ನವದೆಹಲಿ: ಫನಿ ಚಂಡಮಾರುತದ ಅವಾಂತರ ಹಾಗೂ ಪರಿಹಾರ ಕಾರ್ಯಾಚರಣೆಗಳ ಕುರಿತಾಗಿ ಚರ್ಚಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಮಾಡಿದರೂ, ಸ್ವೀಕರಿಸಿದೇ ದುರಹಂಕಾರ ಪ್ರದರ್ಶಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಮತಾ ಬ್ಯಾನರ್ಜಿಯನ್ನು ಸಂಪರ್ಕಿಸಲು ಪ್ರಧಾನಿ ಮೋದಿ ಅವರ ಸಿಬ್ಬಂದಿ ಎರಡು ಬಾರಿ ಪ್ರಯತ್ನಿಸಿದ್ದಾರೆ. ಎರಡೂ ಬಾರಿ ಮರು ಕರೆ ಮಾಡಲಾಗುವುದು ಎಂದು ಹೇಳಿದರು. ಮತ್ತೊಂದು ಸಲ ಕರೆ ಮಾಡಿದಾಗ ಮುಖ್ಯಮಂತ್ರಿಗಳು ಪ್ರವಾಸದಲ್ಲಿದ್ದಾರೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ದೂರವಾಣಿ ಕರೆಗೆ ಮಮತಾ ಸಿಗದಿದ್ದ ನಂತರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರಿಗೆ ಕರೆ ಮಾಡಿ, ಪ್ರಧಾನಿಯವರು ಮಾಹಿತಿ ಪಡೆದುಕೊಂಡಿದ್ದಾರೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಟಿಎಂಸಿ, ಪ್ರಧಾನಿಯವರು ರಾಜ್ಯಪಾಲರೊಂದಿಗೆ ಮಾತ್ರ ಚರ್ಚಿಸಿದ್ದಾರೆ. ಬದಲಾಗಿ, ಮುಖ್ಯಮಂತ್ರಿಯವರೊಂದಿಗೆ ಯಾವುದೇ ವಿಚಾರವನ್ನು ಮಾತನಾಡಿಲ್ಲ ಎಂದು ದೂರಿದೆ.
Discussion about this post