ಕಲ್ಪ ಮೀಡಿಯಾ ಹೌಸ್ | ತುಮಕೂರು |
ಶಾಸ್ತ್ರೀಯ ಸಂಗೀತ ಕಲಿಕೆಯಿಂದ #Classical Music ವಿವಿಧ ರಂಗದ ಸಾಧನೆ ಸುಲಭವಾಗುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವದ ಅಂಗವಾಗಿ ಮಾಕಂ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀ ಪುರಂದರ ದಾಸ -ಸದ್ಗುರು ಶ್ರೀ ತ್ಯಾಗರಾಜರ ಸ್ವಾಮಿಗಳ 25ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನಿಸಿ ಆಶೀರ್ವಚನ ನೀಡಿದರು.
ಸಂಗೀತದಿಂದ ಸಸ್ಯಗಳು ಹುಲುಸಾಗಿ ಬೆಳೆಯುತ್ತದೆ. ಮನೆ-ಮನದಲ್ಲಿ ಶಾಂತಿ ನೆಲೆಸುತ್ತದೆ. ಪುರುಷಾರ್ಥ ಸಾಧನೆ ಸರಳವಾಗುತ್ತದೆ. ದೇಶ ದೇಶಗಳ ನಡುವಿನ ಸೌಹಾರ್ದ ಸ್ಥಾಪನೆಗೂ ಸಂಗೀತ ಪೂರಕವಾಗಲಿದೆ ಎಂದರು.

Also read: ವಸ್ತು ಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ | ಸಿಎಂ ಸಿದ್ದರಾಮಯ್ಯ
ಬೆಳ್ಳಿಹಬ್ಬದ ಅಂಗವಾಗಿ ವಿವಿಧ ರಂಗದ ಸಾಧಕರಾದ ಕನ್ನಡ ಪ್ರಾಧ್ಯಾಪಕಿ ಡಾ. ಕೆ.ಎಸ್. ಚೈತಾಲಿ (ಸಾಹಿತ್ಯನುಗ್ರಹಶ್ರೀ), ಲೇಖಕ ಎ.ಆರ್. ರಘುರಾಮ (ಅಧ್ಯಾತ್ಮಾನುಗ್ರಹ ಶ್ರೀ), ಖ್ಯಾತ ಬಾಣಸಿಗ ಹಿರಿಯಣ್ಣ (ಪೋಷಕಾನುಗ್ರಹಶ್ರೀ), ಮತ್ತು ಪಿಟೀಲು ವಿದ್ವಾಂಸ ಪಿ.ಎಸ್. ಪ್ರಸನ್ನ ಕುಮಾರ್ ಅವರಿಗೆ ಸಂಗೀತ ನಾದಾನುಗ್ರಹಶ್ರೀ) ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ಬೆಳಗ್ಗೆ 10ಕ್ಕೆ ಶ್ರೀ ತ್ಯಾಗರಾಜರ ‘ಘನರಾಗ ಪಂಚ ರತ್ನ’ ಕೃತಿಗಳ ಗೋಷ್ಠಿ ಗಾಯನ, ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಕೃತಿಗಳ ಗಾಯನ ವಿದ್ಯಾಲಯದ ಹಿರಿಯ, ಕಿರಿಯ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ ಸಂಪನ್ನಗೊಂಡಿತು.
ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ವಿದ್ವಾನ್ ಶ್ರೀಕಂಠ ಭಟ್ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post