ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
75ನೇ ವರ್ಷದ ಸ್ವಾತಂತ್ರ್ಯೋತ್ಸವ – ಅಮೃತಮಹೋತ್ಸವದ ಅಂಗವಾಗಿ ಪ್ರತಿ ಮನೆಗಳ ಮೇಲು ತ್ರಿವರ್ಣ ಧ್ವಜ ಹಾರಿಸುವ “ಹರ್ ಘರ್ ತಿರಂಗ”ಕಾರ್ಯಕ್ರಮಕ್ಕೆ ಇಂದು ಹೊಸಮನೆ ವಾರ್ಡ್ ನಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಹಾಗೂ ಹೊಸಮನೆ ವಾರ್ಡಿನ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ವಜ್ರೇಶ್ವರಿ ಗಣಪತಿ ದೇವಸ್ಥಾನ ದಿಂದ ಮನೆ ಮನೆಗೆ ತೆರಳಿ ತ್ರಿವರ್ಣ ಧ್ವಜ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಭಾರತ ದೇಶವು 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು ಈ ಬಾರಿ ಅತಿ ಸಂಭ್ರಮಾಚರಣೆಯಿಂದ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವತಂತ್ರಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನು ಸ್ಮರಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಕೆ. ರಂಗನಾಥ್, ಪಾಲಿಕೆಯ ಅಧಿಕಾರಿ ಯಶ್ವಂತ, ಕುಪ್ಪರಾಜ್, ಭೋಜರಾಜ್ ಪಾಲಿಕೆಯ ಸಿಬ್ಬಂದಿಗಳು, ಪೌರಕಾರ್ಮಿಕರು, ವಾರ್ಡ್ ನ ಪ್ರಮುಖರಾದ ಗೋಪಿ , ಚಂದ್ರು ಗೆಡ್ಡೆ , ಪವನ್, ಹಾಗೂ ವಾರ್ಡಿನ ನಾಗರಿಕರು ಇದ್ದರು.
Also read: ಕೃಷಿಕರ ಪಾಡು ಸಂಕಷ್ಟದಲ್ಲಿ, ತುರ್ತು ರಕ್ಷಣೆಗೆ ಮುಂದಾಗಿ: ರೈತ ಮುಖಂಡರ ಆಗ್ರಹ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post