ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಶೃಂಗೇರಿ ಬಳಿಯ ಹರಿಹರಪುರ ಮಠದ ಶ್ರೀಗಳು ಕೂದಲೆಳೆ ಅಂತರದಲ್ಲಿ ಅದೃಷ್ಟವಷಾತ್ ಪಾರಾಗಿದ್ದಾರೆ.
ತೀರ್ಥಹಳ್ಳಿ ಮತ್ತು ಕೋಣಂದೂರು ಮಧ್ಯ ಕೋಟೆಗದ್ದೆ ಸಮೀಪ ಇಂದು ಸಂಜೆ ಸರಣಿ ಅಪಘಾತ ಸಂಭವಿಸಿದೆ.
Also Read>> ಮಲೆನಾಡಿನ ಎಲೆಚುಕ್ಕಿ ರೋಗ | ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಜೆಟ್’ನಲ್ಲಿ ಘೋಷಣೆ
ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಮಠದ ಶ್ರೀಗಳವರು ಧಾರ್ಮಿಕ ಕಾರ್ಯನಿಮಿತ್ತ ಸಿರಸಿಗೆ ಹೊರಟಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿ ಕೋಣಂದೂರು ಮಧ್ಯದ ಕೋಟೆಗದ್ದೆಯಲ್ಲಿ ಸರಣಿ ಅಪಘಾತವಾಗಿದೆ.
ಶ್ರೀಗಳ ವಾಹನ ಸಾಗುತ್ತಿರುವ ಸಂದರ್ಭದಲ್ಲಿ ದನ ಅಡ್ಡ ಬಂದಾಗ ತಪ್ಪಿಸಲು ಹೋದಾಗ ಅಪಘಾತ ಸಂಭವಿಸಿ ಮುಂಭಾಗದಲ್ಲಿದ್ದ ಎಸ್ಕಾರ್ಟ್ ಹಾಗೂ ಮಧ್ಯ ಸಾಗುತ್ತಿದ್ದ ಶ್ರೀಗಳ ವಾಹನ ಹಾಗೂ ಹಿಂಭಾಗದಲ್ಲಿದ್ದ ಭಕ್ತರ ವಾಹನ ಸೇರಿದಂತೆ ಮೂರು ವಾಹನಗಳು ನಡುವೆ ಏಕಾಏಕಿ ಅಪಘಾತ ಸಂಭವಿಸಿದೆ.
Also Read>> ಮೇಕೆದಾಟು, ಕಳಸ-ಬಂಡೂರಿ ಯೋಜನೆ ಬಗ್ಗೆ ಸಿಎಂ ಹೇಳಿದ್ದೇನು? ನೀರಾವರಿಗೆ ಬಜೆಟ್’ನಲ್ಲಿ ಸಿಕ್ಕಿದ್ದೇನು?ಅಪಘಾತದ ರಭಸಕ್ಕೆ ಕಾರುಗಳು ಜಖಂ ಆಗಿದ್ದು, ವಾಹನಗಳಲ್ಲಿದ್ದ ಯಾರಿಗೂ ಪ್ರಾಣಾಪಾಯ ಸಂಭವಿಸದೇ, ಎಲ್ಲರೂ ಅದೃಷ್ಟವಷಾತ್ ಪಾರಾಗಿದ್ದಾರೆ.
ಶ್ರೀಗಳಿಗೂ ಸಹ ಯಾವುದೇ ರೀತಿಯ ತೊಂದರೆಯಾಗದೇ ಪಾರಾಗಿ, ಸುರಕ್ಷಿತವಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post