ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತೀರ್ಥಹಳ್ಳಿ: ಮಹಾರಾಷ್ಟ್ರ ಗೋವಾ, ಪುಣೆಯಂತಹ ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಾಗಿ ರವಾನೆಯಾಗುತ್ತಿದ್ದ ಬೂದು ಕುಂಬಳಕಾಯಿಗೆ ಹೆಚ್ಚಿನ ಬೆಲೆ ಬರಬಹುದು ಎಂಬ ನಿರೀಕ್ಷೆಯಲ್ಲಿ ತೀರ್ಥಹಳ್ಳಿಯಲ್ಲಿ ಅನೇಕ ರೈತರು ಬೂದು ಕುಂಬಳಕಾಯಿಯನ್ನು ಬೆಳೆದಿದ್ದರು. ಆದರೆ ಈ ಕೊರೊನಾ ಮಹಾಮಾರಿಯಿಂದ ದೇಶದೆಲ್ಲೆಡೆ ಲಾಕ್ಡೌನ್ ಜಾರಿಯಾಗಿದ್ದರಿಂದ ಲಾಕ್ಡೌನ್ಗೆ ಸಿಲುಕಿ ಕುಂಬಳಕಾಯಿಗೆ ಮಾರುಕಟ್ಟೆ ಇಲ್ಲದೆ ರೈತರು ಸಂಕಷ್ಟಕ್ಕೊಳಗಾಗಿದ್ದರು.
ಈ ಹಿನ್ನೆಲೆಯಲ್ಲಿ ಇದನ್ನರಿತು ಎಚ್ಚೆತ್ತ ರೈತರ ಬಗ್ಗೆ ವಿಶೇಷ ಕಾಳಜಿಯುಳ್ಳ ತಹಶೀಲ್ದಾರ್ ಡಾ. ಶ್ರೀಪಾದ್ರವರು ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರರವರಲ್ಲಿ ವಿಷಯ ತಿಳಿಸಿ ಸಂಕಷ್ಟಕ್ಕೀಡಾದ ರೈತರ ಬಗ್ಗೆ ಚರ್ಚಿಸಿದ್ದಾರೆ. ತಕ್ಷಣ ಮೇಳಿಗೆ ಸಮೀಪದ ಕುಂಟುವಳ್ಳಿ ವಿಶ್ವನಾಥ್ ಅವರನ್ನು ಸಂಪರ್ಕಿಸಿದ್ದಾರೆ.
ರೈತರ ಸಂಕಷ್ಟವನ್ನು ತಿಳಿಯುತ್ತಿದ್ದಂತೆ ವಿಶ್ವನಾಥ್ರವರು ಸೌಟು ಬಾಣಲೆ ಹಿಡಿದು ಆಗ್ರಾಪೇಟ ತಯಾರಿಸಲು ಮುಂದಾಗಿದ್ದಾರೆ. ಆಗ್ರಾಪೇಟಕ್ಕೆ ರಾಜಸ್ಥಾನ, ಗುಜರಾತ್, ಗೋವಾ, ಮುಂಬಯಿ ಮತ್ತಿತರ ಕಡೆಗಳಲ್ಲಿ ವಿಶೇಷ ಬೇಡಿಕೆಯಿದ್ದು ಇದನ್ನು ತಯಾರಿಸುವುದು ಕಷ್ಟಕರ ಕೆಲಸವಾಗಿದೆ.
ಮೂರು ನಾಲ್ಕು ದಿನಗಳಿಂದ ವಿವಿಧ ರೀತಿಯ ಕಷ್ಟಕರವಾದ ಹಂತದಿಂದ ಈ ಬೂದುಕುಂಬಳಕಾಯಿ ಆಗ್ರಾಪೇಟ ಮಾಡುವುದಾಗಿದ್ದು ಅದರಲ್ಲೀಗ ಉದ್ಯಮಿ ವಿಶ್ವನಾಥ್ರವರು ಯಶಸ್ವಿಯಾಗಿದ್ದಾರೆ.
ತೀರ್ಥಹಳ್ಳಿಯಲ್ಲಿಯೇ ರೈತರು ಬೆಳೆದ ಒಂದು ಟನ್ ಬೂದುಕುಂಬಳಕಾಯಿಯನ್ನು ಖರೀದಿಸಿ ಆಗ್ರಾಪೇಟವನ್ನು ತಯಾರಿಸಿದ ಸ್ಯಾಂಪಲ್ನ್ನು ಇಂದು ತಾಲೂಕು ಕಚೇರಿಯಲ್ಲಿ ಶಾಸಕರ ಸಮ್ಮುಖದಲ್ಲಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಶ್ರೀಪಾದ್, ಸರ್ಕಲ್ ಇನ್ಸ್ಪೆಕ್ಟರ್ ಗಣೇಶಪ್ಪ, ಕಂದಾಯ ಅಧಿಕಾರಿ ಮಂಜುನಾಥ್, ನ್ಯಾಷನಲ್ ಗುತ್ತಿಗೆದಾರರಾದ ರೇಹಮನ್ ಆರೋಗ್ಯ ಅಧಿಕಾರಿಗಳು ಇದ್ದರು.
Get in Touch With Us info@kalpa.news Whatsapp: 9481252093
Discussion about this post