ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುಂಡಪ್ಪ ಶೆಡ್ ಸಾರ್ವಜನಿಕ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆದ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜ ಸಂಘಟನೆಯ ಸಭೆಯಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜದ ರಾಷ್ರೀಯ ಅನ್ನದಾನ ಸಮಿತಿಯ ಸದಸ್ಯರುಗಳನ್ನಾಗಿ ಯುವ ನಾಯಕರಾದ ಕೆ.ಈ. ಕಾಂತೇಶ್ ಹಾಗೂ ಕೇರಳ ಸಮಾಜದ ಎನ್.ಡಿ. ಸತೀಶ್ ರವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತಂತೆ ಇಂದು ಸಭೆ ನಡೆದಿದ್ದು, ಸೇವಾ ಸಮಾಜದ ನೂತನ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಕೆ.ಎಸ್. ಸಂತೋಷ್ ಆಯ್ಕೆಗೊಂಡಿದ್ದಾರೆ. ಶಬರಿಮಲೈ ಅಯ್ಯಪ್ಪ ಸೇವಾ ಸಮಾಜದ ವತಿಯಿಂದ ನಿರಂತರವಾಗಿ ಚಟುವಟಿಕೆಗಳು ನಡೆಯುವಂತೆ, ಶಬರಿಮಲೈ ಯಾತ್ರಾರ್ಥಿಗಳಿಗೆ ಅನ್ನದಾನ, ವೈದ್ಯಕೀಯ ಸೌಲಭ್ಯಗಳು, ಯಾತ್ರಾರ್ಥಿಗಳಿಗಾಗಿ ಮೂಲ ಶಿಬಿರಗಳು ಮತ್ತು ಸೇವಾ ಕೇಂದ್ರ, ಯಾತ್ರಾರ್ಥಿಗಳಿಗೆ ಸಭೆ, ಸತ್ಸಂಗ, ಪೂಜೆ ಇತ್ಯಾದಿಗಳ ಮೂಲಕ ಅಯ್ಯಪ್ಪನ ಭಕ್ತರನ್ನು ಆಯೋಜಿಸಲಾಗುತ್ತದೆ.
ಅಲ್ಲದೇ, ಭಕ್ತರ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮಗಳ ಅಭಿಯಾನಗಳನ್ನು ಆಯೋಜಿಸುವ ಆಶಯಗಳನ್ನು ನೂತನ ಸಮಿತಿ ಹೊಂದಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಅನ್ನದಾನ ಸಮಿತಿಯ ನೂತನ ಸದಸ್ಯರುಗಳನ್ನು, ನೂತನ ಜಿಲ್ಲಾಧ್ಯಕ್ಷರನ್ನು ಸಮಿತಿಯ ಪದಾಧಿಕಾರಿಗಳು, ಭಕ್ತರು ಅಭಿನಂದಿಸಿದರು.
Also read: ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ: ಮುರುಘಾ ಶ್ರೀಗಳಿಗೆ ಮತ್ತೆ 11 ದಿನ ಜೈಲೇ ಗತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post