Wednesday, June 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ವಿಶ್ವವನ್ನೇ ನಿಬ್ಬೆರಗಾಗಿಸಿದ ಹಾಕಿ ಮಾಂತ್ರಿಕ ಧ್ಯಾನ್’ಚಂದ್ ಬಗ್ಗೆ ತಿಳಿಯದಿದ್ದರೆ ಜೀವನವೇ ವ್ಯರ್ಥ

August 31, 2019
in Special Articles
0 0
0
Share on facebookShare on TwitterWhatsapp
Read - 3 minutes

ಭಾರತದ ಪ್ರಾಚೀನ ಸಾಧನೆಗಳನ್ನು ಗಮನಿಸಿದಾಗ ಹಲವು ವಿಷಯಗಳಲ್ಲಿ ನಾವು ವಿಶ್ವಮಟ್ಟದಲ್ಲಿ ಮುಂಚುಣಿಯಲ್ಲಿದ್ದೆವು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇಪತ್ತನೇ ಶತಮಾನದ ಆರಂಭದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ರಾಷ್ಟ್ರದಾದ್ಯಂತ ವ್ಯಾಪಿಸಿತ್ತು. ಇಂತಹ ಕ್ಲಿಷ್ಟಕರ ಸಮಯದಲ್ಲೂ ಭಾರತಇಂದು ವಿಶ್ವದ ದಿಗ್ಗಜರೆಂದು ಕರೆಸಿಕೊಳ್ಳುವ ಅನೇಕ ರಾಷ್ಟ್ರಗಳನ್ನು, ಪ್ರಮುಖವಾಗಿ ಒಂದು ಕ್ಷೇತ್ರದಲ್ಲಿ ಮುಲಾಜಿಲ್ಲದೆ ಬಗ್ಗು ಬಡಿದಿತ್ತು. ಅದು ಹಾಕಿ ಕ್ರೀಡೆಯಲ್ಲಿ.

ವಿಶ್ವದ ಪ್ರಮುಖ ಕ್ರೀಡೆಯಲ್ಲೊಂದಾದ ಹಾಕಿಯಲ್ಲಿ ವಿಶ್ವದ ಜನರನ್ನು ಬಾಯ್ಮೇಲೆ ಬೆರಳಿಡುವಂತೆ ಅತ್ಯುತ್ತಮ ಸಾಧನೆ ಮಾಡಿತ್ತು ಭಾರತ. ಈ ಸಾಧನೆಯ ಹಿಂದಿನ ಮಹಾನ್ ಶಕ್ತಿ ಹಾಕಿ ಮಾಂತ್ರಿಕ ಮೇ. ಧ್ಯಾನ್ ಚಾಂದ್. ಈ ವಿಶ್ವ ಶ್ರೇಷ್ಠ ಹಾಕಿ ದಂತಕತೆಯನ್ನು, ಅವರ ಜನ್ಮದಿನದಂದು ಸ್ಮರಿಸುವ ಜವಾಬ್ದಾರಿ ನಮ್ಮೆಲ್ಲರದ್ದು.

ಕಿರಿಯ ವಯಸ್ಸಿನಲ್ಲೇ ಕಾರಣಾಂತರಗಳಿಂದ ಓದು ಮುಂದುವರೆಸಲಾಗದೆ, ಸೇನೆಗೆ ಸೇರಿದ ಧ್ಯಾನ್’ಸಿಂಗ್, ಸೇನೆಯ ಸ್ನೇಹಪೂರ್ಣ ಪಂದ್ಯಗಳಲ್ಲಿ ಹಾಕಿ ಆಡಲು ಶುರು ಮಾಡಿದರು. ಇವರ ಮಿಂಚಿನ ಆಟವನ್ನು ಗಮನಿಸಿದ ಮೇಜರ್ ಭೋಲೆ ತಿವಾರಿಯವರು ಧ್ಯಾನ್ ಸಿಂಗ್ ಅವರಿಗೆ ಹಾಕಿ ಕ್ರೀಡೆಯ ವಿಶೇಷತೆಗಳ ಬಗ್ಗೆ ತರಬೇತಿ ನೀಡಿದರು. ಅಷ್ಟೇ ಅಲ್ಲದೆ ಧ್ಯಾನ್‌ಸಿಂಗ್ ಅವರಆಟದ ವೈಖರಿ ಮತ್ತು ಅವರಲ್ಲಿದ್ದ ಚಾಕಚಕ್ಯತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಮೇ, ಭೋಲೆ ತಿವಾರಿ ಅಂದೇ, ಮುಂದೆ ಇವನು ಚಂದ್ರನಂತೆ(ಹಿಂದಿ ಭಾಷೆಯಲ್ಲಿ ಚಾಂದ್) ಬೆಳಗುತ್ತಾನೆ ಎಂದು ನುಡಿದಿದ್ದರು. ಇಷ್ಟು ಮಾತ್ರವಲ್ಲ ಹಾಕಿ ಮೇಲಿದ್ದ ನಿಷ್ಠೆಯಿಂದಾಗಿ ಧ್ಯಾನ್ ಸಿಂಗ್ ಚಂದ್ರನ ಬೆಳಕಿನಲ್ಲೂ ಹಾಕಿ ಅಭ್ಯಾಸ ಮಾಡುತ್ತಿದ್ದದನ್ನು ಗಮನಿಸಿದ ಇವರ ಸ್ನೇಹಿತರು ಇವರನ್ನು ‘‘ಚಾಂದ್’’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಅಂದಿನಿಂದ ಧ್ಯಾನ್ ಸಿಂಗ್, ಧ್ಯಾನ್ ಚಾಂದ್ ಎಂದು ಹೆಸರಾದರು.

ಹಲವು ಸೇನೆಯ ಸ್ಪರ್ಧೆಗಳಲ್ಲಿ ಇವರು ತೋರಿದ ಅಸಾಧಾರಣ ಪ್ರದರ್ಶನದ ಫಲವಾಗಿ ನಂತರದ ದಿನಗಳಲ್ಲಿ ಸೇನಾ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. 1926ರಲ್ಲಿ ಮೊದಲ ಬಾರಿಗೆ ಧ್ಯಾನ್ ಚಂದ್ ನ್ಯೂಜಿಲಾಂಡ್ ತಂಡದ ವಿರುದ್ಧದ ಪಂದ್ಯಗಳಲ್ಲಿ ಆಡಿದರು. ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಆಡಿದ 21 ಪಂದ್ಯಗಳಲ್ಲಿ 18 ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿತು. ಈ ಗೆಲುವುಗಳಲ್ಲಿ ಧ್ಯಾನ್ ಚಾಂದ್ ಅವರ ಕೊಡುಗೆ ಅಪಾರವಾದದ್ದು. ಇವರ ಆಟದ ಮೋಹಕತೆಗೆ ನಿಬ್ಬೆರಗಾದ ಅನೇಕರು ಪ್ರಶಂಸಿಸುತ್ತಾರೆ.

ನಂತರದ ದಿನಗಳಲ್ಲಿ ಇವರ ಪ್ರದರ್ಶನದ ಸಾಮರ್ಥ್ಯದ ಮುಲಕ ಅರ್ಹವಾಗಿಯೇ 1928, 1932 ಮತ್ತು 1936ರ ಒಲಂಪಿಕ್ಸ್‌’ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಧ್ಯಾನ್’ಚಂದ್ ತಮ್ಮದೆಯಾದ ಟ್ರೆಂಡ್ ಅನ್ನು ಹಾಕಿ ಕ್ಷೇತ್ರದಲ್ಲಿ ಸೃಷ್ಟಿಸಿ ಬಿಡುತ್ತಾರೆ. ಇದಕ್ಕೆ ಕಾರಣ ಈ ಮೂರೂ ಒಲಂಪಿಕ್ಸ್‌’ನಲ್ಲಿ ಭಾರತ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 107. ಇದರಲ್ಲಿ 39 ಗೋಲುಗಳು ಧ್ಯಾನ್’ಚಂದ್ ಅವರದ್ದೇ! ಮತ್ತು ಇದರ ಪರಿಣಾಮವಾಗಿ ಭಾರತ ಈ ಮೂರೂ ಒಲಂಪಿಕ್ಸ್‌’ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿತು.

ಲಾಸ್ ಏಂಜಲೀಸ್ ಒಲಂಪಿಕ್ಸ್‌ ನಂತರ ಅಮೆರಿಕಾವನ್ನು ಒಳಗೊಂಡ ವಿದೇಶಿ ಪ್ರವಾಸವನ್ನು ಭಾರತತಂಡ ಕೈಗೊಳ್ಳುತ್ತದೆ. ಈ ಪ್ರವಾಸದಲ್ಲಿ ಆಡಲಾದ 37 ಪಂದ್ಯಗಳಲ್ಲಿ ಭಾರತ 34ರಲ್ಲಿ ವಿಜಯಶಾಲಿಯಾಗುತ್ತದೆ. ಈ ಪಂದ್ಯಗಳಲ್ಲಿ ಭಾರತ ಗಳಿಸಿದ ಒಟ್ಟು 338 ಗೋಲುಗಳಲ್ಲಿ 133 ಗೋಲುಗಳನ್ನು ಧ್ಯಾನ್’ಚಂದ್ ಒಬ್ಬರೇ ಗಳಿಸುತ್ತಾರೆ!

ಧ್ಯಾನ್’ಚಂದ್ ಅವರ ಆಟ ಎಂತಹ ಸಂಚಲನವನ್ನು ಹುಟ್ಟಿಸಿತ್ತೆಂದರೆ 1936ರ ಬರ್ಲಿನ್ ಒಲಂಪಿಕ್’್ಸನ ಸಂದರ್ಭದಲ್ಲಿ ಜರ್ಮನ್ ಪತ್ರಿಕೆಯೊಂದು ಈ ರೀತಿ ಸುದ್ದಿ ಪ್ರಕಟಿಸುತ್ತದೆ, ‘‘ಹಾಕಿ ಆಟ ಈಗ ಮ್ಯಾಜಿಕ್ ಷೋ ಕೂಡ ಆಗಿದೆ. ಭಾರತದ ಮಾಂತ್ರಿಕನ ಆಟ ನೋಡಲು ಕ್ರೀಡಾಂಗಣಕ್ಕೆ ತಪ್ಪದೆ ಬನ್ನಿ’’, ಎಂದು. ಧ್ಯಾನ್’ಚಂದ್ ಅವರ ದಿಗ್ಭಮೆಗೊಳಿಸುವಂತಹ ಆಟ, ವಿಶ್ವದ ಜನರನ್ನು ಅವರ ಹಾಕಿ ಸ್ಟಿಕ್ ಮುರಿದು ನೋಡಿ, ಅದರಲ್ಲೇನಾದರೂ ಚೆಂಡನ್ನು ಹಿಡಿದಿಡುವ ತಂತ್ರದ ಅಳವಡಿಕೆಯಾಗಿದೆಯೇ ಎಂದು ಪರಿಶೀಲಿಸಿದ್ದೂ ಇದೆ.

ಹಾಗೆಯೇ ಧ್ಯಾನ್’ಚಾಂದ್ ಅವರ ಸಮಕಾಲೀನರಾದ ಕ್ರಿಕೆಟ್ ದಂತಕತೆ ಬ್ರಾಡ್ಮನ್ ಧ್ಯಾನ್’ಚಂದ್ ಅವರನ್ನು ಅಡಿ ಲೈಡ್’ನಲ್ಲಿ ಮುಖಾಮುಖಿಯಾದಾಗ ‘‘ನಾವು ಕ್ರಿಕೆಟ್’ನಲ್ಲಿ ರನ್ ಬಾರಿಸುವಂತೆ, ನೀವು ಗೋಲುಗಳನ್ನು ಬಾರಿಸುತ್ತೀರಲ್ಲ’’ ಎಂದು ಕೇಳಿದ್ದರಂತೆ. ಈ ಮಾತು ಹಾಕಿಯಲ್ಲಿ ಧ್ಯಾನ್’ಚಾಂದ್ ಅವರ ಶ್ರೇಷ್ಠ ಮಟ್ಟವನ್ನು ತಿಳಿಸುತ್ತದೆ.

ಧ್ಯಾನ್’ಚಂದ್’ರ ಈ ಸಾಧನೆಗಳು ಮತು ಅವರ ಪ್ರಸಿದ್ಧಿ ಎಷ್ಟರ ಮಟ್ಟಿಗೆ ಜಗಜ್ಜನಿತವಾಗಿತ್ತೆಂದರೆ ಭಾರತದಲ್ಲಿ ಇವರ ಸಾಧನೆಯನ್ನು ಗುರುತಿಸುವ ಮೊದಲೇ ಆಸ್ಟ್ರೀಯಾದ ವಿಯೆನ್ನಾದಲ್ಲಿ ಇವರ ಪುತ್ಥಳಿ ಸ್ಥಾಪನೆಗೊಂಡಿತ್ತು. ನಂತರದ ದಿನಗಳಲ್ಲಿ ಇವರ ಜನ್ಮದಿನವನ್ನು ‘‘ರಾಷ್ಟ್ರೀಯ ಕ್ರೀಡಾ ದಿನ’’ವೆಂದು ಆಚರಣೆಗೆ ತಂದರು.

ಧ್ಯಾನ್’ಚಂದ್ ಕೇವಲ ಕ್ರೀಡಾಪಟು ಮಾತ್ರವಾಗಿರಲಿಲ್ಲ. ಬದಲಾಗಿ ಅಪ್ರತಿಮ ರಾಷ್ಟ್ರಭಕ್ತರೂ ಆಗಿದ್ದರು. 16ನೆಯ ವಯಸ್ಸಿನಲ್ಲಿ ಸೇನೆಗೆ ಸೇರಿದ್ದ ಇವರು, 1940ರ ದಶಕದ ಕೊನೆಯವರೆಗೂ ಸೇನೆಗಾಗಿ ಅದರ ಜೊತೆ ಜೊತೆಗೆ ಭಾರತದ ಹಾಕಿ ತಂಡದ ಮೂಲಕ ಭಾರತದ ಗೌರವವನ್ನು ಹೆಚ್ಚಿಸುವುದಕ್ಕಾಗಿ ದುಡಿದರು.

ಜರ್ಮನಿಯ ಆಗಿನ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್ ಕ್ರೀಡೆಯ ಮೂಲಕ ತನ್ನ ರಾಷ್ಟ್ರ ವಿಶ್ವಕ್ಕೆ ಸಮರ್ಥ ರಾಷ್ಟ್ರವೆಂದು ತೋರಿಸಿಕೊಡುವ ಉದ್ದೇಶದಿಂದ 1936ರಲ್ಲಿ ನಡೆದ ಬರ್ಲಿನ್ ಒಲಂಪಿಕ್ಸ್‌’ನ್ನು ಆಯೋಜಿಸುತ್ತಾನೆ. ಅಲ್ಲಿ ಹಾಕಿ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 8-1ರ ಅಂತರದಲ್ಲಿ ಗೆಲ್ಲುತ್ತದೆ. ಇದರಲ್ಲಿ ತಂಡದ ನಾಯಕನಾಗಿದ್ದ ಧ್ಯಾನ್’ಚಂದ್’ರ ಪಾತ್ರವೂ ಹೆಚ್ಚಿತ್ತು. ಇದನ್ನು ಗಮನಿಸಿದ ಹಿಟ್ಲರ್ ಅಧಿಕಾರದ ಪ್ರಲೊಭನೆಯನ್ನು ನೀಡಿ ಜರ್ಮನ್ ಪರ ಆಡಲು ಧ್ಯಾನ್’ಚಂದ್’ರ ಬಳಿ ಕೇಳಿದ್ದರಂತೆ. ಆದರೆ ಯಾವುದೇ ಪ್ರಲೋಭನೆಗಳಿಗೆ ಒಳಗಾಗದೇ ನಾನು ಆಡಿದರೆ ನನ್ನ ದೇಶಕ್ಕಾಗಿ ಮಾತ್ರ ಎಂದು ದೃಢವಾಗಿ ಹೇಳಿದ ಶ್ರೇಷ್ಠ ದೇಶಭಕ್ತ ಧ್ಯಾನ್’ಚಂದ್.

ನಿಜಕ್ಕೂ ಇವರು ಭಾರತರತ್ನ. ಇವರ ಹೆಸರಿನಲ್ಲೊಂದು ಅಕಾಡೆಮಿ, ಪದ್ಮಭೂಷಣ ಪ್ರಶಸ್ತಿ ನೀಡಿದ್ದನ್ನು ಬಿಟ್ಟು ನನ್ನ ಜ್ಞಾನದ ಅರಿವಿಗೆ ಬಂದಂತೆ ಬೇರೇನೂ ನೀಡಿದ್ದು ಕಾಣ ಸಿಗುವುದಿಲ್ಲ. ಈ ಮಹಾನ್ ವ್ಯಕ್ತಿಗಲ್ಲದೇ ಬೇರೆ ಯಾರಿಗೆ ತಾನೇ ಭಾರತರತ್ನ ಕೊಡಲು ಸಾಧ್ಯ. ಭಾರತ ಪ್ರಸ್ತುತ ಕ್ರೀಡಾಕ್ಷೇತ್ರದಲ್ಲಿ ಹೊಸ ಶಕ್ತಿಯಾಗಿ ಬೆಳೆಯುತ್ತಿದೆ. ಅದಕ್ಕೆ ಪ್ರೇರಣೆ ಧ್ಯಾನ್’ಚಾಂದ್ ಆಗಲಿ. ನಮ್ಮ ಮನೆಯ ಮಕ್ಕಳಿಗೂ ಧ್ಯಾನ್’ಚಾಂದ್’ರಂತೆ ಆಗಲು ಪ್ರೇರೇಪಿಸುವ ಕೆಲಸಗಳಾಗಬೇಕು. ಆಗ ಸದೃಢ ಯುವ ಭಾರತವನ್ನು ನಿರ್ಮಿಸಲು ಸಾಧ್ಯ.

 

Tags: Adolf HitlerArun KirmanjeswaraChinaDhyan ChandHockeyhockey wizard Dhyan ChandIndiaIndian SportsKannada ArticleSports Newsಅಡಾಲ್ಫ್‌ ಹಿಟ್ಲರ್ಅರುಣ್ ಕಿರಿಮಂಜೇಶ್ವರಭಾರತೀಯ ಕ್ರೀಡೆಹಾಕಿ ಮಾಂತ್ರಿಕ ಧ್ಯಾನ್’ಚಂದ್
Previous Post

ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ರಜನಿಕಾಂತ್ ಭೇಟಿ: ಮುಗಿಬಿದ್ದ ಅಭಿಮಾನಿಗಳು

Next Post

ಬೆಂಗಳೂರು: ಅಭಿನಯದ ಪ್ರೌಢಿಮೆ ಅಭಿವ್ಯಕ್ತಿಸಿದ ಅನುಷಾ ರಂಗ ಪ್ರವೇಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬೆಂಗಳೂರು: ಅಭಿನಯದ ಪ್ರೌಢಿಮೆ ಅಭಿವ್ಯಕ್ತಿಸಿದ ಅನುಷಾ ರಂಗ ಪ್ರವೇಶ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Internet Image

ಗಮನಿಸಿ | ಜೂನ್ 26ರ ನಾಳೆ ಸೊರಬದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 25, 2025

ಮಾದಕ ವ್ಯಸನ ವಿರೋಧಿ ದಿನ: ಎಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

June 25, 2025

ಕಾಂಗ್ರೆಸ್ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶಾಸಕ ಚನ್ನಬಸಪ್ಪ

June 25, 2025

ಮುಸ್ಲಿಮರಿಗೆ ವಸತಿ ಯೋಜನೆಯಲ್ಲಿ ಶೇ.15ರಷ್ಟು ಮೀಸಲಾತಿ ಕೂಡಲೇ ಹಿಂಪಡೆಯಿರಿ

June 25, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Internet Image

ಗಮನಿಸಿ | ಜೂನ್ 26ರ ನಾಳೆ ಸೊರಬದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 25, 2025

ಮಾದಕ ವ್ಯಸನ ವಿರೋಧಿ ದಿನ: ಎಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

June 25, 2025

ಕಾಂಗ್ರೆಸ್ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶಾಸಕ ಚನ್ನಬಸಪ್ಪ

June 25, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!