No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Saturday, February 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ದಗ್ಧ ಯೋಗ ಚಂದ್ರಯಾನ-2 ಹಿನ್ನಡೆಗೆ ಕಾರಣವಾಯಿತೆ? ಅಮ್ಮಣ್ಣಾಯ ಅವರ ಸಾಲುಗಳ ಅರ್ಥವೇನು?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 7, 2019
in Special Articles
0
ದಗ್ಧ ಯೋಗ ಚಂದ್ರಯಾನ-2 ಹಿನ್ನಡೆಗೆ ಕಾರಣವಾಯಿತೆ? ಅಮ್ಮಣ್ಣಾಯ ಅವರ ಸಾಲುಗಳ ಅರ್ಥವೇನು?
Share on FacebookShare on TwitterShare on WhatsApp

ಅದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಬೇಕಿದ್ದ ಕ್ಷಣವಾಗಿತ್ತು. ಇದನ್ನು ಸಾಕಾರಗೊಳಿಸಲು ಇಸ್ರೋ ವಿಜ್ಞಾನಿಗಳು ವರ್ಷಗಟ್ಟಲೆ ಹಗಲು ರಾತ್ರಿ ಶ್ರಮಿಸಿದ್ದರು. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ, ವಿಜ್ಞಾನಿಗಳೊಂದಿಗೆ ಕುಳಿತಿದ್ದರು. ಆದರೆ, ಅಲ್ಲಿ ಆಗಿದ್ದೇ ಬೇರೆ…

ಚಂದ್ರಯಾನ-2 ಭಾಗವಾಗಿ 48 ದಿನಗಳ ಸುದೀರ್ಘ ಪ್ರಯಾಣದ ನಂತರ ನಿನ್ನೆ ತಡರಾತ್ರಿ 27 ಕಿಲೋ ಗ್ರಾಂ ತೂಕದ ಪ್ರಗ್ಯಾನ್ ರೋವರ್ ಅನ್ನು ತನ್ನೊಡಳಲ್ಲಿ ಇರಿಸಿಕೊಂಡಿದ್ದ 1471 ಕಿಲೋ ಗ್ರಾಂ ತೂಕದ ವಿಕ್ರಂ ಲ್ಯಾಂಡರ್’ ಯಶಸ್ವಿಯಾಗಿ ಚಂದಿರನ ದಕ್ಷಿಣ ಧ್ರುವದ ಉದ್ದೇಶಿತ ಪ್ರದೇಶದಲ್ಲಿ ಇಳಿಯುವ ಹಂತದಲ್ಲಿ ಕೊನೆಯ ಹಂತದಲ್ಲಿ ತನ್ನ ಸಂಪರ್ಕ ಕಡಿದುಕೊಂಡು, ವಿಜ್ಞಾನಿಗಳ ಕನಸು ಮಾತ್ರವಲ್ಲ, ಇಡಿಯ ದೇಶದ ಸಂತೋಷವನ್ನು ಕಮರಿಸಿದೆ.

ಈ ಯೋಜನೆ ಆರಂಭದಿಂದಲೂ ಎಲ್ಲ ಹಂತಗಳಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬಂದಿತ್ತು. ಯಾವುದೇ ದೊಡ್ಡ ವಿಜ್ಞಗಳು ಎದುರಾಗಿರಲಿಲ್ಲ. ಆದರೆ, ಕೊನೆಯ ಹಂತದಲ್ಲಿ ಹೀಗಾಗಿರುವುದು ನಿಜಕ್ಕೂ ಭಾರತೀಯರ ಆಶಾಭಾವನೆಯನ್ನು ಕಮರಿಸಿಲ್ಲ ಎನ್ನುವುದಾದರೂ ನಿರಾಸೆ ಉಂಟು ಮಾಡಿರುವುದಂತೂ ಸತ್ಯ.

ಇದೇ ವೇಳೆ, ಈ ಯೋಜನೆ ಕೊನೆಯ ಕ್ಷಣದಲ್ಲಿ ಹಿನ್ನಡೆಯಾಗಿರುವ ಬೆನ್ನಲ್ಲೇ ನಿಖರ ಹಾಗೂ ವೈಜ್ಞಾನಿಕ ಜ್ಯೋತಿಷಿ ಎಂದು ದೇಶದಲ್ಲೇ ಖ್ಯಾತರಾಗಿರುವ ಪ್ರಕಾಶ್ ಅಮ್ಮಣ್ಣಾಯ ಅವರು ಕೆಲವೊಂದು ವಿಚಾರವನ್ನು ತಮ್ಮ ಫೇಸ್’ಬುಕ್’ನಲ್ಲಿ ಬರೆದುಕೊಂಡಿದ್ದಾರೆ.

ಇಲ್ಲಿ ಅಮ್ಮಣ್ಣಾಯ ಅವರು ಬರೆದಿರುವ ಸಮಯ ಹಾಗೂ ಗ್ರಹಗತಿಗಳು ಲೆಕ್ಕಾಚಾರಕ್ಕೂ, ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಉದ್ದೇಶಿತ ಪ್ರದೇಶದಲ್ಲಿ ಇಳಿಯುವ ಹಂತದಲ್ಲಿ ಸಂಪರ್ಕ ಕಡಿದುಕೊಂಡಿರುವ ಸಮಯಕ್ಕೂ ತಾಳೆಯಾಗುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ.
ಈ ಹಿನ್ನೆಲೆಯಲ್ಲಿ ಅಮ್ಮಣ್ಣಾಯ ಅವರೊಂದಿಗೇ ಚರ್ಚಿಸುವ ಎಂದು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ, ದೂರವಾಣಿ ಕರೆಗೆ ಅವರು ಸಿಗದ ಕಾರಣ ಅವರ ಪೋಸ್ಟ್‌ ಆಧರಿಸಿ ಇಲ್ಲಿ ಕೆಲವು ವಿಚಾರಗಳನ್ನು ಉಲ್ಲೇಖಿಸಿದ್ದೇವೆ.

ಅಮ್ಮಣ್ಣಾಯ ಅವರ ಪೋಸ್ಟ್‌’ನಲ್ಲಿ ಏನಿದೆ?


ಶನಿವಾರ 2 AM ಬಳಿಕ ನವಮಿ ತಿಥಿ ಇರುವುದರಿಂದ ಇದು ದಗ್ಧ ಯೋಗವಾಗುತ್ತದೆ. ಅಂದರೆ ಕಾರ್ಯ ಸಿದ್ಧಿಯಾಗುವಲ್ಲಿ ತೊಡಕುಗಳಾಗುತ್ತದೆ. ಶುಕ್ಲ ನವಮಿ ಎಂದರೆ ರವಿಯಿಂದ ಚಂದ್ರನು 12ಡಿಗ್ರಿ x 9 ಅಂತರದ ದೂರ. ಹಾಗೆಂದು ಕಾರ್ಯ ವಿಫಲವಲ್ಲ ಅಥವಾ ಹಾನಿಯೂ ಅಲ್ಲ. ಇದು ವಿಳಂಬ ಎಂದರ್ಥ.

ಹಾಗೆಯೇ 9 ನೆಯ ತಾರೀಕು, (12ಡಿಗ್ರಿ x 11) ಸೋಮವಾರವೂ ಏಕಾದಶಿ ಇರುವುದರಿಂದ ಆ ದಿನವೂ ದಗ್ಧ ಯೋಗ ಇರುತ್ತದೆ. ಅಲ್ಲಿಯೂ ಕಾರ್ಯಕ್ಕೆ ವಿಘ್ನಗಳು ಉಂಟಾಗುತ್ತದೆ. ರವಿ ಚಂದ್ರರನ್ನಾಧರಿಸಿ ಮಾಡುವ ಕಾರ್ಯಗಳಿಗೆ ಇಂತಹ ವಿಘ್ನಗಳಾಗುತ್ತದೆ. ಹುಣ್ಣಿಮೆಯ ನಂತರ ಪ್ರತೀ ತಿಥಿಗೆ 12ಡಿಗ್ರಿ ಅಂತರ ಹೆಚ್ಚುತ್ತಾ ರವಿಯಿಂದ ದೂರ ಸಾಗುವುದು, ಅಮಾವಾಸ್ಯೆಯ ನಂತರ ರವಿಗೆ ಸಮೀಪವಾಗುವಿಕೆಯ ಕ್ರಿಯೆಯನ್ನು ಪುರಾತನರು ತಿಥಿ ಘಟಿ ಅಂತರದ ಮೂಲಕ ಲೆಕ್ಕಾಚಾರ ಮಾಡಿದ್ದರು. ಇದನ್ನೇ ಮುಹೂರ್ತಗಳಲ್ಲಿ ವಿಶೇಷವಾಗಿ ಪರಿಗಣಿಸುತ್ತಾರೆ.

ಚಂದ್ರನು ರವಿಯಿಂದ ಪ್ರತೀ ದಿನವೂ 12 ಡಿಗ್ರಿ ಅಂತರದಲ್ಲಿ ಸರಿಯುತ್ತಾನೆ. ಅಮಾವಾಸ್ಯೆಯಲ್ಲಿ ಒಂದೇ ಬಿಂದುವಿನಲ್ಲೂ, ಹುಣ್ಣಿಮೆಯ ದಿನ 180 ಡಿಗ್ರಿ ಅಂತರ ದೂರದಲ್ಲೂ ಇರುವುದು ಖಗೋಳ ನಿಯಮ.

ಈ ಪೋಸ್ಟ್‌ ಆಧಾರದಲ್ಲಿ ನೋಡುವುದಾದರೆ, ಚಂದ್ರನ ನಿಗದಿತ ಕಕ್ಷೆಯಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯುವ ನಿಶ್ಚಿತ ಸಮಯಕ್ಕೂ ಅಮ್ಮಣ್ಣಾಯ ಅವರು ಉಲ್ಲೇಖಿಸಿರುವ ಲೆಕ್ಕಾಚಾರಕ್ಕೂ ಒಂದೇ ಆಗುತ್ತದೆ. ಈ ಹಿನ್ನೆಲೆಯಲ್ಲಿ, ಎಲ್ಲವೂ ಸರಿಯಾಗಿದ್ದು, ಎಲ್ಲ ಹಂತಗಳಲ್ಲೂ ಯಾವುದೇ ತೊಂದರೆಯಿಲ್ಲದೇ 48 ದಿನ ಸಾಗಿದ್ದ ಈ ಯೋಜನೆಯ ಕೊನೆಯ ಹಂತದಲ್ಲಿ ‘ದಗ್ಧ ಯೋಗ’ ಇದನ್ನು ನಾಶ ಮಾಡಿತೇ? ಈ ಸಮಯವೇ ಇಸ್ರೋ ವಿಜ್ಞಾನಿಗಳ ವರ್ಷಗಳ ಶ್ರಮವನ್ನು, ಕೋಟ್ಯಂತರ ಭಾರತೀಯರ ಕನಸನ್ನು ತಾತ್ಕಾಲಿಕವಾಗಿ ವಿಫಲವಾಗಿಸಿತೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

-ಕಲ್ಪ ನ್ಯೂಸ್ ಡೆಸ್ಕ್‌

Tags: chandrayana2ISROKannada ArticlePrakash AmmannayaVikram landerಅಮಾವಾಸ್ಯೆಚಂದ್ರಯಾನ 2ಪ್ರಕಾಶ್ ಅಮ್ಮಣ್ಣಾಯಪ್ರಧಾನಿ ನರೇಂದ್ರ ಮೋದಿವಿಕ್ರಮ್ ಲ್ಯಾಂಡರ್ವಿಜ್ಞಾನಿ
Share229Tweet123Send
Previous Post

ಗಳಗಳನೆ ಅತ್ತ ಇಸ್ರೋ ಮುಖ್ಯಸ್ಥ, ತಬ್ಬಿಕೊಂಡು ಸಮಾಧಾನ ಮಾಡಿದ ಪ್ರಧಾನಿ ಮೋದಿ: ಭಾವನಾತ್ಮಕ ವೀಡಿಯೋ ನೋಡಿ

Next Post

ಭಾರತದ ಆರ್ಥಿಕ ಸಂಕಷ್ಟ: ಎಷ್ಟು ಸತ್ಯ ಮತ್ತು ಮಿಥ್ಯ? ಇಲ್ಲಿದೆ ವಿಸ್ತೃತ ವಾಸ್ತವ ವಿಶ್ಲೇಷಣೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭಾರತದ ಆರ್ಥಿಕ ಸಂಕಷ್ಟ: ಎಷ್ಟು ಸತ್ಯ ಮತ್ತು ಮಿಥ್ಯ? ಇಲ್ಲಿದೆ ವಿಸ್ತೃತ ವಾಸ್ತವ ವಿಶ್ಲೇಷಣೆ

ಭಾರತದ ಆರ್ಥಿಕ ಸಂಕಷ್ಟ: ಎಷ್ಟು ಸತ್ಯ ಮತ್ತು ಮಿಥ್ಯ? ಇಲ್ಲಿದೆ ವಿಸ್ತೃತ ವಾಸ್ತವ ವಿಶ್ಲೇಷಣೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಶೀಘ್ರದಲ್ಲೇ ಚಿತ್ರದುರ್ಗ-ದಾವಣಗೆರೆ ರೈಲು ಸಂಚಾರ ಪ್ರಾರಂಭ: ಕೇಂದ್ರ ಸಚಿವ ಸೋಮಣ್ಣ

ಶೀಘ್ರದಲ್ಲೇ ಚಿತ್ರದುರ್ಗ-ದಾವಣಗೆರೆ ರೈಲು ಸಂಚಾರ ಪ್ರಾರಂಭ: ಕೇಂದ್ರ ಸಚಿವ ಸೋಮಣ್ಣ

February 28, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಮಾರ್ಚ್ 1 ರಂದು ಬೆಂಗಳೂರಿನಿಂದ ಮುಂಬೈಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

February 28, 2026
ಸೊರಬ | ಚಂದ್ರಗುತ್ತಿಯಲ್ಲಿ ಅಪೂರ್ವ ಶಾಸನ ಪತ್ತೆ

ಸೊರಬ | ಚಂದ್ರಗುತ್ತಿಯಲ್ಲಿ ಅಪೂರ್ವ ಶಾಸನ ಪತ್ತೆ

February 28, 2026
ಬಾಕ್ಸಿಂಗ್ ಮಹೋತ್ಸವ; ಇಂಡಿಯಾ ನಾಕ್‌ಔಟ್ ನೈಟ್ಸ್’ ಭರ್ಜರಿ ಆರಂಭ!

ಬಾಕ್ಸಿಂಗ್ ಮಹೋತ್ಸವ; ಇಂಡಿಯಾ ನಾಕ್‌ಔಟ್ ನೈಟ್ಸ್’ ಭರ್ಜರಿ ಆರಂಭ!

February 28, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಮೈಸೂರು – ಶಿವಮೊಗ್ಗ ಎಕ್ಸ್ಪ್ರೆಸ್ ರೈಲಿನ ಕುರಿತು ಲೇಟೆಸ್ಟ್ ಅಪ್ಡೇಟ್

February 28, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL