No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Monday, August 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಿಶ್ವವನ್ನೇ ನಿಬ್ಬೆರಗಾಗಿಸಿದ ಹಾಕಿ ಮಾಂತ್ರಿಕ ಧ್ಯಾನ್’ಚಂದ್ ಬಗ್ಗೆ ತಿಳಿಯದಿದ್ದರೆ ಜೀವನವೇ ವ್ಯರ್ಥ

kalpa News by kalpa News
August 31, 2019
in Special Articles
0
ವಿಶ್ವವನ್ನೇ ನಿಬ್ಬೆರಗಾಗಿಸಿದ ಹಾಕಿ ಮಾಂತ್ರಿಕ ಧ್ಯಾನ್’ಚಂದ್ ಬಗ್ಗೆ ತಿಳಿಯದಿದ್ದರೆ ಜೀವನವೇ ವ್ಯರ್ಥ
Share on FacebookShare on TwitterShare on WhatsApp

ಭಾರತದ ಪ್ರಾಚೀನ ಸಾಧನೆಗಳನ್ನು ಗಮನಿಸಿದಾಗ ಹಲವು ವಿಷಯಗಳಲ್ಲಿ ನಾವು ವಿಶ್ವಮಟ್ಟದಲ್ಲಿ ಮುಂಚುಣಿಯಲ್ಲಿದ್ದೆವು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇಪತ್ತನೇ ಶತಮಾನದ ಆರಂಭದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ರಾಷ್ಟ್ರದಾದ್ಯಂತ ವ್ಯಾಪಿಸಿತ್ತು. ಇಂತಹ ಕ್ಲಿಷ್ಟಕರ ಸಮಯದಲ್ಲೂ ಭಾರತಇಂದು ವಿಶ್ವದ ದಿಗ್ಗಜರೆಂದು ಕರೆಸಿಕೊಳ್ಳುವ ಅನೇಕ ರಾಷ್ಟ್ರಗಳನ್ನು, ಪ್ರಮುಖವಾಗಿ ಒಂದು ಕ್ಷೇತ್ರದಲ್ಲಿ ಮುಲಾಜಿಲ್ಲದೆ ಬಗ್ಗು ಬಡಿದಿತ್ತು. ಅದು ಹಾಕಿ ಕ್ರೀಡೆಯಲ್ಲಿ.

ವಿಶ್ವದ ಪ್ರಮುಖ ಕ್ರೀಡೆಯಲ್ಲೊಂದಾದ ಹಾಕಿಯಲ್ಲಿ ವಿಶ್ವದ ಜನರನ್ನು ಬಾಯ್ಮೇಲೆ ಬೆರಳಿಡುವಂತೆ ಅತ್ಯುತ್ತಮ ಸಾಧನೆ ಮಾಡಿತ್ತು ಭಾರತ. ಈ ಸಾಧನೆಯ ಹಿಂದಿನ ಮಹಾನ್ ಶಕ್ತಿ ಹಾಕಿ ಮಾಂತ್ರಿಕ ಮೇ. ಧ್ಯಾನ್ ಚಾಂದ್. ಈ ವಿಶ್ವ ಶ್ರೇಷ್ಠ ಹಾಕಿ ದಂತಕತೆಯನ್ನು, ಅವರ ಜನ್ಮದಿನದಂದು ಸ್ಮರಿಸುವ ಜವಾಬ್ದಾರಿ ನಮ್ಮೆಲ್ಲರದ್ದು.

ಕಿರಿಯ ವಯಸ್ಸಿನಲ್ಲೇ ಕಾರಣಾಂತರಗಳಿಂದ ಓದು ಮುಂದುವರೆಸಲಾಗದೆ, ಸೇನೆಗೆ ಸೇರಿದ ಧ್ಯಾನ್’ಸಿಂಗ್, ಸೇನೆಯ ಸ್ನೇಹಪೂರ್ಣ ಪಂದ್ಯಗಳಲ್ಲಿ ಹಾಕಿ ಆಡಲು ಶುರು ಮಾಡಿದರು. ಇವರ ಮಿಂಚಿನ ಆಟವನ್ನು ಗಮನಿಸಿದ ಮೇಜರ್ ಭೋಲೆ ತಿವಾರಿಯವರು ಧ್ಯಾನ್ ಸಿಂಗ್ ಅವರಿಗೆ ಹಾಕಿ ಕ್ರೀಡೆಯ ವಿಶೇಷತೆಗಳ ಬಗ್ಗೆ ತರಬೇತಿ ನೀಡಿದರು. ಅಷ್ಟೇ ಅಲ್ಲದೆ ಧ್ಯಾನ್‌ಸಿಂಗ್ ಅವರಆಟದ ವೈಖರಿ ಮತ್ತು ಅವರಲ್ಲಿದ್ದ ಚಾಕಚಕ್ಯತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಮೇ, ಭೋಲೆ ತಿವಾರಿ ಅಂದೇ, ಮುಂದೆ ಇವನು ಚಂದ್ರನಂತೆ(ಹಿಂದಿ ಭಾಷೆಯಲ್ಲಿ ಚಾಂದ್) ಬೆಳಗುತ್ತಾನೆ ಎಂದು ನುಡಿದಿದ್ದರು. ಇಷ್ಟು ಮಾತ್ರವಲ್ಲ ಹಾಕಿ ಮೇಲಿದ್ದ ನಿಷ್ಠೆಯಿಂದಾಗಿ ಧ್ಯಾನ್ ಸಿಂಗ್ ಚಂದ್ರನ ಬೆಳಕಿನಲ್ಲೂ ಹಾಕಿ ಅಭ್ಯಾಸ ಮಾಡುತ್ತಿದ್ದದನ್ನು ಗಮನಿಸಿದ ಇವರ ಸ್ನೇಹಿತರು ಇವರನ್ನು ‘‘ಚಾಂದ್’’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಅಂದಿನಿಂದ ಧ್ಯಾನ್ ಸಿಂಗ್, ಧ್ಯಾನ್ ಚಾಂದ್ ಎಂದು ಹೆಸರಾದರು.

ಹಲವು ಸೇನೆಯ ಸ್ಪರ್ಧೆಗಳಲ್ಲಿ ಇವರು ತೋರಿದ ಅಸಾಧಾರಣ ಪ್ರದರ್ಶನದ ಫಲವಾಗಿ ನಂತರದ ದಿನಗಳಲ್ಲಿ ಸೇನಾ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. 1926ರಲ್ಲಿ ಮೊದಲ ಬಾರಿಗೆ ಧ್ಯಾನ್ ಚಂದ್ ನ್ಯೂಜಿಲಾಂಡ್ ತಂಡದ ವಿರುದ್ಧದ ಪಂದ್ಯಗಳಲ್ಲಿ ಆಡಿದರು. ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಆಡಿದ 21 ಪಂದ್ಯಗಳಲ್ಲಿ 18 ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿತು. ಈ ಗೆಲುವುಗಳಲ್ಲಿ ಧ್ಯಾನ್ ಚಾಂದ್ ಅವರ ಕೊಡುಗೆ ಅಪಾರವಾದದ್ದು. ಇವರ ಆಟದ ಮೋಹಕತೆಗೆ ನಿಬ್ಬೆರಗಾದ ಅನೇಕರು ಪ್ರಶಂಸಿಸುತ್ತಾರೆ.

ನಂತರದ ದಿನಗಳಲ್ಲಿ ಇವರ ಪ್ರದರ್ಶನದ ಸಾಮರ್ಥ್ಯದ ಮುಲಕ ಅರ್ಹವಾಗಿಯೇ 1928, 1932 ಮತ್ತು 1936ರ ಒಲಂಪಿಕ್ಸ್‌’ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಧ್ಯಾನ್’ಚಂದ್ ತಮ್ಮದೆಯಾದ ಟ್ರೆಂಡ್ ಅನ್ನು ಹಾಕಿ ಕ್ಷೇತ್ರದಲ್ಲಿ ಸೃಷ್ಟಿಸಿ ಬಿಡುತ್ತಾರೆ. ಇದಕ್ಕೆ ಕಾರಣ ಈ ಮೂರೂ ಒಲಂಪಿಕ್ಸ್‌’ನಲ್ಲಿ ಭಾರತ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 107. ಇದರಲ್ಲಿ 39 ಗೋಲುಗಳು ಧ್ಯಾನ್’ಚಂದ್ ಅವರದ್ದೇ! ಮತ್ತು ಇದರ ಪರಿಣಾಮವಾಗಿ ಭಾರತ ಈ ಮೂರೂ ಒಲಂಪಿಕ್ಸ್‌’ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿತು.

ಲಾಸ್ ಏಂಜಲೀಸ್ ಒಲಂಪಿಕ್ಸ್‌ ನಂತರ ಅಮೆರಿಕಾವನ್ನು ಒಳಗೊಂಡ ವಿದೇಶಿ ಪ್ರವಾಸವನ್ನು ಭಾರತತಂಡ ಕೈಗೊಳ್ಳುತ್ತದೆ. ಈ ಪ್ರವಾಸದಲ್ಲಿ ಆಡಲಾದ 37 ಪಂದ್ಯಗಳಲ್ಲಿ ಭಾರತ 34ರಲ್ಲಿ ವಿಜಯಶಾಲಿಯಾಗುತ್ತದೆ. ಈ ಪಂದ್ಯಗಳಲ್ಲಿ ಭಾರತ ಗಳಿಸಿದ ಒಟ್ಟು 338 ಗೋಲುಗಳಲ್ಲಿ 133 ಗೋಲುಗಳನ್ನು ಧ್ಯಾನ್’ಚಂದ್ ಒಬ್ಬರೇ ಗಳಿಸುತ್ತಾರೆ!

ಧ್ಯಾನ್’ಚಂದ್ ಅವರ ಆಟ ಎಂತಹ ಸಂಚಲನವನ್ನು ಹುಟ್ಟಿಸಿತ್ತೆಂದರೆ 1936ರ ಬರ್ಲಿನ್ ಒಲಂಪಿಕ್’್ಸನ ಸಂದರ್ಭದಲ್ಲಿ ಜರ್ಮನ್ ಪತ್ರಿಕೆಯೊಂದು ಈ ರೀತಿ ಸುದ್ದಿ ಪ್ರಕಟಿಸುತ್ತದೆ, ‘‘ಹಾಕಿ ಆಟ ಈಗ ಮ್ಯಾಜಿಕ್ ಷೋ ಕೂಡ ಆಗಿದೆ. ಭಾರತದ ಮಾಂತ್ರಿಕನ ಆಟ ನೋಡಲು ಕ್ರೀಡಾಂಗಣಕ್ಕೆ ತಪ್ಪದೆ ಬನ್ನಿ’’, ಎಂದು. ಧ್ಯಾನ್’ಚಂದ್ ಅವರ ದಿಗ್ಭಮೆಗೊಳಿಸುವಂತಹ ಆಟ, ವಿಶ್ವದ ಜನರನ್ನು ಅವರ ಹಾಕಿ ಸ್ಟಿಕ್ ಮುರಿದು ನೋಡಿ, ಅದರಲ್ಲೇನಾದರೂ ಚೆಂಡನ್ನು ಹಿಡಿದಿಡುವ ತಂತ್ರದ ಅಳವಡಿಕೆಯಾಗಿದೆಯೇ ಎಂದು ಪರಿಶೀಲಿಸಿದ್ದೂ ಇದೆ.

ಹಾಗೆಯೇ ಧ್ಯಾನ್’ಚಾಂದ್ ಅವರ ಸಮಕಾಲೀನರಾದ ಕ್ರಿಕೆಟ್ ದಂತಕತೆ ಬ್ರಾಡ್ಮನ್ ಧ್ಯಾನ್’ಚಂದ್ ಅವರನ್ನು ಅಡಿ ಲೈಡ್’ನಲ್ಲಿ ಮುಖಾಮುಖಿಯಾದಾಗ ‘‘ನಾವು ಕ್ರಿಕೆಟ್’ನಲ್ಲಿ ರನ್ ಬಾರಿಸುವಂತೆ, ನೀವು ಗೋಲುಗಳನ್ನು ಬಾರಿಸುತ್ತೀರಲ್ಲ’’ ಎಂದು ಕೇಳಿದ್ದರಂತೆ. ಈ ಮಾತು ಹಾಕಿಯಲ್ಲಿ ಧ್ಯಾನ್’ಚಾಂದ್ ಅವರ ಶ್ರೇಷ್ಠ ಮಟ್ಟವನ್ನು ತಿಳಿಸುತ್ತದೆ.

ಧ್ಯಾನ್’ಚಂದ್’ರ ಈ ಸಾಧನೆಗಳು ಮತು ಅವರ ಪ್ರಸಿದ್ಧಿ ಎಷ್ಟರ ಮಟ್ಟಿಗೆ ಜಗಜ್ಜನಿತವಾಗಿತ್ತೆಂದರೆ ಭಾರತದಲ್ಲಿ ಇವರ ಸಾಧನೆಯನ್ನು ಗುರುತಿಸುವ ಮೊದಲೇ ಆಸ್ಟ್ರೀಯಾದ ವಿಯೆನ್ನಾದಲ್ಲಿ ಇವರ ಪುತ್ಥಳಿ ಸ್ಥಾಪನೆಗೊಂಡಿತ್ತು. ನಂತರದ ದಿನಗಳಲ್ಲಿ ಇವರ ಜನ್ಮದಿನವನ್ನು ‘‘ರಾಷ್ಟ್ರೀಯ ಕ್ರೀಡಾ ದಿನ’’ವೆಂದು ಆಚರಣೆಗೆ ತಂದರು.

ಧ್ಯಾನ್’ಚಂದ್ ಕೇವಲ ಕ್ರೀಡಾಪಟು ಮಾತ್ರವಾಗಿರಲಿಲ್ಲ. ಬದಲಾಗಿ ಅಪ್ರತಿಮ ರಾಷ್ಟ್ರಭಕ್ತರೂ ಆಗಿದ್ದರು. 16ನೆಯ ವಯಸ್ಸಿನಲ್ಲಿ ಸೇನೆಗೆ ಸೇರಿದ್ದ ಇವರು, 1940ರ ದಶಕದ ಕೊನೆಯವರೆಗೂ ಸೇನೆಗಾಗಿ ಅದರ ಜೊತೆ ಜೊತೆಗೆ ಭಾರತದ ಹಾಕಿ ತಂಡದ ಮೂಲಕ ಭಾರತದ ಗೌರವವನ್ನು ಹೆಚ್ಚಿಸುವುದಕ್ಕಾಗಿ ದುಡಿದರು.

ಜರ್ಮನಿಯ ಆಗಿನ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್ ಕ್ರೀಡೆಯ ಮೂಲಕ ತನ್ನ ರಾಷ್ಟ್ರ ವಿಶ್ವಕ್ಕೆ ಸಮರ್ಥ ರಾಷ್ಟ್ರವೆಂದು ತೋರಿಸಿಕೊಡುವ ಉದ್ದೇಶದಿಂದ 1936ರಲ್ಲಿ ನಡೆದ ಬರ್ಲಿನ್ ಒಲಂಪಿಕ್ಸ್‌’ನ್ನು ಆಯೋಜಿಸುತ್ತಾನೆ. ಅಲ್ಲಿ ಹಾಕಿ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 8-1ರ ಅಂತರದಲ್ಲಿ ಗೆಲ್ಲುತ್ತದೆ. ಇದರಲ್ಲಿ ತಂಡದ ನಾಯಕನಾಗಿದ್ದ ಧ್ಯಾನ್’ಚಂದ್’ರ ಪಾತ್ರವೂ ಹೆಚ್ಚಿತ್ತು. ಇದನ್ನು ಗಮನಿಸಿದ ಹಿಟ್ಲರ್ ಅಧಿಕಾರದ ಪ್ರಲೊಭನೆಯನ್ನು ನೀಡಿ ಜರ್ಮನ್ ಪರ ಆಡಲು ಧ್ಯಾನ್’ಚಂದ್’ರ ಬಳಿ ಕೇಳಿದ್ದರಂತೆ. ಆದರೆ ಯಾವುದೇ ಪ್ರಲೋಭನೆಗಳಿಗೆ ಒಳಗಾಗದೇ ನಾನು ಆಡಿದರೆ ನನ್ನ ದೇಶಕ್ಕಾಗಿ ಮಾತ್ರ ಎಂದು ದೃಢವಾಗಿ ಹೇಳಿದ ಶ್ರೇಷ್ಠ ದೇಶಭಕ್ತ ಧ್ಯಾನ್’ಚಂದ್.

ನಿಜಕ್ಕೂ ಇವರು ಭಾರತರತ್ನ. ಇವರ ಹೆಸರಿನಲ್ಲೊಂದು ಅಕಾಡೆಮಿ, ಪದ್ಮಭೂಷಣ ಪ್ರಶಸ್ತಿ ನೀಡಿದ್ದನ್ನು ಬಿಟ್ಟು ನನ್ನ ಜ್ಞಾನದ ಅರಿವಿಗೆ ಬಂದಂತೆ ಬೇರೇನೂ ನೀಡಿದ್ದು ಕಾಣ ಸಿಗುವುದಿಲ್ಲ. ಈ ಮಹಾನ್ ವ್ಯಕ್ತಿಗಲ್ಲದೇ ಬೇರೆ ಯಾರಿಗೆ ತಾನೇ ಭಾರತರತ್ನ ಕೊಡಲು ಸಾಧ್ಯ. ಭಾರತ ಪ್ರಸ್ತುತ ಕ್ರೀಡಾಕ್ಷೇತ್ರದಲ್ಲಿ ಹೊಸ ಶಕ್ತಿಯಾಗಿ ಬೆಳೆಯುತ್ತಿದೆ. ಅದಕ್ಕೆ ಪ್ರೇರಣೆ ಧ್ಯಾನ್’ಚಾಂದ್ ಆಗಲಿ. ನಮ್ಮ ಮನೆಯ ಮಕ್ಕಳಿಗೂ ಧ್ಯಾನ್’ಚಾಂದ್’ರಂತೆ ಆಗಲು ಪ್ರೇರೇಪಿಸುವ ಕೆಲಸಗಳಾಗಬೇಕು. ಆಗ ಸದೃಢ ಯುವ ಭಾರತವನ್ನು ನಿರ್ಮಿಸಲು ಸಾಧ್ಯ.

 

Tags: Adolf HitlerArun KirmanjeswaraChinaDhyan ChandHockeyhockey wizard Dhyan ChandIndiaIndian SportsKannada ArticleSports Newsಅಡಾಲ್ಫ್‌ ಹಿಟ್ಲರ್ಅರುಣ್ ಕಿರಿಮಂಜೇಶ್ವರಭಾರತೀಯ ಕ್ರೀಡೆಹಾಕಿ ಮಾಂತ್ರಿಕ ಧ್ಯಾನ್’ಚಂದ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ರಜನಿಕಾಂತ್ ಭೇಟಿ: ಮುಗಿಬಿದ್ದ ಅಭಿಮಾನಿಗಳು

Next Post

ಬೆಂಗಳೂರು: ಅಭಿನಯದ ಪ್ರೌಢಿಮೆ ಅಭಿವ್ಯಕ್ತಿಸಿದ ಅನುಷಾ ರಂಗ ಪ್ರವೇಶ

kalpa News

kalpa News

Next Post
ಬೆಂಗಳೂರು: ಅಭಿನಯದ ಪ್ರೌಢಿಮೆ ಅಭಿವ್ಯಕ್ತಿಸಿದ ಅನುಷಾ ರಂಗ ಪ್ರವೇಶ

ಬೆಂಗಳೂರು: ಅಭಿನಯದ ಪ್ರೌಢಿಮೆ ಅಭಿವ್ಯಕ್ತಿಸಿದ ಅನುಷಾ ರಂಗ ಪ್ರವೇಶ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL