ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂಗೀತ್ ನೃತ್ಯ ಭಾರತಿ ಅಕಾಡೆಮಿಯ ಮತ್ತೊಂದು ಹೆಮ್ಮೆಯ ಭರತನಾಟ್ಯ ರಂಗಪ್ರವೇಶವು ಇದೇ ಏ.24ರ ಭಾನುವಾರ ಬೆಳಿಗ್ಗೆ 10ಕ್ಕೆ ನಗರದ ಮಲ್ಲೇಶ್ವರದ ಸೇವಾಸದನದಲ್ಲಿ ನಡೆಯಲಿದೆ.
ಗುರು ಪದ್ಮಾ ಹೇಮಂತ್ ಮತ್ತು ವಿದುಷಿ ಶೀತಲ್ ಹೇಮಂತ್ ರವರ ಬಳಿ ನೃತ್ಯಾಭ್ಯಾಸ ಮಾಡುತ್ತಿರುವ ಕು. ಎಚ್. ಆರ್. ಕವಿತಾ ಕರ್ನಾಟಕ ಕಲಾಶ್ರೀ ಅಶೋಕ್ ಕುಮಾರ್ ಮತ್ತು ಮತ್ತೋರ್ವ ನೃತ್ಯಗುರು, ಕಿರುತೆರೆಯ ಕಲಾವಿದೆ, ಪದ್ಮಿನಿ ಆಚ್ಚಿರವರುಗಳ ಸಮ್ಮುಖದಲ್ಲಿ ನೃತ್ಯ ಪ್ರದರ್ಶಿಸಲಿದ್ದಾರೆ.
ಕವಿತಾರವರು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ತಮ್ಮ ಪ್ರವೃತ್ತಿ, ಭರತನಾಟ್ಯ ಕಲಿಕೆಗೂ ಸಹ ಸಾಕಷ್ಟು ಸಮಯ, ಪರಿಶ್ರಮವನ್ನು ಇತ್ತು ಗುರುಗಳ ಮಾರ್ಗದರ್ಶನದಲ್ಲಿ ತಾಲೀಮು ನಡೆಸಿದ್ದಾರೆ. ವಿದ್ಯೆಯ ಜೊತೆಗೆ ವಿನಯವು ಸೇರಿರುವ ಅಪರೂಪದ ಸಮ್ಮಿಲನವೆಂದು ಕವಿತಾಳನ್ನು ಬಣ್ಣಿಸುವ ಗುರು ಪದ್ಮ ಹೇಮಂತ್ ರವರ ಮಾತುಗಳು ಕವಿತಾ ರವರ ನೃತ್ಯ ಸಾಧನೆಗೆ ಅತ್ಯಂತ ಹಿರಿದಾದ ಪ್ರೋತ್ಸಾಹವೇ ಸರಿ.
Also read : ಎಂಪಿಎಂ ಕಾರ್ಖಾನೆ ಪುನಶ್ಚೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಎಂಗೆ ಮನವಿ
ಈ ಸುಂದರ ಭರತನಾಟ್ಯ ರಂಗಪ್ರವೇಶಕ್ಕೆ ಕವಿತಾ ರವರಿಗೆ ಪಕ್ಕವಾದ್ಯದಲ್ಲಿ ಸಹಕರಿಸುತ್ತಿರುವ ಹಿರಿಯ ಕಲಾವಿದರುಗಳೆಂದರೆ, ನಟುವಾಂಗದಲ್ಲಿ ಗುರುಗಳಾದ ಗುರು ಶ್ರೀಮತಿ ಪದ್ಮಾ ಹೇಮಂತ್ ಮತ್ತು ವಿದುಷಿ ಶೀತಲ್ ಹೇಮಂತ್, ಗಾಯನದಲ್ಲಿ ವಿದ್ವಾನ್ ಶ್ರೀ ಬಾಲಸುಬ್ರಹ್ಮಣ್ಯ ಶರ್ಮ, ಮೃದಂಗದಲ್ಲಿ ವಿದ್ವಾನ್ ಶ್ರೀ ಭವಾನಿ ಶಂಕರ್, ವೈಲಿನ್ ನಲ್ಲಿ ವಿದ್ವಾನ್ ಬಿ ಆರ್ ಹೇಮಂತ್ ಕುಮಾರ್, ಕೊಳಲಿನಲ್ಲಿ ವಿದ್ವಾನ್ ಶ್ರೀ ವೇಣುಗೋಪಾಲ್ ಮತ್ತು ರಿದಂ ಪ್ಯಾಡ್ ನಲ್ಲಿ ವಿದ್ವಾನ್ ಶ್ರೀ ಪ್ರಸನ್ನಕುಮಾರ್ ಅವರು ಕಲಾರಸಿಕರ ಮನತಣಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post