No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Friday, April 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ತೀರ್ಥಹಳ್ಳಿ

ತೀರ್ಥಹಳ್ಳಿ: ಸಹಕಾರ ಸಂಘದ ಹಣ ದುರುಪಯೋಗ ಆರೋಪಿಗೆ ಆರು ವರ್ಷ ಜೈಲು ಶಿಕ್ಷೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 5, 2023
in ತೀರ್ಥಹಳ್ಳಿ
0
ಶಿಮುಲ್ ಅಧ್ಯಕ್ಷಗಾದಿ ಚುನಾವಣೆ ಅಸಿಂಧು: ಎಸಿ ಸೇರಿ ಇಬ್ಬರಿಗೆ ಕೋರ್ಟ್ ದಂಡ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ತೀರ್ಥಹಳ್ಳಿ  |

ಮೇಲಿನ ಕುರುವಳ್ಳಿಯ ಹರಿಜನ-ಗಿರಿಜನ ಕಲ್ಲುಕುಟಿಕರ ಸಹಕಾರ ಸಂಘದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಆರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಈ ಕುರಿತಂತೆ ನ್ಯಾಯಪೀಠದ ತೀರ್ಪಿನ ಆಧಾರದಲ್ಲಿ ತೀರ್ಥಹಳ್ಳಿ ಸಹಾಯಕ ಸರ್ಕಾರಿ ಅಭಿಯೋಜಕರು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದು, ಆರೋಪಿಗಳಾದ ಆನಂದ್ ಹಾಗೂ ದೊರೆಸ್ವಾಮಿ ಅವರುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ಎರಡನೇ ಆರೋಪಿಯಾದ ದೊರೆಸ್ವಾಮಿ ವಿಚಾರಣೆ ಹಂತದಲ್ಲಿಯೇ ಮರಣ ಹೊಂದಿದ ಕಾರಣ ಅವರ ವಿರುದ್ಧದ ಪ್ರಕರಣ ಅಭೇಟ್ ಆಗಿದೆ.
ಮೊದಲನೇ ಆರೋಪಿ ವಿರುದ್ಧ ಐಪಿಸಿ ಕಲಂ 406ರ ಅಡಿಯಲ್ಲಿ ಮೂರು ವರ್ಷ ಕಾರಾಗೃಹ ವಾಸ ಹಾಗೂ 10ಸಾವಿರ ದಂಡ ಮತ್ತು ಐಪಿಸಿ ಕಲಂ 409ರ ಅಡಿಯಲ್ಲಿ ಮೂರು ವರ್ಷಗಳ ಕಾರಾಗೃಹ ವಾಸ, 10ಸಾವಿರ ದಂಡ ವಿಧಿಸಲಾಗಿದ್ದು, ಎರಡು ಕಲಂಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:
ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಮೇಲಿನ ಕುರುವಳ್ಳಿಯಲ್ಲಿರುವ ಹರಿಜನ- ಗಿರಿಜನ ಕಲ್ಲುಕುಟಿಕರ ಸಹಕಾರ ಸಂಘ ಬಂಡೆ ಕಾರ್ಮಿಕರ ಮತ್ತು ಸೇರುದಾರರ ಹೆಸರಿನಲ್ಲಿ ಹರಿಜನ ಗಿರಿಜನ ಕಲ್ಲುಕುಟಿಕರ ಸಹಕಾರ ಸಂಘ ರಚನೆ ಮಾಡಿಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಬಂಡೆ ಗುತ್ತಿಗೆಗಳನ್ನು ಪಡೆದು ವ್ಯವಹಾರ ಮಾಡುತ್ತಿದ್ದಾರೆ. ಈ ಸಂಘದಲ್ಲಿ ಬಾರಿ ಪ್ರಮಾಣದಲ್ಲಿ ಹಣ ದುರುಪಯೋಗವಾಗಿದೆ ಮತ್ತು ಭ್ರಷ್ಟಾಚಾರ, ಹಣ ದುರುಪಯೋಗವಾಗಿದೆ, ವಂಚನೆಯಾಗಿದೆ, ಅಕ್ರಮ ವ್ಯವಹಾರ ನಡೆದಿರುತ್ತೆ ಸಂಘಕ್ಕೆ ನಂಬಿಕೆ ಮೋಸವಾಗಿದೆ ಎಂಬುದಾಗಿ ಷೆರುದಾರರು ಮತ್ತು ಇತರರು ಸಹಕಾರ ಇಲಾಖೆಗೆ ಮತ್ತು ಸರಕಾರಕ್ಕೆ ದೂರುಗಳನ್ನು ದಾಖಲು ಮಾಡಿದ್ದರು.
ಸಹಕಾರ ಇಲಾಖೆಯಿಂದ ತನಿಖೆ ನಡೆದು ಸಹಕಾರ ಇಲಾಖೆಯ ಅಧಿಕಾರಿಯಾದ ಹೆಚ್ .ಅನ್ನಪೂರ್ಣ ರವರು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಸುಮಾರು ಆರು ಕಂಪ್ಲೇಂಟ್ ನೀಡಿ ಸಂಘದ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳ ಮೇಲೆ ಪ್ರಕರಣಗಳನ್ನು ದಾಖಲು ಮಾಡಿದ್ದರು. ಸದರಿ ದೂರುಗಳನ್ನು ದಾಖಲಿಸಿಕೊಂಡು ತೀರ್ಥಹಳ್ಳಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ _FIR ದಾಖಲು ಮಾಡಿ ಅಂದಿನ ಸಬ್ ಇನ್ಸ್ಪೆಕ್ಟರ್ ಆದ ಆನಂದ್ ರವರು ತನಿಖೆಯನ್ನು ಮಾಡಿ ಚಾರ್ಜ್ ಶೀಟನ್ನು ನ್ಯಾಯಕ್ಕೆ ಸಲ್ಲಿಕೆ ಮಾಡಿದರು. ಈ ಪ್ರಕರಣಗಳನ್ನು ವಿಚಾರಣೆ ನಡೆಸಿದ ಸಹಕಾರ ಸಂಘದ ಮತ್ತು ಶೇರುದಾರರ ಹಣವನ್ನು ದುರುಪಯೋಗ, ವಂಚನೆ, ಸಂಘಕ್ಕೆ ನಂಬಿಕೆ ದ್ರೋಹ ಮಾಡಿರುವ ಬಗ್ಗೆ ತೀರ್ಥಹಳ್ಳಿ ಹಿರಿಯ ಸಿ.ಜೆ . ನ್ಯಾಯಾದೀಶ್ವರ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ದಿನಾಂಕ 23–12– 20 22 ರಂದು ತೀರ್ಪು ನೀಡಿ ಆದೇಶವನ್ನು ಮಾಡಿರುತ್ತಾರೆ . ಪ್ರಕರಣ 1).. ಸಿಸಿ ನಂಬರ್ 585/2016. ರಲ್ಲಿ ಒಂದನೇ ಆರೋಪಿ ಶೇಷಪ್ಪ ಬಿನ್ನ ಸೋಮ ಪೂಜಾರಿ ಯವರಿಗೆ ಐಪಿಸಿ 406 ರಲ್ಲಿ 3 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂಪಾಯಿ ದಂಡ ಹಾಗೂ ಐಪಿಸಿ 409 ರ ಬಗ್ಗೆ ಮೂರು ವರ್ಷ ಕಠಿಣ ಸಜೆ ಹಾಗೂ 10,000 ರೂಪಾಯಿ ದಂಡವನ್ನು ಪಾವತಿಸಲು ವಿಫಲವಾದರೆ ಆರು ತಿಂಗಳು ಕಠಿಣ ಸಜೆ ವಿಧಿಸಿ ಆದೇಶ ಮಾಡಲಾಗಿದೆ.

ಈ ಪ್ರಕರಣದಲ್ಲಿ ಎರಡನೇ ಆರೋಪಿ ಮಣಿ ಬಿನ್ ಜಡಲ ಸ್ವಾಮಿ ಆರೋಪಿ ತಲೆಮರೆಸಿಕೊಂಡಿದ್ದು ಪ್ರಕರಣವನ್ನು ಪ್ರತ್ಯೇಕ ಮಾಡಿ ವಿಚಾರಣೆಗೆ ಬಾಕಿ ಇಡಲಾಗಿದೆ. 2).. ಸಿಸಿ ನಂಬರ್ 383/2016 ಒಂದನೇ ಆರೋಪಿ ಆನಂದ ಬಿನ್ ಚಿನ್ನಸ್ವಾಮಿ ರವರಿಗೆ ಐಪಿಸಿ ಸೆಕ್ಷನ್ 406 ರಲ್ಲಿ 3 ವರ್ಷ ಕಠಿಣ ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡ ಹಾಗೂ ಐಪಿಸಿ 409ರಲ್ಲಿ 3ವರ್ಷ ಕಠಿಣ ಸಜೆ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದ್ದು ದಂಡವನ್ನು ಪಾವತಿಸಲು ವಿಫಲವಾದರೆ ಮತ್ತೆ ಆರು ತಿಂಗಳು ಕಠಿಣ ಸಜೆ.
ಪ್ರಕರಣದಲ್ಲಿ ಎರಡನೇ ಆರೋಪಿ ಮಣಿ ಬಿನ್ ಜಡಲ ಸ್ವಾಮಿ ತಲೆಮರೆಸಿಕೊಂಡಿದ್ದು ಆತನ ಪ್ರಕರಣವು ಪ್ರತ್ಯೇಕವಾಗಿ ವಿಚಾರಣೆಗೆ ಬಾಕಿ ಇಟ್ಟು ಆದೇಶಿಸಲಾಗಿದೆ..3). ಸಿಸಿ ನಂಬರ್ 384/2016 ರಲ್ಲಿ ಹರಿಜನ ಗಿರಿಜನ ಕಲ್ಲುಕುಟಿಕರ ಸಂಘದ ಕಾರ್ಯದರ್ಶಿ, ರಮೇಶ್ ಬಾಬು ಬಿನ್ ತಿರುಪತಿ ಮತ್ತು ಅಧ್ಯಕ್ಷರಾದ ಸುಬ್ರಮಣ್ಯ ಬಿನ್ ದೊರೆ ಸ್ವಾಮಿ ಯವರಿಗೆ ಐಪಿಸಿ ನಂಬರ್ 406 ರಲ್ಲಿ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10000 ದಂಡ ಹಾಗೂ ಐಪಿಸಿ ಸೆಕ್ಷನ್ 409ರಲ್ಲಿ 3 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ದಂಡವನ್ನು ಪಾವತಿಸಲು ವಿಫಲವಾದರೆ ಪುನಃ ಆರು ತಿಂಗಳು ಕಠಿಣ ಶಿಕ್ಷೆ ವಿಧಿಸಿ ಆದೇಶ ಮಾಡಲಾಗಿದೆ. 4). ಸಿಸಿ ನಂಬರ್ 385/2016 ರಲ್ಲಿ ಹರಿಜನ ಗಿರಿಜನ ಸಂಘದ ಕಾರ್ಯದರ್ಶಿಯಾದ ಶೇಷಪ್ಪ ಬಿನ್ ಸೋಮ ಪೂಜಾರಿ ಸಂಘದ ಅಧ್ಯಕ್ಷರಾದ ಕೆ. ಸಿ. ಧರ್ಮ ಬಿನ್ ಚಿನ್ನಸ್ವಾಮಿ ಇವರಿಗೆ ಐಪಿಸಿ ಸೆಕ್ಷನ್ 406ರಲ್ಲಿ ಮೂರು ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂಪಾಯಿ ದಂಡ ಹಾಗೂ ಐಪಿಸಿ 409ರಲ್ಲಿ ಮೂರು ವರ್ಷ ಕಠಿಣ ಅದೇ ಹಾಗೂ 10, ಸಾವಿರ ದಂಡ ದಂಡವನ್ನು ಪಾವತಿಸಲು ವಿಫಲವಾದರೆ ಆರು ತಿಂಗಳು ಕಠಿಣ ಸಜೆ ವಿಧಿಸಿ ಆದೇಶಿಸಲಾಗಿದೆ 5). ಸಿಸಿ ನಂಬರ್ 386/2016 ರಲ್ಲಿ ಹರಿಜನ ಗಿರಿಜನ ಸಂಘದ ಕಾರ್ಯದರ್ಶಿಯಾದ ರಮೇಶ ಬಾಬು ಬಿನ್ ತಿರುಪತಿ ಮತ್ತು ಅಧ್ಯಕ್ಷರಾದ ದೊರೆ ಸ್ವಾಮಿ ಬಿನ್ ರಾಮ ಬೋವಿ ರವರ ಮೇಲೆ ಪ್ರಕರಣ ದಾಖಲಾಗಿದ್ದು ಇದರಲ್ಲಿ ಅಧ್ಯಕ್ಷ ದೊರೆ ಸ್ವಾಮಿ ಮರಣ ಹೊಂದಿದ್ದು, ಕಾರ್ಯದರ್ಶಿ ರಮೇಶ್ ಬಾಬು ಬಿನ್ ತಿರುಪತಿ ರವರಿಗೆ ಐಪಿಸಿ 406 ರ ಪ್ರಕಾರ ಮೂರು ವರ್ಷ ಕಠಿಣ ಸಜೆ ಮತ್ತು ಹತ್ತು ಸಾವಿರ ರೂಪಾಯಿ ದಂಡ ದಂಡವನ್ನು ಐಪಿಸಿ 409ರಲ್ಲಿ ಮೂರು ವರ್ಷ ಕಠಿಣ ಸಜೆ 10000 ದಂಡಗಳು ದಂಡ ಪಾವತಿಸಲು ವಿಫಲರಾದರೆ ಮತ್ತೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ. 6). ಸಿಸಿ ನಂಬರ್ 387/2016. ರಲ್ಲಿ ಹರಿಜನ ಗಿರಿಜನ ಕಲ್ಲುಕುಟಿಕರ ಸಂಘದ ಕಾರ್ಯದರ್ಶಿಯಾದ ಆನಂದ ಬಿನ್ ಚಿನ್ನ ಸ್ವಾಮಿ ಹಾಗೂ ಅಧ್ಯಕ್ಷರಾದ ದೊರೆಸ್ವಾಮಿ ಬಿನ್ ರಾಮಭೋವಿ ಇದರಲ್ಲಿ ದೊರೆ ಸ್ವಾಮಿ ಮರಣ ಹೊಂದಿದ್ದು ಕಾರ್ಯದರ್ಶಿ ಆನಂದ ಬಿನ್ ಚಿನ್ನಸ್ವಾಮಿ ಗೆ ಐಪಿಸಿ 406 ಈ ಮೂರು ವರ್ಷ ಕಠಿಣ ಸಜೆ 10 ಸಾವಿರ ರೂಪಾಯಿ ದಂಡ ಮತ್ತು ಐಪಿಸಿ 409ರಲ್ಲಿ ಮೂರು ವರ್ಷ ಕಠಿಣ ಸಜೆ ಹತ್ತು ಸಾವಿರ ರೂಪಾಯಿ ದಂಡ ದಂಡವನ್ನು ಪಾವತಿಸಲು ವಿಫಲರಾದರೆ ಮತ್ತೆ ಆರು ತಿಂಗಳು ಕಠಿಣ ಸಜೆ ವಿಧಿಸಿ ಆದೇಶಿಸಲಾಗಿದೆ ಈ ಎಲ್ಲ ಪ್ರಕರಣಗಳು ದಿನಾಂಕ 23- 12-2022 ರಂದು ತೀರ್ಥಹಳ್ಳಿಯ ಹಿರಿಯ ವ್ಯವಹಾರ, ಸಿಜೆ ರವರ ನ್ಯಾಯಾಲಯ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಾನ್ಯ ಭರತ್ .ಎಸ್ .ಎಸ್ .ರವರು ತೀರ್ಪು ನೀಡಿ ಆದೇಶ ಆದೇಶ ಮಾಡಿರುತ್ತಾರೆ. ಈ ಎಲ್ಲ ಪ್ರಕರಣಗಳಲ್ಲಿ ಸರ್ಕಾರ ಪರವಾಗಿ ಸರ್ಕಾರಿ ವಕೀಲರಾದ ಸಹಾಯಕ ಅಭಿಯೋಜಕರಾದ ಡಿ. ಬಿನು, ಅವರು ಸಾಕ್ಷಿಗಳ ವಿಚಾರಣೆ ಮಾಡಿ ನ್ಯಾಯಾಲಯದಲ್ಲಿ ವಾದವನ್ನು ಮಂಡನೆ ಮಾಡಿ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಸೂಕ್ತವಾದವನ್ನು ಮಂಡಿಸಿದರು.
ಎಲ್ಲ ಪ್ರಕರಣದಲ್ಲಿ ಮೇಲ್ಕಂಡ ಆರೋಪಿಗಳಿಗೆ ಐಪಿಸಿ 406 ಮತ್ತು ಐಪಿಸಿ 409ರ ಪ್ರಕಾರದಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ತಲಾ ಮೂರು ವರ್ಷ ಗಳಂತೆ ಆರು ವರ್ಷಗಳ ಶಿಕ್ಷೆ ಮತ್ತು 20,000 ದಂಡವನ್ನು ವಿಧಿಸಲಾಗಿದೆ ದಂಡ ಪಾವತಿಸಲು ವಿಫಲರಾದರೆ ಪುನಃ ಆರು ತಿಂಗಳು ಕಠಿಣ ಸಜೆ ನೀಡಿ ಆದೇಶ ಮಾಡಲಾಗಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಡಿ. ದಿನು ವಾದ ಮಂಡಿಸಿದ್ದರು.

(ಮಾಹಿತಿ: ಲಿಯೋ ಆರೋಜ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga NewsThirthahalliತೀರ್ಥಹಳ್ಳಿಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್
Share197Tweet123Send
Previous Post

ಸೊರಬ: ಹನಿ ನೀರಾವರಿ ಅಳವಡಿಸಲು ಸಹಾಯಧನ ಅರ್ಜಿ ವಿತರಣೆ ಪ್ರಕ್ರಿಯೆ ಆರಂಭ

Next Post

2022ನೇ ವರ್ಷ ಆರೋಗ್ಯ ವಲಯದಲ್ಲಿ ಕರ್ನಾಟಕ ಮಾದರಿ ರಾಜ್ಯ: ಸಚಿವ ಸುಧಾಕರ್‌

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಹೆಚ್ಚು ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ: ಆರೋಗ್ಯ ಸಚಿವ ಡಾ. ಸುಧಾಕರ್

2022ನೇ ವರ್ಷ ಆರೋಗ್ಯ ವಲಯದಲ್ಲಿ ಕರ್ನಾಟಕ ಮಾದರಿ ರಾಜ್ಯ: ಸಚಿವ ಸುಧಾಕರ್‌

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
SWR to run special trains for Good Friday, Easter rush

ಬೇಸಿಗೆ ರಜೆಯ ನಿಮಿತ್ತ ಕೊರ್ಬಾ – ಯಲಹಂಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ

April 24, 2026
ಅಕ್ಷಯ ತೃತೀಯ ಅಭಿಯಾನದಿಂದ ಆರಂಭಿಸಿ ಕೃತಿ ಶೆಟ್ಟಿ ಜೊತೆ ದೀರ್ಘಾವಧಿಯ ಪಾಲುದಾರಿಕೆಯನ್ನು ಘೋಷಿಸಿದ ಆದಿತ್ಯ ಬಿರ್ಲಾ ಪ್ರಾಯೋಜಿತ ಇಂದ್ರಿಯ ಜ್ಯುವೆಲ್ಲರಿ

ಅಕ್ಷಯ ತೃತೀಯ ಅಭಿಯಾನದಿಂದ ಆರಂಭಿಸಿ ಕೃತಿ ಶೆಟ್ಟಿ ಜೊತೆ ದೀರ್ಘಾವಧಿಯ ಪಾಲುದಾರಿಕೆಯನ್ನು ಘೋಷಿಸಿದ ಆದಿತ್ಯ ಬಿರ್ಲಾ ಪ್ರಾಯೋಜಿತ ಇಂದ್ರಿಯ ಜ್ಯುವೆಲ್ಲರಿ

April 24, 2026
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋಕಾ-ಕೋಲಾ ವಿನೂತನ ಯೋಜನೆ: ಪಲ್ಸ್ ಆಪ್ ಮೂಲಕ ಪ್ರಯಾಣಿಕರಿಗೆ ತಂಪು ಪಾನೀಯ ವಿತರಣೆ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋಕಾ-ಕೋಲಾ ವಿನೂತನ ಯೋಜನೆ: ಪಲ್ಸ್ ಆಪ್ ಮೂಲಕ ಪ್ರಯಾಣಿಕರಿಗೆ ತಂಪು ಪಾನೀಯ ವಿತರಣೆ

April 24, 2026
ಏ.25ರಂದು ಅಂಬೇಡ್ಕರ್ ಕುರಿತು ರಾಜ್ಯಮಟ್ಟದ ಕವಿಗೋಷ್ಠಿ

ಏ.25ರಂದು ಅಂಬೇಡ್ಕರ್ ಕುರಿತು ರಾಜ್ಯಮಟ್ಟದ ಕವಿಗೋಷ್ಠಿ

April 24, 2026
ಜ್ಞಾನ ವಿಕಸನದ ಜೊತೆಗೆ, ದೇಹ ದಂಡನೆಗೂ ಆದ್ಯತೆ ನೀಡಿ: ಡಾ. ಪಿ. ನಾರಾಯಣ್

ಜ್ಞಾನ ವಿಕಸನದ ಜೊತೆಗೆ, ದೇಹ ದಂಡನೆಗೂ ಆದ್ಯತೆ ನೀಡಿ: ಡಾ. ಪಿ. ನಾರಾಯಣ್

April 24, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL