ಜಲಂಧರ್, ಸೆ.26: ಧರ್ಮಗ್ರಂಥಗಳ ಪುಟಗಳು ಕಾಲುವೆ ನೀರಿನಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಪಂಜಾಬ್ನ ಜಲಂಧರ್ ಪಟ್ಟಣ ಉದ್ನಿಗ್ನವಾಗಿದೆ
ಗುರುಗ್ರಂಥ ಸಾಹಿಬ್ ಮತ್ತು ಭಗವದ್ಗೀತೆಯ ಅನೇಕ ಪುಟಗಳನ್ನು ಹರಿದು ಕಾಲುವೆಗೆ ಎಸೆಯಲಾಗಿದೆ. ಈ ಹಿನ್ನೆಲೆಯಲ್ಲಿ ಜಲಂಧರ್ನ ಕಪೂರ್ತಲಾ ಚೌಕದಲ್ಲಿ ಸಿಖ್ ತಾಲ್ಮೇಲ್ ಸಮಿತಿ ಮತ್ತು ಕೆಲವು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಉದ್ರಿಕ್ತತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಭಾರೀ ಸಂಖ್ಯೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.ಕಪೂರ್ತಲಾ ಚೌಕ ಸಮೀಪ ಶೇರ್ ಸಿಂಗ್ ಕಾಲನಿಯಲ್ಲಿನ ಬಿಷ್ಟ್ ದೋವಾಬ್ ಕಾಲುವೆಯಲ್ಲಿ ಗುರುಗ್ರಂಥ ಸಾಹಿಬ್ ಮತ್ತು ಭಗವದ್ಗೀತೆಯ ೨೦೦ಕ್ಕೂ ಹೆಚ್ಚು ಪುಟಗಳನ್ನು ಹರಿದು ಎಸೆಯಲಾಗಿರುವುದು ಕಂಡುಬಂದಿರುವುದಾಗಿ ವರದಿಯಾಗಿದೆ.
ಪ್ರತ್ಯಕ್ಷದರ್ಶಿ ಪ್ರಿನ್ಸ್ ಪಾಲ್ಸಿಂಗ್ ಪ್ರಕಾರ, ಎಂದಿನಂತೆ ನಾನು ಗುರುದ್ವಾರದಿಂದ ಮರಳಿ ಬರುತ್ತಿದ್ದೆ. ಆಗ ಈ ಗ್ರಂಥಗಳ ಪುಟಗಳು ಕಾಲುವೆಯಲ್ಲಿ ತೇಲುತ್ತಿದ್ದವು. ನಾನು ಹೀಗೆ ಅದನ್ನು ಕಂಡಿದ್ದು, ಇದೇ ಮೊದಲಬಾರಿ ಕಂಡಿದ್ದು ಎಂದಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಹಲವಾರು ಜನ ಧಾವಿಸಿ ಬಂದಿದ್ದಾರೆ. ತಡಮಾಡದೇ, ಕಾಲುವೆಗಿಳಿದು ಪವಿತ್ರ ಗ್ರಂಥಗಳ ಹರಿದ ಪುಟಗಳನ್ನು ಸಂಗ್ರಹಿಸತೊಡಗಿದ್ದಾರೆ.
ಈ ಘಟನೆಗೆ ವ್ಯಾಪಕ ಖಂಡನೆವ್ಯಕ್ತವಾಗಿದೆ. ಪಂಜಾಬ್ನ ಉಪ ಮುಖ್ಯಮಂತ್ರಿ ಸುಖಬೀರ್ ಬಾದಲ್ ಕಠೋರವಾಗಿ ಖಂಡಿಸಿದ್ದಾರೆ. ಜಲಂಧರ್ ಮಾಥ್ರವಲ್ಲದೇ ಸುತ್ತಮುತ್ತಲ ಪ್ರದೇಶದಲ್ಲೂ ಈ ವಿಚಾರ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಸೂಕ್ಷ್ಮ ಪರಿಸ್ಥಿತಿ ಇದ್ದು, ಪಂಜಾಬ್ ರಾಜ್ಯದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎನ್ನಲಾಗಿದೆ.
ಎಂದಿನಂತೆ ನಾನು ಗುರುದ್ವಾರದಿಂದ ಮರಳಿ ಬರುತ್ತಿದ್ದೆ. ಆಗ ಈ ಗ್ರಂಥಗಳ ಪುಟಗಳು ಕಾಲುವೆಯಲ್ಲಿ ತೇಲುತ್ತಿದ್ದವು. ನಾನು ಹೀಗೆ ಅದನ್ನು ಕಂಡಿದ್ದು, ಇದೇ ಮೊದಲಬಾರಿ ಕಂಡಿದ್ದು ಎಂದಿದ್ದಾರೆ .
– ಪ್ರಿನ್ಸ್ ಪಾಲ್ಸಿಂಗ್
ಪ್ರತ್ಯಕ್ಷದರ್ಶಿ
Discussion about this post