ಜಮುನಾಗರ್, ಆ.30: ಗುಜರಾತ್ ನ ಜಮುನಾಗರ್ ನಲ್ಲಿ ಮಹತ್ವದ ಎಸ್ ಎ ಯುಎನ್ ಐ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.
ಸೌರಾಷ್ಟ್ರ-ನರ್ಮದಾ ಅವರತಣ್ ನೀರಾವರಿ ಯೋಜನೆಯಾದ ಎಸ್ ಎ ಯುಎನ್ ಐ ಯೋಜನೆಗೆ 2012ರಲ್ಲಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ನಾಲ್ಕು ಹಂತಗಳ ಈ ಯೋಜನೆಯಲ್ಲಿ ಮೊದಲ ಹಂತದ ಯೋಜನೆಗೆ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ 10 ಅಣೆಕಟ್ಟುಗಳು ಸೇರಿವೆ.
ಸರ್ದಾರ್ ಸರೋವರ್ ಅಣೆಕಟ್ಟೆಯಿಂದ ಸೌರಾಷ್ಟ್ರ ಪ್ರಾಂತ್ಯಕ್ಕೆ ಚಾಲನ್ ಹಾಗೂ ಪೈಪ್ ಲೈನ್ ಮೂಲಕ ನೀರು ಸರಬರಾಜು ಹಾಗೂ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಈ ಯೋಜನೆ ರೂಪಿಸಲಾಗಿದೆ. ಸೌರಾಷ್ಟ್ರ ಪ್ರಾಂತ್ಯದ 4.13 ಲಕ್ಷ ಹೆಕ್ಟೇರ್ ಬರಗಾಲ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಮಹತ್ವದ ಯೋಜನೆ ಇದಾಗಿದೆ
Discussion about this post