ಕಲ್ಪ ಮೀಡಿಯಾ ಹೌಸ್
ತೀರ್ಥಹಳ್ಳಿ: ಕೊರೋನಾ ರೋಗಕ್ಕೆ ತುತ್ತಾಗಿ ಸಾವಿಗೀಡಾದ ಕುಟುಂಬದವರ ಅನುಪಸ್ಥಿತಿಯಲ್ಲಿ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ಸದ್ಗತಿ ಕಾರ್ಯ ನಡೆಸಿ, ಸೊಪ್ಪುಗುಡ್ಡೆ ರಾಘವೇಂದ್ರ, ಹೇಮಂತ್, ಸುಭಾಷ್ ಅವರಿಂದ ಪುತ್ತಿಗೆ ಮಠದ ಎದುರು ತುಂಗಾ ನದಿಯಲ್ಲಿ ಐದು ಜನರ ಆಸ್ತಿಗಳ ವಿಸರ್ಜನೆ ಮಾಡಲಾಯಿತು.
ಕೊರೋನಾ ರೋಗ ಉಲ್ಬಣಗೊಂಡ ಸಮಯದಲ್ಲಿ ಅನೇಕ ಸಮಸ್ಯೆಗಳು ಎದುರಾದವು ಅಂತೆಯೇ ರೋಗದಿಂದ ಮರಣ ಹೊಂದಿದವರ ಶವಸಂಸ್ಕಾರ ಮಾಡುವ ಬಗ್ಗೆ ಅನೇಕರಿಗೆ ಸಮಸ್ಯೆ ಉಂಟಾಯಿತು. ಕೆಲವು ಕುಟುಂಬದವರೇ ಶವಸಂಸ್ಕಾರಕ್ಕೆ ಬಾರದಂಥ ಸ್ಥಿತಿ ನಮ್ಮ ಮುಂದಿತ್ತು. ಇಂತಹ ಸಮಯದಲ್ಲಿ ತೀರ್ಥಹಳ್ಳಿಯ ಪಟ್ಟಣ ಪಂಚಾಯ್ತಿಯ ಮಾಜಿ ಅಧ್ಯಕ್ಷ, ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಸುಭಾಷ್ ಮತ್ತು ಹೇಮಂತ್ ಇವರುಗಳು ಸುಮಾರು ಅರುವತ್ತು ಶವಗಳನ್ನು ಹಿಂದೂ ಸಂಪ್ರದಾಯದಂತೆ ತೀರ್ಥಹಳ್ಳಿ ತುಂಗಾ ನದಿ ದಡದಲ್ಲಿರುವ ಶವಾಗಾರದಲ್ಲಿ ಅಂತಿಮ ಕ್ರಿಯೆ ನಡೆಸಿದ್ದರು.
ಅವುಗಳಲ್ಲಿ ಸುಮಾರು ೫ ಶವಗಳನ್ನು ಕುಟುಂಬದವರ ಸಹಕಾರವಿಲ್ಲದೆ ಅಂತ್ಯಕ್ರಿಯೆ ನಡೆಸಲಾಗಿತ್ತು. ಆ ಐವರಿಗೆ ತೀರ್ಥಹಳ್ಳಿ ಪುತ್ತಿಗೆ ಮಠದ ಎದುರು ತುಂಗಾ ನದಿಯಲ್ಲಿ ಹಿರಿಯ ಪುರೋಹಿv ಸುಬ್ರಹ್ಮಣ್ಯ ಭಟ್ ರವರ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಅಸ್ಥಿ ವಿಸರ್ಜನೆಯನ್ನು ಮಾಡಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ ತೀರ್ಥಹಳ್ಳಿ ಇತಿಹಾಸದಲ್ಲೇ ಇದೊಂದು ಮಾದರಿ ಕೆಲಸವನ್ನಾಗಿ ನೆರೆವೇರಿಸಿದರು.
ಅತ್ಯಂತ ಧಾರ್ಮಿಕ ವಿಧಿವಿಧಾನಗಳಿಂದ ಮರಣ ಹೊಂದಿದವರ ನಿರ್ಲಕ್ಷ್ಯ ಮಾಡಿದಂತಹ ೫ ಜನರ ಶವ ಸಂಸ್ಕಾರವನ್ನು ನಡೆಸಿ ನಂತರ ಆಸ್ತಿಗಳ ವಿಸರ್ಜನೆ ಕ್ರಿಯೆ ಮಾಡಿರುವುದು ಎಲ್ಲರಿಗೂ ಹೆಮ್ಮೆ ತರುವಂತಹ ವಿಷಯವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಕುಟುಂಬದವರ ಶವಸಂಸ್ಕಾರ ಮತ್ತು ಕ್ರಿಯೆಗಳನ್ನು ನಡೆಸಲು ಕುಟುಂಬ ವರ್ಗದವರೇ ಹಿಂದೇಟು ಹಾಕುತ್ತಿರುವ ಈ ಸಮಯದಲ್ಲಿ ಇದೊಂದು ಉತ್ತಮ ನಡವಳಿಕೆಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post