ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: 72ನೆಯ ಗಣರಾಜ್ಯೋತ್ಸವದ ದಿನ ದೇಶವೇ ಹೆಮ್ಮೆಯಿಂದ ಬೀಗುತ್ತಿರುವ ನಡುವೆಯೇ ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆಯಲ್ಲಿ ರೈತರ ಹೆಸರಿನಲ್ಲಿ ಹಿಂಸಾಚಾರ ನಡೆಸಿದ್ದು, ಮಾತ್ರವಲ್ಲ ಗಣರಾಜ್ಯೋತ್ಸವದ ಘಟನೆಯನ್ನೇ ಮಣ್ಣುಪಾಲು ಮಾಡುವಂತಹ ಘಟನೆ ನಡೆದಿದೆ.
#WATCH Protestors enter Red Fort in Delhi, wave flags from the ramparts of the fort pic.twitter.com/4dgvG1iHZo
— ANI (@ANI) January 26, 2021
ದೆಹಲಿಯ ಗಡಿಯ ವಿವಿಧ ಭಾಗಗಳಿಂದ ರೈತರು ಇಂದು ಬೆಳಗ್ಗೆ ಮೆರವಣಿಗೆ ಆರಂಭಿಸಿದರು. ಪೊಲೀಸರು ಟ್ರ್ಯಾಕ್ಟರ್ ರ್ಯಾಲಿ ಆರಂಭಕ್ಕೆ ಅನುಮತಿ ನೀಡಿದ ಸಮಯಕ್ಕೆ ಮೊದಲೇ ಆರಂಭಿಸಿದ್ದರಿಂದ ಪೊಲೀಸರು ತಡೆಯಲು ಮುಂದಾದರು. ಪ್ರತಿಭಟನಾಕಾರರನ್ನು ಲಾಠಿ ಹಿಡಿದು ಪೊಲೀಸರು ಅಟ್ಟಾಡಿಸಿದ ಪ್ರಸಂಗ ನಡೆಯಿತು.ಇದರ ನಡುವೆಯೇ ಕೆಂಪು ಕೋಟೆಯ ಗೋಡೆ ಬಳಿಗೂ ಟ್ರಾಕ್ಟರ್ ತೆಗೆದುಕೊಂಡುಬಂದ ಪ್ರತಿಭಟನಾಕಾರರು, ಕೆಂಪು ಕೋಟೆಯ ಮೇಲೆ ಹಾರಾಡುತ್ತಿದ್ದ ರಾಷ್ಟ್ರ ಧ್ವಜ ಸ್ಥಂಭವನ್ನು ಹತ್ತಿ, ರಾಷ್ಟ್ರಧ್ವಜವನ್ನು ಕೆಳಕ್ಕೆ ಇಳಿಸಿ, ಸಿಖ್ ಧ್ವಜವನ್ನು ಹಾರಿಸಿದ್ದಾರೆ.
Delhi: Following farmer-police clash at ITO, a group of farmers reach Red Fort pic.twitter.com/kZ7QYVBwyr
— ANI (@ANI) January 26, 2021
ಈ ಮೂಲಕ ಗಣತಂತ್ರ ದಿನದಂದೇ ಪ್ರತಿಭಟನಾಕಾರರ ಮತಿಗೇಡಿತನ ಗಣರಾಜ್ಯೋತ್ಸವದ ಘನತೆಯನ್ನು ಮಣ್ಣುಪಾಲಾಗುವಂತಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post