ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇಂದು ಬಿಜೆಪಿ ಸೇರಿರುವುದು ರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಹಲವು ರೀತಿಯಲ್ಲಿ ವಿಶ್ಲೇಷಣೆಗಳು ನಡೆದಿವೆ.
ಆದರೆ, ಈ ನಡುವೆಯೇ ಅಣ್ಣಾಮಲೈ ಅವರು ಬಿಜೆಪಿ ಸೇರುವ ಹಿಂದಿನ ಕಾರಣಕರ್ತರು ಯಾರು ಎಂಬ ಪ್ರಶ್ನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಅದಕ್ಕೆ ಈಗ ಉತ್ತರ ದೊರೆತಿದೆ. ಅದೇ ಬಿ.ಎಲ್. ಸಂತೋಷ್.
Welcome to @annamalai_k Sir. The MAN behind his entry into @BJP4India is none other than @blsanthosh Ji. Few months ago Santhoshji played d pivotal role in bringing @PawanKalyan Sir to NDA fold. pic.twitter.com/fk1L9z0ebz
— Pratap Simha (@mepratap) August 25, 2020
ಈ ಕುರಿತಂತೆ ಟ್ವೀಟ್ ಮಾಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಅಣ್ಣಾಮಲೈ ಅವರಿಗೆ ಬಿಜೆಪಿಗೆ ಸ್ವಾಗತ. ಇವರು ನಮ್ಮ ಪಕ್ಷ ಸೇರುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಇನ್ನಾರು ಅಲ್ಲ.. ಅದು ಬಿ.ಎಲ್. ಸಂತೋಷ್ ಅವರೇ. ಕೆಲವು ತಿಂಗಳುಗಳ ಹಿಂದೆ ಪವನ್ ಕಲ್ಯಾಣ್ ಬಿಜೆಪಿ ಸೇರುವಲ್ಲಿಯೂ ಸಹ ಇವರು ಮಹತ್ವದ ಪಾತ್ರ ವಹಿಸಿದ್ದರು ಎಂದು ಉಲ್ಲೇಖ ಮಾಡಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post