವಾಗಿದೆ. ಎರಡನೆಯ ಹಂತದ ಕಾರ್ಯಕ್ರಮ ಇಂದು ಅಧಿಕಾರಿಗಳಿಗೆ ಹಾಕಲಾಗುತ್ತಿದ್ದು, ಮೂರನೆಯ ಹಂತದ ಲಸಿಕೆ ಪ್ರತಿಯೊಬ್ಬರಿಗೂ ಸಮರ್ಪಕವಾಗಿ ಸಿಗುವಂತಾಗಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎರಡನೆಯ ಹಂತದ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರಲ್ಲಿ ಲಸಿಕೆ ಬಗ್ಗೆ ಇನ್ನೂ ಕೆಲವೊಂದಿಷ್ಟು ಗೊಂದಲಗಳಿವೆ. ಯಾರೂ ಭಯಪಡುವಂತದ್ದೇನಿಲ್ಲ. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೋನಾಗೆ ತಡೆಯಲು ಸಹಕರಿಸಿ ಎಂದು ಕರೆ ನೀಡಿದರು.
ಆರೋಗ್ಯ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಒಂದನೆಯ ಹಂತದ ಲಸಿಕೆ ಮುಗಿದು ಇಂದು ಎರಡನೆಯ ಹಂತದ ಲಸಿಕೆ ಹಾಕಲಾಗುತ್ತಿದೆ. ಎರಡನೆಯ ಹಂತದ ಅಭಿಯಾನ ಆರಂಭವಾಗಿದೆ ಎಂದರು.
ಚಳ್ಳಕೆರೆ ನಗರಸಭೆ, ತಾಲೂಕು ಕಂದಾಯ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಸಿಬ್ಬಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದಲ್ಲಿ ಒಟ್ಟು 196, ಪರಶುರಾಂಪುರದಲ್ಲಿ 50, ನಾಯಕನಹಟ್ಟಿ 130 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇಂದು ಲಸಿಕೆ ಹಾಕಲಾಗುತ್ತದೆ ಎಂದರು.
ಈ ಸಮಯದಲ್ಲಿ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್ ಹಾಗೂ ಪೌರಯುಕ್ತ ಪಿ. ಪಾಲಯ್ಯ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ, ಅಧಿಕಾರಿಗಳ ಜೊತೆಗೆ ಚಳ್ಳಕೆರೆ ನಗರಸಭೆ ಅಧಿಕಾರಿಗಳಿಗೆ ಕೋರೋನಾ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮಿ, ಉಪಾಧ್ಯಕ್ಷ ಜೈತುನ್ಬಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶಗೌಡ, ಅರೋಗ್ಯ ಅಧಿಕಾರಿ ಪ್ರೇಮಸುಧ, ನಗರ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ವೆಂಕಟೇಶ್, ಪಿಎಸ್’ಐ ರಾಘವೆಂದ್ರ, ನಗರದ ಅರೋಗ್ಯ ಅಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ಪೋಲೀಸ್ ಇಲಾಖೆ ಸಿಬ್ಬಂದಿ, ಸಿದ್ದಾಪುರ ಮಂಜುನಾಥ, ದೊಡ್ಡರಂಗಪ್ಪ ನಗರಸಭೆ ಅರೋಗ್ಯ ಅಧಿಕಾರಿ ಮಹಾಲಿಂಗಪ್ಪ, ಸಿಬ್ಬಂದಿಗಳು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post