No Result
View All Result
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ
English Articles

Ramachandrapura Seer Hails PM Narendra Modi’s Leadership

by ಕಲ್ಪ ನ್ಯೂಸ್
June 10, 2026
0

Kalpa Media House  |  Honavar/Sagara  | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...

Read moreDetails
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
  • Advertise With Us
  • Grievances
  • About Us
  • Contact Us
Friday, June 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಯಾರು ಮಹಾತ್ಮ? ಭಾಗ- 15

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 29, 2016
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
Share on FacebookShare on TwitterShare on WhatsApp

1920ರ ಆಗಸ್ಟಿನಲ್ಲಿ ಕಲ್ಕತ್ತಾದಲ್ಲಿ ನಡೆದ ತುರ್ತು ಅಧಿವೇಶನದಲ್ಲಿ ಖಿಲಾಫತ್ ವಿಷಯದಲ್ಲಿ ಅಸಹಕಾರ ಚಳವಳಿ ಕೈಗೊಳ್ಳಬೇಕು ಎಂದು ಗಾಂಧಿ ನಿರ್ಣಯ ಮಂಡಿಸಿದರು. ನಿರ್ಣಯದ ಮೂಲ ಕರಡಿನಲ್ಲಿ ಖಿಲಾಫತ್ ಮಾತ್ರವೇ ಇತ್ತು. ಆದರೆ ಕಾಂಗ್ರೆಸ್ ಅಧ್ಯಕ್ಷ ವಿಜಯರಾಘವಾಚಾರಿ ಮತ್ತಿರರ ಒತ್ತಾಸೆಗೆ ಸ್ವರಾಜ್ಯ ಬೇಡಿಕೆ, ರೌಲತ್ ಕಾಯ್ದೆಯ ಹಾಗೂ ಜಲಿಯವಾಲಾಬಾಗ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮುಂತಾದ ವಿಷಯಗಳನ್ನು ಸೇರಿಸಲಾಯಿತು. ಅಧಿವೇಶನಕ್ಕೂ ಮುನ್ನವೇ ಗಾಂಧಿ ಖಿಲಾಫತ್ ನಿರ್ಣಯವನ್ನು ಸ್ವತಂತ್ರವಾಗಿ ತೆಗೆದುಕೊಂಡಿದ್ದರು. ಅದರ ನಾಯಕತ್ವವನ್ನೂ ತಾವೇ ಊಹಿಸಿಕೊಂಡಿದ್ದರು. ಕಾಂಗ್ರೆಸ್ ಅಧ್ಯಕ್ಷ ವಿಜಯರಾಘವಾಚಾರಿಯೇ ಇದನ್ನು ವಿರೋಧಿಸಿದರು. ಚಿತ್ತರಂಜನ್ ದಾಸ್, ಬಿಪಿನ್ ಚಂದ್ರ ಪಾಲ್, ಅನಿಬೆಸೆಂಟ್, ಠಾಗೋರ್, ಜಿನ್ನಾ, ಆಂಡ್ರ್ಯೂಸ್ ಇದನ್ನು ವಿರೋಧಿಸಿದ ಪ್ರಮುಖರು. ಆದರೆ ಗಾಂಧಿಯ ಅಧೀನಪಡಿಸಿಕೊಳ್ಳುವ ವ್ಯಕ್ತಿತ್ವದಿಂದಾಗಿ ಕಾಂಗ್ರೆಸ್ ಅವರ್ ಹಾದಿಗೇ ಮರಳಿತು(ದಿ ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟೀಷನ್ – ಹೊ.ವೆ. ಶೇಷಾದ್ರಿ). ಗಾಂಧಿಯ ಖಿಲಾಫತ್ ಆವೇಶದ ಅನಾಹುತವನ್ನು ಹಿಂದಿನ ಭಾಗಗಳಲ್ಲೇ ನೋಡಿದ್ದೇವೆ.

ಕೊರೆಯುವ ಚಳಿಯ ದಿನಗಳವು. ಪಾಕಿಸ್ತಾನದಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ದೆಹಲಿಗೆ ಬಂದ ನಿರಾಶ್ರಿತರು ದೆಹಲಿಯಲ್ಲಿ ಆಶ್ರಯ ಪಡೆಯಲು ಬೇರಾವುದೇ ಸ್ಥಳ ಸಿಗದಿದ್ದಾಗ ಅಲ್ಲಿದ್ದ ಮಸೀದಿಗಳಲ್ಲಿ ಚಳಿಯಿಂದ ರಕ್ಷಣೆ ಪಡೆದಿದ್ದರು. ಹಲವರು ಮಸೀದಿಯ ಆವರಣಗಳಲ್ಲಿ, ಹೊರ ಛಾವಣಿಯ ಕೆಳಗೆ ಆಶ್ರಯ ಪಡೆದಿದ್ದರು. ಅಷ್ಟರಲ್ಲಿ ಗಾಂಧಿ ಆಮರಣಾಂತ ಉಪವಾಸ ಕೂತರು(1948 ಜನವರಿ 13). ಅವರ ಷರತ್ತುಗಳಲ್ಲಿ ದೆಹಲಿಯಲ್ಲಿ ನಿರಾಶ್ರಿತರು ಆಶ್ರಯಪಡೆದುಕೊಂಡಿದ್ದ ಮಸೀದಿಗಳನ್ನು ತೆರವು ಮಾಡಬೇಕು ಎನ್ನುವುದು ಕೂಡಾ ಸೇರಿತ್ತು. ಕೆಲವು ನಿರಾಶ್ರಿತರು ಗಾಂಧಿಯವರನ್ನು ಭೇಟಿಯಾಗಿ ವಸತಿ ಸಮಸ್ಯೆಯನ್ನು ಹೇಳಿದಾಗ “ಕೆಳಗೆ ಭೂಮಿಯಿದೆ. ಮೇಲೆ ದೇವರ ಆಗಸದ ಆಚ್ಛಾದವಿದೆ. ಅದರಲ್ಲೇ ನೀವು ತೃಪ್ತಿ ಕಾಣಬೇಕು ಎಂದುಬಿಟ್ಟರು ಗಾಂಧಿ(ಮಹಾತ್ಮಗಾಂಧಿ-ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಮಾನವತೆಯ ಲವಲೇಶವೂ ಇಲ್ಲದ ಇಂತಹ ವ್ಯಕ್ತಿಯನ್ನು ಭಾರತ ಮಹಾತ್ಮ ಎಂದು ಘೋಷಿಸಿತಲ್ಲಾ?

ಮಸೀದಿಯ ಬಳಿ ಬಾಜಭಜಂತ್ರಿ ಇರಬಾರದು ಎಂದು ಮುಸ್ಲಿಮರು ಗಾಂಧಿಯ ಬಳಿ ಹೇಳಿದಾಗ “ಉತ್ಸವಗಳಲ್ಲಿ ಪವಿತ್ರ ಸಂಗೀತ ಇರಬೇಕೆಂದು ಯಾವುದೇ ಪ್ರಾಥಮಿಕ ತತ್ವವಿಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಮಸೀದಿಗಳ ಎದುರು ಸಂಗೀತ ನುಡಿಸಬೇಕೆಂದು ಹಿಂದೂ ಧರ್ಮದಲ್ಲಿ ಎಲ್ಲಿಯೂ ಹೇಳಲಾಗಿಲ್ಲ ಎಂದು ಇನ್ನೂ ಖಚಿತವಾಗಿ ಹೇಳಬಲ್ಲೆ” ಎಂದು ನುಡಿದರು ಗಾಂಧಿ(ಗಾಂಧೀಜಿ ಇನ್ ಆಂಧ್ರಪ್ರದೇಶ – ತೆಲುಗು ಅಕಾಡೆಮಿ). ಗಾಂಧಿಯ ದೃಷ್ಟಿಯಲ್ಲಿ ಸನಾತನ ಧರ್ಮ ಯಾವುದು. ಎರಡು ಸಾವಿರ ವರ್ಷಗಳ ಹಿಂದೆ ಉತ್ಸವ, ಮೆರವಣಿಗೆ ಆಗುತ್ತಿರುವಾಗ ಈ ಮಸೀದಿಗಳ ಎಲ್ಲಿದ್ದವು? ಮುಸಲ್ಮಾನರು ಎಲ್ಲಿದ್ದರು? ಗಾಂಧಿಯ ಹೇಳಿಕೆ ನೋಡಿದರೆ ಹಿಂದೂ ಧರ್ಮಕ್ಕಿಂತಲೂ ಇಸ್ಲಾಂ ಮತವೇ ಹಳೆಯದು ಎನ್ನುವ ಹಾಗೆ ಇದೆ! ಹಬ್ಬ, ಉತ್ಸವಗಳಲ್ಲಿ ಸಂಗೀತವಿಲ್ಲದಿದ್ದರೆ ಅದ್ಯಾವ ಸೀಮೆಯ ಹಬ್ಬ. ಉತ್ಸವ ಎಲ್ಲಾ ರೀತಿಯ ವೃತ್ತಿಗಳ ಅಂತಿಮ ಫಲವನ್ನು ಕಾಣಬಹುದಾದಂತಹ, ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಪೂರ್ಣ ರೀತಿಯ ಹಬ್ಬ. ಶತಶತಮಾನಗಳ ಪದ್ದತಿಯನ್ನು ಅಲ್ಲಗಳೆಯಲು ಗಾಂಧಿ ಯಾರು? ಮಸೀದಿಗಳ ಎದುರು ಸಂಗೀತ ನುಡಿಸುವಂತಿಲ್ಲ ಎಂದಾದರೆ ತುರ್ಕಿ ಹಾಗೂ ಇತರ ಮುಸ್ಲಿಮ್ ರಾಷ್ಟ್ರಗಳಲ್ಲಿ ಸಂಗೀತ ನುಡಿಸುವ ಪದ್ದತಿ ಯಾಕಿತ್ತು? ಹಿಂದೂಗಳನ್ನು ಅವಮಾನಿಸುವ ಸಲುವಾಗಿ ಮುಸ್ಲಿಮರು ಮಸೀದಿಗಳ ಎದುರು ಬಾಜಾಭಜಂತ್ರಿ ಬಹಿಷ್ಕರಿಸಿದರೆಂಬುದು ಸ್ಪಷ್ಟ. ಮುಸ್ಲಿಮರು ಬಾಗಲು ಹೇಳಿದರೆ ಗಾಂಧಿ ತೆವಳಿದರು!

ದೇಶದ ಅನೇಕ ಜನರ ನಾಲಗೆಯ ಮೇಲೆ ಶತಮಾನಗಳ ಪರ್ಯಂತ ನಲಿದು ಹಲವು ಜನರ ಪಾಲಿಗೆ ಮೋಕ್ಷದಾಯಕವಾದ ಭಜನೆ “ರಘುಪತಿ ರಾಘವ ರಾಜಾರಾಮ್”. ಪೀಳಿಗೆಯಿಂದ ಪೀಳಿಗೆಗೆ ಭಾರತೀಯರ ನೀತಿ, ಸಂಸ್ಕೃತಿ, ವ್ಯಕ್ತಿತ್ವಗಳನ್ನು ರೂಪಿಸಿದ, ಉದ್ದೀಪಿಸಿದ ದೈವಿಕ ಜೋಡಿ ಸೀತಾರಾಮ. ಆದರ್ಶ ಪುರುಷ, ಆದರ್ಶ ಸ್ತ್ರೀ, ಆದರ್ಶ ದಂಪತಿಗಳಿಗೆ ಪ್ರತೀಕವಾದ ಜೋಡಿಯದು. ಭಾರತವನ್ನು ಮಾನವತೆಯ ಸಾಂಸ್ಕೃತಿಕ ಮಾರ್ಗದರ್ಶಿಯಾಗಿ ರೂಪಿಸಿದ ಜೋಡಿ ಸೀತಾರಾಮ. ರಾಷ್ಟ್ರಭಕ್ತಿಯ ಈ ಸ್ಪೂರ್ತಿ ಚಿಲುಮೆಯನ್ನೂ ಬಿಡಲಿಲ್ಲ ಗಾಂಧಿ. ಮೂಲ ಭಜನೆಗೆ “ಈಶ್ವರ್ ಅಲ್ಲಾ ತೇರೇ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್” ಎನ್ನುವ ಸಾಲುಗಳನ್ನು ಸೇರಿಸಿದರು ಗಾಂಧಿ. ಈ ಪರಿಯ ಔದಾರ್ಯ ಮುಸಲ್ಮಾನರಿಂದ ನಿರೀಕ್ಷಿಸಲು ಸಾಧ್ಯವೇ? ಆಧ್ಯಾತ್ಮಿಕತೆಗಿಂತ ರಾಜಕೀಯವೇ ಅದರಲ್ಲೂ ತುಷ್ಟೀಕರಣದ ರಾಜಕೀಯವೇ ಮುಖ್ಯವಾಯಿತು ಗಾಂಧಿಗೆ! “ಹಿಂದೂವೊಬ್ಬ ಮುಸ್ಲಿಮ್ ಸಹೋದರನನ್ನು ಭೇಟಿಯಾದಾಗ ಒಳ್ಳೆ ಭಾವನೆ ಮತ್ತು ನಗೆಯಿಂದ ಸಮೀಪಿಸಲು ಸಲಾಮ್ ಮಾಡಬೇಕು” ಎಂದು ಗಾಂಧಿ ಉಪದೇಶಿಸಿದರು(ಗಾಂಧಿ ಇನ್ ಆಂಧ್ರಪ್ರದೇಶ-ತೆಲುಗು ಅಕಾಡೆಮಿ). ಹೀಗೆ ಗಾಂಧಿ ಸಮರ್ಪಣೆಯ ಸಂಕೇತವಾದ, ಆತ್ಮಕ್ಕೆ ಗೌರವ ಸೂಚಿಸುವ, ನಮಸ್ಕಾರವನ್ನೂ ಕೊಲೆಗೈದು ಮುಸ್ಲಿಮರಿಗೆ ಮುಜುರೆ ಒಪ್ಪಿಸಿದರು! ಕೇವಲ ದಿರಿಸು, ಹೆಸರು, ಗೀತೆಯ ಉಲ್ಲೇಖಗಳಿಂದಷ್ಟೇ ಗಾಂಧಿ ಹಿಂದೂವಂತೆ ಕಾಣುತ್ತಾರೆ. ಆದರೆ ಅಭಿರುಚಿ, ಅಭಿಪ್ರಾಯ, ನೈತಿಕತೆ, ಬುದ್ಧಿ ಹಾಗೂ ಹೃದಯಗಳಲ್ಲಿ ಅವರೆಲ್ಲಾ ಮುಸ್ಲಿಮ್ ಎಂದು ಯಾರಿಗಾದರೂ ಭಾಸವಾದರೆ ತಪ್ಪೇ?

“ದೇವದೂತ ಗ್ರೇಬ್ರಿಯಲ್ ಒಂದು ದಿನ ಗುಹೆಯಲ್ಲಿ ತನ್ನ ಬಳಿ ಬಂದುದಾಗಿಯೂ, ದಿವ್ಯಾಶ್ವವಾದ ಹರಾಕ್ ಮೇಲೆ ತನ್ನನ್ನು ಕರೆದೊಯ್ದಿದ್ದಾಗಿಯೂ, ತಾನು ಸ್ವರ್ಗಕ್ಕೆ ಭೇಟಿ ನೀಡಿದ್ದಾಗಿಯೂ ಮಹಮ್ಮದ್ ತಿಳಿಸಿದ್ದಾರೆ.ನೀವು ಕುರಾನ್ ಓದಿದರೆ ಅಚ್ಚರಿಯ ಸತ್ಯಗಳು ಅಂಧವಿಶ್ವಾಸದೊಂದಿಗೆ ಮಿಶ್ರಣವಾದುದನ್ನ ಕಾಣುವಿರಿ. ನೀವದನ್ನು ಹೇಗೆ ವಿವರಿಸುತ್ತೀರಿ? ಅವರು ಪ್ರೇರಣೆ ಪಡೆದಿದ್ದಲ್ಲ. ಆಕಸ್ಮಿಕವಾಗಿ ಸಿಕ್ಕಿದ್ದು, ಅವರು ತರಬೇತಿ ಪಡೆದ ಯೋಗಿಯಲ್ಲ.ತಾವು ಮಾಡುತ್ತಿರುವ ಬಗ್ಗೆ ಅವರಿಗೆ ವಿವರಣೆ ತಿಳಿದಿರಲಿಲ್ಲ. ಮಹಮ್ಮದ್ ರಿಂದ ಜಗತ್ತಿಗೆ ಆದ ಒಳ್ಳೆಯದು ಮತ್ತು ಮತಾಂಧತೆಯಿಂದ ಆದ ಮಹಾ ಕೆಡುಕುಗಳ ಬಗ್ಗೆ ಚಿಂತಿಸಿ. ಅವರ ಭೋದನೆಗಳಿಂದ ಲಕ್ಷಾಂತರ ಜನರು ಸಾಮೂಹಿಕ ಕಗ್ಗೊಲೆಯಾದುದರ ಬಗ್ಗೆ ಮಕ್ಕಳಿಂದ ವಿಯೋಗ ಹೊಂದಿದ ತಾಯಂದಿರು, ಅನಾಥರಾದ ಮಕ್ಕಳು,ಅತ್ಯಾಚಾರಕ್ಕೊಳಗಾದ ಮಾನಿನಿಯರು, ಇಡೀ ದೇಶಗಳು ನಾಶವಾದ ಬಗ್ಗೆ ಯೋಚಿಸಿ. ಎಲ್ಲ ಕಾಲ ಮತ್ತು ದೇಶಗಳಲ್ಲಿ ಮಹಾನ್ ಆಧ್ಯಾತ್ಮಿಕ ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಭಿನ್ನರಲ್ಲ. ನೈಜ ಧರ್ಮವಿರುವಲ್ಲಿ ದೈವಿಕ ಜ್ಯೋತಿ ವಿಶಾಲ ಮನಸ್ಸನ್ನು ಕಾಣುತ್ತೇವೆ. ಇದರಿಂದ ಎಲ್ಲೆಡೆ ಬೆಳಕು ಕಾಣಲು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ಮುಸ್ಲಿಮರು ಅಪಕ್ವರು ಮತ್ತು ಭಿನ್ನ ವರ್ಗದವರು. ಒಬ್ಬನೇ ದೇವರು ಅದಕ್ಕಿಂತ ಮೀರಿದ್ದು ಕೆಟ್ಟದ್ದು ಮತ್ತದನ್ನು ನಂಬುವವರನ್ನು ನಾಶ ಮಾಡಬೇಕು ಬೇರೆಯವರ ಧರ್ಮಗ್ರಂಥಗಳನ್ನು ಸುಡಬೇಕು. ಫೆಸಿಫಿಕ್ ನಿಂದ ಅಟ್ಲಾಂಟದವರೆಗೆ 500 ವರ್ಷಗಳ ಕಾಲ ರಕ್ತದ ಕೋಡಿಯೇ ಹರಿಯಿತು ಅದು ಮಹಮ್ಮದೀಯರ ಧರ್ಮ!” ಎಂದಿದ್ದಾರೆ ಸ್ವಾಮಿ ವಿವೇಕಾನಂದರು(ದಿ ಕಂಪ್ಲೀಟ್ ವರ್ಕ್ಸ್ ಆಫ್ ಸ್ವಾಮಿ ವಿವೇಕಾನಂದ).

ತಮ್ಮ ಸಂಖ್ಯೆ ಹೆಚ್ಚಿಸಲು, ಭೌಗೋಳಿಕವಾಗಿ ವಿಸ್ತರಿಸಲು ಜಿಹಾದ್ ಧಾರ್ಮಿಕ ಕರ್ತವ್ಯ ಎಂದು ನಂಬುತ್ತದೆ ಇಸ್ಲಾಮ್. ಇಸ್ಲಾಂ ಅನ್ನು ಅಂಗೀಕರಿಸಿದವ ತನ್ನ ಪರಿವಾರದ, ದೇಶದ, ಮತದ ಇತಿಹಾಸವನ್ನು ಮರೆತು “ಶುದ್ಧೀಕರಣ” ಪ್ರಕ್ರಿಯೆಗೆ ಒಳಗಾಗಿ ತನ್ನ ಹೆಸರನ್ನೂ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಶನ, ವಸನ, ಭಾಷೆ, ಕಲೆ, ಸಾಂಸ್ಕೃತಿಕ ನಂಬಿಕೆ-ಅಭಿರುಚಿ… ಹೀಗೆ ಎಲ್ಲವನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆ. ತನ್ನ ದೇಶದ ಜೊತೆ ಹೊಂದಿರುವ ತಾಯಿ-ಮಗು ಸಂಬಂಧ ಕಡಿದುಕೊಳ್ಳಬೇಕಾಗುತ್ತದೆ. ದಾಳಿಕೋರ ಗುಂಪಿನ ಜೊತೆಗೇ ತನ್ನ ಅಸ್ತಿತ್ವ ಗುರುತಿಸಿಕೊಳ್ಳಬೇಕಾಗುತ್ತದೆ. “ಸಾರೇ ಜಹಾಂಸೆ ಅಚ್ಛಾ” ಗೀತೆ ಬರೆದ ಇಕ್ಬಾಲನೇ ರಾಷ್ಟ್ರೀಯ ಸಮಗ್ರತೆ ಸಲುವಾಗಿ ಇಸ್ಲಾಮ್ ಸಹೋದರತ್ವವನ್ನು ನಾವು ತ್ಯಜಿಸಲಾರೆವು ಎಂದಿದ್ದ. ಅಜಂ ಖಾನ್ “ಭಾರತ್ ಮಾತಾ ಈಸ್ ಅ ಬ್ಲಡಿ ಡೆವಿಲ್” ಎಂದು ಕಿರುಚಿದ್ದ. ಇಸ್ಲಾಂನಲ್ಲಿ ಸೆಕ್ಯುಲರಿಸಮ್ಮಿಗೆ ಸ್ಥಾನವೇ ಇಲ್ಲ. ಇಸ್ಲಾಂ ಅನ್ನು ಹರಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯ. ಮುಸ್ಲಿಮ್ ಯುವಕರು ಕರದಲ್ಲಿ ತಲವಾರ್ ಹಿಡಿದು ಇಸ್ಲಾಮ್ ಪ್ರಚಾರ ಮಾಡುವರು ಎಂದಿದ್ದ ಇಮಾಮ್ ಬುಖಾರಿ. ಇಸ್ಲಾಂ ಯಾವೆಲ್ಲಾ ದೇಶದ ಮೇಲೆ ದಾಳಿ ಮಾಡಿದೆಯೋ ಆ ದೇಶದ ವ್ಯಕ್ತಿತ್ವ ಸಂಪೂರ್ಣ ನಾಶವಾಗಿದೆ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ನಮ್ಮಲ್ಲೇ ನೋಡಿ, ಮುಸಲರಿಂದಾಗಿ ಎಷ್ಟೊಂದು ಸಾಮೂಹಿಕ ನರಮೇಧವಾಯಿತು. ಕೆಲವರು ಹಿಂದೂಗಳ ಶವಗಳನ್ನುಪಯೋಗಿಸಿ ವಿಜಯ ಸ್ತಂಭವನ್ನೂ ಕಟ್ಟಿದರು. ಕುಶಲ ಕಲೆಗಳು, ಜ್ಞಾನ, ಆಧ್ಯಾತ್ಮಿಕತೆಯ ಕೇಂದ್ರಗಳಾಗಿದ್ದ ದೇವಾಲಯ, ಗ್ರಂಥಾಲಯ, ಶೈಕ್ಷಣಿಕ ಸಂಸ್ಥೆಗಳು ಮುಸಲರ ಜಿಹಾದ್ ಬೆಂಕಿಗೆ ಉರಿದು ಹೋದವು. ನಮ್ಮ ಜನರ ನಂಬಿಕೆಯ ಕೇಂದ್ರಗಳು ನಾಶವಾದರೆ ಇಸ್ಲಾಂ ಹಬ್ಬಿಸಲು ಸುಲಭ ಎನ್ನುವುದು ಅವರಿಗೆ ತಿಳಿದಿತ್ತು. ಅದಕ್ಕೆಂದೇ ಒಬ್ಬ ಸೋಮನಾಥವನ್ನು ಧರೆಗುರುಳಿಸಿದ. ಮತ್ತೊಬ್ಬ ಕಾಶಿ ವಿಶ್ವೇಶ್ವರಾಲಯವನ್ನು ಮಸಣದಲ್ಲಿ ಮಲಗಿಸಿದ. ಮಗದೊಬ್ಬ ಅಯೋಧ್ಯೆಯನ್ನು…ಹೀಗೆ ಹಿಂದೂಗಳ ಮೇಲಾದ ಅತ್ಯಾಚಾರ, ಅನಾಚಾರಕ್ಕೆ ಲೆಖ್ಖವೇ ಇಲ್ಲ. ಇಂಥ ಇಸ್ಲಾಮನ್ನು, ಹಾಗದನ್ನು ಜೀವ-ಜೀವನಕ್ಕಿಂತ ಶ್ರೇಷ್ಠ ಎಂದು ಅನುಸರಿಸಿದ ಮುಸಲ್ಮಾನರನ್ನು ನಂಬಿ ಅವರನ್ನು ಓಲೈಸಿದ ಗಾಂಧಿಗಿಂತ ದೊಡ್ಡ ದುರಾತ್ಮ ಯಾರಿದ್ದಾರು? ಇವತ್ತಿನ ಓಲೈಕೆ ರಾಜಕಾರಣಕ್ಕೆ ಭದ್ರಬುನಾದಿ ಹಾಕಿದವರು ಗಾಂಧಿ ಎಂದರೆ ತಪ್ಪಾದೀತೇ?

Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪಾಕ್ ನೀಚತನ ಮತ್ತು ಭಾರತದ ಆಂತಕರಿಕ ಭದ್ರತಾ ಸವಾಲು 

Next Post

ಯಾರು ಮಹಾತ್ಮ? ಭಾಗ- 16

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಯಾರು ಮಹಾತ್ಮ? ಭಾಗ- 16

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
450 Doctors Fined 15 Lakhs

ಗ್ರಾಮೀಣ ಸೇವೆಗೆ ಗೈರು: 450ಕ್ಕೂ ಹೆಚ್ಚು ಎಂಬಿಬಿಎಸ್ ವೈದ್ಯರಿಗೆ ₹15 ಲಕ್ಷ ದಂಡ

June 12, 2026
Kane Williamson Announces Shock Retirement

ಬ್ಲ್ಯಾಕ್‌ಕ್ಯಾಪ್ಸ್ ನಾಯಕತ್ವದ ಯುಗಾಂತ್ಯ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕೇನ್ ವಿಲಿಯಮ್ಸನ್ ನಿವೃತ್ತಿ ಘೋಷಣೆ

June 12, 2026
Malappuram Baby Crawl

ಟ್ರಾಫಿಕ್ ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು | ಮುಂದೆ ಆಗಿದ್ದೇನು?

June 12, 2026
Petrol

ಪೆಟ್ರೋಲ್ ಬಂಕ್‌ಗಳಿಂದ ಸಗಟು ಇಂಧನ ಖರೀದಿಗೆ ತಾತ್ಕಾಲಿಕ ನಿರ್ಬಂಧ

June 12, 2026
B Y Raghavendra Visited Talguppa Railway Station

ತಾಳಗುಪ್ಪ ರೈಲು ನಿಲ್ದಾಣಕ್ಕೆ ಸಂಸದ ರಾಘವೇಂದ್ರ ಭೇಟಿ | ಕಾಮಗಾರಿ ಪರಿಶೀಲನೆ | ಏನೆಂದರು?

June 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL