No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮುಂಬೈಯಿಂದ ಬರುವಾಗ ಏಳು ಕೊಲೆ ಮಾಡಿ ಬಂದಿದ್ದಾರೆ ಎಂಬಂತೆ ನೋಡುವುದೇಕೆ?

ಜನ್ಮಭೂಮಿಯ ಬಂಧುಗಳು ಭಾವನಾತ್ಮಕವಾಗಿ ದೂರ ಸರಿಯುತ್ತಿದ್ದಾರೆಯೇ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 13, 2020
in Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಪ್ರಸ್ತುತ ದಿನಗಳಲ್ಲಿ ಒಂದಲ್ಲ ಒಂದು ಮೂಲದಿಂದ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕೇಳುವ, ನೋಡುವ ವಿದ್ಯಮಾನಗಳನ್ನು ಗಮನಿಸುವಾಗ ಮೇಲಿನ ಪ್ರಶ್ನೆ ನಿಜವೆಂದು ಅನಿಸುತ್ತಿದೆ. ವರ್ಷಂಪ್ರತೀ ಎಪ್ರಿಲ್, ಮೇ ಮತ್ತು ಜೂನ್ ಈ ಮೂರು ತಿಂಗಳುಗಳಲ್ಲಿ ಮುಂಬೈಯಿಂದ ಲಕ್ಷೋಪಲಕ್ಷ ಜನರು ಊರಿಗೆ ಹೋಗುತ್ತಿದ್ದರು. ಆದರೆ 2020 ರ ಈ ವರ್ಷ ಮುಂಬೈಗರ ಪಾಲಿಗೆ ಗರ ಬಡಿದಂತಾಗಿದೆ. ಲಾಕ್ ಡೌನ್ ನಿಂದಾಗಿ ಎಲ್ಲ ಸ್ಥಗಿತಗೊಂಡವು. ಈಗ ರಾಜ್ಯ ಸರಕಾರಗಳು ಅನುಮತಿ ನೀಡಿ, ಕೇಂದ್ರ ಸರಕಾರ ರೈಲು ಸೇವೆಯನ್ನು ಪ್ರಾರಂಭಿಸಿದರೂ ಊರಿನವರು ಎಂದೂ ಕೇಳರಿಯದ ಕಠೋರತೆಯನ್ನು ಕಾಣಿಸುತ್ತಿದ್ದಾರೆ. ರೈಲು ಟಿಕೇಟಾದರೂ ಸಿಗಬಹುದು. ಊರವರ ಅನುಮತಿ ಸಿಗುತ್ತಿಲ್ಲ ಎಂಬ ದುಃಖಿತ ಭಾವನೆ ಹೊರನಾಡ ತುಳುವರದ್ದು. ಈ ಪರಿಸ್ಥಿತಿ ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಆಗಲೀ, ದೇಶದ ಇತರ ರಾಜ್ಯಗಳಲ್ಲಿ ಆಗಲೀ ತಲೆದೋರಿಲ್ಲ. ಸರಕಾರ, ಜಿಲ್ಲಾಡಳಿತ ವಿಧಿಸುವ ನಿಯಮಗಳನ್ನು ಪಾಲಿಸಿದರೂ ಮನೆಯವರ ಮಾನಸಿಕತೆ ಏಕೋ ಏನೋ ಕೂಡಿ ಬರುತ್ತಿಲ್ಲ.

ತಾಯಿ ಸತ್ತ ಮೇಲೆ ತವರಿಗೆ ಹೋಗಬಾರದು, ಮಳೆ ಬಿಟ್ಟ ಮೇಲೆ ಮರದಡಿ ನಿಲ್ಲಬಾರದು. ಎಂಬುದೊಂದು ಮಾರ್ಮಿಕವಾದ ನುಡಿಗಟ್ಟು. ಈ ಧ್ವನಿಯ ಅರ್ಥ ತಾಯಿ ಸತ್ತ ನಂತರದ ದಿನಗಳಲ್ಲಿ ತವರಿಗೆ ಹೋಗಬಾರದು. ಹುಟ್ಟಿ ಬೆಳೆದ ಮನೆಯಾದರೂ ಈಗ ಅಲ್ಲಿರುವುದು ಹೊರಗಿನಿಂದ ಬಂದ ಹೆಂಗಸರ ಯಜಮಾನಿಕೆ. ನಿಮ್ಮನ್ನು ಬರಸೆಳೆದು ಆಲಂಗಿಸುವವರು ಯಾರೂ ಇಲ್ಲ. ನಿಮ್ಮ ಸುಖ ದುಃಖ ಸುಂಕದವರ ಎದುರಿನ ಪ್ರಲಾಪವಾದೀತು. ಹಾಗೆಯೇ; ಮಳೆ ಬಿಟ್ಟ ಮೇಲೆ ಮರದಡಿ ನಿಂತು ಏನೂ ಪ್ರಯೋಜನವಿಲ್ಲ. ಇಷ್ಟರ ತನಕ ಒದ್ದೆಯಾಗದಿದ್ದರೂ ಈಗ ಒದ್ದೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಪರಿಸ್ಥಿತಿ ಅದಕ್ಕಿಂತಲೂ ಕಡೆಯಾಗಿದೆ ಎನ್ನುತ್ತದೆ ಇತ್ತೀಚಿನ ವಿದ್ಯಮಾನಗಳು.

ಈಗ ಹಿಂದಿನಂತೆ ಅಲ್ಲ. ಸತ್ತರೆ ಕ್ಷಣಮಾತ್ರದಲ್ಲಿ ಸಂಬಂಧಪಟ್ಟವರಿಗೆ ಸುದ್ದಿ ತಿಳಿಯುವ ಯುಗ ಇದು. ಅಂತ್ಯಕ್ರಿಯೆಗೆ ಅಲ್ಲವಾದರೂ ಉತ್ತರಕ್ರಿಯೆಗೆ ಹೋಗೋಣ ಎಂದು ಅಂದಾಜಿಸುವಂತಿಲ್ಲ. ತಾಯಿ ಸತ್ತಾಗ ಮುಂಬೈಯಲ್ಲಿ ಇರುವ ಮಗಳು ಉತ್ತರಕ್ರಿಯೆಗೂ ಬರುವುದನ್ನು ಅವರ ಅಣ್ಣ ಹಾಗೂ ಮನೆಯವರು ತಡೆವ ಘಟನೆಗಳು ನಡೆಯುತ್ತಿವೆ. ನೇರ ಮತ್ತು ಸ್ಪಷ್ಟ ಮಾತಿನಲ್ಲೇ ಹೇಳಿದ್ದಾರೆ. ನೀನು ಬರುವುದು ಬೇಡ. ಬಂದರೆ ಕುಟುಂಬದವರು/ಸಂಬಂಧಿಕರು ಬರುವುದಿಲ್ಲ ಎಂದಿದ್ದಾರೆ. ಮುಂಬೈಯಲ್ಲಿ ಇರುವ ಕರ್ಮಕ್ಕೆ ತಾಯಿಯ ಆಕಾಲ ಮರಣವಾದಾಗ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಮುಖ ನೋಡುವ ಭಾಗ್ಯ ಇಲ್ಲದಿದ್ದರೂ ಉತ್ತರಕ್ರಿಯೆಯಲ್ಲಿ ಭಾಗಿಯಾಗಿ ಮೈಶುದ್ಧ ಮಾಡಿಕೊಳ್ಳುವ ಎಂದರೆ ಅದಕ್ಕೂ ಅವಕಾಶ ನಿರಾಕರಿಸಲಾಯಿತ್ತಲ್ಲ ಎಂದು ಹಣೆ ಚಚ್ಚಿಕೊಳ್ಳುವ ಪರಿಸ್ಥಿತಿ ಆ ಹತಭಾಗ್ಯ ಮಗಳದ್ದು.

ಇನ್ನೊಂದು ಪ್ರಸಂಗದಲ್ಲಿ, ದೊಡ್ಡ ಮಗ ಉತ್ತರಕ್ರಿಯೆಗೆ ಹೋಗಿ ದೂರದಲ್ಲೇ ನಿಂತರೂ ನೆರೆದವರು ಅವರನ್ನು ನೋಡಿದ ಕೂಡಲೇ ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ಮುಂಬೈಯಿಂದ ಬಂದವರು ಎಂದು ತಿಳಿದು ಎಲ್ಲರೂ ಬಸ್ಸಿನಿಂದ ಕೆಳಗಿಳಿದ ಘಟನೆ ನಡೆದಿದೆ. ಮತ್ತೊಬ್ಬರು ಕೋಳಿ ಅಂಕಕ್ಕೆ ಹೋದರೆಂದು ಅಲ್ಲಿದ್ದವರು ಎಲ್ಲ ಪರಾರಿಯಾಗಿದ್ದಾರೆ. ಹೀಗೆ ಹಲವಾರು ಘಟನೆಗಳು ನಡೆಯುತ್ತಿವೆ. ರೈಲು ಸೇವೆ ಆರಂಭವಾದ ಮೇಲೆ ಊರಿಗೆ ಹೋಗಿ 7/14 ದಿನಗಳ ಕ್ವಾರಂಟೈನ್ ಮುಗಿಸಿ ಬಂದರೂ ಮನೆಯವರು/ನೆರೆಯವರು ಮುಖಕೊಟ್ಟು ಮಾತನಾಡುತ್ತಿಲ್ಲ. ಮುಂಬೈಯಿಂದ ಬರುವಾಗ ಏಳು ಕೊಲೆ ಮಾಡಿ ಬಂದಿದ್ದಾರೆ ಎನ್ನುವ ಹಾಗೆ ನೋಡುತ್ತಿದ್ದಾರೆ ಎಂದು ನೊಂದು ನುಡಿಯುತ್ತಿದ್ದಾರೆ. ಊರಿನವರು ನಿಷ್ಠುರದಿಂದಲೇ ಹೀಗೆ ಹೇಳುತ್ತಿದ್ದಾರೆ; ನಾವು ಮಾರ್ಚ್ ನಾಲ್ಕನೆ ವಾರದಿಂದ ನಿಯಮಬದ್ಧವಾಗಿ ಲಾಕ್ ಡೌನ್ ಪಾಲಿಸಿದ್ದೇವೆ. ನಾವು ಮಂದಿರ, ಮಾಲ್, ಬೀಚ್ ಎಲ್ಲಿಗೆ ಹೋಗದೆ ಇದ್ದದ್ದು ಈಗ ಮುಂಬೈಯವರಿಂದಾಗಿ ವ್ಯರ್ಥವಾಗುತ್ತಿದೆ ಎಂಬ ಖೇಧ ಅವರದು.

ಮುಂಬೈಯಿಂದ ಹೋಗುವ ಶತ ಪ್ರತಿಶತ ಜನರಿಗೆ ಕೊರೋನಾ ನಿಘಂಟು ಎಂಬ ಮನಃಸ್ಥಿತಿಗೆ ತಲುಪಿದ್ದಾರೆ. ದೂರದರ್ಶನ ಮಾಧ್ಯಮಗಳೂ ಅವರನ್ನು ದಿಕ್ಕು ತಪ್ಪಿಸುತ್ತಿವೆ ಎಂದರೂ ತಪ್ಪಾಗಲಾರದು. ಒಟ್ಟಿನಲ್ಲಿ ಇತಿಹಾಸದದಲ್ಲಿ ಎಂದೂ ಬರೆದಿರಲಾರದ ದಾಖಲೆಯೊಂದು ಈಗ ಬರೆಯಲ್ಪಡುತ್ತಿದೆ. ಊರಿನವರು ಮುಂಬೈಯವರನ್ನು ಆ ಕಾರ್ಯಕ್ರಮಕ್ಕೆ ಬನ್ನಿ, ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ಎಡೆಬಿಡದೆ ಕರೆಯುತ್ತಿದ್ದವರು ಈಗ ಯಾಕೆ ಬರುವುದು ಎಂಬ ದಾಟಿಯ ರಾಗ ಆಲಾಪಿಸುತ್ತಿದ್ದಾರೆ. ದುಡಿತಕ್ಕೆಂದು ಕರ್ಮಭೂಮಿಗೆ ಹೋದವರನ್ನು ಜನ್ಮಭೂಮಿ ಭಾವನಾತ್ಮಕವಾಗಿ ದೂರೀಕರಿಸುತ್ತಿದೆ ಎಂದರೂ ತಪ್ಪಾಗಲಾರದು.


Get In Touch With Us info@kalpa.news Whatsapp: 9481252093

Tags: CoronavirusCovid19IndiaLockdownMaharashtraMumbaiQuarantineಕೊರೋನಾ ಎಫೆಕ್ಟ್‌ಕೊರೋನಾ ವೈರಸ್ಕ್ವಾರಂಟೈನ್ಮುಂಬೈಲಾಕ್ ಡೌನ್
Share216Tweet123Send
Previous Post

ಎಸ್’ಎಸ್’ಎಲ್’ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೂ ಕೊರೋನಾ ಸೋಂಕು

Next Post

ಗಮನಿಸಿ! ಜೂನ್ 14 ರಂದು ಶಿವಮೊಗ್ಗದ ಬಹುತೇಕ ಕಡೆ ಕರೆಂಟ್ ಇರುವುದಿಲ್ಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಜೂನ್ 14 ರಂದು ಶಿವಮೊಗ್ಗದ ಬಹುತೇಕ ಕಡೆ ಕರೆಂಟ್ ಇರುವುದಿಲ್ಲ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪಿಯುಸಿ ಫಲಿತಾಂಶ | ಶಕ್ತಿ ಪಿಯು ಕಾಲೇಜಿನ ಮೌಲ್ಯ ಕರುಣಾಕರ ಶೆಟ್ಟಿ (ವಿಜ್ಞಾನ), ಶ್ರೀವಿಷ್ಣು (ವಾಣಿಜ್ಯ) ಕಾಲೇಜಿಗೆ ಪ್ರಥಮ

ಪಿಯುಸಿ ಫಲಿತಾಂಶ | ಶಕ್ತಿ ಪಿಯು ಕಾಲೇಜಿನ ಮೌಲ್ಯ ಕರುಣಾಕರ ಶೆಟ್ಟಿ (ವಿಜ್ಞಾನ), ಶ್ರೀವಿಷ್ಣು (ವಾಣಿಜ್ಯ) ಕಾಲೇಜಿಗೆ ಪ್ರಥಮ

April 10, 2026
ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ | ವಿವಿಧ ಕಾಮಗಾರಿಗಳಿಗೆ ಶಾಸಕ ಚನ್ನಬಸಪ್ಪ ಚಾಲನೆ

ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ | ವಿವಿಧ ಕಾಮಗಾರಿಗಳಿಗೆ ಶಾಸಕ ಚನ್ನಬಸಪ್ಪ ಚಾಲನೆ

April 10, 2026
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್‌ಆರ್ ರಾಮಸ್ವಾಮಿ ನಿಧನ

ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್‌ಆರ್ ರಾಮಸ್ವಾಮಿ ನಿಧನ

April 10, 2026
ದ್ವಿತೀಯ ಪಿಯುಸಿ ಪರೀಕ್ಷೆ | ಕೊಣಂದೂರು ಎನ್‌ಇಎಸ್ ಕಾಲೇಜಿಗೆ ಉತ್ತಮ ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆ | ಕೊಣಂದೂರು ಎನ್‌ಇಎಸ್ ಕಾಲೇಜಿಗೆ ಉತ್ತಮ ಫಲಿತಾಂಶ

April 10, 2026
ಮಳೆ ಹಾನಿ ಪ್ರದೇಶಕ್ಕೆ ಕಾಂತೇಶ್ ಭೇಟಿ: ಪರಿಶೀಲನೆ

ಮಳೆ ಹಾನಿ ಪ್ರದೇಶಕ್ಕೆ ಕಾಂತೇಶ್ ಭೇಟಿ: ಪರಿಶೀಲನೆ

April 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL