ಭದ್ರಾವತಿ: ಭದ್ರಾ ಅಣೆಕಟ್ಟೆಯಲ್ಲಿನ ನೀರು ಸಂಗ್ರಹ ಗರಿಷ್ಠ ಮಟ್ಟಕ್ಕೆ ತಲುಪಿದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ ನೀರು ಹೊರ ಬಿಡಲಾಗುತ್ತಿದೆ.
ನಾಲ್ಕು ಕ್ರಸ್ಟ್ ಗೇಟ್ ಮೂಲಕ ನೀರು ಹೊರ ಬಿಡಲಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ಇಲ್ಲಿ ನೆರೆದಿದ್ದರು.
ವೀಡಿಯೋ ನೋಡಿ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ತನ್ನ ಕೈ ಚಾಚಿರುವ ಭದ್ರ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಂ ತುಂಬಲು ಇನ್ನು ಕೇವಲ 2.7 ಅಡಿಗಳ ಮಾತ್ರ ಬಾಕಿಯಿದೆ.
ಇಂದು ಬೆಳಗಿನ ಮಾಹಿತಿಯಂತೆ 183.3 ಅಡಿಗೆ ನೀರು ಸಂಗ್ರಹವಾಗಿದೆ. 23225 ಕ್ಯೂಸೆಕ್ಸ್ ಒಳ ಹರಿವಿದ್ದು, 3213 ಕ್ಯೂಸೆಕ್ಸ್ ಹೊರ ಹರಿವಿದೆ. 186 ಅಡಿ ಸಾಮರ್ಥ್ಯ ಅಣೆಕಟ್ಟೆಯಲ್ಲಿ ಇಂದು 183.3 ಅಡಿ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಇನ್ನು ಪೂರ್ಣ ತುಂಬಲು ಕೇವಲ 2.7 ಅಡಿ ಮಾತ್ರ ಬಾಕಿಯಿದೆ. ಹಿನ್ನೀರು ಪ್ರದೇಶದಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಇನ್ನೊಂದು ಅಥವಾ ಎರಡು ದಿನದಲ್ಲಿ ಭರ್ತಿಯಾಗುವ ಸಾಧ್ಯತೆಯಿದೆ.
Discussion about this post