No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
  • Advertise With Us
  • Grievances
  • About Us
  • Contact Us
Thursday, September 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಾಳೆ ಮಿರೋರಾಂಗೆ ಐತಿಹಾಸಿಕ ದಿನ | ಸೈರಾಂಗ್-ಬೈರಾಬಿ ಮಾರ್ಗ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ಈ ಭಾಗದ ಜನರ ದಶಕಗಳ ಕನಸು ನನಸಿಗೆ ಕ್ಷಣಗಣನೆ | ಮೂರು ಹೊಸ ರೈಲು ಸಂಚಾರಕ್ಕೂ ಹಸಿರು ನಿಶಾನೆ

kalpa News by kalpa News
September 12, 2025
in Special Articles
0
ನಾಳೆ ಮಿರೋರಾಂಗೆ ಐತಿಹಾಸಿಕ ದಿನ | ಸೈರಾಂಗ್-ಬೈರಾಬಿ ಮಾರ್ಗ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮಿಜೋರಾಂ  |

ಸೆ.13ರ ನಾಳೆ ಇಲ್ಲಿನ ಜನರ ದಶಕಗಳ ಕನಸು ನನಸಾಗುವ ದಿನ, ಮಾತ್ರವಲ್ಲ ದೇಶದ ಅದರಲ್ಲೂ ಈಶಾನ್ಯ ರಾಜ್ಯ ಮಿಜೋರಾಂ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ.

ಹೌದು… ಸೈರಾಂಗ್ – ಬೈರಾಬಿ ನೂತನ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಉದ್ಘಾಟಿಸಲಿದ್ದು, ಇದರೊಂದಿಗೆ ಮೂರು ನೂತನ ರೈಲುಗಳಿಗೂ ಸಹ ಹಸಿರು ನಿಶಾನೆ ತೋರಲಿದ್ದಾರೆ.

ಎಷ್ಟೊತ್ತಿಗೆ ಕಾರ್ಯಕ್ರಮ?
ಮಿಜೋರಾಂನ ಸೈರಾಂಗ್ – ಬೈರಾಬಿ ನಡುವೆ ನೂತನವಾಗಿ ನಿರ್ಮಿಸಲಾಗಿರುವ 51.38 ಕಿಲೋ ಮೀಟರ್ ಉದ್ದದ ಬ್ರಾಡ್ ಗೇಜ್ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿಯವರು ಸೆ.13ರ ನಾಳೆ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ.

ಸೈರಾಂಗ್’ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಾಳೆ ನೂತನ ಮಾರ್ಗವನ್ನು ಪ್ರಧಾನಿಯವರು ಲೋಕಾರ್ಪಣೆ ಮಾಡಲಿದ್ದು, ಇದರೊಟ್ಟಿಗೆ ಮೂರು ಹೊಸ ರೈಲುಗಳಿಗೂ ಸಹ ಹಸಿರು ನಿಶಾನೆ ತೋರಲಿದ್ದಾರೆ.

ಯಾವೆಲ್ಲಾ ರೈಲುಗಳಿಗೆ ಚಾಲನೆ?
ಸೈರಾಂಗ್ – ಬೈರಾಬಿ ನಡುವಿನ ನೂತನ ರೈಲು ಮಾರ್ಗಕ್ಕೆ ಚಾಲನೆ ನೀಡುವ ಜೊತೆಯಲ್ಲಿ ಪ್ರಧಾನಿಯವರು ಮೂರು ನೂತನ ರೈಲುಗಳಿಗೂ ಸಹ ಹಸಿರು ನಿಶಾನೆ ತೋರಿಸಲಿದ್ದಾರೆ.

  1. ಐಜ್ವಾಲ್ (ಸೈರಾಂಗ್) ಮತ್ತು ದೆಹಲಿ (ಆನಂದ್ ವಿಹಾರ್ ಟರ್ಮಿನಲ್) ರಾಜಧಾನಿ ಎಕ್ಸ್’ಪ್ರೆಸ್ ರೈಲು
  2. ಐಜ್ವಾಲ್ (ಸೈರಾಂಗ್) ಮತ್ತು ಗುವಾಹಟಿ ಎಕ್ಸ್’ಪ್ರೆಸ್ ರೈಲು
  3. ಐಜ್ವಾಲ್ (ಸೈರಾಂಗ್) ಮತ್ತು ಕೋಲ್ಕತ್ತಾ ಎಕ್ಸ್’ಪ್ರೆಸ್ ರೈಲು

  • 70 ಮೀಟರ್’ಗಿಂತಲೂ ಎತ್ತರದ 6 ಸೇತುವೆಗಳು (ಗರಿಷ್ಠ 114 ಮೀ)
  • ದುರ್ಗಮ ಸವಾಲಿನ ಭೂವೈಜ್ಞಾನಿಕ ಪರಿಸ್ಥಿತಿಗಳಲ್ಲಿ 45 ಸುರಂಗಗಳು
  • ಎಲ್ಲಾ ಸುರಂಗಗಳಲ್ಲಿ ಬ್ಯಾಾಲೆಸ್ಟ್ಲೆಸ್ ಟ್ರ್ಯಾಕ್ ಅಳವಡಿಕೆ
  • ಒಟ್ಟು ಸೇತುವೆಗಳ ಉದ್ದ – 11.78 ಕಿ.ಮೀ (23%)
  • ಒಟ್ಟು ಸೇತುವೆಗಳು – 153
  • ಸಣ್ಣ ಸೇತುವೆಗಳು – 88
  • ಆರ್’ಒಬಿ ಮತ್ತು ಆರ್’ಯುಬಿ – 10
  • ದೊಡ್ಡ ಸೇತುವೆಗಳು – 55
  • ಮಾರ್ಗದ ಒಟ್ಟು ಸುರಂಗಗಳು – 45
  • ಸುರಂಗಗಳ ಒಟ್ಟು ಉದ್ದ – 15.885 ಕಿ.ಮೀ (31%)
  • ಅತಿದೊಡ್ಡ ಸುರಂಗ – 1.868 ಕಿ.ಮೀ

ಮಿಜೋರಾಂನಲ್ಲಿ 8,000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಬೈರಾಬಿ-ಸೈರಾಂಗ್ ರೈಲು ಮಾರ್ಗವು ಐಜ್ವಾಲ್ ಅನ್ನು ಮೊದಲ ಬಾರಿಗೆ ರಾಷ್ಟ್ರೀಯ ರೈಲು ಜಾಲಕ್ಕೆ ಸಂಪರ್ಕಿಸುತ್ತದೆ.

ಮಣಿಪುರ ಮತ್ತು ಅಸ್ಸಾಂನಲ್ಲಿ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ.

ರೈಲ್ವೆ ಸಚಿವಾಲಯವು 2014 ರಿಂದ ಈಶಾನ್ಯಕ್ಕೆ 62,477 ಕೋಟಿಗಳನ್ನು ನಿಗದಿಪಡಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 10,440 ಕೋಟಿಗಳನ್ನು ಮೀಸಲಿಟ್ಟಿದೆ.

ಜುಲೈ, 2025 ರ ಹೊತ್ತಿಗೆ ಈಶಾನ್ಯ ಪ್ರದೇಶದಲ್ಲಿ 16,207 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ.

ಪಿಎಂಜಿಎಸ್’ವೈ ಅಡಿಯಲ್ಲಿ, 80,933 ಕಿ.ಮೀ.ಗಳನ್ನು ಒಳಗೊಂಡ 16,469 ರಸ್ತೆ ಕಾಮಗಾರಿಗಳು ಮತ್ತು 2,108 ಸೇತುವೆಗಳು ಪೂರ್ಣಗೊಂಡಿವೆ.

ರೈಲ್ವೆ ಸಚಿವಾಲಯವು ಈಶಾನ್ಯ ಪ್ರದೇಶದಲ್ಲಿ ಬೃಹತ್ ಪರಿವರ್ತನೆಗೆ ಮುಂಚೂಣಿಯಲ್ಲಿದೆ. ದಾಖಲೆಯ ಹೂಡಿಕೆಗಳೊಂದಿಗೆ ಮೂಲಸೌಕರ್ಯ ಅಂತರವನ್ನು ಕಡಿಮೆ ಮಾಡುವುದು ಮತ್ತು ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

2014 ರಿಂದ, ಈ ಪ್ರದೇಶಕ್ಕೆ ರೈಲ್ವೆ ಬಜೆಟ್ ಹಂಚಿಕೆ ಐದು ಪಟ್ಟು ಹೆಚ್ಚಾಗಿದ್ದು, ಪ್ರಸ್ತುತ ಹಣಕಾಸು ವರ್ಷಕ್ಕೆ 10,440 ಕೋಟಿ ಸೇರಿದಂತೆ ಒಟ್ಟು 62,477 ಕೋಟಿಗಳನ್ನು ತಲುಪಿದೆ. 77,000 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳು ಪ್ರಸ್ತುತ ನಡೆಯುತ್ತಿವೆ. ಇದು ಈ ಪ್ರದೇಶವು ಇದುವರೆಗೆ ಕಂಡ ಅತ್ಯುನ್ನತ ಮಟ್ಟದ ಹೂಡಿಕೆಯನ್ನು ಗುರುತಿಸುತ್ತದೆ.8,000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಈ 51 ಕಿಲೋಮೀಟರ್ ಮಾರ್ಗವು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಐಜ್ವಾಲ್ ಅನ್ನು ರಾಷ್ಟ್ರೀಯ ರೈಲ್ವೆ ಜಾಲಕ್ಕೆ ಸಂಪರ್ಕಿಸುತ್ತದೆ. ಸವಾಲಿನ ಭೂಪ್ರದೇಶದಲ್ಲಿ ನಿರ್ಮಿಸಲಾದ 143 ಸೇತುವೆಗಳು ಮತ್ತು 45 ಸುರಂಗಗಳೊಂದಿಗೆ, ಕುತುಬ್ ಮಿನಾರ್’ಗಿಂತಲೂ ಎತ್ತರದ ಸೇತುವೆಗಳಲ್ಲಿ ಒಂದನ್ನು ಹೊಂದಿರುವ ನಿರ್ಮಾಣವು ಇಂಜಿನಿಯರಿಂಗ್ ಅದ್ಭುತವಾಗಿದೆ.

ಪ್ರಯಾಣಿಕರ ಅನುಕೂಲತೆಯ ಜೊತೆಗೆ, ಈ ಮಾರ್ಗವು ಸರಕು ಸಾಗಣೆಯನ್ನು ಸುಧಾರಿಸುತ್ತದೆ. ಬಿದಿರು ಮತ್ತು ತೋಟಗಾರಿಕೆಯಂತಹ ಸ್ಥಳೀಯ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತದೆ. ಅಲ್ಲದೇ, ಪ್ರವಾಸೋದ್ಯಮ ಮತ್ತು ಉದ್ಯೋಗಕ್ಕೆ ಬಲವಾದ ಉತ್ತೇಜನವನ್ನು ನೀಡುತ್ತದೆ.
ಪ್ರಧಾನಿಯವರು ಸೈರಾಂಗ್ – ದೆಹಲಿ, ಕೋಲ್ಕತ್ತಾ-ಗುವಾಹಟಿಗೆ ಮೂರು ಹೊಸ ರೈಲು ಸೇವೆಗಳನ್ನು ಉದ್ಘಾಟಿಸಲಿದ್ದಾರೆ. ಇದು ಮಿಜೋರಾಂ ಅನ್ನು ಭಾರತದ ಅಭಿವೃದ್ಧಿಯ ಭೂಪಟದಲ್ಲಿ ದೃಢವಾಗಿ ಇರಿಸುತ್ತದೆ.

ಐಜ್ವಾಲ್ ಬೈಪಾಸ್, ಥೆನ್ಜಾಲ್-ಸಿಯಾಲ್ಸುಕ್ ಮತ್ತು ಖಾಂಕಾನ್-ರೊAಗುರಾ ರಸ್ತೆಗಳು ಸೇರಿದಂತೆ ಬಹು ರಸ್ತೆ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಅಡಿಪಾಯ ಹಾಕಲಿದ್ದಾರೆ. PM-DevINE ಯೋಜನೆಯಡಿ 500 ಕೋಟಿಗೂ ಹೆಚ್ಚು ವೆಚ್ಚದ 45 ಕಿಮೀ ಐಜ್ವಾಲ್ ಬೈಪಾಸ್ ನಗರ ಸಂಚಾರವನ್ನು ಸುಗಮಗೊಳಿಸಿ, ಸಂಪರ್ಕವನ್ನು ಸುಧಾರಿಸುತ್ತದೆ. ಪ್ರಧಾನಮಂತ್ರಿಯವರು ಲಾಂಗ್ವೈ-ಸಿಯಾಹಾ ರಸ್ತೆಯಲ್ಲಿರುವ ಚಿಮ್ಟುಯಿಪುಯಿ ನದಿ ಸೇತುವೆಗೆ ಅಡಿಪಾಯ ಹಾಕಲಿದ್ದಾರೆ. ಇದು ಎಲ್ಲಾ ಹವಾಮಾನ ಸಂಪರ್ಕವನ್ನು ಖಚಿತಪಡಿಸುತ್ತದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರ ಜೊತೆಗೆ ಕಲಾದನ್ ಮಲ್ಟಿಮೋಡಲ್ ಟ್ರಾನ್ಸಿಟ್ ಚೌಕಟ್ಟಿನ ಅಡಿಯಲ್ಲಿ ಗಡಿಯಾಚೆಗಿನ ವ್ಯಾಪಾರವನ್ನು ಸುಗಮಗೊಳಿಸುತ್ತದೆ.

ಸಿಲ್ಚಾರ್’ನಿಂದ ಐಜ್ವಾಲ್’ಗೆ ರಸ್ತೆಯ ಮೂಲಕ ಒಂದು ಇಡೀ ದಿನದ ಪ್ರಯಾಣ ಬೇಸರದ ಸಂಗತಿಯಾಗಿತ್ತು. ಪ್ರಯಾಣಿಕ ಮತ್ತು ಸರಕು ಸಾಗಣೆ ಎರಡೂ ರೈಲು ಸೇವೆಗಳು ಕೈಗೆಟುಕುವ ದರಗಳು ಮತ್ತು ಸುಂಕಗಳನ್ನು ನೀಡುವ ಮೂಲಕ ಸಂಪರ್ಕದಲ್ಲಿ ಹೆಚ್ಚು ಅಗತ್ಯತೆಗಳನ್ನು ಪೂರೈಸುತ್ತದೆ. ಎರಡೂ ಸ್ಥಳಗಳ ನಡುವಿನ ರಸ್ತೆ ಅಂತರವು 172 ಕಿಲೋ ಮೀಟರ್ ಆಗಿದ್ದರೆ, ರೈಲು ಅಂತರವು 154 ಕಿಲೋ ಮೀಟರ್ ಆಗಿದೆ. ಇದು, ಪ್ರಯಾಣದ ಸಮಯವು ನಾಲ್ಕು ಗಂಟೆಗಳಿಗಿಂತ ಕಡಿಮೆಯಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಐಜ್ವಾಲ್’ನಿಂದ ಗೌಹಾಟಿ, ಸಿಲ್ಚರ್ ಹಾಗೂ ನವದೆಹಲಿಗಳಿಗೆ ಶಿಕ್ಷಣ, ಆರೋಗ್ಯ ಹಾಗೂ ವ್ಯವಹಾರಗಳಿಗೆ ತೆರಳುವ ಜನರಿಗೆ ಇದು ಅತ್ಯಂತ ಸಹಕಾರಿಯಾಗಿದೆ.

ಈ ಮಾರ್ಗ ಲೋಕಾರ್ಪಣೆಯಾದ ನಂತರ ಭಾರತೀಯ ಆಹಾರ ನಿಗಮ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸರಕುಗಳನ್ನು ರೈಲಿನ ಮೂಲಕ ಸಾಗಿಸಲು ಸಾಧ್ಯವಾಗುತ್ತದೆ. ಇದು ಇತರ ರಾಜ್ಯಗಳಿಂದ ಸರಕುಗಳು, ತರಕಾರಿಗಳು ಮತ್ತು ಇತರ ವಸ್ತುಗಳನ್ನು ಸಾಗಿಸುವ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆರಂಭದಲ್ಲಿ, ಪ್ರಯಾಣಿಕರ ಸೇವೆಗಳು ಸೈರಾಂಗ್ ಮತ್ತು ಸಿಲ್ಚಾರ್ ನಡುವೆ ಪ್ರಯಾಣಿಸಬಹುದಾಗಿದೆ.

ಪ್ರವಾಸೋದ್ಯಮಕ್ಕೆ ಸಹಕಾರಿ
ಪ್ರಾಕೃತಿಕ ಸೊಬಗಿನ ಈ ಪ್ರದೇಶದಲ್ಲಿ ನೂತನ ರೈಲು ಮಾರ್ಗ ಪ್ರವಾಸೋದ್ಯಮಕ್ಕೆ ರಾಜಪಥವನ್ನು ತೆರೆಯಲಿದೆ. ಇದಕ್ಕೆ ಪೂರಕವಾಗಿ, 2025ರ ಆಗಸ್ಟ್’ನಲ್ಲಿ ಐಅರ್’ಸಿಟಿಸಿಯು ಮಿಜೋರಾಂ ಸರ್ಕಾರದೊಂದಿಗೆ 2 ವರ್ಷಗಳ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಒಪ್ಪಂದ ಮಾಡಿಕೊಂಡಿದೆ.

ಪ್ರವಾಸೋದ್ಯಮ ವೃದ್ಧಿಯಿಂದಾಗಿ ಸ್ಥಳೀಯ ಉದ್ಯಮಗಳು, ಹೊಟೇಲ್, ಗೈಡ್, ಟೂರಿಸ್ಟ್ ವಾಹನಗಳ ಸೇರಿದಂತೆ ಹಲವು ರೀತಿಯಲ್ಲಿ ಉದ್ಯೋಗವಕಾಶಕ್ಕೆ ಪ್ರೋತ್ಸಾಹಕಾರಿಯಾಗಿದೆ.

ಪ್ರಮುಖವಾಗಿ, ಮಿಜೋರಾಂ ಜನರ ಸಾಂಪ್ರದಾಯಿಕ ಹಸ್ತಕಲೆ, ವಸ್ತ್ರ ಹಾಗೂ ಕೃಷಿ ಸಂಬಂಧಿತ ವ್ಯಾಪಾರಗಳಿಗೆ ಇದು ಬಾಗಿಲು ತೆರೆಯಲಿದೆ. ಈ ಮೂಲಕ ಇಲ್ಲಿನ ಜನರ ಜೀವನ ಸುಧಾರಣೆಯಾಗಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BairabiEastern StateIndian RailwayIRCTCKannada News WebsiteLatest News KannadaMizoramNorth Eastern StateRailOneSairangಈಶಾನ್ಯ ರಾಜ್ಯಐಜ್ವಾಲ್ಗುವಾಹಟಿದೆಹಲಿಪ್ರಧಾನಿ ನರೇಂದ್ರ ಮೋದಿಬ್ರಾಡ್ ಗೇಜ್ಮಿಜೋರಾಂರಾಜಧಾನಿ ಎಕ್ಸ್'ಪ್ರೆಸ್ಸೈರಾಂಗ್ಸೈರಾಂಗ್ - ಬೈರಾಬಿ ನೂತನ ರೈಲು ಮಾರ್ಗ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸದಸ್ಯರ ಅನುಕೂಲಕ್ಕಾಗಿ ನೂತನ ಆ್ಯಪ್‍ ಲೋಕಾರ್ಪಣೆ: ಡಾ. ಶ್ರೀಧರ್

Next Post

ಹಾಸನದಲ್ಲಿ ಸೂತಕ | ಗಣೇಶ ಮೆರವಣಿಗೆ ಮೇಲೆ ಟ್ರಕ್ ಹರಿದು 9 ಸಾವು | 5 ಲಕ್ಷ ಪರಿಹಾರ ಘೋಷಣೆ

kalpa News

kalpa News

Next Post
ಹಾಸನದಲ್ಲಿ ಸೂತಕ | ಗಣೇಶ ಮೆರವಣಿಗೆ ಮೇಲೆ ಟ್ರಕ್ ಹರಿದು 9 ಸಾವು | 5 ಲಕ್ಷ ಪರಿಹಾರ ಘೋಷಣೆ

ಹಾಸನದಲ್ಲಿ ಸೂತಕ | ಗಣೇಶ ಮೆರವಣಿಗೆ ಮೇಲೆ ಟ್ರಕ್ ಹರಿದು 9 ಸಾವು | 5 ಲಕ್ಷ ಪರಿಹಾರ ಘೋಷಣೆ

Leave a Reply Cancel reply

Your email address will not be published. Required fields are marked *

No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL