ಮುಂಬೈ: ಇಂತಹ ಒಬ್ಬ ವೀರ ಯೋಧನನ್ನು ಪಡೆದ ತಾಯಿ ಭಾರತಿ ಧನ್ಯಳಾಗಿದ್ದಾಳೆ… ಹೀಗಾಗಿ, ತನ್ನ ಪ್ರೀತಿಯ ಪುತ್ರನನ್ನು ಇಷ್ಟು ಶೀಘ್ರವಾಗಿ ನನ್ನೊಡಲಲ್ಲಿ ಸೇರಿಸಿಕೊಂಡಿದ್ದಾಳೆ ಎನ್ನುವುದನ್ನು ನೋವಿನಿಂದಲೇ ಹೇಳಬೇಕಿದೆ.
ಹೌದು… ಕಳೆದ ಮಂಗಳವಾರ ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಗುರೇಜ್ ಸೆಕ್ಟರ್ನಲ್ಲಿ ಉಗ್ರರ ದಾಳಿ ನಡೆದಿತ್ತು. ತತಕ್ಷಣ ಕಾರ್ಯಾಚರಣೆ ಆರಂಭಿಸಿದ ಯೋಧರು ಮೂವರ ಉಗ್ರರರನ್ನು ಸುತ್ತುರವರೆದಿದ್ದರು. ಈ ವೇಳೆ ಭಾರೀ ಗುಂಡಿನ ಕಾಳಗವೇ ನಡೆದು ಅಂತಿಮವಾಗಿ ಮೂವರೂ ಉಗ್ರರನ್ನು ಅಕ್ಷರಶಃ ಬೇಟೆಯಾಡಿದ್ದರು ನಮ್ಮ ಯೋಧರು…
ದುರಂತವೆಂದರೆ, ಈ ಕಾಳಗದಲ್ಲಿ ಹೆಬ್ಬುಲಿಯಂತೆ ಶತ್ರುಗಳ ವಿರುದ್ಧ ಅಬ್ಬರಿಸಿ ಹೋರಾಡಿದ ಮೇಜರ್ ಕೌಸ್ತುಭ್ ರಾಣೆ ಅವರ ದೇಹವನ್ನು ಶತ್ರುಗಳ ಗುಂಡು ಹೊಕ್ಕಿದ್ದವು. ಆದರೆ ಇದರ ಪರಿವೇ ಇಲ್ಲದೇ ಹೋರಾಡಿದ ರಾಣೆ, ಉಗ್ರರನ್ನು ಹೊಸಕಿ ಹಾಕಿದ್ದರು.
ಕಾರ್ಯಾಚರಣೆ ಯಶಸ್ವಿಯಾದ ವೇಳೆಯೇ ಶತ್ರುಗಳ ಗುಂಡಿನಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಣೆ ಅವರನ್ನು ಸೇನಾ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಆ ವೇಳೆಗಾಗಲೇ ಅವರು ತಾಯಿ ಭಾರತಿ ಮಡಿಲಿನತ್ತ ಪಯಣ ಬೆಳೆಸಿ, ವೀರಸ್ವರ್ಗ ಸೇರಿದ್ದಾಗಿತ್ತು.
ಇವರೊಂದಿಗೆ ಇನ್ನೂ ಮೂವರು ಯೋಧರು ವೀರಸ್ವರ್ಗ ಸೇರಿದ್ದು, ಎಲ್ಲರ ಸಾಹಸ ದೇಶಕ್ಕೊಂದು ಮರೆಯಲಾಗದ ಕೊಡುಗೆಯಾಗಿ ಉಳಿದಿದೆ.
ನಿಜಕ್ಕೂ, ಇಂತಹ ವೀರರನ್ನು ಪಡೆದ ನಾವೆಲ್ಲಾ ಧನ್ಯರೇ ಸರಿ. ಭಾರತೀಯ ಸೇನೆಯೇ ಹಾಗೆ.. ತನ್ನ ಬತ್ತಳಿಕೆಯಲ್ಲಿ ತುಂಬಿಕೊಂಡಿರುವ ಯೋಧ ಎಂಬ ಒಂದೊಂದು ಅಸ್ತ್ರವೂ ಅಷ್ಟೇ… ಈ ಅಸ್ತ್ರಗಳ ಸಾಹಸ, ಕೆಚ್ಚೆದೆ, ದೇಶಪ್ರೇಮ ಹಾಗೂ ತ್ಯಾಗಕ್ಕೆ ಜಗತ್ತಿನಲ್ಲೇ ಸರಿಸಾಟಿಯಿಲ್ಲ.
ತಮ್ಮೆದೆಯಲ್ಲಿ ಗುಂಡು ಹೊಕ್ಕಿದ್ದರೂ ಸಹ ಅದರ ಕುರಿತು ಕೊಂಚವೂ ಪರಿವಿಲ್ಲದೇ, ಶತ್ರುಗಳು ಒಂದು ಅಡುಗು ಮುಂದೆ ಇಡಲೂ ಅವಕಾಶ ಕೊಡದೇ, ಅವರನ್ನು ಸಂಹರಿಸಿಯೇ ಹುತಾತ್ಮರಾದ ಇವರುಗಳ ಸಾಹಸಕ್ಕೆ ದೇಶವಾಸಿಗಳಾದ ನಾವು ಏನು ನೀಡಬಲ್ಲೆವು? ನಿಜಕ್ಕೂ ಈ ಪ್ರಶ್ನೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಕೇಳಿಕೊಳ್ಳಬೇಕು.
ಮಹಾರಾಷ್ಟ್ರ ಮೂಲದ ರಾಣೆ, ರಕ್ಷಣಾ ಇಲಾಖೆಯ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ, ರಾಷ್ಟ್ರೀಯ 36 ರೈಫಲ್ಸ್ ವಿಭಾಗಕ್ಕೆ ಆಯ್ಕೆಯಾಗಿ ಆರು ವರ್ಷ ಮೇಜರ್ ಆಗಿ ಸೇವೆ ಸಲ್ಲಿಸಿದ್ದರು.
ಇನ್ನು, ವೀರಯೋಧ ರಾಣೆ ಅವರ ಪಾರ್ಥಿವ ಶರೀರವನ್ನು ಅವರ ಊರಾದ ಥಾಣೆಗೆ ನಿನ್ನೆ ತರಲಾಗಿತ್ತು. ಈ ವೇಳೆ ಸಾವಿರಾರು ಮಂದಿ ನೆರೆದು, ನಮಗಾಗಿ ಪ್ರಾಣತ್ಯಾಗ ಮಾಡಿದ ಯೋಧನನ್ನು ತಾಯಿ ಭಾರತಿಯ ಮಡಿಲಿಗೆ ಭಾವನಾತ್ಮಕವಾಗಿ ಬೀಳ್ಕೊಟ್ಟರು.
Mumbai: Mortal remains of Major Kaustubh Prakash Kumar Rane who lost his life in Gurez Sector of J&K on August 7, leaves from Central Ordinance Depot for his residence in Mira road area pic.twitter.com/g2qq7h4bfE
— ANI (@ANI) August 9, 2018
ಭಾರೀ ವಿಶೇಷ ಎಂದರೆ ಪಾರ್ಥಿವ ಶರೀರದ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಜನರು ಸ್ವಯಂಪ್ರೇರಿತರಾಗಿ ಹೂವಿನಿಂದ ನೆಲ ಹಾಸು ನಿರ್ಮಿಸಿ ಯೋಧನನ್ನು ಭಾವಪೂರ್ಣವಾಗಿ ಕಳುಹಿಸಿಕೊಟ್ಟರು.
Mumbai: Mortal remains of Major Kaustubh Prakash Kumar Rane who lost his life in Gurez Sector of J&K on August 7, arrives at his residence in Mira road area pic.twitter.com/bEqGmpamYa
— ANI (@ANI) August 9, 2018
ಇನ್ನು, ಈ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿ, ಯೋಧರ ತ್ಯಾಗವನ್ನು ಸ್ಮರಿಸಿದ್ದಾರೆ.
We Salute Major Kaustubh Rane from Thane for his supreme sacrifice for BharatMata !
He lost his life while foiling infiltration bid in Gurez in Jammu & Kashmir.
We stand firm with his family in this hour of grief. pic.twitter.com/5xgxSkFyzy— Devendra Fadnavis (@Dev_Fadnavis) August 7, 2018
Discussion about this post