Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಟಾರ್ಚ್ ಲೈಟಿನಲ್ಲಿ ಸರ್ಜರಿ ಮಾಡಿದ್ದ ಡಾ.ಆರ್.ಪಿ. ಪೈ ಯುವ ವೈದ್ಯರಿಗೆ ಮಾದರಿ

ತಂತ್ರಜ್ಞಾನ ಹಿಂದಿದ್ದ ಕಾಲದಲ್ಲಿ 7 ನಿಮಿಷದಲ್ಲಿ ಅಪೆಂಡಿಕ್ಸ್ ಸರ್ಜರಿ ಮಾಡಿದ ಚತುರ

January 4, 2019
in Special Articles
0 0
0
Share on facebookShare on TwitterWhatsapp
Read - 2 minutes

There may be medical tools in your hands to treat the patient, but those hands must be that of a loving, warm and conscientious human being..

ಇದು ವೈದ್ಯಕೀಯ ಲೋಕದಲ್ಲಿರುವ ವ್ಯಕ್ತಿಗಳು ಅರಿತಿರಬೇಕಾದ ವಿಚಾರ. ಆದರೆ, ಸೇವಾ ಮನೋಭಾವನೆ ಹೊರತಾಗಿ ವ್ಯವಹಾರದಂತಾಗಿರುವ ವೈದ್ಯ ವೃತ್ತಿಯಲ್ಲಿ ಇಂದು ಹಣ ಗಳಿಕೆಯನ್ನೇ ಮುಖ್ಯ ಉದ್ದೇಶ ಮಾಡಿಕೊಂಡಿರುವ ವೈದ್ಯರೇ ಬಹಳಷ್ಟು ಮಂದಿ ಕಾಣಸಿಗುತ್ತಾರೆ. ಇಂತಹ ಎಲ್ಲ ಆರೋಪಗಳಿಗೆ ಅಪವಾದವಾಗಿ ಕರ್ನಾಟಕ ವೈದ್ಯಕೀಯ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಮೂಲಕ ಸಾಧನೆ ಮಾಡಿದ ಕೆಲವೇ ಕೆಲವು ವೈದ್ಯರ ಸಾಲಿನಲ್ಲಿ ವಿರಾಜಿಸುತ್ತಿರುವವರು ಡಾ. ರಾಮದಾಸ ಪಾಂಡುರಂಗ ಪೈ.

ಡಾ. ರಾಮದಾಸ ಪಾಂಡುರಂಗ ಪೈ ಅವರ ವೈದ್ಯಕೀಯ ಕ್ಷೇತ್ರದ ಶೈಕ್ಷಣಿಕ ಹಾಗೂ ಸೇವಾಪರತೆಯ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡಿದರೆ ಭವ್ಯ ಇತಿಹಾಸವೇ ತೆರೆದುಕೊಳ್ಳುತ್ತದೆ.

ಮೊಟ್ಟ ಮೊದಲನೆಯದಾಗಿ ಇವರ ವೈದ್ಯಕೀಯ ಶಿಕ್ಷಣವೇ ಒಂದು ಮಹತ್ಸಾಧನೆ. ಜನರಲ್ ಸರ್ಜನ್’ನಲ್ಲಿ ಎಂಎಸ್ ಮಾಡಿದ ಡಾ.ಆರ್.ಪಿ. ಪೈ, ಕೊಪ್ಪದಲ್ಲಿ ಅಂದರೆ ಗ್ರಾಮೀಣ ಕರ್ನಾಟಕದಲ್ಲಿ ಸರ್ಜರಿಯಲ್ಲಿ ಪಿಎಚ್‌ಡಿ ಮಾಡಿದ್ದು, ಇಂತಹ ವೈದ್ಯರಲ್ಲಿ ಅಂದು ರಾಜ್ಯದಲ್ಲೇ ಇವರು 5ನೆಯವರು. ಅಂದು ಇಂತಹ ವೈದ್ಯರು ದೇಶದಲ್ಲಿ ಕೇವಲ 10ರಿಂದ 12 ಮಂದಿ ಮಾತ್ರ ಇದ್ದರು ಎನ್ನುವುದು ಗಮನಿಸಬೇಕಾದ ಅಂಶ.

ಇನ್ನುಳಿದಂತೆ ಇವರ ಶೈಕ್ಷಣಿಕ ಸಾಧನೆಯೆಂದರೆ ಕಮ್ಯೂನಿಟಿ ಮೆಡಿಸನ್’ನಲ್ಲಿ ಎಂಡಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್’’ನಲ್ಲಿ ಎಂಡಿ, ಎಫ್’ಎಜಿಇ, PDF in Exp Med and Surg ತನ್ನ ಸಾಧನೆಯ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ.

ಇನ್ನು, ಇವರ ಸೇವಾ ಸಾಧನೆಯನ್ನು ನೋಡುವುದಾದರೆ, ಮದರ್ ಥೆರೇಸಾ ಮಿಷನರ್ ಆಫ್ ಚಾರಿಟಿಯಲ್ಲಿ ಅಡ್ವೈಸರ್, ಮಣಿಪಾಲ್ ಯೂನಿವರ್ಸಿಟಿಯಲ್ಲಿ ನಿರ್ದೇಶಕರಾಗಿ, ಅಡ್ಮಿನಿಸ್ಟ್ರೇಟರ್ ಆಗಿ, ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದು, ಕಮ್ಯೂನಿಟಿ ಮೆಡಿಸಿನ್ ಫಾದರ್ ಮುಲ್ಲರ್’ನಲ್ಲಿ ಪ್ರೊಫೆಸರ್ ಆಗಿ, ಆಸ್ಟಿçಯಾದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್’ನಲ್ಲಿ ಅತಿಥಿ ಪ್ರಾಧ್ಯಾಪಕರಾಗಿ, ಡಬ್ಲ್ಯೂಎಚ್’ಒ(ಎಸ್’ಇಎಆರ್’ಒ) ಸಲಹೆಗಾರರಾಗಿ, ಯೆನೆಪೋಯಾದಲ್ಲಿ ಕಮ್ಯೂನಿಟಿ ಮೆಡಿಸನ್ ಹಾಗೂ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್’ನ ಎಚ್’ಒಡಿ ಆಗಿ, ನೇಪಾಳದ ಪೋಕ್ರಾದಲ್ಲಿ ಮಣಿಪಾಲ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್’ನ ಫೌಂಡಿಂಗ್ ಡೀನ್ ಆಗಿ ಸೇವೆ ಸಲ್ಲಿಸಿದ್ದು, ಸದ್ಯ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಹಾಗೂ ರಿಸರ್ಚ್ ಸೆಂಟರ್’ನಲ್ಲಿ ಡೈರೆಕ್ಟರ್ ಆಫ್ ಅಕಾಡೆಮಿಸ್, ರಿಸರ್ಚ್ ಅಂಡ್ ಹಾಸ್ಪಿಟಲ್ ಡೆವಲಪ್ಮೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ವೈದ್ಯಕೀಯ ಕ್ಷೇತ್ರಕ್ಕೆ ಡಾ.ಆರ್.ಪಿ. ಪೈ ಕಾಲಿಟ್ಟ ವೇಳೆಯಲ್ಲಿ ಆಸಕ್ತಿಯಿಂದ ಬಂದವರೇ ವಿನಾ ಸೇವಾಸಕ್ತಿಯಿಂದ ಅಡಿಯಿಟ್ಟವರಲ್ಲ. ಈ ವಿಚಾರವನ್ನು ಯಾವುದೇ ಬಿಗುಮಾನವಿಲ್ಲದೇ ಹೇಳಿಕೊಳ್ಳುವ ಪೈ ಅವರು, ಮದರ್ ಥೆರೇಸಾ ಮಿಷನರ್ ಆಫ್ ಚಾರಿಟಿಯ ಸಂಪರ್ಕಕ್ಕೆ ಬಂದ ನಂತರ ಸೇವೆ ಎಂಬುದೇ ಉಸಿರಾಯಿತು ಎನ್ನುತ್ತಾರೆ.

ವೈದ್ಯರು ತಮ್ಮ ವೃತ್ತಿಯಲ್ಲಿ ನೈತಿಕತೆಯನ್ನು ಎಂದಿಗೂ ಮರೆಯಬಾರದು. ನಿಮ್ಮ ಬಳಿ ಹಣವಿದ್ದ ಮಾತ್ರಕ್ಕೆ ನಿಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಡಿ. ಬದಳಾಗಿ, ಅವರ ಮನಸ್ಸಿನಲ್ಲಿ ನಾನು ವೈದ್ಯನಾಗಿ ಸೇವೆ ಮಾಡಬೇಕು ಎಂಬು ಮೂಡಿದರೆ ಮಾತ್ರ ಮಾಡಿ.
-ಡಾ.ರಾಮದಾಸ್ ಪಾಂಡುರಂಗ ಪೈ

ಇನ್ನು, ಡಾ.ಪೈ ಅವರ ವೈದ್ಯಕೀಯ ಸಾಧನೆಯನ್ನು ಹೇಳುವುದಾದರೆ, ಅದು ಕರುನಾಡಿಗರಿಗೇ ದೊಡ್ಡ ಹೆಮ್ಮೆ ಎನ್ನಬಹುದು. ಈಗ ಮುಂದುವರೆದ ವೈದ್ಯಕೀಯ ಆವಿಷ್ಕಾರಗಳ ಅವಕಾಶದಿಂದ ವಿವಿಧ ರೀತಿಯ ಸಾಧನೆಗಳನ್ನು ವೈದ್ಯರು ಮಾಡುತ್ತಾರೆ. ಆದರೆ, ಡಾ.ಪೈ ಆಗಿನ ಕಾಲದಲ್ಲೇ ಕೇವಲ 7 ನಿಮಿಷದಲ್ಲಿ ಅಪೆಂಡಿಕ್ಸ್ ಸರ್ಜರಿ ಮಾಡಿ ಯಶಸ್ವಿಯಾದ ವೈದ್ಯ.

ಇಂತಹ ಸಾಧನೆಯ ಮುಂದುವರೆದ ಭಾಗವಾಗಿ ಕೇವಲ 20 ನಿಮಿಷಗಳ ಅವಧಿಯಲ್ಲಿ ಸ್ಕಿನ್ ಟು ಸ್ಕಿನ್ ಸಿಸೇರಿಯನ್ ಸರ್ಜರಿಯನ್ನು ಮಾಡುವ ಮೂಲಕ ಹೊಸಭಾಷ್ಯವನ್ನೇ ಬರೆದವರು.

ಮತ್ತೊಂದು ಉಲ್ಲೇಖಿಸಲೇಬೇಕಾದ ವಿಚಾರವೆಂದರೆ, ಪೈ ಅವರ ಸೇವಾವಧಿಯಲ್ಲಿ ಎಷ್ಟೋ ಬಾರಿ ಸರ್ಜರಿ ಮಾಡುವ ವೇಳೆ ಅವರೇ ಅನಸ್ತೇಶಿಯಾವನ್ನೂ ಸಹ ಕೊಟ್ಟಿರುವ ಉದಾಹರಣೆಗಳಿವೆ.

ಇನ್ನು, ಸಾಹಿತ್ಯಿಕವಾಗಿ ಇವರ ಒಲವೂ ಸಹ ಹೆಚ್ಚಾಗಿದ್ದು, ತ್ರಿವೇಣಿ, ಕಾರಂತರ ಪುಸ್ತಕಗಳು ಇವರ ಮಸ್ತಕದಲ್ಲಿ ಅಚ್ಚಾಗಿವೆ. ಯಶಸ್ವಿ ವೈದ್ಯರಾಗಿದ್ದೂ ಸಹ ಸಾಹಿತ್ಯ ಹಾಗೂ ಕಾದಂಬರಿಗಳಲ್ಲಿನ ಇವರ ಆಸಕ್ತಿ ನಿಜಕ್ಕೂ ಅಚ್ಚರಿ ಮೂಡಿಸುವಂತಹದ್ದು.

ಸೇವೆಯಾಗಿರಬೇಕಾದ ವೈದ್ಯಕೀಯ ಕ್ಷೇತ್ರ ಇಂದಿನ ದಿನಗಳಲ್ಲಿ ವ್ಯಾಪಾರೀಕರಣಗೊಂಡಿರುವ ಸಂದರ್ಭದಲ್ಲಿ ನೈತಿಕತೆಗಳೇ ಇಲ್ಲದೇ ವೈದ್ಯರ ಸಂಖ್ಯೆ ಹೆಚ್ಚು. ಹೀಗಿರುವಾಗ, ತಮ್ಮ ಅಮೂಲ್ಯವಾದ ಸುಧೀರ್ಘ ಶಿಕ್ಷಣ ಜ್ಞಾನ ಹಾಗೂ ವೃತ್ತಿ ನೈಪುಣ್ಯತೆಯನ್ನು ಸದ್ವಿನಿಯೋಗ ಮಾಡುತ್ತಿರುವ ಡಾ.ಪೈ ಅವರ ಸೇವೆ ಹಾಗೂ ವಯಸ್ಸು ನಿಜಕ್ಕೂ ಸಾರ್ಥಕ್ಯ. ಇಂತಹ ವೈದ್ಯರೊಬ್ಬರನ್ನು ತಮ್ಮ ಸೇವಾ ಹಾದಿಯ ಪ್ರಮುಖರನ್ನಾಗಿಸಿಕೊಂಡಿರುವ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿಜಕ್ಕೂ ಪ್ರಶಂಸನೀಯ.

ಟಾರ್ಚ್ ಲೈಟ್’ನಲ್ಲಿ ಸರ್ಜರಿ!

ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವ ವೇಳೆ ಒಮ್ಮೆ ಮಧ್ಯರಾತ್ರಿ 1 ಗಂಟೆ ವೇಳೆಗೆ ಒಂದು ಪ್ರಕರಣ ಬರುತ್ತದೆ. ಆದರೆ, ಆ ಭಾಗದಲ್ಲಿ ವಿದ್ಯುತ್ ಇರಲಿಲ್ಲ. ಆದರೆ, ಸರ್ಜರಿ ಮಾಡಲೇಬೇಕು. ಹೀಗಾಗಿ, ಗಟ್ಟಿ ಮನಸ್ಸು ಮಾಡಿ ಟಾರ್ಚ್ ಲೈಟ್ ಸಹಾಯದಿಂದಲೇ ಶಸ್ತ್ರಚಿಕಿತ್ಸೆಯನ್ನು ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ಡಾ.ಪೈ ಅವರ ಕರ್ತವ್ಯ ಶ್ರದ್ಧೆ ಹಾಗೂ ಪರತೆ ನಿಜಕ್ಕೂ ಇಡಿಯ ವೈದ್ಯಕೀಯ ಸಮೂಹಕ್ಕೇ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.

ಗಿನ್ನಿಸ್ ಕೈ ತಪ್ಪಿದ ಸೆರೆಂಡಿಪಿಟಿ ವೈದ್ಯ
ಸಾಮಾನ್ಯವಾಗಿ ಒಂದೋ ಎರಡೋ ಡಿಗ್ರಿ, ಮಾಸ್ಟರ್ ಡಿಗ್ರಿ ಪಡೆದು ದುಡಿಮೆಗೆ ಇಳಿಯುವವರು ಈ ಕಾಲದಲ್ಲಿ ಹೆಚ್ಚು. ಆದರೆ, ಅಂದಿನ ಕಾಲದಲ್ಲೇ ಒಂದೇ ಯೂನಿವರ್ಸಿಟಿಯಿಂದ, ಒಂದೇ ಘಟಿಕೋತ್ಸವದಲ್ಲಿ ಎರಡು ಎಂಡಿಗಳನ್ನು ಪಡೆದು ದಾಖಲೆ ಮಾಡಿದ್ದರು ಡಾ.ಪೈ. ಒಂದೇ ಕಾನ್ವೋಕೇಶನ್ನಲ್ಲಿ ಕಮ್ಯೂನಿಟಿ ಮೆಡಿಸನ್’ನಲ್ಲಿ ಎಂಡಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್’ನಲ್ಲಿ ಎಂಡಿ ಏಕಕಾಲಕ್ಕೆ ಪಡೆದಿದ್ದರು. ಆದರೆ, ಈ ಸಾಧನೆಯನ್ನು ಗಿನ್ನಿಸ್ ದಾಖಲೆಗೆ ಸೇರಿಸುವಂತೆ ಸಲ್ಲಿಕೆಯಾಗಿದ್ದ ಕೋರಿಕೆಯನ್ನು ಸಂಸ್ಥೆ ತಿರಸ್ಕರಿಸಿತು ಎಂದರೆ ನಿಜಕ್ಕೂ ಓರ್ವ ಅಪೂರ್ವ ಸಾಧಕನಿಗೆ ಆದ ನಿರ್ಲಕ್ಷವೇ ಸರಿ. ಆದರೆ, ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೇ, ತಮ್ಮ ಸಾಧನೆಗೆ ಒಂದೊಂದೇ ಗರಿಯನ್ನು ಮೂಡಿಸಿಕೊಳ್ಳುತ್ತಾ ಬರುತ್ತಿರುವ ಡಾ.ಪೈ ನಿಜಕ್ಕೂ ಓರ್ವ ಮಾದರಿಯೇ ಸರಿ.

Tags: CesareanDoctorDr Ramdas Pandurang PaiGuinness World RecordKannada ArticleManipal HospitalShivamoggasubbaiah medical college shimogaSurgeonಡಾ. ರಾಮದಾಸ ಪಾಂಡುರಂಗ ಪೈ
Previous Post

ದೆಹಲಿಯಲ್ಲಿ ಕಟ್ಟಡ ಕುಸಿತ, ಏಳು ಮಂದಿ ಸಾವು: ರಕ್ಷಣಾ ಕಾರ್ಯ ಅಂತ್ಯ

Next Post

ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ನಿಂತ ಕಾಂಗ್ರೆಸ್!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ನಿಂತ ಕಾಂಗ್ರೆಸ್!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!