ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ಹೊಸಪೇಟೆಯ ನವರಂಗ್ ಮೆಲೋಡಿಸ್ ಹಾಗೂ ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಹಯೋಗದೊಂದಿಗೆ ಕಲಾವಿದರ ಸಹಾಯಾರ್ಥ ಹೊಸಪೇಟೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಜಾಭಾರತ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹೊಸಪೇಟೆ ಭಾಗದಲ್ಲಿ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಈ ತರಹದ ಜನ ಸಂದಣಿ ಇರುವಂತಹ ಕಾರ್ಯಕ್ರಮಗಳು ನಿಂತುಹೋಗಿದ್ದವು. ಕಳೆದ ತಿಂಗಳು ವಿಜಯನಗರ ಉತ್ಸವ ಮತ್ತು ಜಿಲ್ಲಾ ಉದ್ಘಾಟನೆಯ ನಂತರ ಇದೇ ಮೊದಲನೇ ಬಾರಿಗೆ ಈ ತರಹದ ಕಾರ್ಯಕ್ರಮ ನಡೆಸಲಾಯಿತು.
ನವರಂಗ್ ಮೆಲೋಡಿಸ್ ಸಂಸ್ಥಾಪಕರಾದ ಶ್ರೀ ಪುಂಡಲೀಕ ಜೋಶಿಯವರು ಸುಮಾರು 25 ವರ್ಷಗಳಿಂದ ಪ್ರತಿ ವರ್ಷವೂ ಹೆಸರಾಂತ ಕಲಾವಿದರನ್ನು ಹೊಸಪೇಟೆಯ ಕಲಾಸಕ್ತರಿಗೆ ಪರಿಚಯ ಮಾಡುವುದರ ಮೂಲಕ ಸಂಸ್ಥೆಯನ್ನು ಉತ್ತುಂಗಕ್ಕೆ ಎತ್ತುವ ಜವಾಬ್ದಾರಿಯನ್ನು ಹೊಂದಿ ಈ ತರಹದ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ನವರಂಗ್ ಮೆಲೋಡಿಸ್ ಜೊತೆಗೆ ಕೈಜೋಡಿಸಿ ಮೂಲಕ ಕಳೆದ ವರ್ಷವೂ ಸಹ ಸರಿಗಮಪ ಕಾರ್ಯಕ್ರಮದ ಈ ಭಾಗದ ಕಲಾವಿದರನ್ನು ಕರೆದುತಂದು ಸಂಗೀತ ಆಸಕ್ತಕರಿಗೆ ಉತ್ತೇಜನ ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಅದೇ ರೀತಿ ಈ ಭಾರಿ ಸಹ ಹೆಸರಾಂತ ಕಾರ್ಯಕ್ರಮ ಮಜಾಭಾರತದ ಕುಮಾರಿ ಸುಶ್ಮಿತಾ, ಕುಮಾರ ರಾಘವೇಂದ್ರ (ರಾಗಿಣಿ), ಜಗಪ್ಪ, ಕಿಲಾಡಿ ಪ್ರವೀಣ್ ಅವರು ನಡೆಸಿಕೊಟ್ಟರು.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆಯವರು ಮಾತನಾಡಿಸಿ, ಕಲಾವಿದರನ್ನು ಕುರಿತು ಈ ಭಾಗದ ಕಲೆಯನ್ನು ಎತ್ತಿ ಹಿಡಿಯಲು ನಮ್ಮ ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ಮಾಡಿ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಸಂಗೀತ ಸಾಹಿತ್ಯ, ಕಲೆ, ಶಿಕ್ಷಣ ಮತ್ತು ಪರಿಸರ ರಕ್ಷಣೆಗೆ ನಮ್ಮ ಸಂಸ್ಥೆಯು ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತದೆ ಎಂದರು.
ನಂತರ ನವರಂಗ್ ಮೆಲೋಡಿಸ್ ಸಂಸ್ಥೆಯವರು ಗುಮಾಸ್ತೆಯವರನ್ನು ಸನ್ಮಾನಿಸಿದರು.
ಮಜಾಭಾರತ ಕಾರ್ಯಕ್ರಮದ ಮಧ್ಯೆ ನವರಂಗ್ ಮೆಲೋಡಿಸ್ ಕಲಾವಿದರು ಹಳೆಯ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡುವುದರ ಮೂಲಕ ರಸಿಕರಿಗೆ ಮುದ ನೀಡಲಾಯಿತು. ಹೊಸಪೇಟೆಯ ಅಂಜಲಿ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಸಂಸ್ಥೆಯ ಉದ್ಯೋಗಿಗಳು ಮತ್ತು ಅವರ ಕುಟುಂಬ, ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಪಿ. ನಾರಾಯಣ್ ಮತ್ತು ಕುಟುಂಬದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೊಸಪೇಟೆಯ ಸಂಗೀತಪ್ರಿಯರು, ಕಲಾವಿದರು, ಸಂಗೀತ ಆಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕಲಾವಿದರಿಗೆ ಆರ್.ವಿ. ಗುಮಾಸ್ತೆ ಮತ್ತು ಪಿ. ನಾರಾಯಣ್ ಮತ್ತು ಅನೇಕ ಆಹ್ವಾನಿತ ಅತಿಥಿಗಳಿಂದ ಸನ್ಮಾನಿಸಲಾಯಿತು.
(ವರದಿ: ಮುರಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post