No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Wednesday, July 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ನೀ ಕನಸಿನೊಳಗೋ? ಕನಸು ನಿನ್ನೊಳಗೋ?

kalpa News by kalpa News
September 9, 2016
in Army
0
Share on FacebookShare on TwitterShare on WhatsApp
 “ಕನಸ್ಸು ಕಂಡೇನೇ.. ಮನದಲಿ ಕಳವಳ ಗೊಂಡೇನೇ..” ಎಂಬುದು ದಾಸವಾಣಿ. ರಾತ್ರಿ ಕಂಡ ಕನಸನ್ನು ಬೆಳಿಗ್ಗೆ ಮನೆಯವರೊಂದಿಗೆ ಮಾತನಾಡುವುದು ಸರ್ವೇ ಸಾಮಾನ್ಯ. ಕನಸುಗಳೇ ಹಾಗೆ. ಕೆಲವೊಮ್ಮೆ ಮನೋರಂಜಿಸುತ್ತವೆ, ಕೆಲವೊಮ್ಮೆ ಗೊಂದಲಿಸುತ್ತವೆ, ಇನ್ನೂ ಕೆಲವೊಮ್ಮೆ ವಿಲಕ್ಷಣವಾಗಿ ತೋರಲ್ಪಡುತ್ತವೆ. ಮಾರನೇ ದಿನ ನಮಗೆ ರಾತ್ರಿ ಬಿದ್ದ ಕನಸುಗಳು ನೆನಪಾದರೂ, ನೆನಪಾಗದೆ ಇದ್ದರೂ, ಕನಸುಗಳೇಕೆ ಬೀಳುತ್ತವೆ ? ಮೂಲತಃ ಕನಸುಗಳೆಂದರೇನು?
ಕನಸುಗಳೆಂದರೆ ಏನು?
ನಾವು ನಿದ್ರಿಸುವಾಗ ನಮ್ಮ ಮನಸ್ಸು ಸೃಷ್ಟಿಸುವ ಕಥೆ ಹಾಗು ಚಿತ್ರಣಗಳನ್ನು ಕನಸುಗಳೆನ್ನುತ್ತಾರೆ. ಕನಸುಗಳ ಬಗ್ಗೆ ಹಲವಾರು ಸಿದ್ದಾಂತಗಳಿದ್ದಾವೆ, ಆದರೆ ನೈಜವಾದ ಸಿದ್ದಾಂತದ ಬಗ್ಗೆ ಗೊಂದಲಗಳಿವೆ. ಕೆಲವು ಸಂಶೋಧಕರು ಕನಸುಗಳಿಗೆ ಸ್ಪಷ್ಟವಾದ ಅರ್ಥ ಅಥವಾ ಕಾರಣಗಳು ಇರುವುದಿಲ್ಲ, ಇವು ನಿದ್ರಾ ಮೆದುಳಿನ ಅಸಂಭದ್ದ ಕ್ರಿಯೆಗಳು ಎನ್ನುತ್ತಾರೆ. ಅಧ್ಯಯನಗಳ ಪ್ರಕಾರ ನಮ್ಮ ಆರೋಗ್ಯ ಮತ್ತು ಯೋಗಕ್ಷೇಮಗಳ ಮುಖ್ಯ ರೂವಾರಿ ಸುಖ ನಿದ್ರೆ ಮತ್ತು ಕನಸು. ಒಂದು ಅಧ್ಯಯನದ ಪ್ರಕಾರ ಕನಸುಕಾಣುತ್ತಿದ್ದ ವ್ಯಕ್ತಿಯನ್ನು ಸತತವಾಗಿಸಂಶೋಧಕರು ಎಚ್ಚರಗೊಳಿಸತೊಡಗಿದರು. ಕೆಲ ಸಮಯದ ನಂತರ ವ್ಯಕ್ತಿಯಲ್ಲಿ ಗಮನಿಸಿದ ಅಂಶಗಳು ಕೆಳಗಂಡಂತಿವೆ:
೧. ಒತ್ತಡ ಹೆಚ್ಚುವಿಕೆ.
೨. ಆತಂಕ.
೩. ಖಿನ್ನತೆ.
೪. ಏಕಾಗ್ರತೆ ಕಮ್ಮಿಯಾಗುವಿಕೆ.
೫. ಸಮನ್ವಯತೆ ಕಮ್ಮಿಯಾಗುವುದು.
೬. ತೂಕ ಹೆಚ್ಚಾಗುವುದು.
೭. ಭ್ರಮೆ ಜಾಸ್ತಿಯಾಗುವುದು.ತಜ್ಞರ ಪ್ರಕಾರ ಕನಸುಗಳಿಂದ ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕೆ ಹಲವಾರು ಉಪಯೋಗಗಳಿವೆ:
೧. ಜೀವನದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.
೨. ನೆನಪಿನಶಕ್ತಿ ಹೆಚ್ಚಿಸಲು.
೩. ಭಾವನೆಗಳನ್ನು ಪ್ರಕ್ರಿಯಿಸಲು.
ನೀವು ಮಲಗುವಾಗ ಸಮಸ್ಯೆಯಿಂದ ಕೂಡಿದ ಯೋಚನೆಗಳನ್ನಿಟ್ಟುಕೊಂಡಿದ್ದರೆ, ಏಳುವಾಗ ಪರಿಹಾರದೊಂದಿಗೆ ಏಳಲು ಸಹಾಯವಾಗುತ್ತದೆ ಅಥವಾ ಕೊನೆ ಪಕ್ಷ ಸಮಸ್ಯೆಯ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿರುತ್ತೀರಿ.

ಸೈಮೌಂಡ್ ಫ್ರಾಯ್ಡ್ ರವರ ಪ್ರಕಾರ ಅಜಾಗೃತ ಮನಸ್ಸಿನ ಕಿಟಕಿ “ಕನಸುಗಳು”. ಅವರ ಪ್ರಕಾರ ಕನಸುಗಳು ಒಬ್ಬ ಮನುಷ್ಯನ ಸುಪ್ತ ಮನಸ್ಸಿನ ಬೇಕು-ಬೇಡಗಳನ್ನು, ಯೋಚನೆಗಳನ್ನು ಮತ್ತು ಪ್ರೇರಣಾಗಳನ್ನು ಹೊರ ಹಾಕುತ್ತವೆ. ಆದರೆ ಈ ಎಲ್ಲ ಅಧ್ಯಯನಗಳ ಸಾರಾಂಶವಿಷ್ಟೆ. ಕೆಲವು ಕನಸುಗಳು ನಿಮ್ಮ ದಿನನಿತ್ಯದ ಯೋಚನೆಗಳನ್ನು ಮೆದುಳಿನೊಳಗೆ ಪ್ರಕ್ರಿಯಿಸುತ್ತವೆ. ಇನ್ನೂ ಕೆಲವು ನಮ್ಮ ದೈನಂದಿನ ಕ್ರಿಯೆಗೆ ತಕ್ಕಂತೆ ಅಂತೆಯೇ ಬೀಳುತ್ತವೆ. ಇನ್ನೂ ಸರಿಯಾದ ಉತ್ತರಕ್ಕಾಗಿ ಸಂಶೋಧಕರು ಇದರ ಬಗ್ಗೆ ಅಧ್ಯಯನ ನೆಡಸುತ್ತಿದ್ದಾರೆ.

ಭಯಾನಕ ಕನಸು(Nightmares)ಗಳೇಕೆ ಬೀಳುತ್ತವೆ?

ಕೆಟ್ಟ ಕನಸುಗಳು ಮಕ್ಕಳು ಮತ್ತು ದೊಡ್ಡವರಲ್ಲಿ ತುಂಬಾ ಸಹಜ. ಕೆಟ್ಟ ಕನಸು ಬೀಳುವುದಕ್ಕೆ ಕೆಲವು ಕಾರಣಗಳೆಂದರೆ :
೧. ಒತ್ತಡ, ಭಯ ಮತ್ತು ಮನಸ್ತಾಪ.
೨. ಭಾವನಾತ್ಮಕ ಸಮಸ್ಯೆಗಳು.
೩. ಅತಿಯಾದ ಔಷಧಿಗಳ ಬಳಕೆ.
೪. ಅನಾರೋಗ್ಯ ಸಮಸ್ಯೆ.

ನಿಮಗೆ ಪದೇ-ಪದೇ ಭಯಾನಕ ಕನಸುಗಳು ಬೀಳುತ್ತಿದ್ದರೆ, ನಿಮ್ಮ ಸುಪ್ತ ಮನಸ್ಸು ನಿಮಗೆನನ್ನೋ ಹೇಳಲು ಪ್ರಯತ್ನಿಸುತ್ತಿರಬಹುದು. ಸುಪ್ತ ಮನಸ್ಸಿನ ಕಡೆ ಗಮನ ಕೊಡಿ. ನೀವು ಅದನ್ನು ಕಂಡು ಹಿಡಿಯುವಲ್ಲಿ ವಿಫಲರಾಗಿದ್ದರೆ, ಮಾನಸಿಕ ತಜ್ಞರನ್ನು ಭೇಟಿ ಮಾಡಿ. ನೆನಪಿನಲ್ಲಿಡಿ, ಕನಸು ಎಷ್ಟೇ ಭಯಾನಕವಾಗಿದ್ದರೂ ಕೂಡ ಅದು ಕನಸಷ್ಟೇ. ನಿಜ ಜೀವನದಲ್ಲಿ ಅದರಿಂದ ಏನೂ ಬದಲಾಗುವುದಿಲ್ಲ.

ಸ್ಪಷ್ಟ ಕನಸು (Lucid Dreams)ಗಳೇಕೆ ಬೀಳುತ್ತವೆ?

ನಿಮಗೆ ಎಂದಾದರೂ ಕನಸು ಬೀಳುವಾಗ, ಕನಸಿನ ಅರಿವಾಗಿದ್ದುಂಟೇ? ಇದನ್ನೇ ಲ್ಯೂಸಿಡ್ ಡ್ರೀಮ್ಸ್ ಎನ್ನುತ್ತಾರೆ. ಅಧ್ಯಯನದ ಪ್ರಕಾರ ನಿದ್ರಾ ಸಮಯದಲ್ಲಿ ಪ್ರಕ್ಷುಬ್ಧವಾಗಿರಬೇಕಾದ ಮೆದುಳಿನ ಭಾಗಗಳು ಕ್ರಿಯಾಶೀಲವಾದಾಗ ಈ ತರಹದ ಕನಸುಗಳು ಬೀಳುತ್ತವೆ. ಮನುಷ್ಯ ‘ಕಣ್ಣಿನ ತೀವ್ರಗತಿಯ ಚಲನೆ’ ನಿದ್ರೆ (REM sleep) ಮತ್ತು ಎಚ್ಚರವಿರುವ ಹಂತಗಳ ಮಧ್ಯೆಯಿದ್ದಾಗ ಇಂಥಾ ಕನಸುಗಳು ಬೀಳುತ್ತವೆ. ಲ್ಯೂಸಿಡ್ ಕನಸುಗಳನ್ನು ಕಾಣುವ ವ್ಯಕ್ತಿಗಳು ತಮ್ಮ ಕನಸಿನ ಧಿಕ್ಕನ್ನು ಬದಲಿಸಬಲ್ಲರು.

ಕನಸುಗಳು ಭವಿಷ್ಯವನ್ನು ಹೇಳುತ್ತವೆಯೇ?
ಹಲವಾರು ಉದಾಹರಣೆಗಳಲ್ಲಿ ಬಿದ್ದ ಕನಸುಗಳು ನಿಜ ಜೀವನದಲ್ಲೂ ಕೂಡ ನೆಡೆದಿವೆ. ಸಂಶೋಧಕರ ಪ್ರಕಾರ ಕನಸುಗಳು ನಿಜವಾದಲ್ಲಿ ಅದಕ್ಕೆ ಕಾರಣಗಳಿವಿರಬಹುದು:

೧. ಕಾಕತಾಳೀಯ.
೨. ದೋಷಯುಕ್ತ ನೆನಪು.
೩. ಸುಪ್ತ ಮನಸ್ಸಿನ ಮತ್ತು ಗೊತ್ತಿರುವ ಆಲೋಚನೆಗಳನ್ನು link ಮಾಡಿರುವುದಾಗಿರಬಹುದು.
ಕೆಲವೊಮ್ಮೆ ಕನಸುಗಳು ನಮ್ಮ ಜೀವನದ ದಿಕ್ಕನ್ನು ಬದಲಿಸುವಲ್ಲಿಗೆ ಪ್ರೇರೇಪಿಸಬಲ್ಲವು. ದಿಕ್ಕನ್ನು ಬದಲಿಸಬಲ್ಲ ಕನಸುಗಳು ಒಂದು ರೀತಿಯಲ್ಲಿ ಭವಿಷ್ಯ ನುಡಿದಂತಲ್ಲವೇ?
ಕನಸುಗಳು ಹೇಗೇ ಇದ್ದರೂ, ಭವಿಷ್ಯವನ್ನು ಹೇಳದೇ ಇದ್ದರೂ ಅವು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಕೊನೆ ಪಕ್ಷ ಒಂದಾದರೂ ಕನಸು ಮರೆಯಲಾಗದ್ದಿರುತ್ತದೆ. ಹಾಸ್ಯ ಭರಿತವಾದ ಅದೆಷ್ಟೋ ಕನಸುಗಳು ನಮ್ಮನ್ನು ರಂಜಿಸಿರುತ್ತವೆ. ಗೊತ್ತಿಲ್ಲದ ಅದೆಷ್ಟೋ ವ್ಯಕ್ತಿಗಳನ್ನು ಕನಸಿನಲ್ಲಿ ಭೇಟಿ ಮಾಡಿರುತ್ತೇವೆ. ಯಾವುದಕ್ಕೂ ಹೆದರದ ವ್ಯಕ್ತಿಯನ್ನ ಕನಸು ಬೆಚ್ಚಿ ಬೀಳಿಸಿರುತ್ತದೆ. ಅಂತಹ ಭಿನ್ನ-ವಿಭಿನ್ನ ಕನಸುಗಳ ವಿಸ್ಮಯವನ್ನು ಸೃಷ್ಟಿಸಿದ ನಿಸರ್ಗೆಗೊಂದು ಸಲಾಮು. .
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಈ ವಾರ ತೆರೆಗೆ `ಗೋಲಿಸೋಡ’ 

Next Post

ಜಯಮ್ಮನಿಗೆ ಇನ್ನೂ 61 ಟಿಎಂಸಿ ನೀರು ಬೇಕಂತೆ: ಮತ್ತೆ ಕ್ಯಾತೆ ತೆಗೆದ ‘ಅಮ್ಮಾ’

kalpa News

kalpa News

Next Post

ಜಯಮ್ಮನಿಗೆ ಇನ್ನೂ 61 ಟಿಎಂಸಿ ನೀರು ಬೇಕಂತೆ: ಮತ್ತೆ ಕ್ಯಾತೆ ತೆಗೆದ ‘ಅಮ್ಮಾ’

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL