No Result
View All Result
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?
English Articles

A tale of love, revenge and destiny: Krishna Rukku to premiere on March 9 on Zee Kannada and ZEE5 Kannada

by ಕಲ್ಪ ನ್ಯೂಸ್
March 5, 2026
0

Kalpa Media House  |  Bengaluru | Zee Kannada, which continues to entertain audiences with fresh and engaging content and has...

Read moreDetails

Record Budget: Chief Minister Must Fulfill Hometown Demands, Urges Dr. Shushrutha Gowda

March 2, 2026
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
  • Advertise With Us
  • Grievances
  • About Us
  • Contact Us
Thursday, March 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪ್ರೀಮಿಯಂ ವಾಪಸು ಬರದಿದ್ದರೂ ಆರೋಗ್ಯ ವಿಮೆ ಏಕೆ ಬೇಕು? ಅದರ ಅಗತ್ಯ-ಅನಿವಾರ್ಯತೆ ಏನಿದೆ?

ಆರ್ಥಿಕ ಸಲಹೆಗಾರ ಜಿ. ಶಶಿಧರ ರಾನಡೆ ಬರೆದಿದ್ದಾರೆ ಓದಿ...

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 26, 2020
in Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಆರೋಗ್ಯ ವಿಮೆ ಏಕೆ ಮಾಡಿಸಬೇಕು? ನಾವು ಕಟ್ಟಿದ ಹಣ ವಾಪಸ್ಸು ಬರುವುದಿಲ್ಲ. ಕಂಪನಿಗಳು ಹಣ ಮಾಡುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಇರುವುದು ಸಹಜ.

ಹಾಗೆಯೆ ಜೀವ ವಿಮೆಯಲ್ಲೂ ಸಹ ಪಾಶ್ಚಾತ್ಯ ದೇಶಗಳಲಿ ಕೇವಲ ಟರ್ಮ್ ಇನ್ಷೂರೆನ್ಸ್‌ ತೆಗೆದುಕೊಂಡು ನಿಜವಾದ ವಿಮೆ ಮಾಡಿಸುತ್ತಾರೆ. ನಮ್ಮ ದೇಶದಲ್ಲಿ ಜೀವವಿಮೆಯನ್ನು ಒಂದು ಹೂಡಿಕೆ ಎಂದು ಪರಿಗಣಿಸಿರುವುದರಿಂದ ಹೆಚ್ಚಿನ ಜನ ಕೇವಲ 10 ಪಟ್ಟು ಕವರೇಜ್‌ಗೆ ಪಾಲಿಸಿ ಮಾಡಿಸುತ್ತಾರೆ. ಆದರೆ, ಟರ್ಮ್ ಇನ್ಷೂರೆನ್ಸ್‌ 100 ಪಟ್ಟು ಕವರೇಜ್ ಇರುತ್ತದೆ ಹಾಗೂ ಪ್ರೀಮಿಯಂ ಕಡಿಮೆ ಇರುತ್ತದೆ. ಉಳಿದ ಹಣವನ್ನು ಡಿಪಾಜಿಟ್ ಅಥವಾ ಮ್ಯೂಚ್ಯುಯಲ್ ಫಂಡ್ಸ್‌’ಗಳಲ್ಲಿ ತೊಡಗಿಸಿ ಅಧಿಕ ಹಣ ಗಳಿಸಬಹುದು.

ಆರೋಗ್ಯ ವಿಮೆಯಲ್ಲಿ ನಾವು ಕಟ್ಟಿದ ಹಣ ವಾಪಾಸ್ಸು ಬರುವುದಿಲ್ಲ ಎಂಬ ಅಭಿಪ್ರಾಯವಿದೆ. ಆದರೆ, ನಾವು ವಾಹನ ವಿಮೆ ಮಾಡಿಸುತ್ತೇವೆ. ಅದರ ಪ್ರೀಮಿಯಂ ವಾಪಾಸ್ಸು ಬರುವುದಿಲ್ಲ. ಆದರೆ, ಅದನ್ನು ಸರ್ಕಾರ ಕಡ್ಡಾಯ ಮಾಡಿದೆ. ವಿದೇಶಗಳಲ್ಲಿ ವಿಮೆ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಆದರೆ, ಭಾರತದಲ್ಲಿ ಕೇವಲ ವಾಹನ ವಿಮೆ ಜನರಲ್ ವಿಮೆ ಕಡ್ಡಾಯವಾಗಿ ಮಾಡಿಸಬೇಕಾಗಿದೆ.

ಆರೋಗ್ಯ ವಿಮೆಯ ಪ್ರೀಮಿಯಂನ ಹೆಚ್ಚು ಕಡಿಮೆ 20ರಷ್ಟು ಕವರೇಜ್ ಸಿಗುತ್ತದೆ. ಈ ಕಾಲದಲ್ಲಿ ಸಣ್ಣ ಅಪಘಾತ, ಕಾಲು ಜಾರುವುದು, ಎಡವುವುದು, ಮರದಿಂದ ಬೀಳುವುದು, ವಾಹನ ಅಫಘಾತ, ಹಾವುಕಡಿತ, ಇನ್ಯಾವುದೇ ರೀತಿಯ ಅಫಘಾತಗಳಿಗೆ ಒಂದು ಸಣ್ಣ ಪ್ರೀಮಿಯಂಗೆ ರೂ. 1.00ಲಕ್ಷಗಳವರೆಗೆ ಕ್ಯಾಶ್‌ಲೆಸ್ ಚಿಕಿತ್ಸೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲೂ ದೊರೆಯುತ್ತದೆ.

ಆಧುನಿಕ ಯುಗದಲ್ಲಿ ನಾವು ಸೇವಿಸುವ ನೀರು, ಆಹಾರ ಹಾಗೂ ಉಸಿರಾಡುವ ಗಾಳಿ ಯಾವುದೂ ಶೇ.100ರಷ್ಟು ಶುದ್ಧವಾಗಿರುವುದಿಲ್ಲ. ಹಾಗೂ ಎಲ್ಲಾ ರೀತಿಯ ಕೆಲಸಗಾರರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ರಕ್ತದೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಅಲ್ಲದೆ ಹೆಚ್ಚಿನ ವಾಹನಗಳು ಸಂಚರಿಸುವುದರಿಂದ ಅನೇಕ ಕಾರಣಗಳಿಂದಾಗಿ ಅಪಘಾತಗಳು ಸಾಮಾನ್ಯವಾಗಿವೆ. ಹಾಗಾಗಿ ಯಾವ ಸಮಯದಲ್ಲಿ ಅಪಘಾತವಾಗುವುದೊ ತಿಳಿಯುವುದಿಲ್ಲ. ಒತ್ತಡದ ಬದುಕಿನಲ್ಲಿ ಹೃದಯಾಘಾತ ಸಹಜವೆನಿಸಿದೆ.

ಯಾರಿಗೇ ಆಗಲಿ, ಸ್ವತಃ ತಮಗೆ ಕಾಯಿಲೆಗಳಾಗಲೀ ಅಥವಾ ಇತರ ಕಷ್ಟಗಳು ಬರುವತನಕ ಅದರ ಕಷ್ಟ-ನಷ್ಟಗಳು ಅರ್ಥವಾಗುವುದು ಕಷ್ಟವೇ. ಶ್ರೀಮಂತ ವ್ಯಕ್ತಿಗಳಿಗೆ ಆಸ್ಪತ್ರೆ ಖರ್ಚು ಎಷ್ಟಾದರೂ ಭರಿಸುವ ಶಕ್ತಿ ಇರುತ್ತದೆ. ಆದರೆ, ಮಧ್ಯಮ ವರ್ಗದ ಮತ್ತು ಬಡಜನರ ಅದರಲ್ಲೂ ಕಡುಬಡವರು ಗಂಭೀರ ಸ್ವರೂಪದ ಕಾಯಿಲೆಗಳಾದರೆ ಆಸ್ಪತ್ರೆ ಖರ್ಚು ಭರಿಸುವ ಶಕ್ತಿ ಹೊಂದಿರುವುದಿಲ್ಲ. ಆದರೂ ಸರ್ಕಾರದ ಆಯುಷ್ಮಾನ್ ಭಾರತ್, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಸದಸ್ಯರಿಗೆ 5 ಲಕ್ಷ ರೂ.ಗಳವರೆಗೆ, ಎಪಿಎಲ್ ಕುಟುಂಬದ ಸದಸ್ಯರಿಗೆ ಶೇ.70ರಷ್ಟು ಖರ್ಚು ನೀಡುವ ಸೌಲಭ್ಯ ಸಿಗುತ್ತಿದೆ. ಆದರೆ, ರೋಗಿಗಳು, ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕೆಂಬ ನಿಯಮವಿದೆ. ಅಲ್ಲಿ ವ್ಯವಸ್ಥೆ ಇಲ್ಲದಿದ್ದಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಗಂಭೀರ ಖಾಯಿಲೆಗಳ ಚಿಕಿತ್ಸೆಗೆ ಸಮಯ ಹಾಳು ಮಾಡಿದರೆ ಜೀವಕ್ಕೆ ಅಪಾಯ ಇರುವುದರಿಂದ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ.

ನಾವೆಲ್ಲ ತಿಳಿದಂತೆ ಆಸ್ಪತ್ರೆ ಖರ್ಚಿಗೋಸ್ಕರ ಸಾಲ ಮಾಡಿಕೊಂಡು ಮನೆ-ಮಠ ಮಾರಿಕೊಂಡು ದಿವಾಳಿ ಆಗಿರುವವರನ್ನು ಕಂಡಿದ್ದೇವೆ. ಹೀಗಾಗಿ ಒಂದು ಉತ್ತಮ ಸೇವೆ ನೀಡುವ ಆರೋಗ್ಯ ವಿಮೆ ಕಂಪನಿಯಲ್ಲಿ ವಿಮೆ ಮಾಡಿಸುವುದು ಉತ್ತಮ. ಬ್ಯಾಂಕುಗಳಲ್ಲಿ ಆರೋಗ್ಯ ಕಂಪನಿಗಳ ಒಡಂಬಡಿಕೆ ಇರುತ್ತದೆ. ಆದರೆ, ಪಾಲಿಸಿದಾರರು ಬ್ಯಾಂಕುಗಳ ಮುಖಾಂತರ ಕ್ಲೈಮ್ ಮಾಡಬೇಕಾಗಿರುವುದರಿಂದ ಅವರು ಪಾಲಿಸಿ ಮಾಡಿದ ಸಮಯದಲ್ಲಿ ಇದ್ದ ಸಿಬ್ಬಂದಿಯಾಗಲೀ, ವ್ಯವಸ್ಥಾಪಕರು ಇಲ್ಲದ ಕಾರಣ ತುಂಬಾ ತೊಂದರೆ ಅನುಭವಿಸುತ್ತಾರೆ.

ಹೀಗಾಗಿ ನೇರವಾಗಿ ಹೆಲ್ತ್‌ ಪಾಲಿಸಿ ನೀಡುವ ಕಂಪನಿಗಳಲ್ಲೇ ಪಾಲಿಸಿ ಮಾಡುವುದು ಉತ್ತಮ. ಬೇರೆ-ಬೇರೆ ಕಂಪನಿಗಳಲ್ಲಿ ಬೇರೆ-ಬೇರೆ ಹೆಸರಿನಿಂದ ಪಾಲಿಸಿಗಳು ದೊರೆಯುತ್ತವೆ. ಮುಖ್ಯವಾಗಿ ಇಡೀ ಕುಟುಂಬಕ್ಕೆ ಸೇರುವ ಹಾಗೆ ಪಾಲಿಸಿ ಮಾಡಿದರೆ ಉತ್ತಮ. ಯಾರು ಬೇಕಾದರೂ ಆಸ್ಪತ್ರೆ ಖರ್ಚಿನ, ನಗದುರಹಿತ ಸೌಲಭ್ಯ ಪಡೆಯಬಹುದಾಗಿದೆ. ಇತ್ತೀಚೆಗೆ ಆಕರ್ಷಕ ದರದಲ್ಲಿ 1 ಕೋಟಿ ಇಂಪ್ರೆಸ್ಸಿವ್ ವಿಮೆ, ಸೀನಿಯರ್ ಸಿಟಿಜೆನ್ ಪಾಲಿಸಿ, ಯಂಗಸ್ಟರ್ಸ್ ಪಾಲಿಸಿ, ಡಯಾಬಿಟಿಕ್, ಕ್ಯಾನ್ಸರ್ ಕೇರ್ ಪಾಲಿಸಿ, ಕಡಿಮೆ ಪ್ರೀಮಿಯಂನಲ್ಲಿ ಗ್ರಾಮೀಣ ಜನರಿಗೆ ರೂರಲ್ ಪಾಲಿಸಿ ಇತ್ಯಾದಿ ಪಾಲಿಸಿಗಳಿವೆ.

ಉತ್ತಮ ಸಲಹೆಗಾರರಿಂದ ಸಲಹೆ ಪಡೆದು ಪಾಲಿಸಿ ಮಾಡಬಹುದಾಗಿದೆ. ನಾವು ಕಟ್ಟಿದ ಹಣ ವಾಪಾಸು ಬರುವುದಿಲ್ಲ ನಿಜ. ಆದರೆ ಪರೋಕ್ಷವಾಗಿ ನಾವೂ ಸಹ ಸಾಮಾಜಿಕ ಸೇವೆ ನೀಡಿದ ಹಾಗೆ ಆಗುತ್ತದೆ. ಆದರೆ, ಕೆಲವು ಕಂಪನಿಗಳು ನೋ ಕ್ಲೈಮ್ ಬೋನಸ್ ಪಾಲಿಸಿ ಅವಲಂಬಿಸಿ ಶೇ.100ರಷ್ಟು ಬೋನಸ್ ಕವರೇಜ್ ನೀಡುತ್ತವೆ. ಅಲ್ಲದೆ ಕರಪಾವತಿದಾರರು, ಆದಾಯಕರ ವಿನಾಯಿತಿ ಸೆಕ್ಷನ್ 80ಡಿ ಯಲ್ಲಿ ಸೆಕ್ಷನ್ 80ಸಿ ಯ ರೂ. 1,50,000/- ಹೊರತಾಗಿಯೂ ಪಡೆಯಬಹುದಾಗಿದೆ.

ಅಲ್ಲದೆ ಅಪಘಾತ ಸಂಬಂಧ ಆಸ್ಪತ್ರೆ ಖರ್ಚು ಕೇವಲ ರೂ.472/-ರಲ್ಲಿ ರೂ.1.00 ಲಕ್ಷಗಳವರೆಗೆ ನಗದು ರಹಿತ ಲಭ್ಯ. ಅಪಘಾತ ವಿಮೆ ರೂ.826/-ಕ್ಕೆ 10 ಲಕ್ಷ ಕವರೇಜ್ ಇದೆ. ಇದರಲ್ಲಿ ಅಂಗಾಂಗಗಳನ್ನು ಕಳೆದುಕೊಂಡಲ್ಲಿ ಪರಿಹಾರವಿದೆ. ಪರ್ಮನೆಂಟ್ ಡಿಸೆಬಿಲಿಟಿಗೆ ಪಾಲಿಸಿಯ 150% ಪರಿಹಾರವಿದೆ. ಅಲ್ಲದೆ ಇದು ವಿಶ್ವದೆಲ್ಲೆಡೆ ಅನ್ವಯ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಖರ್ಚು-ವೆಚ್ಚ ಹೆಚ್ಚುತ್ತಿರುವುದರಿಂದ ನಮ್ಮ ಉಳಿತಾಯವನ್ನು ಆಸ್ಪತ್ರೆ ಖರ್ಚಿಗೆ ಬಳಸಬೇಕಾಗುತ್ತದೆ. ಇದಕ್ಕೆ ಪರಿಹಾರ ಆರೋಗ್ಯ ವಿಮೆ.

ಹೀಗಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಪಾಲಿಸಿ ಮಾಡಿಕೊಂಡಲ್ಲಿ ಉತ್ತಮ. ಏಕೆಂದರೆ, ಕೆಲವು ಕಾಯಿಲೆಗಳಿಗೆ ಅಂದರೆ, ಪೈಲ್ಸ್‌, ಹರ್ನಿಯಾ, ಹಿಸ್ಟೆಕ್ಟಮಿ, ಡಿಸ್ಕ್‌ಕೊಲ್ಯಾಪ್ಸ್‌, ವೆರಿಕೋಸ್‌ವೇನ್ಸ್‌, ಕಿಡ್ನಿಸ್ಟೋನ್, ಜಾಯಿಂಟ್ ರಿಪ್ಲೇಸ್‌ಮೆಂಟ್ ಮುಂತಾದ ಮಾರಣಾಂತಿಕವಲ್ಲದ ಕಾಯಿಲೆಗಳಿಗೆ ಪಾಲಿಸಿ ಮಾಡಿದ 2 ವರ್ಷ ಕವರೇಜ್ ಇರುವುದಿಲ್ಲ. ಅಪಘಾತ ಸಂಬಂಧ ಪಾಲಿಸಿ ಪಡೆದ ದಿನದಿಂದಲೇ ಲಭ್ಯ. ಉಳಿದಂತೆ ಕೊರೋನಾ ಸೇರಿದಂತೆ ಎಲ್ಲಾ ಕಾಯಿಲೆಗಳಿಗೂ ಕ್ಯಾಶ್‌ಲೆಸ್ ಸೌಲಭ್ಯ ಪಾಲಿಸಿ ದಿನದಿಂದ 30 ದಿನಗಳ ನಂತರದಿಂದ ಅನ್ವಯವಾಗುತ್ತದೆ. ಕೆಲವು ಕಂಪನಿಗಳಲ್ಲಿ 2 ಬಾರಿ ರೀಚಾರ್ಜ್ ಸೌಲಭ್ಯ ಇರುತ್ತದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿ. ಶಶಿಧರ್ ರಾನಡೆ, ಆರ್ಥಿಕ ಸಲಹೆಗಾರರು, ಮೊ.9110237707 ಅಥವಾ 9449623311ನ್ನು ಸಂಪರ್ಕಿಸಬಹುದು.

Get in Touch With Us info@kalpa.news Whatsapp: 9481252093

Tags: Ayushman BharatFinancial AdvisorHealth InsurancehospitalKannadaNewsWebsiteLatestNewsKannadaMutual Fundsಅಪಘಾತಆರೋಗ್ಯ ವಿಮೆಆರ್ಥಿಕ ಸಲಹೆಗಾರಮ್ಯೂಚ್ಯುಯಲ್ ಫಂಡ್ಸ್
Share225Tweet123Send
Previous Post

ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂಬೈ ಹೋಟೆಲ್ ಉದ್ಯಮದ ಭವಿತವ್ಯ ಭಯಾನಕವಾಗಲಿದೆಯೇ?

Next Post

ಉನ್ನತ ಶಿಕ್ಷಣ-ಆನ್ ಲೈನ್ ತರಗತಿಗಳಿಗೆ ಹೆಚ್ಚಿನ ಒತ್ತು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಉನ್ನತ ಶಿಕ್ಷಣ-ಆನ್ ಲೈನ್ ತರಗತಿಗಳಿಗೆ ಹೆಚ್ಚಿನ ಒತ್ತು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಕುವೆಂಪು ವಿವಿ ನಿವೃತ್ತ ಬೋಧಕೇತರ ನೌಕರರ ಸಂಘದ ಅಧ್ಯಕ್ಷರಾಗಿ ರಮೇಶ್ ಶಂಕರಘಟ್ಟ ಆಯ್ಕೆ

ಕುವೆಂಪು ವಿವಿ ನಿವೃತ್ತ ಬೋಧಕೇತರ ನೌಕರರ ಸಂಘದ ಅಧ್ಯಕ್ಷರಾಗಿ ರಮೇಶ್ ಶಂಕರಘಟ್ಟ ಆಯ್ಕೆ

March 5, 2026
ಶ್ರೀ ನಾಗಯಕ್ಷೆ ದೇವಿ ವಾರ್ಷಿಕೋತ್ಸವ | ಮಾ.8ರವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ

ಶ್ರೀ ನಾಗಯಕ್ಷೆ ದೇವಿ ವಾರ್ಷಿಕೋತ್ಸವ | ಮಾ.8ರವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ

March 5, 2026
ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ | ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ | ಶಾಸಕ ಚನ್ನಬಸಪ್ಪ ಆಗ್ರಹ

ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ | ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ | ಶಾಸಕ ಚನ್ನಬಸಪ್ಪ ಆಗ್ರಹ

March 5, 2026
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಮಾಜಿ ಡಿಸಿಎಂ ಈಶ್ವರಪ್ಪ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಮಾಜಿ ಡಿಸಿಎಂ ಈಶ್ವರಪ್ಪ

March 5, 2026
ಡಾ. ಮೈತ್ರೇಯಿ ಅವರಿಗೆ ಸಂಸ್ಕೃತ ವಿವಿಯ ಗ್ರಂಥ ಪುರಸ್ಕಾರ

ಡಾ. ಮೈತ್ರೇಯಿ ಅವರಿಗೆ ಸಂಸ್ಕೃತ ವಿವಿಯ ಗ್ರಂಥ ಪುರಸ್ಕಾರ

March 5, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL