ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ಆರೇಳು ದಶಕಗಳ ಕಾಲ ಅಧಿಕಾರ ನಡೆಸಿದ ನೀವುಗಳು ಒಂದು ಸಮುದಾಯವನ್ನು ಓಲೈಸುವ ಸಲುವಾಗಿ ಇತರೆ ಪಂಗಡಗಳನ್ನು ಕಡೆಗಣಿಸಿದ್ದಿರಿ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ CM Basavaraja Bommai ಕಿಡಿ ಕಾರಿದ್ದಾರೆ.
ಜನಸಂಕಲ್ಪ ಯಾತ್ರೆ, ಹೊಸಪೇಟೆ#JanaSankalpaYatre
https://t.co/JUQLAa1o50— Basavaraj S Bommai (@BSBommai) October 12, 2022
ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಆರೇಳು ದಶಕ ಅಧಿಕಾರ ನಡೆಸಿದ ನೀವು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಒಂದು ಸಮುದಾಯವನ್ನು ಓಲೈಕೆ ಮಾಡಿ, ದಲಿತರು ಸೇರಿದಂತೆ ಎಲ್ಲ ಪಂಗಡಗಳನ್ನು ಕಡೆಗಣಿಸಿದ್ದಿರಿ. ಈಗ ನಾವು ಮೀಸಲಾತಿ ಹೆಚ್ಚಿಸಿದ್ದೇವೆ. ಈ ಮೂಲಕ ಎಲ್ಲ ಸಮುದಾಯಗಳಲ್ಲಿ ಧೈರ್ಯ ತುಂಬ ಕೆಲಸ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಭಯದ ವಾತಾವರಣ ಇದೆ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ. ಆದರೆ, ಅವರ ಅವಧಿಯಲ್ಲಿ ನಡೆದ 24 ಕಾರ್ಯಕರ್ತರ ಕೊಲೆ, ಭ್ರಷ್ಟಾಚಾರ ತಾಂಡವವಾಡಿತ್ತು. ಆದರೆ, ಈಗ ಅಂತಹ ವಾತಾವರಣ ಇಲ್ಲ. ರಾಜ್ಯದ ಜನರಿಗೆ ಭಯವಿಲ್ಲ. ಬದಲಾಗಿ ನಮ್ಮ ಆಡಳಿತ ನೋಡಿ ಕಾಂಗ್ರೆಸ್ಸಿಗರಿಗೆ ಭಯ ಉಂಟಾಗಿದೆ ಎಂದು ಟಾಂಗ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post