ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೈಂದೂರು: ರಾಜ್ಯದ ಮುಖ್ಯಮಂತ್ರಿಗಳ ಪುತ್ರ ಹಾಗೂ ಸಂಸದರಾಗಿದ್ದರೂ ಸಹ ಯಾವುದೇ ರೀತಿಯ ಅಹಂಭಾವವಿಲ್ಲದೇ ಸರಳತೆ ಹೊಂದಿರುವ ಬಿ.ವೈ. ರಾಘವೇಂದ್ರ ಅವರ ವ್ಯಕ್ತಿತ್ವ ಮಾದರಿಯಾದುದು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಮ್ಮ ವಸತಿ ಗೃಹ ಉದ್ಘಾಟನೆಗೆ ಆಗಮಿಸಿದ್ದ ಸಂಸದರನ್ನು ಬರಮಾಡಿಕೊಂಡ ನಂತರ ಅವರು ಮಾತನಾಡಿದರು.
ರಾಘವೇಂದ್ರ ಅವರು ಶಿವಮೊಗ್ಗದ ಸಂಸದರು ಎಂಬುದರಾಚೆಗೆ ರಾಜ್ಯದ ಮುಖ್ಯಮಂತ್ರಿಗಳ ಪುತ್ರ. ಆದರೆ ತಾನೊಬ್ಬ ಮುಖ್ಯಮಂತ್ರಿಗಳ ಮಗ ಎಂಬ ಯಾವ ತೋರ್ಪಡಿಕೆಯೂ ಇಲ್ಲ. ಅವರಲ್ಲಿನ ವಿಧೇಯತೆ, ಸರಳತೆ, ಸಹನಶೀಲ ಗುಣ ಇತರರಿಗೆ ಮಾದರಿಯಾಗಿದೆ ಎಂದಿದ್ದಾರೆ.
ಬೈಂದೂರಿನ ಅಭಿವೃದ್ಧಿಯ ಬಗ್ಗೆ ಅವರ ಕಾಳಜಿ ತುಂಬು ಸಂತೋಷ ಕೊಡುತ್ತದೆ. ಕಿಂಡಿ ಅಣೆಕಟ್ಟು ಕುರಿತಾದ ನಮ್ಮ ಅನುದಾನಗಳ ಮನವಿ, ರಿಂಗ್ ರೋಡ್ ನಿರ್ಮಾಣ ಬಗೆಗಿನ ಬೇಡಿಕೆ, ಹೀಗೆ ಇತರ ಯಾವುದೇ ಬೇಡಿಕೆಗಳಿದ್ದರೂ ಖುದ್ದು ಮುತುವರ್ಜಿಯಿಂದ ಅದನ್ನು ಹಿಂಬಾಲಿಸುತ್ತಾರೆ. ಮಾತ್ರವಲ್ಲ ಎಷ್ಟೆ ಒತ್ತಡಗಳಿದ್ದರೂ ಮರಳಿ ಅವರೇ ಕರೆ ಮಾಡಿ ತಿಳಿಸುತ್ತಾರೆ. ರಾಘವೇಂದ್ರ ಅವರ ಇಂತಹ ಗುಣ ಅವರನ್ನು ಎತ್ತರಕ್ಕೆ ಕೊಂಡೊಯ್ಯಲಿ. ಮೂಕಾಂಬಿಕೆಯ ಅನುಗ್ರಹ ಸದಾ ಅವರ ಮೇಲೆ ಇರಲಿ ಎಂದವರು ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post