ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮುಂಬೈ: ಮಹಾರಾಷ್ಟ್ರ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೊನೆಗೂ ವಿಶ್ವಾಸ ಮತ ಗೆದ್ದಿದ್ದು, ಸದನದಲ್ಲಿ ತಮ್ಮ ಸರ್ಕಾರದ ಬಹುಮತ ಸಾಬೀತು ಮಾಡಿದ್ದಾರೆ.
288 ಸಂಖ್ಯಾಬಲ ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತಕ್ಕೆ 145 ಶಾಸಕರ ಬೆಂಬಲ ಅಗತ್ಯವಿದೆ. ಇಂದು ನಡೆದ ಸದನದಲ್ಲಿ ಹಾಜರಿದ್ದ ಶಾಸಕರಲ್ಲಿ ಉದ್ಧವ್ ಠಾಕ್ರೆಗೆ 169 ಶಾಸಕರು ಬೆಂಬಲ ಸೂಚಿಸಿದ್ದಾರೆ.
ಇನ್ನು ವಿಶ್ವಾಸಮತ ಸಾಬೀತಿನ ವೇಳೆ ಸದನದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ಹಂಗಾಮಿ ಸ್ಪೀಕರ್ ಅವರನ್ನು ಬದಲಾವಣೆ ಮಾಡಿರುವ ಕಾರ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಭಾತ್ಯಾಗ ನಡೆಸಿತು.
Get in Touch With Us info@kalpa.news Whatsapp: 9481252093
Discussion about this post