ಕಲ್ಪ ಮೀಡಿಯಾ ಹೌಸ್ | ತಿರುಮಲ |
ಟೀಮ್ ಇಂಡಿಯಾ ಯುವ ಕ್ರಿಕೆಟಿಗ ನಿತೀಶ್ ಕುಮಾರ್ ರೆಡ್ಡಿ #Nithish Kumar Reddy ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ #Tirupathi Thimmappa ದರ್ಶನ ಪಡೆದು, ಮಾತ್ರವಲ್ಲದೇ ತಿಮ್ಮಪ್ಪನಿಗೆ ಕಠಿಣ ಹರಕೆ ಕೂಡ ತೀರಿಸಿದ್ದಾರೆ.
ಗಮನಾರ್ಹ ಸಂಗತಿ ಎಂದರೆ, ನಿತೀಶ್ ಕುಮಾರ್ ಅವರು ಮೊಣಕಾಲುಗಳಲ್ಲೇ ಮೆಟ್ಟಿಲುಗಳನ್ನು ಹತ್ತಿ ತಮ್ಮ ಹರಕೆ ತೀರಿದ್ದಾರೆ.
Also read: ಸಚಿವೆ ಹೆಬ್ಬಾಳ್ಕರ್ ಕಾರು ಅಪಘಾತ | ರಾಜಕೀಯ ವಿರೋಧಿ ಸಿ.ಟಿ. ರವಿ ಫಸ್ಟ್ ರಿಯಾಕ್ಷನ್ ಏನು?
ಬಾಡರ್ರ ಗವಾಸ್ಕರ್ ಟ್ರೋಫಿ #Border Gavaskar Trophy ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿ ಚೊಚ್ಚಲ ಸರಣಿಯಲ್ಲೇ ಶತಕ ಸಿಡಿಸಿದ್ದ ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ಕ್ರಿಕೆಟಿಗೆ ನಿತೀಶ್ ಕುಮಾರ್ ರೆಡ್ಡಿ ತಿಮ್ಮಪ್ಪನಿಗೆ ‘ಕಠಿಣ ಹರಕೆ’ ತೀರಿಸಿದ್ದಾರೆ.
ಈ ಕುರಿತು ಸ್ವತಃ ನಿತೀಶ್ ಕುಮಾರ್ ರೆಡ್ಡಿ ಅವರೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ತಿರುಪತಿಯಿಂದ ತಿರುಮಲಕ್ಕೆ ಅಲಿಪಿರಿ ಮಾರ್ಗವಾಗಿ ಸುಮಾರು 12 ಕಿ.ಮೀ ದೂರವಿದ್ದು, ಈ ಮಾರ್ಗವು 3,550 ಮೆಟ್ಟಿಲುಗಳನ್ನು ಹೊಂದಿದೆ. ವಿಶೇಷವಾಗಿ ಕಡಿದಾಗಿದ್ದು, ಸಂಪೂರ್ಣ ಆರೋಗ್ಯವಂತ ಈ ಮಾರ್ಗವಾಗಿ ಸುಮಾರು 1 ರಿಂದ 1.5 ಗಂಟೆಗಳಲ್ಲಿ ತಿರುಮಲ ತಲುಪಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post