Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Army

ಬಣ್ಣ ಬೇಡ ಮಣ್ಣೇ ಸಾಕು!

September 4, 2016
in Army
0 0
0
Share on facebookShare on TwitterWhatsapp
Read - 2 minutes
ಈಗ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ. ವಿವಿಧ ರೀತಿಯ ಗಣಪನ ಮೂರ್ತಿಗಳು ಕಂಗೊಳಿಸುತ್ತಿವೆ. ಅಂಗೈ ಅಗಲದ ಪುಟ್ಟ ಮೂರ್ತಿಯಿಂದ ಹಿಡಿದು ಆಳೆತ್ತರದ ದೊಡ್ಡ ವಿಗ್ರಹಗಳು ಸಾಲುಸಾಲಾಗಿ ಮಾರಾಟಕ್ಕಿದೆ. ಬೇರೆ ಬೇರೆ ವರ್ಣಾಂಕಲಾರಗಳಲ್ಲಿ ರಾರಾಜಿಸುತ್ತಿರುವ ವಿನಾಯಕನ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ ಬಣ್ಣ ಬಣ್ಣದ ಗಣಪತಿ, ಪಟಗುಟ್ಟುವ ಪಟಾಕಿ ಖರೀದಿಯಲ್ಲಿ ಹಲವರು ಮಗ್ನರಾಗಿದ್ದಾರೆ. ಆದರೆ ಹಬ್ಬದ ಮೋಜು ತರುವ ಅಪಾಯಗಳ ಬಗ್ಗೆಯೂ ಎಚ್ಚರ ವಹಿಸುವುದು ಅಗತ್ಯ.
ರಂಗುರಂಗಿನ ಗಣಪನ ಮೂರ್ತಿಗೆ ಎಲ್ಲಿಲ್ಲದ ಬೇಡಿಕೆ. ನಮ್ಮಲ್ಲಿಂದ ವಿದೇಶಕ್ಕೂ ಇವು ರಫ್ತಾಗುತ್ತವೆ. ಬೇಡಿಕೆ ಹೆಚ್ಚಿರುವುದರಿಂದ ಕೈಯಿಂದ ಮೂರ್ತಿ ಮಾಡುವ ಬದಲು ಅಚ್ಚು ಉಪಯೋಗಿಸುತ್ತಾರೆ. ಹೀಗೆ ಅಚ್ಚಿನಿಂದ ತಯಾರಾದ ಗಣಪನಿಗೆ ಮೆಟಲ್ ಪೇಂಟ್ ಹಚ್ಚುತ್ತಾರೆ. ೧೦೦ ಗ್ರಾಂ ಸೀಸ ಇರುತ್ತದೆ. ಇದು ವಿಷಕಾರಕ ವಸ್ತು ಪರಿಸರ ಹಾಗೂ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಿಪ್ಸಂ, ಸಲ್ಪರ್, ಪಾಸ್ಪರಸ್ ಮತ್ತು ಮ್ಯಾಗ್ನಿಷಿಯಂ ಒಳಗೊಂಡ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳಂತೂ ಹಾನಿಕಾರಕ ಅಂಶಗಳ ಆಗರ.
ಇಂಥ ಬಣ್ಣ ಹಚ್ಚಿದ ಮೂರ್ತಿಗಳನ್ನು ಕೆರೆ ಅಥವಾ ನದಿಯಲ್ಲಿ ವಿಸರ್ಜಿಸಿದರೆ ಅಲ್ಲಿರುವ ಜಲಚರಗಳ ಗತಿ ಏನು? ಆ ನೀರು ಕುಡಿದರೆ ಮನುಷ್ಯನ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮವಾದೀತು ಎಂಬುದನ್ನು ಯೋಚಿಸಿದ್ದೀರಾ?
ಬಣ್ಣದಲ್ಲಿರುವ ಸೀಸದ ಅಂಶ ನೇರವಾಗಿ ನಮ್ಮ ದೇಹಕ್ಕೆ ಹೋಗದಿರಬಹುದು. ಆದರೆ ಉಸಿರಾಟದ ಮೂಲಕ ಅದರಲ್ಲಿರುವ ಹಾನಿಕಾರಕ ಅಂಶಗಳು ದೇಹದೊಳಗೆ ಸೇರಿಬಿಡುತ್ತವೆ.
ನೇರ ಪರಿಣಾಮ
ಸೀಸದ ವ್ಯತಿರಿಕ್ತ ಪರಿಣಾಮ ಮೊದಲು ಕಾಣಿಸಿಕೊಳ್ಳುವುದೇ ಮಕ್ಕಳಲ್ಲಿ ಅದರಲ್ಲೂ ಆರು ವರ್ಷದೊಳಗಿನ ಪುಟಾಣಿಗಳ ಮೇಲೆ ಇದರ ಪ್ರಭಾವ ಬಹುಬೇಗನೇ ಆಗುತ್ತದೆ. ಅವರ ಮಿದುಳು ಮತ್ತು ನರಮಂಡಲದ ಮೇಲೆ ಇದುನೇರ ಪರಿಣಾಮ ಬೀರುತ್ತದೆ. ಇದರ ಫಲವಾಗಿ ಗ್ರಹಣಶಕ್ತಿ ಕ್ಷೀಣಿಸಿವಿಕೆ, ಏಕಾಗ್ರತೆ ಕೊರತೆ, ಶಾರೀರಿಕ ಬೆಳವಣಿಗೆ ಕುಂಠಿತಗೊಳ್ಳುವುದು, ಬುದ್ಧಿಮಾಂದ್ಯತೆ ಮೊದಲಾದ ಸಮಸ್ಯೆಗಳು ತಲೆದೋರುತ್ತವೆ. ಇದಲ್ಲದೇ ಮೂತ್ರಪಿಂಡದ ತೊಂದರೆಗೂ ಕಾರಣವಾಗುತ್ತದೆ. ಜತೆಗೆ ಸಂತಾನಹೀನತೆ ಹಾಗೂ ಅಧಿಕ ರಕ್ತದೊತ್ತಡಕ್ಕೂ ದಾರಿ ಮಾಡಿಕೊಡುತ್ತದೆ.
ಗಣಪತಿ ಅಪ್ಪಟ ಮಣ್ಣಿನ ಮಗ-ಮಣ್ಣಲ್ಲಿ ಏನಿಲ್ಲ? ಎಲ್ಲಾ ಇದೆ. ರೋಗ-ರುಜಿನ ತರಬಲ್ಲ ರೋಗಾಣುಗಳಿವೆ. ಬಾತಿನ ತತ್ತಿಗಳಿವೆ, ಪರೋಪಕಾರಿ ಜೀವಿಗಳಿವೆ. ಇಂಥ ಮಣ್ಣನ್ನೇ ತಿದ್ದಿ ತೀಡಿ ಗಣಪತಿ ಮೂರ್ತಿಯನ್ನು ಕಲಾವಿದರು ತಯಾರಿಸುತ್ತಾರೆ. ಮನಮೋಹಕ ಬಣ್ಣ ಬಳಿಯುತ್ತಾರೆ. ಮಿಂಚು ಹೆಚ್ಚಲು ಸುನೇರಿ ಹಚ್ಚುತ್ತಾರೆ. ಭಕ್ತಿ-ಭಾವುಕತೆಗಳ ಗಡಿ ಮೀರಿ ವೈಜ್ಞಾನಿಕ ವಿಶ್ಲೇಷಣೆ ಮಾಡಿದಾಗ ವಿಷರಾಸಾಯನಿಕಗಳ ರಸಗಟ್ಟಿ.
ಕಲಾವಿದರು ಈ ವಿಷ ವಸ್ತುಗಳಿಗೆ ನೇರವಾಗಿ ಬಲಿಯಾಗುತ್ತಾರೆ. ಭಕ್ತ ಸಮೂಹ ಗಣಪತಿ ವಿಸರ್ಜಿಸಿದ ಬಾವಿ, ಹೆರೆ, ಹೊಂಡಗಳಲ್ಲಿಯ ನೀರು ಸೇವಿಸುವ ಮೂಲಕ ಹೊಟ್ಟೆ ತೊಳೆಸುವಿಕೆ, ವಾಂತಿ, ಭೇಧಿ, ಕಾಮಾಲೆ, ಟೈಫಾಯಿಡ್ ಹಾವಳಿಗೆ ಒಳಗಾಗಬೇಕಾಗುತ್ತದೆ.
ಪರಿಹಾರವೇನು?
ರಾಸಾಯನಿಕ ಬಣ್ಣ ಹಚ್ಚಿದ ಮೂರ್ತಿಗೆ ಬದಲು ಕೇವಲ ಮಣ್ಣಿನ ಮೂರ್ತಿಯನ್ನು ಖರೀದಿಸಿ ಅರಿಶಿನ, ಕುಂಕುಮ ಮತ್ತಿತರ ಸಾವಯವ ಬಣ್ಣ ಹಚ್ಚಿ ವರ್ಣ ವಿನ್ಯಾಸ ಮಾಡಬಹುದಲ್ಲ.
ನಗರದಲ್ಲಿನ ಒತ್ತಡದ ಬದುಕಿನಲ್ಲಿ ಇದಕ್ಕೆಲ್ಲ ಸಮಯ ಹೊಂದಿಸಿಕೊಳ್ಳುವುದು ಕಷ್ಟ. ಆದರೆ ಪೇಟೆಯಲ್ಲಿ ಸಾವಯವ ಬಣ್ಣದಿಂದ ಅಲಂಕರಿಸಿದ ಮೂರ್ತಿಗಳು ಸಿಗುತ್ತವೆ. ಕೆಲವು ಕಡೆ ವಿಚಾರಿಸಿ ಖರೀದಿ ಮಾಡಬೇಕು ಅಷ್ಟೆ.
ನಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣಪ ಎಲ್ಲರಿಗೂ ಶುಭದಾಯಕವಾಗಬೇಕೆ ಹೊರತು ಇತರರಿಗೆ ಕಿರಿಕಿರಿಯುಂಟು ಮಾಡಬಾರದು. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ನೋಡಲು ಸುಂದರವಾಗಿರುತ್ತಾದರೂ, ನೀರಿನಲ್ಲಿ ಮುಳುಗದೆ ತ್ಯಾಜ್ಯವಾಗುತ್ತದೆ. ಕೆರೆಯ ಹೂಳಿನೊಂದಿಗೆ ಸೇರಿ ಮಾಲಿನ್ಯ ಸಮಸ್ಯೆಗೆ ತನ್ನ ಕೊಡುಗೆ ನೀಡುತ್ತದೆ. ಇದರಿಂದ ಯಾರಿಗೆ ಲಾಭ ಎಂಬುದನ್ನು ಮನಗಾಣಬೇಕು.
ಮೂರ್ತಿಗಳಿಗೆ ಹಚ್ಚುವ ಹಾನಿಕಾರಕ ಬಣ್ಣಗಳ ಬಗ್ಗೆ ದಶಕದ ಹಿಂದೆಯೇ ಕೆಲವರಲ್ಲಿ ಜಾಗೃತಿ ಮೂಡಿತ್ತು. ಅದು ಈಗ ಚಳುವಳಿ ರೂಪ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಹಲವು ಪರಿಸರಪ್ರಿಯ ಸಂಘಟನೆಗಳು ಹೆಗಲುಕೊಟ್ಟಿವೆ.
ನೀರಿಗೆ ಹಾನಿ ಉಂಟುಮಾಡದ ರಾಸಾಯನಿಕ ಬಣ್ಣ ಹೊಂದಿರುವ ಮೂರ್ತಿಗಳನ್ನು ಕೊಂಡು ಪೂಜಿಸಬೇಕು. ಪುಟ್ಟ ಮೂರ್ತಿಗಳನ್ನು ಮನೆಯ ತೊಟ್ಟಿ ಅಥವಾ ಹತ್ತಿರದ ಬಾವಿ-ಹೊಂಡಗಳಲ್ಲೇ ವಿಸರ್ಜಿಸಬಹುದು. ಇದರಿಂದ ನೀರು ಕೂಡ ಮಲಿನವಾಗುವುದಿಲ್ಲ. ಮೂರ್ತಿ ತಯಾರಕರಿಗೆ ಹಾಗೂ ಮಾರಾಟಗಾರರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಜತೆಗೆ ಇಂಥ ಬಣ್ಣಗಳನ್ನು ಬಳಸದಿರುವಂತೆ ಎಚ್ಚರಿಕೆ ನೀಡಬೇಕು.
ಸಾಮಾನ್ಯ ಪ್ರಜ್ಞೆಗೆ ನಿಲುಕವಂತಹ ವಿಷಯಗಳನ್ನು ಮಾರ್ಗ ಸೂಚಿ ಮೂಲಕ ಅರಿವು ಉಂಟುಮಾಡುವ ಸರ್ಕಾರದ  ನಿರಂತರ ಯತ್ನ ನೀರಿನಲ್ಲಿ ಹೋಮ ಮಾಡಿದಷ್ಟೇ ನಿಷ್ಪ್ರಯೋಜಕವಾಗಿ, ನಮ್ಮ ದುರ್ನಡತೆ ಮೇಲುಗೈ ಸಾಧಿಸುತ್ತಲೆ ಇದೆ.
ಪರಿಸರಸ್ನೇಹಿ ಗಣಪನನ್ನು ಪೂಜಿಸಿ ಮಾಲಿನ್ಯಕ್ಕೆ ಕಡಿವಾಣ ಹಾಕೋಣ.
 
ಅಪ್ಪಟ ಮಣ್ಣಿನ ಮಗು-ಬೇಡ ಬಣ್ಣಗಳ ಬೆಡಗು
ಗೌರಿ-ಗಣೇಶ ಹಬ್ಬ ಸಮೃದ್ಧಿ ಹಾಗೂ ಸಹಬಾಳ್ವೆಯ ಸಂಕೇತವಾಗಿ ಆಚರಿಸಲಾಗುತ್ತದೆ. ಸಂಭ್ರಮಾಚರಣೆಯಿಂದ ಪರಿಸರಕ್ಕೆ ಹಾನಿಯುಂಟಾಗದಿರಲಿ. ಪರಿಸರ ಸಂರಕ್ಷಣೆ  ಇಡೀ ಸಮುದಾಯದ ಜವಾಬ್ದಾರಿ – ಹಬ್ಬದ ಸಡಗರದೊಡನೆ ಈ ಅಂಶಗಳು ನಿಮ್ಮ ನೆನಪಲ್ಲಿರಲಿ.
*ಶ್ರದ್ಧಾ ಭಕ್ತಿಯೇ ಗಣೇಶೋತ್ಸವದ ತಿರುಳಾಗಬೇಕು, ಆಡಂಬರವಲ್ಲ. 
*ಚೆಂದಕ್ಕೆ ಮಹತ್ವ ಕೊಡದೆ ಸತ್ವಕ್ಕೆ ಪ್ರಾಶಸ್ತ್ಯ ಕೊಟ್ಟು ಬಣ್ಣವಿರದ ಮಣ್ಣಿನ ಸಣ್ಣ ಮೂರ್ತಿ ತಂದು ಪೂಜಿಸಿ.  
*ಪಾಲಿಕೆ ರೂಪಿಸಿರುವ ಮೊಬೈಲ್ ಟ್ಯಾಂಕ್‌ನಲ್ಲಿ ಅಥವಾ ನಿಮ್ಮ ಮನೆಯ ಬಕೆಟ್‌ಗಳಲ್ಲೇ ವಿಸರ್ಜಿಸಿ
* ಶಬ್ದ, ವಾಯುಮಾಲಿನ್ಯ ಮಾಡುವ ಪಟಾಕಿ ಸಿಡಿಸದೇ ಸಂಪದ್ಭರಿತ ಪರಿಸರ ಸಂರಕ್ಷಿಸಿ. 
* ಗಣಪತಿ ನಿಸರ್ಗದ ಸೃಷ್ಠಿ: ಪ್ರಾಕೃತಿಕವಾಗಿ ದೊರೆಯುವ ವಸ್ತುಗಳಿಂದ ಆರಾಧಿಸಿ. 
* ಉತ್ಸವಕ್ಕಾಗಿ ಪೆಂಡಾಲ್ ಹಾಕಲು ರಸ್ತೆ ಅಗೆಯಬೇಡಿ. 
*ನೀರು ವಿದ್ಯುತ್ ಮಿತವಾಗಿ ಬಳಸಿ ಸ್ವಚ್ಛತೆ ಕಾಪಾಡಿ.
ಲೇಖಕರು: ಗುರುರಾಜ ಪೋಶೆಟ್ಟಿಹಳ್ಳಿ, 
ಯುವ ಅಧ್ಯಾತ್ಮ ಚಿಂತಕರು,
ಬೆಂಗಳೂರು.
ಗಣೇಶನ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಇದೇ ಲೇಖಕರ ನೂತನ ಕೃತಿ – ವಿಶ್ವವಂದಿತ ವಿನಾಯಕ ನೋಡಬಹುದು.
 vishwavinayaka108.blogspot.com 
Previous Post

ಎಂತಹಾ ವಿಷವನ್ನು ಕರಗಿಸುವ ಶಕ್ತಿ ಗೋಮೂತ್ರದಲ್ಲಿದೆ: ರಾಘವೇಶ್ವರ ಶ್ರೀ

Next Post

ಮುಖ್ಯಮಂತ್ರಿ ಕನಸಲ್ಲಿ ನವಜೋತ್ ಸಿಂಗ್ ಸಿಧು!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮುಖ್ಯಮಂತ್ರಿ ಕನಸಲ್ಲಿ ನವಜೋತ್ ಸಿಂಗ್ ಸಿಧು!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025

A Divine Journey to South India on Bharat Gaurav Train Here is the full details of tour

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!