ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೃಹರಕ್ಷಕ ದಳದ ಸುದೀರ್ಘ ಸೇವೆ, ಅತ್ಯುತ್ತಮ ಸಾಧನೆ ಹಾಗೂ ಉತ್ತಮ ಸೇವೆಗಾಗಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಘಟಕದ ಘಟಕಾಧಿಕಾರಿಯಾದ ಜಿ. ಈ. ಶಿವಾನಂದಪ್ಪ ಪ್ಲಟೂನ್ ಕಮಾಂಡರ್ ಅವರಿಗೆ 2022ನೇ ಸಾಲಿನ “ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ” ಲಭಿಸಿದೆ.
ಶಿವಾನಂದಪ್ಪ ಅವರು 2008ರಲ್ಲಿ ಮುಖ್ಯಮಂತ್ರಿಗಳ ಪದಕ ಲಭಿಸಿದ್ದು, ಈಗ ರಾಷ್ಟ್ರಪತಿಗಳ ಪದಕವೂ ಲಭಿಸಿದೆ. ಜಿಲ್ಲೆಯ ಎರಡು ಉನ್ನತ ಪಧಕಗಳಾದ ಮುಖ್ಯಮಂತ್ರಿ ಹಾಗೂ ಎರಡು ಪದಕ ಪಡೆದ ಅಧಿಕಾರಿ ಇವರಾಗಿರುತ್ತಾರೆ.
ರಾಷ್ಟ್ರಪತಿ ಪಧಕ ಲಭಿಸಿರುವ ಶಿವಾನಂದಪ್ಪ ಜಿ.ಈ. ಪ್ಲಟೂನ್ ಕಮಾಂಡರ್ ಅವರಿಗೆ ಶಿವಮೊಗ್ಗ ಜಿಲ್ಲೆಯ ಸಮಾದೇಷ್ಟರಾದ ಶ್ರೀ ಚಂದನ್ ಪಟೇಲ್, ಎಂ.ಪಿ., ಉಪ ಸಮಾದೇಷ್ಟರಾದ ಶ್ರೀ ಹಾಲಪ್ಪ ಷಾ ಡಾವಣಗೆರೆ, ಸಹಾಯಕ ಬೋಧಕರಾದ ಶ್ರೀ ಹೆಚ್.ದಿನೇಶ್, ಕಛೇರಿಯ ಎಲ್ಲಾ ಸಿಬ್ಬಂದಿಗಳು ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳು ಹಾಗೂ ಎಲ್ಲಾ ಗೃಹರಕ್ಷಕ/ಗೃಹರಕ್ಷಕಿಯರು ಅಭಿನಂದನೆ ಸಲ್ಲಿಸಿದ್ದಾರೆ.
Also read: ಅಡಕೆ ಉತ್ಪನ್ನ ಆಮದು ಮೇಲಿನ ಸುಂಕ ಹೆಚ್ಚಿಸಲು ರಾಜ್ಯ ನಿಯೋಗ ಕೇಂದ್ರಕ್ಕೆ: ಗೃಹ ಸಚಿವ ಆರಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post