ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಾನು ಉಪವಾಸ ಇದ್ದರೂ ಮಗ ವ್ಯಾಸಂಗದಲ್ಲಿ ಮುಂದವರೆಯಬೇಕು ಎಂಬ ತಾಯಿ ಮಹಾದಾಸೆಯಂತೆ, ವಿಕಲಚೇತನ ಮಗನನ್ನು ಭುಜದ ಮೇಲೆ ಹೊತ್ತು ನಿತ್ಯವೂ ಶಾಲೆಗೆ ಬಿಡುವ ಈ ತಾಯಿ ಕಾಯಕ ನಿಜಕ್ಕೂ ಶ್ಲಾಘನೀಯ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಶಪಿವುಲ್ಲಾ ಹೇಳಿದರು.
ತಾಲೂಕಿನ ರಂಗವ್ವನಹಳ್ಳಿಗೆ ಇತ್ತೀಚೆಗೆ ಭೇಟಿ ನೀಡಿದ ಅಧಿಕಾರಿಗಳು, ಕಾರ್ಮಿಕ ಇಲಾಖೆಯಿಂದ ಬರುವ ವಿದ್ಯಾರ್ಥಿ ವೇತನ, ಕಾರ್ಮಿಕ ಪಿಂಚಣಿ ಯೋಜನೆ ಹೀಗೆ ಅನೇಕ ಯೋಜನೆಗಳನ್ನು ಒಳಗೊಂಡ ಕಾರ್ಮಿಕ ಇಲಾಖೆ ಕಾರ್ಡನ್ನು ಸ್ಥಳದಲ್ಲೇ ದಾಖಲೆಗಳನ್ನು ಪಡೆದು ವಿತರಿಸಿ ಅವರು
ಮಾತನಾಡಿದರು.
ವಿದ್ಯಾರ್ಥಿ ರಾಜೇಶ್ ಬಾಬು ಈಗ 8ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವ್ಯಾಸಂಗದ ಅನುಗುಣವಾಗಿ ಪ್ರತಿ ವರ್ಷವೂ ವಿದ್ಯಾರ್ಥಿ ವೇತನ ಸಿಗುತ್ತದೆ. ತಾಯಿ ಜಯಲಕ್ಷ್ಮೀ ಅವರಿಗೆ 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳ ಮಾಸಿಕ 1 ಸಾವಿರ ರೂ. ವೇತನ ಸಿಗುವುದು ಎಂದರು.
ಗ್ರಾಪಂ ಅಭಿವೃದ್ದಿ ಅಧಿಕಾರಿ ಡಿ.ಸಿ. ಶಶಿರಾಜ್ ಮಾತನಾಡಿ, ಆರ್ಥಿಕವಾಗಿ ಕಡು ಬಡವರಾದ ಜಯಲಕ್ಷ್ಮೀಯವರು ದಿನನಿತ್ಯ ಕೂಲಿಮಾಡಿ ಜೀವನ ನಡೆಸಬೇಕಾಗುತ್ತಿದೆ. ತಾಲೂಕು ಪಂಚಾಯ್ತಿ ವತಿಯಿಂದ ಜಯಲಕ್ಷ್ಮಿ ಕುಟುಂಬಕ್ಕೆ ನಿವೇಶನ, ವಸತಿ ನೀಡಲಾಗುವುದು. 14 ನೆಯ ಹಣಕಾಸು ಯೋಜನೆಡಿಯಲ್ಲಿ 25 ಸಾವಿರ ರೂ. ಹಣ ನೀಡಲಾಗುವುದು. ಪಂಚಾಯ್ತಿ ವತಿಯಿಂದ ಮೂಲಭೂತ ಸೌಕರ್ಯವನ್ನು ಒದಗಿಸಲಾಗುವುದು. ಇದಲ್ಲದೇ ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತಿಪ್ಪಮ್ಮ, ತಿಪ್ಪೇಸ್ವಾಮಿ ಮಹಂತೇಶ್, ಗ್ರಾಮಪಂಚಾಯ್ತಿ ಸಿಬ್ಬಂದಿ ಮಂಜುಳ ಇದ್ದರು.
ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ
Get in Touch With Us info@kalpa.news Whatsapp: 9481252093
Discussion about this post