Read - < 1 minute
ವಿಎಂಟೈನ್, ಸೆ.೮: ಪಾಕಿಸ್ಥಾನದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ಈ ಪ್ರದೇಶದ ಭೂಭಾಗಕ್ಕೆ ಭಯೋತ್ಪಾದನೆಯ ರಫ್ತು ಸಮಾನವಾದ ಬೆದರಿಕೆ ಎಂದಿದ್ದಾರೆ.
ಭಯೋತ್ಪಾದನೆಯ ರಫ್ತು, ಬೆಳೆಯುತ್ತಿರುವ ತೀವ್ರವಾದ ಮತ್ತು ತೀವ್ರ ಹಿಂಸೆ ಹರಡುತ್ತಿರುವುದು ನಮ್ಮ ಸಮಾಜಗಳಿಗೆ ಸಮಾನವಾದ ಭದ್ರತಾ ಅಪಾಯಗಳಾಗಿವೆ ಎಂದು ೧೪ ನೆಯ ಭಾರತ ಮತ್ತು ದಕ್ಷಿಣ ಪೂರ್ವ ಏಷ್ಯಾ ದೇಶಗಳ ಸಂಘ (ಏಷ್ಯನ್) ಸಮಾವೇಶದಲ್ಲಿ ಭಾಷಣ ಮಾಡುವಾಗ ಹೇಳಿದ್ದಾರೆ.
ಭಾರತ ಪೂರ್ವ ನೀತಿಗೆ ಏಷ್ಯನ್ ಕೇಂದ್ರವಾಗಿದ್ದು, ದಕ್ಷಿಣ ಪೂರ್ವ ಏಷ್ಯಾದ ಜೊತೆಗಿನ ಭಾರತದ ಸಂಬಂಧ ಸೌಹಾರ್ದತೆಯ ಮೂಲ ಎಂದು ಮೋದಿ ಬಣ್ಣಿಸಿದ್ದಾರೆ.
ಭಾರತ ಮತ್ತು ದಕ್ಷಿಣ ಪೂರ್ವ ಏಷ್ಯಾ ದೇಶಗಳ ಸಂಘ (ಏಷ್ಯನ್) ಸಮಾವೇಶದ ನಂತರ ೧೧ ನೆಯ ಪೂರ್ವ ಏಷಿಯಾ ಸಮಾವೇಶ ಇಂದು ಜರುಗಿತು.
ಇದಕ್ಕೂ ಮುಂಚಿತವಾಗಿ ಅತಿಥಿ ರಾಷ್ಟ್ರ ಲಾವೋಸ್ನ ಪ್ರಧಾನಿ ತೊಂಗಲೌನ್ ಸಿಸೌಲಿಥ್ ಜೊತೆಗೆ ಮೋದಿ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.
ಸಮಾವೇಶಗಳ ನಂತರ ಮೋದಿ ದಕ್ಷಿಣ ಕೊರಿಯಾ ಅಧ್ಯಕ್ಷ ಪಾರ್ಕ್ ಜಿಯುನ್ ಹೇ, ಮ್ಯನ್ಮಾರ್ನ ಸ್ಟೇಟ್ ಕೌನ್ಸಲರ್ ಮತ್ತು ವಿದೇಶಾಂಗ ಸಚಿವೆ ಆಂಗ್ ಸ್ಯಾನ್ ಸು ಕಿ ಮತ್ತು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.
Discussion about this post