ಭದ್ರಾವತಿ: ಹಳೇನಗರದ ಎನ್ಎಸ್ಟಿ ರಸ್ತೆಯ ನಿವಾಸಿ ವರುಣ್ಕುಮಾರ್ ಬರವಣಿಗೆಯ ಪೆನ್ಸಿಲ್ನಲ್ಲಿ ಕೆತ್ತನೆಯ ಮೂಲಕ ಅನೇಕ ಚಿತ್ರಗಳನ್ನು ಬಿಡಿಸಿ ಎಲ್ಲರ ಮನಸೂರೆ ಗೊಂಡಿದ್ದಾರೆ.
ಹಲವಾರು ಕಲಾವಿದರು ಕೆಲವರಿಗೆ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊತ್ತು ಅನೇಕ ಬಗೆಯ ವಿಭಿನ್ನ ಮಾದರಿಯಲ್ಲಿ ಕಲೆಗಳನ್ನು ಮೂಡಿಸುತ್ತಿರುತ್ತಾರೆ.
ಇಂತಹ ಉದಾಹರಣೆಗಳಲ್ಲಿ ನೂರು ಮೀಟರ್ ತ್ರಿವರ್ಣ ಧ್ವಜಾ, 400 ಮೀಟರ್ ಬಟ್ಟೆಯಲ್ಲಿ ಕಲಾವಿದರ ಚಿತ್ರಣಗಳ ಪ್ರದರ್ಶನ, ಮಿಲಿಗ್ರಾಂ ಚಿನ್ನದಿಂದ ಚಿತ್ರಣ ಬಗೆ ಬಗೆಯ ವಿಭಿನ್ನ ಚಿತ್ರಣಗಳನ್ನು ಮೂಡಿಸಿ ಗಮನ ಸೆಳೆದರೆ, ವರುಣ್ ಕುಮಾರ್ ಪೆನ್ಸಿಲ್ನಲ್ಲಿ ವರ ಮಹಾಲಕ್ಷ್ಮೀ ಚಿತ್ರಣ, ಚಿತ್ರನಟಿ ಶ್ರೀದೇವಿಯವರ ಚಿತ್ರ, ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರ ಚಿತ್ರಣವನ್ನು ಸೀಮೆಸುಣ್ಣದಲ್ಲಿ ಕೆತ್ತನೆ ಮಾಡಿ ಸೈ ಎನಿಸಿಕೊಂಡಿರುವ ಇವರು ಶ್ರೀ ವಿನಾಯಕ ಚತುರ್ಥಿಗೆಂದು ಸೂಕ್ಷ್ಮ ಸೂಜಿಯಿಂದ ಕೆತ್ತನೆ ಮಾಡಿ ಪೆನ್ಸಿಲ್ನಲ್ಲಿ ಗಣಪನ ಚಿತ್ರ ರಚಿಸಿರುವುದು ಸಾಮಾಜಿಕ ಜಾಲಾತಾಣಗಳಲ್ಲಿ ಎಲ್ಲರ ಗಮನ ಸೆಳೆದಿದೆ.
ಹೆಚ್ಚು ಪ್ರಚಾರಕ್ಕೆ ದುಂಬಾಲು ಬೀಳದೆ ಇರುವ ವರುಣ್ ಕುಮಾರ್ ಬಿಕಾಂ ಪದವಿಧರರಾಗಿ ವೃತ್ತಿಯಲ್ಲಿ ಖಾಸಗೀ ಕೋ ಆಪರೇಟಿವ್ ಸಂಸ್ಥೆಯಲ್ಲಿ ಗುಮಾಸ್ತರಾಗಿರುವ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗೀ ವಾಹಿನಿಯೊಂದರಲ್ಲಿ ಚಲನಚಿತ್ರ ನಟ ಪುನಿತ್ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಅಭಿಮಾನಿಯೋರ್ವ ಸೀಮೆಸುಣ್ಣದಲ್ಲಿ ನಿರ್ಮಿಸಿದ್ದ ಸರವನ್ನು ಉಡುಗೆರೆಯಾಗಿ ನೀಡಿದ್ದನ್ನು ನೋಡಿ ಪ್ರೇರಣೆ ಪಡೆದು ಆಸಕ್ತಿ ಬೆಳೆಸಿಕೊಂಡಿರುವುದಾಗಿ ಹೇಳಿದರು.
ತಂದೆ ಕಾರ್ಪೆಂಟರ್ ವೃತ್ತಿ ನಡೆಸುತ್ತಾ ಮಗನ ವಿದ್ಯಾಬ್ಯಾಸಕ್ಕೆ ಒತ್ತು ನೀಡಿ ಪ್ರೋತ್ಸಾಹಿಸಿರುವುದನ್ನು ಮೆಲಕು ಹಾಕಿದ್ದಾರೆ. ಪೆನ್ಸಿಲ್ ಮದ್ದಿನಲ್ಲಿ ಸೂಜಿಯಿಂದ ಕೊರೆದು ಗಣಪತಿ, ಮೆಕ್ಕಾ ಮದೀನಾ, ಆಮಂತ್ರಣ ಪತ್ರಿಕೆ ಉಪಯೋಗಿಸಿ ವಿವಿಧ ರೂಪಕಗಳನ್ನು ಮಾಡಿ ಕೈಚಳಕ ತೋರುತ್ತಿದ್ದಾರೆ. ಇಂದು ಕಸದ ಬುಟ್ಟಿಗೆ ಸೇರಬೇಕಾದವಸ್ತುಗಳು ಇವರ ಕೈ ಸೇರಿ ವಿವಿಧ ರೂಪಗಳನ್ನು ಪಡೆದು ಜನರ ಕಣ್ಮನ ಸೆಳೆಯುತ್ತಿವೆ.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post