ಬೆಂಗಳೂರು: ಅ:28: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬೋಯಿ ಸಮುದಾಯ ಅಸ್ಪೃಶ್ಯ ಸಮುದಾಯಕ್ಕೆ ಸೇರದೆ ಇರುವುದರಿಂದ ಈ ಸಮುದಾಯಕ್ಕೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ನೀಡುವ ಅಗತ್ಯ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರ ನೇತೃತ್ವದ ಸದನ ಸಮಿತಿ ವರದಿ ನೀಡಿದೆ.
ಇಂದು ವಿಧಾನಸೌಧದಲ್ಲಿ ವಿಧಾನ ಪರಿಷತ್ ಅಧ್ಯಕ್ಷ ಡಿ.ಹೆಚ್.ಶಂಕರ ಮೂತರ್ಿ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ ಅವರು, ರಾಜ್ಯದಲ್ಲಿ ಭೋವಿ ಸಮುದಾಯವನ್ನು ಪರಿಶಿಷ್ಠ ಜಾತಿ ಪಟ್ಟಿಗೆ ಸೇರಿಸಲಾಗಿದೆ. ಅದರಂತೆ ಆ ಸಮುದಾಯ ಮೀಸಲಾತಿ ಸೌಲಭ್ಯ ಪಡೆಯುತ್ತಿದೆ. ಬೋಯಿ ಸಮುದಾಯ ಮೂಲತಃ ವಡ್ಡರ ಜಾತಿಯ ಕಲ್ಲು ವಡ್ಡ, ಮಣ್ಣು ವಡ್ಡ, ತೆಲುಗು ವಡ್ಡ ಉಪ ಪಂಗಡಗಳ ಸಮೀಶ್ರಣವಾಗಿದೆ. 1944ರಲ್ಲಿ ವಡ್ಡ ಜನಾಂಗದವರು ದಾವಣಗೆರೆಯಲ್ಲಿ ಸಮಾವೇಶ ನಡೆಸಿ ತಮ್ಮನ್ನು ಬೋಯಿ ಎಂದು ಕರೆಯಬೇಕು ಎಂದು ನಿರ್ಣಯ ತೆಗೆದುಕೊಂಡಿದ್ದಾರೆ. ಅದಂತೆ ಆಗಿನ ಮಹಾರಾಜರು 1946ರ ಫೆ.1ರಂದು ವಡ್ಡ ಸಮುದಾಯವನ್ನು ಬೋಯಿ ಎಂದು ಗುರುತಿಸಿ ಗೆಜೆಟ್ ಹೋರಡಿಸಿದ್ದಾರೆ. ನಂತರದ ದಿನಗಳಲ್ಲಿ ಬೋಯಿ ಆಡು ಮಾತಿನಿಂದ ಬೋವಿಯಾಗಿ ಬದಲಾಗಿದ್ದು, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ವಡ್ಡರ ಸಮುದಾಯ ಎಂದು ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗಿದೆ. ಬೋಯಿ ಸಮುದಾಯ ಈಗಲೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 1ರ ಮೀಸಲಾತಿ ಸೌಲಭ್ಯ ಪಡೆಯುತ್ತಿದೆ ಎಂದು ಹೇಳಿದರು.
ಬೋಯಿ ಜನಾಂಗ ಆಥರ್ಿಕವಾಗಿ ಹಿಂದುಳಿದಿದೆ ಅದರೆ ಅಸ್ಪೃಶ್ಯ ಜಾತಿಯಲ್ಲ ಎಂದು ಸ್ಪಷ್ಟ ಪಡಿಸಿದರು.
ಐವಾನ್ ಡಿಸೋಜಾ, ಲಕ್ಷ್ಮಿನಾರಾಯಣ್, ಧರ್ಮಸೇನ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಿಬಿಐ ಸಂಸ್ಥೆ ದುರುಪಯೋಗ: ವಿಎಸ್ ಉಗ್ರಪ್ಪ ಆರೋಪ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಿಕ್ಬ್ಯಾಕ್ ಪ್ರಕರಣದಲ್ಲಿ ಖುಲಾಸೆಗೊಳ್ಳಲು ಸಿಬಿಐ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಪ್ರಾಥಮಿಕ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಆರೋಪವನ್ನು ಸಾಬೀತು ಪಡಿಸುವಂತಹ ಸಾಕ್ಷ್ಯಗಳಿವೆ ಎಂದು ಹೇಳಿದ್ದ ಸಿಬಿಐ ಅಂತಿಮ ವಿಚಾರಣೆಯ ವೇಳೆಗೆ ನ್ಯಾಯಾಲಯಕ್ಕೆ ಸಾಕ್ಷ್ಯಗಳನ್ನು ಒದಗಿಸಲು ವಿಫಲವಾಗಿದೆ. ಮೊದಲಿದ್ದ ಸಾಕ್ಷ್ಯಗಳ ಅಂತಿಮ ಹಂತದಲ್ಲಿ ಇಲ್ಲವಾಗಲು ಕಾರಣ ಏನು ಎಂದು ಸಿಬಿಐ ಮತ್ತು ಯಡಿಯೂರಪ್ಪ ಅವರೆ ಹೇಳಬೇಕು ಎಂದು ಅವರು ಆಗ್ರಹಿಸಿದರು.
ಆರೋಪ ಮುಕ್ತರಾಗಿರುವುದಾಗಿ ಸಂಭ್ರಮಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಸತ್ಯಹರಿಶ್ಚಂದ್ರರಲ್ಲ. ಯಡಿಯೂರಪ್ಪ ಅವರ ಕುಟುಂಬದ ಒಡೆತನದ ಪ್ರೇರಣಾ ಟ್ರಸ್ಟ್ಗೆ ಜಿಂದಾಲ್ ಸಂಸ್ಥೆ 20 ಕೋಟಿ ಹಣ ನೀಡಿದ್ದು ಏಕೆ. 20ಲಕ್ಷ ರೂ.ಗೆ ಖರೀದಿಸಿದ್ದ ಒಂದು ಎಕರೆಯನ್ನು ಜಿಂದಾಲ್ ಸಂಸ್ಥೆಗೆ 20 ಕೋಟಿಗೆ ಮಾರಾಟ ಮಾಡಿದ್ದು ಹೇಗೆ ಎಂದು ಉಗ್ರಪ್ಪ ಪ್ರಶ್ನಿಸಿದರು. ಯಡಿಯೂರಪ್ಪ ಪ್ರತಿ ಬಾರಿ ಎರಡು ಬೆರಳುಗಳನ್ನು ಪ್ರದರ್ಶಿಸಿ ತೋರಿಸುವ ಚಿಹ್ನೆ ವಿಕ್ಟರಿಯದಲ್ಲ, ವ್ಯವಸ್ಥೆಯನ್ನು ತಿರುವು ಮುರುವು ಮಾಡಿ ಯಶಸ್ವಿಯಾದ ಅಹಂಮಿಕೆಯಿಂದ ಪ್ರದರ್ಶನವಾಗಿದೆ ಎಂದರು.
ಇತ್ತೀಚೆಗೆ ವಿಧಾನಸೌಧದ ಬಳಿ ದೊರೆತ ಎರಡು ಕೋಟಿ ಹಣ ಎಲ್ಲಿಗೆ ಮುಟ್ಟುತ್ತಿತ್ತು ಎಂಬುದರ ಬಗ್ಗೆ ಎಚ್.ಡಿ.ಕುಮಾರಸ್ವಾಮಿಯವರು ಶಂಕೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾದರೆ ಸತ್ಯಾಂಶ ಹೊರಬೀಳುತ್ತದೆ. ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಯಡಿಯೂರಪ್ಪ ಅವರ ಆಸ್ತಿ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾದ ನಂತರ ನೂರಾರು ಪಟ್ಟು ಹೆಚ್ಚಾಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದರು.
ಬಿಎಸ್ವೈ ಅವಧಿಯಲ್ಲಿ ಒಂದು ಲಕ್ಷ ಕೋಟಿಯಷ್ಟು ಮೌಲ್ಯದ ಅದಿರು ಲೂಟಿಯಾಗಿದೆ. ಪ್ರಕರಣದಿಂದ ಖುಲಾಸೆಯಾದರೂ ಯಡಿಯೂರಪ್ಪ ಅವರಿಗೆ ಆತ್ಮಸಾಕ್ಷಿ ಎಂಬುದು ಇದ್ದರೆ ಅದನ್ನು ಕೇಳಿಕೊಳ್ಳಲಿ ಎಂದು ಅವರು ಹೇಳಿದರು.
Discussion about this post