ಕರ್ನಾಟಕದಲ್ಲಿ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ (ಮಂಗಳೂರಿನ ಸುರತ್ಕಲ್) ವಿಶಿಷ್ಟ ಸ್ಥಾನವಿದೆ. ಇಲ್ಲಿನ ಪ್ರಾಕೃತಿಕ ಸೊಬಗನ್ನು ನೋಡಿದರೆ ಸ್ವರ್ಗವೇ ಭೂಮಿಗೆ ಬಂದಂತೆ ಭಾಸವಾಗುತ್ತದೆ. ಹಾಗೆ ಇಲ್ಲಿ ವಿಶಿಷ್ಟ ಬಗೆಯ ಸಂಸ್ಕೃತಿ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಅಸ್ಥಿತ್ವದಲ್ಲಿವೆ. ಹಾಗೆ ಇಲ್ಲಿ
ಸಾಂಸ್ಕೃತಿಕ ರಂಗದಲ್ಲಿ ಕೂಡಾ ವಿಶಿಷ್ಟ ಪ್ರತಿಭೆಗಳನ್ನು ಕಾಣಬಹುದು. ಕಲಾ ಕ್ಷೇತ್ರದಲ್ಲಿ ತನ್ನ ಅದ್ಬುತ ಪ್ರತಿಭೆಯಿಂದ ತನ್ನದೆ ಆದ ಛಾಪು ಮೂಡಿಸಿದವಳೆ ತುಳುವ ಸಿರಿ.
“ತುಳುವ ಸಿರಿ” ಎಂಬ ಬಿರುದು ಕಿವಿಗೆ ಬೀಳುತ್ತಿದ್ದಂತೆ ನಮಗೆ ಥಟ್ಟನೆ ನೆನಪಾಗುವುದು ಆದ್ವಿಕಾ ಶೆಟ್ಟಿ. ಕರ್ನಾಟಕದ ಖ್ಯಾತ ಪ್ರತಿಭೆಯಾದ ಈ ಬಾಲೆ ಅರ್ಪಿತಾ ವಿ. ಶೆಟ್ಟಿ ಮತ್ತು ವೇಣುಗೋಪಾಲ ಶೆಟ್ಟಿಯವರ ಮಗಳು.
ಕರಾವಳಿಯ ಈ ಬಹುಮುಖ ಪ್ರತಿಭೆ
ಖಾಸಗಿ ವಾಹಿನಿಗಳ ರಿಯಾಲಿಟಿ ಶೋ ಮತ್ತು ಹಲವಾರು ವೇದಿಕೆಯಲ್ಲಿ ಆದ್ವಿಕಾ ಶೆಟ್ಟಿ ಪ್ರದರ್ಶನ ನೀಡಿದ್ದಾಳೆ. ಝೀ ಟಿವಿ (ಹಿಂದಿ)ಯ ಖ್ಯಾತ ಟಿವಿ ಶೋ ಡಾನ್ಸ್ ಇಂಡಿಯಾ ಡಾನ್ಸ್ DID ಲಿಟಲ್ ಮಾಸ್ಟರ್ಸ್ ಮತ್ತು ಕಲರ್ಸ್ ಕನ್ನಡದ ಶೋ ಡಾನ್ಸಿಂಗ್ ಸ್ಟಾರ್ಸ್ ಈ ಟಿವಿ ಕನ್ನಡ ಹಾಗೂ ತೆಲುಗು ಡೀ ಜ್ಯೂನಿಯರ್ ಸೇರಿದಂತೆ ಹಲವಾರು ಶೋನಲ್ಲಿ ಪಾಲ್ಗೊಂಡು ನೃತ್ಯ ಲೋಕದೊಳಗೆ ಅದ್ಭುತ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾಳೆ. ಇನ್ನು ಈಕೆ ಯಕ್ಷಗಾನ ಲೋಕದಲ್ಲಿ ಮಿಂಚು ಹರಿಸಿದಲ್ಲದೆ ಸಂಗೀತ ಕ್ಷೇತ್ರದಲ್ಲಿ ಉತ್ತಮವಾಗಿ ಹಾಡುವುದರ ಮೂಲಕ ಮುಂದಿನ ದಿನಗಳಲ್ಲಿ ತಾನು ಶೇಷ್ಠ ಗಾಯಕಿಯಾಗಬಲ್ಲೆಯೆಂದು ನಿರೂಪಿಸುತ್ತಿದ್ದಾಳೆ.
ಇದರೊಂದಿಗೆ ಬಾಲನಟಿಯಾಗಿ ಚಲನಚಿತ್ರಗಳಲ್ಲೂ ನಟಿಸಿದ್ದು, ಜೊತೆಗೆ ಮಾಡಲಿಂಗ್ ಕೂಡಾ ಆಸಕ್ತಿ ಹೊಂದಿದ್ದು ಮಿಸ್ ಮಂಗಳೂರು ಪ್ರಶಸ್ತಿ ಬಾಚಿಕೊಂಡಿದ್ದರು.(2013) ಭಾರತೀಯ ಜಾನಪದ ನೃತ್ಯ ಯೋಗ ನಿರೂಪಣೆ ಮಾತುಗಾರಿಕೆ ಸೇರಿದಂತೆ ಹಲವಾರು ರಂಗದಲ್ಲಿ ಹೆಸರು ಮಾಡಿದ್ದಾಳೆ. ಅಲ್ಲದೆ ಹಲವಾರು ಕಾರ್ಯಕ್ರಮಗಳಿಗೆ ಉದ್ಘಾಟಕರಾಗಿ ಅತಿಥಿಯಾಗಿ ಭಾಗವಹಿಸಿದ್ದಾಳೆ. ಸಮಾಜ ಸೇವೆಯಲ್ಲಿ ಸಹ ತೊಡಗಿಸಿಕೊಂಡಿದ್ದಾಳೆ.
ಅರಸಿ ಬಂದಿವೆ ಪ್ರಶಸ್ತಿಗಳು
ತುಳುವ ಸಿರಿ ಆದ್ವಿಕಾ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ದಕ್ಷಿಣ ಕನ್ನಡ ಅಸಾಧಾರಣ ಪ್ರತಿಭಾ ಪ್ರಶಸ್ತಿ ಕರ್ನಾಟಕ ರಾಜ್ಯ ಅಸಾಧಾರಣ ಪ್ರತಿಭಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾಳೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರೆ ಅಂದಕೂಡಲೇ ಇವರು ಯಾರೋ ಮಹಿಳೆ ಇರಬಹುದು ಎಂದು ನೀವು ಭಾವಿಸಿದ್ದರೆ ನಿಮ್ಮ ಊಹೆ ನೂರಕ್ಕೆ ನೂರರಷ್ಟು ಸುಳ್ಳು. ಇವಳ ವಯಸ್ಸು ಕೇವಲ 12. ಕಲಿಯುತ್ತಿರುವುದು ಕೇವಲ 8ನೆಯ ತರಗತಿ. ದೆಹಲಿ ಪಬ್ಲಿಕ್ ಸ್ಕೂಲ್ MRPLನಲ್ಲಿ ಓದುತಿದ್ದಾಳೆ. ಶಾಲೆಗೆ ಚಕ್ಕರ್ ಅಭಿಮಾನಿಗಳ ಕರೆಗೆ ಹಾಜರ್ ನಮ್ಮ ಆದ್ವಿಕಾ ಶೆಟ್ಟಿ ಸುಮಾರು 400 ಪ್ರಶಸ್ತಿ ಪಡೆದ ಈ ಬಾಲೆ ದೇಶದ ಮತ್ತು ವಿದೇಶದ(1) 1000 ಕಡೆ ನೃತ್ಯ ಮತ್ತು 200 ಯಕ್ಷಗಾನ ಪ್ರದರ್ಶನ ನೀಡಿದ್ದಾಳೆ.
ಇದರೊಂದಿಗೆ 300ಕ್ಕೂ ಹೆಚ್ಚಿನ ಸನ್ಮಾನ ಸ್ವೀಕರಿಸಿದ ಹಿರಿಮೆ ಈಕೆಗಿದೆ. ಇವಳು ಮಾಡಿದ ಕನ್ನಡ ಕಲಾ ಸೇವೆಯನ್ನು ಗೌರವಿಸುವ ಸಲುವಾಗಿ ಇವರ ಹೆಸರಿನ್ನು ರಾಷ್ಟç ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಇದರೊಂದಿಗೆ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಪ್ರಶಸ್ತಿ ಪಡೆಯುವಂತಾಗಲಿ ಎಂದು ಹರಸುತ್ತೇವೆ.
IAS ಆಗಬೇಕೆಂಬ ಬಯಕೆ ಹೊಂದಿರುವ ಇವರ ಕನಸಿನ ಗುಚ್ಛ ಇವರ ಕೈ ಸೇರಲಿ ಎಂದೂ ಸಹ ಶುಭ ಹಾರೈಸುತ್ತೇನೆ. ಇವರ ಈ ಅಮೋಘ ಸಾಧನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲ ನೀಡಿ ಬೆಳೆಸಿದ ಪ್ರತಿಯೊಬ್ಬ ವ್ಯಕ್ತಿಗೂ ಧನ್ಯವಾದ ಅರ್ಪಿಸುತ್ತೇನೆ.
ಲೇಖನ ಮತ್ತು ಚಿತ್ರಕೃಪೆ: ರೋಹನ್ ಪಿಂಟೋ ಗೇರುಸೊಪ್ಪ
Discussion about this post