ಉಡುಪಿ, ಅ.19: ಇಲ್ಲಿನ ಅಲೆವೂರು ಗ್ರಾ.ಪಂ. ನೇತೃತ್ವದಲ್ಲಿ ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಸ್ಥಳೀಯ ರಾಂಪುರ ಮತ್ತು ಪಡುಅಲೆವೂರುಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಶ್ರಮದಾನ ನಡೆಯಿತು.
ಈ ಶ್ರಮದಾನದ ಮೂಲಕ ಸಂಗ್ರಹಿಸಲಾದ ಸುಮಾರು 1 ಟೆಂಪೋದಷ್ಟು ಹಸಿರು ಹುಲ್ಲನ್ನು ಪಯರ್ಾಯ ಪೇಜಾವರ ಮಠದ ವತಿಯಿಂದ ನೀಲಾವರದಲ್ಲಿ ನಡೆಯುತ್ತಿರುವ ಗೋಶಾಲೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪಯರ್ಾಯ ಪೇಜಾವರ ಮಠದ ಕಿರಿಯ ಶ್ರೀಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು ಈ ಶ್ರಮದಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಯುವ ಉದ್ಯಮಿ ಅಜೇಯ ಕಾಮತ್ ಅವರು ಹುಲ್ಲು ಕತ್ತರಿಸುವ ಯಂತ್ರವೊಂದನ್ನು ಪಂಚಾಯತಿಗೆ ಕೊಡುಗೆಯಾಗಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಅಲೆವೂರು ಯುವಕ ಮಂಡಲದ ಹರೀಶ್ ಶೆಟ್ಟಿಗಾರ್, ಅಭಿಮಾನ್ ಸ್ಪೋಟರ್್ಸ ಕ್ಲಬ್ ನ ಉಮೇಶ್ ಶೆಟ್ಟಿಗಾರ್ ಮತ್ತು ಆದಿ ಸ್ಟ್ರೈಕಸರ್್ ನ ಕಿಶನ್ ಶೆಟ್ಟಿಗಾರ್, ಮಂಜೂಷಾ ಚಂಡೆ ಬಳಗ ತಾರಾ ಆಚಾರ್ಯ, ಅಲೆವೂರು ಪಂಚಾಯತ್ ಸದಸ್ಯರಾದ ಶೇಖರ ಆಚಾರ್ಯ, ಸುಧಾಮ, ಪ್ರಶಾಂತ ಆಚಾರ್ಯ, ಪುಷ್ಪಲತಾ, ಶಕುಂತಳ, ಹರೀಶ್ ಶೇರಿಗಾರ್, ಉಪಾಧ್ಯಕ್ಷೆ ಜಯಲಕ್ಷ್ಮೀ ಮತ್ತು ಅಧ್ಯಕ್ಷ ಶ್ರೀಕಾಂತ ನಾಯಕ್ ಭಾಗವಹಿಸಿದ್ದರು.
Remembering Freedom Fighters Is the Duty of Every Indian: MP B.Y. Raghavendra
Kalpa Media House | SHIKARIPURA | Remembering the freedom fighters who fought against British rule, made immense sacrifices and secured...
Read moreDetails




