No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Saturday, May 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಚಂದ್ರಗುತ್ತಿ, ಬಸ್ತಿಕೊಪ್ಪ ಕಲ್ಲುಕ್ವಾರೆ ಸಮಗ್ರ ತನಿಖೆಗೆ ಕ್ರಮ: ಡಿಸಿ ಸೆಲ್ವಮಣಿ ಭರವಸೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 30, 2022
in ಶಿವಮೊಗ್ಗ
0
ಚಂದ್ರಗುತ್ತಿ, ಬಸ್ತಿಕೊಪ್ಪ ಕಲ್ಲುಕ್ವಾರೆ ಸಮಗ್ರ ತನಿಖೆಗೆ ಕ್ರಮ: ಡಿಸಿ ಸೆಲ್ವಮಣಿ ಭರವಸೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಜನರ ಬದುಕಿಗೆ ಮಾರಕವಾಗುತ್ತಿದ್ದರೆ ಅಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲ. ಚಂದ್ರಗುತ್ತಿ ಬಸ್ತಿಕೊಪ್ಪದ ಕಲ್ಲುಕ್ವಾರೆಯನ್ನು ಸಮಗ್ರ ತನಿಖೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸೆಲ್ವಮಣಿ Shivamogga DC Selvamani ಭರವಸೆ ನೀಡಿದರು.

ಸೊರಬ ತಾಲ್ಲೂಕು ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪ ಪ್ರದೇಶದಲ್ಲಿ 4 ವರ್ಷಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸಾಮಾಜಿಕ ಬದುಕಿನ ಅಧ್ವಾನಗಳಾಗಿದ್ದು, ಗ್ರಾಮ ಜನರ ಜೊತೆಗೆ ವನ್ಯ ಜೀವಿಯ ಬದುಕಿಗೆ ಆತಂಕ ತಂದಿದೆ. ಪ್ರಸಿದ್ಧ ರೇಣುಕಾಂಬಾ
ದೇವಾಲಯದ ಅಸ್ತಿತ್ವಕ್ಕೆ ಕೂಡ ಧಕ್ಕೆ ತರಲಿದೆ ಎಂದು ವೃಕ್ಷ ಲಕ್ಷ ಆಂದೋಲನ ಹಾಗೂ ಸೊರಬ ಪರಿಸರ ವೇದಿಕೆ ಕಾರ್ಯಕರ್ತರು ಚಂದ್ರಗುತ್ತಿ ಬಸ್ತಿಕೊಪ್ಪದ ಗ್ರಾಮಸ್ಥರು ಶಿವಮೊಗ್ಗದಲ್ಲಿ ಸಲ್ಲಿಸಿದ ದೂರು ಆಲಿಸಿ ಮಾತನಾಡಿದರು.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಮಾತನಾಡಿ, ಈಗಾಗಲೇ ಚಂದ್ರಗುತ್ತಿ ಗ್ರಾಮ ಪಂಚಾಯತಿ ಜೀವ ವೈವಿಧ್ಯ ಸಮಿತಿ ಬಸ್ತಿಕೊಪ್ಪ ಕಲ್ಲುಗಣಿಗಾರಿಕೆ ಅನಾಹುತಗಳನ್ನು ಗಮನಿಸಿ ಗಣಿಗಾರಿಕೆಗೆ ನೀಡಿರುವ ಅನುಮತಿ ಹಿಂಪಡೆಯುವ ಬಗ್ಗೆ
ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಂಡಿದೆ. ವೃಕ್ಷ ಲಕ್ಷ ಆಂದೋಲನದ ನಿಯೋಗ ಭಾರತ ಸರಕಾರದ ಅರಣ್ಯ ಪರಿಸರ ಮಂತ್ರಾಲಯದ ಗಮನ ಸೆಳೆದಿದೆ. ರಾಜ್ಯ ಅರಣ್ಯ ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದೆ ಎಂದರು.

ಸೊರಬ ತಾಲ್ಲೂಕು ಚಂದ್ರಗುತ್ತಿಯಲ್ಲಿ ಬೃಹತ್ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ವ್ಯಾಪಕ ದುಷ್ಪರಿಣಾಮಗಳು ಹಾಗೂ ಕೃಷಿ, ಆರೋಗ್ಯ, ಅರಣ್ಯ, ಜಲಪರಿಸ್ಥಿತಿಯ ಪ್ರತ್ಯಕ್ಷ ಸಮೀಕ್ಷೆ ಅಧ್ಯಯನಕ್ಕೆ ಶಿಫಾರಸ್ಸು ಮಾಡಲಾಗಿದೆ. ಹಿಂದುಳಿದವರೇ ಇರುವ ಇಲ್ಲಿನ ರೈತರಿಗೆ ಬೆಳೆ ಇಲ್ಲವಾಗಿದೆ. ಊರು ತೊರೆಯುವ ಅನಾಥ ಪರಿಸ್ಥಿತಿ ಇದೆ. ಚಂದ್ರಗುತ್ತಿ ರೇಣುಕಾಂಬಾ ದೇವಾಲಯದ ಅಸ್ತಿತ್ವಕ್ಕೆ ಗಣಿಗಾರಿಕೆ, ಸ್ಪೋಟಗಳು ಧಕ್ಕೆ ತರಲಿವೆ. ಚಂದ್ರಗುತ್ತಿಯ ಸುತ್ತ 5000 ಎಕರೆ ಬಹು ಅಪರೂಪದ ಜಲಮೂಲದ ಕಲ್ಲು ಅರಣ್ಯ ಪ್ರದೇಶ ವಿನಾಶದ ಅಂಚಿಗೆ ಬಂದಿದೆ ಎಂದರು.

ಭೂಕುಸಿತಕ್ಕೆ ದಾರಿ:
ಗುಡ್ಡಗಳನ್ನೇ ಕೊರೆದು ಗಣಿಗಾರಿಕೆ ನಡೆಯುತ್ತಿರುವುದರಿಂದ ಭೂಕುಸಿತಕ್ಕೆ ಕಾರಣವಾಗಲಿದೆ. ಚಂದ್ರಗುತ್ತಿ ಗ್ರಾಮದ ಕಲ್ಲು ಗುಡ್ಡಗಳು ಕುಸಿಯುವ ಸಾಧ್ಯತೆ ಇದೆ. ರೇಣುಕಾಂಬಾ ದೇವಾಲಯ ಹಾಗೂ ಜನವಸತಿ ಸಂಕಷ್ಟಕ್ಕೆ ಸಿಲುಕಬಹುದಾಗಿದೆ. ಬಸ್ತಿಕೊಪ್ಪದಲ್ಲಿ ಬೇರೆ ರಾಜ್ಯದ ಗಣಿ ಕಾರ್ಮಿಕರಿದ್ದು ಅವರಿಗೆ ಯಾವ ಸುರಕ್ಷತೆಯೂ ಇಲ್ಲ. ಈಗಾಗಲೇ ಬಸ್ತಿಕೊಪ್ಪ ಗ್ರಾಮದ ಬಾವಿಗಳು, ಬೋರ್‌ವೆಲ್‌ಗಳು ಬರಿದಾಗಿವೆ. ಪಂಚಾಯತದವರ ಕುಡಿಯುವ ನೀರಿನ ಯೋಜನೆ ವಿಫಲವಾಗಿದೆ ಎಂದರು.

ಕಾಯಿದೆಗಳ ಉಲ್ಲಂಘನೆ:
ಬಸ್ತಿಕೊಪ್ಪ ಗಣಿಗಾರಿಕೆಯಿಂದ ಅರಣ್ಯ, ವನ್ಯ ಜೀವಿ ಕಾಯಿದೆ, ಗಣಿ ಕಾಯಿದೆ, ಮಾಲಿನ್ಯ ನಿಯಂತ್ರಣ ಕಾಯಿದೆ. ಪರಿಸರ ಮತ್ತುಜೀವ ವೈವಿಧ್ಯ ಸಂರಕ್ಷಣಾ ಕಾನೂನುಗಳ ತೀವ್ರ ಉಲ್ಲಂಘನೆ ಆಗಿದೆ.

ಶಿಫಾರಸ್ಸು:
ಚಂದ್ರಗುತ್ತಿ ಬಸ್ತಿಕೊಪ್ಪ ಕಲ್ಲುಗಣಿಗಾರಿಕೆ ತಾಂತ್ರಿಕವಾಗಿ ಕಿರು ಗಣಿಗಾರಿಕೆ ಎನಿಸಿಕೊಂಡರೂ ಇದು ಭಾರೀ ಗಣಿಗಾರಿಕೆಯಾಗಿ ಭಾರೀ ಅನಾಹುತಗಳ ಸರಮಾಲೆ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಇಲ್ಲಿನ ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು
ಹಿಂಪಡೆಯಬೇಕು. ಅರಣ್ಯ, ಪರಿಸರ, ಜಲ, ಭೂಗರ್ಭ ತಜ್ಞರು, ಜೀವ ವೈವಿಧ್ಯತಜ್ಞರನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ಸ್ಥಳಕ್ಕೆ ಕಳಿಸಿ ಪರಿಶೀಲಿಸಬೇಕು. ಚಂದ್ರಗುತ್ತಿ ಪ್ರದೇಶದ ಸೂಕ್ಷ್ಮ ಕಲ್ಲು ಅರಣ್ಯಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗಣಿಗಾರಿಕೆಗೆ
ನೀಡಿದ ಒಪ್ಪಿಗೆ ಹಿಂಪಡೆಯಬೇಕು. ಜಿಲ್ಲಾ ಪಂಚಾಯತ ಬಸ್ತಿಕೊಪ್ಪ ಗ್ರಾಮದ ಕೃಷಿ, ತೋಟಗಾರಿಕೆ ಪರಿಸ್ಥಿತಿ ಕುಡಿಯುವ ನೀರಿನ ಸೌಲಭ್ಯ ಯೋಜನೆ ವಿಫಲತೆ ಬಗ್ಗೆ ಸ್ಥಳ ಪರಿಶೀಲನೆ ಮಾಡಬೇಕು ಎಂದರು.

ಬಸ್ತಿಕೊಪ್ಪ ಗ್ರಾಮಸ್ಥರು ಸೇರಿದಂತೆ ಜೀವ ವೈವಿಧ್ಯ ಸಮಿತಿ ಸದಸ್ಯ ಕೆ.ವೆಂಕಟೇಶ್, ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಇದ್ದರು. ಬಹು ಅಪರೂಪದ ಕಲ್ಲು ಅರಣ್ಯಗಳು ಚಂದ್ರಗುತ್ತಿ ಸುತ್ತಲಿನ ಪ್ರದೇಶದಲ್ಲಿವೆ. ಇಲ್ಲಿನ ಸಸ್ಯ, ವನ್ಯ ಜೀವಿ ಸಂಕುಲ ಬಹಳ ಆಘಾತಕ್ಕೆ ಒಳಗಾಗಿದೆ. ಬಸ್ತಿಕೊಪ್ಪ ಗಣಿಗಾರಿಕೆ ವಿನಾಶಕಾರಿ ಆಗಿದೆ. ಅದು ಸಂಪೂರ್ಣ ನಿಲ್ಲಬೇಕು. ಚಂದ್ರಗುತ್ತಿ ಅರಣ್ಯ ಪುನಶ್ಚೇತನ ಯೋಜನೆ ಜಾರಿ ಮಾಡಬೇಕು.
-ಜೀವ ವೈವಿಧ್ಯ ತಜ್ಞ ಡಾ.ಕೇಶವ ಹೆಚ್. ಕೊರ್ಸೆ

ಚಂದ್ರಗುತ್ತಿ ಸೇರಿದಂತೆ ವರದಾ ಜಲಾನಯನ ಪ್ರದೇಶ ಭಾರೀ ಹಾನಿಗೆ ಒಳಗಾಗಿದೆ. ಗಣಿಗಾರಿಕೆಯಿಂದ ಕಾನು ಅರಣ್ಯಗಳು ಜಲಮೂಗಳು ನಾಶವಾಗಿವೆ.
-ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ

ಗ್ರಾಮಸ್ಥರ ಅಳಲು:
ಜಿಲ್ಲಾಧಿಕಾರಿಗಳ ಭೇಟಿಗೆ ಬಂದಿದ್ದ ಬಸ್ತಿಕೊಪ್ಪ ಗ್ರಾಮಸ್ಥರು, ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶ ಜನವಸತಿ ಮನೆಗಳಿಂದ 100 ಮೀಟರ್ ದೂರದಲ್ಲಿದೆ. ಗ್ರಾಮದಲ್ಲಿ 45 ರೈತರ ಕುಟುಂಬಗಳು ಇವೆ. 300 ಜನ ಸಂಖ್ಯೆ ಇದೆ. ಗಣಿಗಾರಿಕೆ ನಡೆಯುವ ಸ್ಥಳ ಕಲ್ಲುಗುಡ್ಡ ಕುರುಚಲು ಅರಣ್ಯದಿಂದ ಕೂಡಿದೆ. ಚಂದ್ರಗುತ್ತಿಯ ಇತಿಹಾಸ ಪ್ರಸಿದ್ಧ ರೇಣುಕಾಂಬಾ ಗುಹಾದೇವಾಲಯದಿಂದ ಕೇವಲ ಒಂದು ಕಿ.ಮೀ ದೂರದಲ್ಲಿದೆ. 2 ವರ್ಷ ಹಿಂದೆ ಗಣಿಗಾರಿಕೆ ನಡೆದ ಅರ್ಧ ಕಿ.ಮೀ ವ್ಯಾಪ್ತಿಯ ಬೃಹತ್ ಗಣಿಗಾರಿಕೆ ಬಾವಿ (200 ಅಡಿ ಆಳ) ಗುಡ್ಡದ ಮೇಲೆ ಬಾಯ್ದೆರೆಂದು ನಿಂತಿದೆ. ಪಕ್ಕದಲ್ಲಿ ಇನ್ನರ್ಧ ಕಿ.ಮೀ ವ್ಯಾಪ್ತಿಯಲ್ಲಿ ಈಗ ಗಣಿ ಕಾಮಗಾರಿ ನಡೆಯುತ್ತಿದೆ.

ಗುಡ್ಡಗಳ ಮೇಲೆ ಗಣಿಗಾರಿಕೆ, ಬೃಹತ್ ಬಾವಿ, ಕೆರೆ ನಿರ್‍ಮಾಣ ನಿಷೇಧಿಸಬೇಕು. ಇಲ್ಲವಾದರೆ ಸುತ್ತಲಿನ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ಭಾರೀ ಮಳೆಗೆ ಭೂ ಕುಸಿತ ಆಗುವುದು ನಿಶ್ಚಿತ.
-ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾನ ಭೂ ಗರ್ಭ ಶಾಸ್ತ್ರಜ್ಞ ಡಾ.ಮಾರುತಿ

ಚಂದ್ರಗುತ್ತಿ ಬಸ್ತಿಕೊಪ್ಪ ಗಣಿಗಾರಿಕೆಯಿಂದ ಆಗಿರುವ ಹಾನಿಯ ಪಾರಿಸಾರಿಕ ಮೌಲ್ಯ ಮಾಪನ ಆಗಬೇಕು ಇಡೀ ಹಳ್ಳಿ ಗಣಿಗಾರಿಕೆಯಿಂದ ವಿನಾಶದ ಅಂಚಿಗೆ ಬಂದಿದೆ.
-ಜೀವ ವೈವಿಧ್ಯ ದಾಖಲಾತಿ ತಜ್ಞ ಶ್ರೀಪಾದ ಬಿಚ್ಚುಗತ್ತಿ

Also read: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ

ಗಣಿ ಕಂಪನಿಯಿಂದ ಅರಣ್ಯ ಅತಿಕ್ರಮಣವಾಗಿದೆ. 200 ಮೀಟರ್ ಆಳದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಭಾರೀ ಯಂತ್ರಗಳು ಕಾರ್ಯಾಚರಣೆ ನಡೆಯುತ್ತಿರುವುದರಿಂದ ದಿನಕ್ಕೆ 250-300 ಲಾರಿ ಕಲ್ಲು ಸಾಗಾಟ ನಡೆಯುತ್ತಿದೆ. ಪ್ರತಿ ದಿನ ಸಂಜೆ 2 ಬಾರಿ ಭಾರೀ ಸ್ಪೋಟಕಗಳನ್ನು ಬಳಸಿ ಕಲ್ಲು ಪರ್ವತವನ್ನು ಸೀಳುತ್ತಾರೆ. ಗಣಿಗಾರಿಕೆ ನಡೆಸುತ್ತಾರೆ. ಬಾಂಬ್ ಸ್ಪೋಟಕಗಳು ಸುತ್ತಲಿನ ಹಳ್ಳಿಗಳ ಮನೆಗಳನ್ನು ಅದುರುವಂತೆ ಮಾಡುತ್ತವೆ. ಮನೆಗಳ ಗೋಡೆಗಳು ಬಿರುಕು ಬಂದಿವೆ. ಕುಟುಂಬಗಳು ಬೀಳಲಿರುವ ಮನೆ ಬಿಟ್ಟು ಬೇರೆ ಗುಡಿಸಲು ಕಟ್ಟಿಕೊಂಡಿವೆ. ಸ್ಪೋಟಕ ಸಂದರ್ಭದಲ್ಲಿ ಉಂಟಾಗುವ ಹೊಗೆ, ವಿಷಯುಕ್ತ ಧೂಳು, ಹಳ್ಳಿಗಳ ಮಕ್ಕಳು ಮಹಿಳೆಯರನ್ನು ಅನಾರೋಗ್ಯಕ್ಕೆ ತಳ್ಳಿವೆ. ಸ್ಪೋಟಕದ ನಂತರ ಹಳ್ಳಿಯ ಮಕ್ಕಳು ವಾಂತಿ ಮಾಡಿಕೊಳ್ಳುತ್ತಾರೆ. ಮಂಜು ತುಂಬಿದಂತೆ ವಿಷಯುಕ್ತ ಹೊಗೆ ಹಳ್ಳಿಗಳ ಸುತ್ತ ಹರಡುತ್ತದೆ. ಗ್ರಾಮದ ನೂರಾರು ಎಕರೆ ಕೃಷಿ ಭೂಮಿ ಕ್ರಷರ್, ಗಣಿಯ ಧೂಳಿನಿಂದ ತುಂಬಿ ಕೃಷಿಗೆ ಅಯೋಗ್ಯವಾಗಿದೆ. ಮಳೆಗಾಲದಲ್ಲಿ ಗುಡ್ಡದಿಂದ ಗಣಿಯ ಕಲ್ಲು ಪುಡಿ ಮಿಶ್ರಿತ ನೀರು ಕೃಷಿ ಭೂಮಿಗೆ ತುಂಬಿಕೊಳ್ಳುತ್ತದೆ. ಗಣಿಗಾರಿಕೆಯಿಂದ ಗ್ರಾಮದ ಮಕ್ಕಳು, ಮಹಿಳೆಯರು ವಯಸ್ಸಾದವರು ದಮ್ಮು, ಕ್ಷಯ, ಚರ್ಮರೋಗ, ಹೃದಯ ಕಾಯಿಲೆ, ಅಪೌಷ್ಠಿಕತೆ, ಮುಂತಾದ ತೀವ್ರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉದ್ಯೋಗ, ಕೃಷಿ ಇಲ್ಲ, ರೋಗರುಜಿನ ಎಲ್ಲದಕ್ಕೆ ಗಣಿಗಾರಿಕೆ ಕಾರಣವಾಗಿದೆ. ಗಣಿಗಾರಿಕೆ ಕಲ್ಲು, ಸಾಗಾಟದಿಂದ 2 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಪ್ರವೇಶ ಅಸಾಧ್ಯವಾಗಿದೆ. ವೈದ್ಯರು ವಿವಿಧ ಇಲಾಖೆ ಅಧಿಕಾರಿಗಳು ಬರುತ್ತಿಲ್ಲ. ಮಕ್ಕಳು ಗರ್ಭಿಣಿ ಮಹಿಳೆಯರನ್ನು ಸಾಗಿಸಲು ವಾಹನ ಬರುವಂತಿಲ್ಲ. ಚಿಕ್ಕ ಸೇತುವೆ ಭಾರೀ ವಾಹನಗಳು ಓಡಾಡುವದರಿಂದ ಮುರಿದು ಬೀಳುವ ಸ್ಥಿತಿ ತಲುಪಿದೆ. ಗಣಿಪ್ರದೇಶದಿಂದ 200 ಮೀಟರ್ ದೂರದಲ್ಲಿ ಪ್ರಾಥಮಿಕ ಶಾಲೆ ಇದೆ. ಅಲ್ಲಿನ ಧೂಳಿನ ಪರಿಸ್ಥಿತಿ ಮಕ್ಕಳನ್ನು ಆತಂಕಕ್ಕೆ ತಳ್ಳಿದೆ. ಶಾಲೆ ನಿಲ್ಲಿಸಬೇಕಾದ ಸ್ಥಿತಿ ಇದೆ.  ಕಲ್ಲು ಕ್ರಷರ್ ಬಳಿ ಇರುವ ಹಿಂದುಳಿದ ಮಕ್ಕಳ ಹಾಸ್ಟೇಲ್ ಹೈಸ್ಕೂಲ್ ಮಕ್ಕಳು ಧೂಳಿನಲ್ಲಿ ಮುಳುಗುವಂತಾಗಿದೆ ಎಂದು ದೂರಿದರು.

ವರದಿ: ಮಧುರಾಮ್, ಸೊರಬ

ಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga DC SelvamaniShivamogga Newsಜಿಲ್ಲಾಧಿಕಾರಿ ಸೆಲ್ವಮಣಿಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share196Tweet123Send
Previous Post

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ

Next Post

ಶಾಲಾ ರಜೆ ನೀಡುವುದರೊಳಗೆ ಮಕ್ಕಳಿಗೆ ಕೋವಿಡ್ ಲಸಿಕೆ: ಡಿಸಿ ಸೆಲ್ವಮಣಿ ಸೂಚನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಇಂದು ಸಂಜೆ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ, ಸೆಕ್ಷನ್ ಮುಂದುವರಿಕೆ ನಿರ್ಧಾರ

ಶಾಲಾ ರಜೆ ನೀಡುವುದರೊಳಗೆ ಮಕ್ಕಳಿಗೆ ಕೋವಿಡ್ ಲಸಿಕೆ: ಡಿಸಿ ಸೆಲ್ವಮಣಿ ಸೂಚನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಅರ್ಥಗರ್ಭಿತ ಮಹಿಳಾ ದಿನಾಚರಣೆ: ಎಸ್‌ಪಿ ನಿಖಿಲ್ ಸಂತಸ

ಮನೆ ಕಳ್ಳತನ ಪ್ರಕರಣ ತಡೆಗೆ `ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ ಜಾರಿಗೆ: ಎಸ್‌ಪಿ ನಿಖಿಲ್

May 1, 2026
ಬಳ್ಳಾರಿ | ಸಂಜೀವರಾಯ ದೇವಸ್ಥಾನದಲ್ಲಿ ವಿದುಷಿ ದಿವ್ಯಾ ಗಿರಿಧರ್ ಅದ್ಭುತ ಗಾಯನ

ಬಳ್ಳಾರಿ | ಸಂಜೀವರಾಯ ದೇವಸ್ಥಾನದಲ್ಲಿ ವಿದುಷಿ ದಿವ್ಯಾ ಗಿರಿಧರ್ ಅದ್ಭುತ ಗಾಯನ

May 1, 2026
ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿ | ಸೂಕ್ತ ಪರಿಹಾರ ನೀಡಲು ಡಾ. ಧನಂಜಯ ಸರ್ಜಿ ಮನವಿ

ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿ | ಸೂಕ್ತ ಪರಿಹಾರ ನೀಡಲು ಡಾ. ಧನಂಜಯ ಸರ್ಜಿ ಮನವಿ

May 1, 2026
ಸೊರಬ | ಸಂಭ್ರಮದ ಶಿಖರಕ್ಕೆ ತಲುಪಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ | ನೂತನ ರಥದಲ್ಲಿ ಭವ್ಯ ಮೆರವಣಿಗೆ

ಸೊರಬ | ಸಂಭ್ರಮದ ಶಿಖರಕ್ಕೆ ತಲುಪಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ | ನೂತನ ರಥದಲ್ಲಿ ಭವ್ಯ ಮೆರವಣಿಗೆ

May 1, 2026
ನಟಿ ತಾರಾ, ಹಿರಿಯ ನಟ ಶಶಿಕುಮಾರ್ ಕೃಷ್ಣ ಮಠಕ್ಕೆ ಭೇಟಿ

ನಟಿ ತಾರಾ, ಹಿರಿಯ ನಟ ಶಶಿಕುಮಾರ್ ಕೃಷ್ಣ ಮಠಕ್ಕೆ ಭೇಟಿ

May 1, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL