ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ವಿಜಯನಗರದ ಮಾರುತಿ ಮೆಡಿಕಲ್ಸ್ ಮಾಲೀಕ, ಗೋಸೇವಕ ಮಹೇಂದ್ರ ಮುನ್ನೋತ್ ಅವರು ಗೋಮಾತೆಯ ಸೇವೆಗಾಗಿ ಸುಮಾರು 10ಕ್ಕೂ ಅಧಿಕ ಗೋಶಾಲೆಗಳಿಗೆ ಸುಮಾರು 44 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಇವರ ಮಾತಾ ಪಿತೃಗಳಾದ ದಿವಂಗತ ಮೋತಿಲಾಲ್ ಮುನ್ನೋತ್ ಜೈನ್ ವಿಮಲಾಬಾಯಿ ಮುನ್ನೋತ್ ಜೈನ್ ಅವರುಗಳ ಪುಣ್ಯತಿಥಿಯ ಹಿನ್ನೆಲೆಯಲ್ಲಿ ನೂರಾರು ಗಿಡಗಳನ್ನು ನೆಡುವ ಭಿವೃಕ್ಷಾರೋಹಣ ಕಾರ್ಯಕ್ರಮದೊಂದಿಗೆ ನಾಡಿನ ವಿವಿಧ ಗೋಶಾಲೆಗಳಿಗೆ ಅವಶ್ಯಕತೆಗೆ ಅನುಗುಣವಾಗಿ ದೇಣಿಗೆ ನೀಡಿದ್ದಾರೆ.

Also read: ವೃತ್ತಿ ನಿರತರ ಒತ್ತಡ ನಿವಾರಿಸಲು ವೈ ಬ್ರೇಕ್ ಯೋಗ ಸಹಕಾರಿ: ಡಾ. ಮಹೇಶ್
ಈ ವೇಳೆ ಮಾತನಾಡಿದ ಮುನ್ನೋತ್, ಮೊನ್ನೆ ಗೋಹತ್ಯೆ ನಿಷೇಧ ಹಿಂಪಡೆಯುವ ಸಂಬಂಧ ಪಶು ಸಂಗೋಪನಾ ಸಚಿವರು ನೀಡಿರುವ ಹೇಳಿಕೆ ಗೋಹತ್ಯೆಯ ಪರವಾಗಿರುವುದು ಕರ್ನಾಟಕ ರಾಜ್ಯದ ದೌರ್ಭಾಗ್ಯ. ಗೋ ಸೇವೆ, ರಕ್ಷಣೆ ಯಾವುದೇ ಒಂದು ಸಮುದಾಯದವರದ್ದಲ್ಲ, ಮನುಕುಲದ ಕರ್ತವ್ಯ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post