ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ರೈಲ್ವೆ ಗೇಟ್ ಹಾಕಿದ್ದರಿಂದ ಹೃದಯಾಘಾತವಾಗಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ.
ರೈಲ್ವೆ ಇಲಾಖೆಯ 88 ಮುದ್ಲಾಪುರದ ನಿವಾಸಿ ಬಸವರಾಜ ಅವರಿಗೆ ಹೃದಯಾಘಾತವಾಗಿತ್ತು, ಈ ವೇಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತರುವಾಗ ರೈಲ್ವೆ ಗೇಟ್ ಹಾಕಲಾಗಿತ್ತು. ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಎಷ್ಟೆ ಮನವಿ ಮಾಡಿದರೂ ಗೇಟ್ ಓಪನ್ ಮಾಡಲು ವಿಳಂಬ ಮಾಡಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
88 ಮುದ್ಲಾಪುರದ ನಗರಸಭೆ ಸದಸ್ಯ ಮಾತನಾಡಿ, ಸುಮಾರು 8 ಹಳ್ಳಿಗಳ ಜನ ರು ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈ ಕೂಡಲೇ ಫ್ಲೈವೋವರ್ ಮಾಡಬೇಕೆಂದು ಆಗ್ರಹಿಸಿದರು.

Also read: ಹೆರಿಗೆ ನೋವಿನಿಂದ ನರಳಾಡುತ್ತಿದ್ದರೂ ಕರ್ತವ್ಯ ಮರೆತ ವೈದ್ಯಕೀಯ ಸಿಬ್ಬಂದಿ!
ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ತೆರಳುವುದಕ್ಕೆ ಮುಂದಾದಾಗ ಗೇಟ್ ಹಾಕಿದ್ದರಿಂದ ಗರ್ಭಿಣಿಯರು ಹಸುಗೂಸು ಮೃತ ಪಟ್ಟ ಸಾಕಷ್ಟು ಉದಾಹರಣೆಗಳಿವೆ. ಈ ಕೂಡಲೇ ರೈಲ್ವೆ ಫ್ಲೈವೋವರ್ ನಿರ್ಮಿಸುವಂತೆ ಈ ಭಾಗದ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.












Discussion about this post