ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: (ವಿಜಯನಗರ ಕ್ಷೇತ್ರದಲ್ಲಿ) ಯ ಅನೇಕ ಕಡೆ ಇದುವರೆಗೆ ಕೊರೋನಾ ಸಂಬಂಧಸಿದಂತೆ ಹೊಸಪೇಟೆ ಭಾಗದಲ್ಲಿ ಯಾವುದೇ ರೀತಿಯ ಪಾಸಿಟಿವ್ ಕೇಸ್ ಇದುವರೆಗೂ ಇರುವುದಿಲ್ಲ. ಇದೇ ರೀತಿಯಲ್ಲಿ ಎಲ್ಲಾ ಕಟ್ಟುನಿಟ್ಟಿನ ಕ್ರಮ ಮುಂದುವರೆಯಬೇಕು ಮತ್ತು ಕರೋನಾ ವೈರಸ್ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಭಯಪಡುವ ಅವಶ್ಯಕತೆ ಇಲ್ಲ.
ಅತಿ ಹೆಚ್ಚು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಬರುವ ಹೊಸಪೇಟೆ ಮತ್ತು ಹಂಪೆ, ಆನೆಗೊಂದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ವಿದೇಶಿ ಪ್ರವಾಸಿಗರ ಸುಳಿವು ಇರುವುದಿಲ್ಲ. ಈ ಭಾಗದ ಸುತ್ತಮುತ್ತಲಿನ ಕೈಗಾರಿಕೆಗಳಿಗೆ ಬಂದಿರುವ ವಿದೇಶಿ ಉದ್ಯೋಗಿಗಳು ಸಹ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ಮಾಡದೇ ಇರುವುದರಿಂದ ಈ ಭಾಗದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯಿಂದ ಕೋರೋನಾ ಬಗ್ಗೆ ಸುಳಿವು ಪತ್ತೆಯಾಗಿಲ್ಲ. ಮುಖ್ಯವಾಗಿ ಹೊಸಪೇಟೆ ಮತ್ತು ಕೊಪ್ಪಳ ಭಾಗದ ಕೈಗಾರಿಕೆಗಳು ಉತ್ತಮವಾದ ಸಹಕಾರ ನೀಡಿ ಕೈಗಾರಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.
ಪೊಲೀಸ್ ಇಲಾಖೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಅನುಮಾನ ಬಂದ ವ್ಯಕ್ತಿಯ ವಿಚಾರಣರ ನಂತರ ಲಾಠಿ ಏಟು ನೀಡಿ ಮನೆಗೆ ಕಳುಹಿಸುತ್ತಿದ್ದಾರೆ.
ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಹೊಸಪೇಟೆ ನಗರದ ಪ್ರಮುಖ ಸ್ಥಳದಲ್ಲಿ ತರಕಾರಿ ಮಾರಾಟ ಕೇಂದ್ರಗಳನ್ನು ಸ್ಥಾಪಿಸಿರುತ್ತಾರೆ. ಶುಚಿಯಾಗಿ ಪರಿಸರ ಮತ್ತು ಆರೋಗ್ಯಕ್ಕೆ ಹಾನಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಿತರಣೆ ಮಾಡಲು ಉದ್ದೇಶಿಸಲಾಗಿದೆ ಮತ್ತು ಅದಕ್ಕೆ ಬೇಕಾದ ಏರ್ಪಾಡು ಮಾಡಲಾಗುತ್ತಿದೆ.
ಸದಾಕಾಲ ತುಂಬಿ ತುಳುಕುತ್ತಿದ್ದ ವಿಜಯನಗರ ಕಾಲೇಜು ಮೈದಾನ ಇಂದು ಖಾಲಿಖಾಲಿಯಾಗಿ ಇತ್ತು. ರಸ್ತೆಯಲ್ಲಿ ಜನರ ಓಡಾಟ ನಿಂತಿದೆ ಕೇವಲ ಶಾಪಿಂಗ್ ಮಾಲ್, ಬಜಾರ್ ಹಾಗೂ ಮೆಡಿಕಲ್ ಶಾಪ್ ಗಳು ಪೂರ್ಣವಾಗಿ ತೆಗೆದು ಕಾರ್ಯ ನಿರ್ವಹಿಸುತ್ತಿದ್ದ ದೃಶ್ಯ ಕಂಡು ಬಂದಿತು. ಲೋಕಕಲ್ಯಾಣರ್ಥವಾಗಿ ಸಂಜೆ ಅನೇಕ ಮನೆಗಳಲ್ಲಿ ಕೂರೋನಾ ತಡೆಗಟ್ಟಲು ವಿಷ್ಣು ಸಹಸ್ರನಾಮ ಪಠಣ ಮಾಡಲಾಗುತ್ತಿತ್ತು.
ವಿದೇಶಗಳಿಂದ ಹೊಸಪೇಟೆಗೆ ಬಂದವರ ಪಟ್ಟಿಯಲ್ಲಿ ಸುಮಾರು 43 ಜನರನ್ನು ಹೊರಗಡೆ ತಿರುಗಾಡದಂತೆ ನಿರ್ಬಂಧ ಹೇರಿ ಮನೆಯಲ್ಲಿ ಇರಿಸಿ ಅವರ ಮೇಲೆ ನಿಗಾ ಇಡಲಾಗಿದೆ. ಸಾರ್ವಜನಿಕರು ಹೊಸಪೇಟೆಯಲ್ಲಿ ತಿರುಗಾಡಿದರೆ ತಕ್ಷಣ ಪೊಲೀಸರಿಗೆ ತಿಳಿಸಲು ಪೋಲಿಸ್ ಪ್ರಕಟಣೆ ಸಹ ಮಾಡಲಾಗಿದೆ.
ಸಾರ್ವಜನಿಕರಿಗೆ ಅನುಕೂಲ ಮಾಡಿ ಬೆಳಿಗ್ಗೆ 9-11 ಮತ್ತು ಸಂಜೆ 6-7 ಘಂಟೆ ತನಕ ದಿನಸಿ ಅಂಗಡಿಗಳಲ್ಲಿ ಸಾಮಾಗ್ರಿಗಳನ್ನು ಮಾಸ್ಕ್ ಹಾಕಿಕೊಂಡ ವ್ಯಕ್ತಿಗಳಿಗೆ ಅನುಕೂಲ ಮಾಡಿ ಕೊಡಲಾಗಿದೆ.
ಬೀದಿ ದೀಪಗಳು ಇಲ್ಲದೆ ಕದ್ದು ಮುಚ್ಚಿ ಓಡಾಡುವ ಜನರಿಗೆ ತೊಂದರೆ ಇತ್ತು. ಅಸಿಸ್ಟೆಂಟ್ ಕಮೀಶನರ್ ಮತ್ತು ತಾಲೂಕು ಕಚೇರಿಗಳ ಹತ್ತಿರ ಎಮರ್ಜೆನ್ಸಿ ಪಾಸ್ ಗಳನ್ನು ಪಡೆಯಲು ಜನರು ಹಂಬಲಿಸುತ್ತಿದ್ದ ದೃಶ್ಯ ಕಂಡುಬಂದಿತು. ಭಾನುವಾರವಾದುದರಿಂದ ವಾರದ ಸಂತೆ ಇರಲಿಲ್ಲ, ಆದರೂ ಮಾರ್ಕೆಟ್ ಬಾಗಿಲು ತೆಗೆದು ಸಾರ್ವಜನಿಕರಿಗೆ ಅನುಕೂಲವಾಗಿತ್ತು.
ಇಲ್ಲಿನ ಜನಪ್ರಿಯ ಶಾಸಕರು, ಸಚಿವರು ಎಮರ್ಜೆನ್ಸಿ ಸಮಯದಲ್ಲಿ ಅನುಕೂಲ ಕಲ್ಪಸಿ ವಾಹನ ಕಲ್ಪಿಸಿ ಎಮರ್ಜೆನ್ಸಿ ಸಮಯದಲ್ಲಿ ಪೋನ್ ಮಾಡಿದರೆ ಆಟೋಗಳನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಪೋಲಿಸ್ ಸಿಬ್ಬಂದಿಗೆ ಇಂದು ಎಸ್’ವಿಎಸ್ ನೀಡ್ ಮಾಲೀಕ ಶ್ರೀ ವೆಂಕಟೇಶ ಸುರಕ್ಷತಾ ಮಾಸ್ಕ್ ನೀಡುತ್ತಿದ್ದ ದೃಶ್ಯ ಕಂಡುಬಂದಿತು.
(ವರದಿ: ಎಂ.ಎಂ. ನಾಡಿಗೇರ್, ಹೊಸಪೇಟೆ)
Get in Touch With Us info@kalpa.news Whatsapp: 9481252093
Discussion about this post