ಹಿರೋಶಿಮ-ನಾಗಸಾಕಿಗಳ ಅಣು ದುರಂತ, ಬಾಂಗ್ಲಾ ದೇಶದ ನಕೊಹಲಿ(Noakhali- Bangla) ಯಲ್ಲಿ ನಡೆದ ಹಿಂದುಗಳ ನರಮೇಧ.
ಆಗ ಈಗಿನಂತೆ electronic mediaಗಳಿರಲಿಲ್ಲ. ಎಂದೋ ಯಾವತ್ತೋ ನಿರಾಶ್ರಿತರಾಗಿ ಮನೆಯ ಮುಂದೆ ಭಿಕ್ಷಾಟನೆಗಾಗಿ ಬಂದಾಗ ಸುದ್ಧಿ ತಿಳಿಯುತ್ತಿತ್ತು. ‘ಸ್ವಾಮೇ ನಮ್ಮ ಮನೆ ಮಠ, ಮಕ್ಕಳು ಮರಿಗಳೆಲ್ಲಾ ನಾಶವಾಗಿ ಹೋಯ್ತೂ’ ಅಂತ ಹೇಳುತ್ತಿದ್ದಾಗ ಕನಿಕರ ಇದ್ದವರು ಊಟವೋ, ಹಣವೋ, ಬಟ್ಟೆಯೋ ನೀಡಿ ಕಳುಹಿಸುತ್ತಿದ್ದರು.
ನಂತರ ಯಾವುದೋ ಕಾರ್ಯಕ್ರಮಗಳಲ್ಲಿ ಈ ವಿಚಾರ ಮಾತನಾಡಿಕೊಳ್ಳುತ್ತಿದ್ದರು. ಆದರೆ ಆ ಊರು ಯಾವುದು? ಎಲ್ಲಿರೋದು ಎಂಬುದು ಶೇ.99ರಷ್ಟು ಜನರಿಗೆ ಗೊತ್ತಿರುತ್ತಿರಲಿಲ್ಲ. ಯಾವುದೋ ಆಂಗ್ಲ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾದರೆ ಅದನ್ನು ನಗರದಲ್ಲಿನ ವಿದ್ಯಾವಂತರು ಓದುತ್ತಿದ್ದರಷ್ಟೆ.
ಈ ಲೇಖನ ಓದಿ:
ಹಿರೋಷಿಮ ನಾಗಸಾಕಿಗಳಲ್ಲಿ ಕೆಲವೇ ಘಂಟೆಗಳಲ್ಲಿ ಸರ್ವ ನಾಶವಾಯ್ತು. ಆದರೆ ಬಾಂಗ್ಲಾದ ಈ ಊರಿನಲ್ಲಿ ಕೆಲಕಾಲ ಈ ನರಮೇಧ ನಡೆಯಿತು. ಇಷ್ಟಕ್ಕೂ ಕಾರಣವೇನು? ಮೇಲ್ನೋಟಕ್ಕೆ ನರಮೇಧ ಆದರೂ ಇದು ಜನಾಂಗೀಯ ಕಲಹವೆ. ಈಗ ನಡೆಯುತ್ತಿರುವ ರೋಹಿಂಗ್ಯಾ, ಬಾಂಗ್ಲ ವಲಸಿಗರು ಇದೆಲ್ಲವೂ ಜನಾಂಗೀಯ ಕಲಹದ್ದೇ ಫಲ. ನಾವು ಎಸಿ-ಫ್ಯಾನ್ ಗಳಡಿಯಲ್ಲಿ ಕುಳಿತು ಓದುವವರಷ್ಟೆ. ಆದರೆ ಆ ಘಟನೆಯ ಅಮಾಯಕರು ದಟ್ಟದರಿದ್ರಾವಸ್ತೆಯನ್ನು ಅನುಭವಿಸುವವರು. ಅವರ ಬಗ್ಗೆ ಕನಿಕರ ತೋರುವವರು ಆಗ ಇರಲಿಲ್ಲ.
ಹಿಟ್ಲರ್ ನಡೆಸಿದ ಕಾಲಮಾನವೂ 1945. ಹಿಟ್ಲರ್ ಸಾಯುವಲ್ಲಿಯವರೆಗೆ ಮಾಡಿದ ಘನಘೋರ ಕೆಲಸವೇ ನರಮೇಧ.
ಇದೆಲ್ಲವೂ ಗ್ರಹಸ್ಥಿತಿಯನ್ನಾಧರಿಸಿಯೇ ನಡೆಯುತ್ತದೆ ಎಂದು ಜ್ಯೋತಿಷ್ಯ ಪಂಡಿತರು ಹೇಳಿದರೆ, sociological studyಯು communal war ಎಂದು ವರ್ಣಿಸಬಹುದು. ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಿದರೂ ಇದಕ್ಕೆಲ್ಲ ಕಾರಣ ಗ್ರಹಸ್ಥಿತಿ.
ಆಗ ಮಿಥುನದಲ್ಲಿ ಶನಿ ಇದ್ದು ಅಗ್ನಿತತ್ವ ಸಿಂಹ ರಾಶಿ ಮತ್ತು ಧನು ರಾಶಿ ವೀಕ್ಷಿಸುತ್ತಿದ್ದ. ಮಿಥುನವು ಆಗ್ನೇಯ ಪೂರ್ವಗಳ ಭೂಭಾಗ ಮತ್ತು ಭಾವ ವೀಕ್ಷಣೆಯು ವಾಯುವ್ಯ ಪಶ್ಚಿಮ ಭೂಭಾಗದ ವಿಚಾರ ತಿಳಿಸುತ್ತದೆ. ಇಲ್ಲಿ ಕೇತುವನ್ನು ಕುಜ, ಶನಿಗಳು ವೀಕ್ಷಿಸುತ್ತಾರೆ. ಶನಿಯು ವಾಯು ತತ್ವದಲ್ಲಿದ್ದು ಅಗ್ನಿ ತತ್ವ ವೀಕ್ಷಣೆಯು ಈ ದುರಂತವನ್ನು ಸೂಚಿಸಿದೆ.
ಈ ವರ್ಷ ಅಂದರೆ 2019 ಇದೇ ಸ್ಥಿತಿಯು ವ್ಯುತ್ಕ್ರಮ(ಉಲ್ಟಾ) ಆಗಿದೆ. ಅಗ್ನಿತತ್ವದ ಧನು ರಾಶಿಯಲ್ಲಿ ಶನಿಯು ವಾಯುತತ್ವ ಕುಂಭವನ್ನು ಮಾರಕ ದೃಷ್ಟಿ(ಮೂರನೆಯ ದೃಷ್ಟಿ)ಯಲ್ಲಿ ನೋಡುತ್ತಾನೆ. ಕುಂಡಲಿಯಲ್ಲಿ ತೋರಿಸಿದಂತೆ ಕುಜನ ವೀಕ್ಷಣೆಯೂ ಶನಿ ಕೇತುಗಳಿಗಿದೆ. ಇದು ಮತ್ತೊಮ್ಮ ಜನಾಂಗೀಯ ಕಲಹವನ್ನು ಸೃಷ್ಟಿಸಬಹುದು. ಆಗಲೂ ಲಕ್ಷಾಂತರ ಜನರು ಸತ್ತರು. ಈಗಿನ ಗ್ರಹಸ್ಥಿತಿಯೂ ಅಂತಹ ವಾತಾವರಣವನ್ನೇ ಸೂಚಿಸುತ್ತದೆ. ಅಂದರೆ ಪಾಕಿನಲ್ಲಿ ಅಣುಸಮರಕ್ಕೆ ಹೋಗಿ ದುರಂತಗಳನ್ನು ತಮ್ಮ ಮೇಲೆಯೇ ಹಾಕಿಕೊಳ್ಳುವ ಪರಿಸ್ಥಿತಿಯು ಬರುವ ಸಾಧ್ಯತೆ ಹೆಚ್ಚು.
ಸುಮಾರು 72 ವರ್ಷಗಳ ಬಳಿಕ ಈ ಸ್ಥಿತಿಯು ಬಂದಿದೆ. ಆದರೆ ಧನುರಾಶಿಯಲ್ಲಿ ಶನಿ ಕೇತು ಯೋಗವು 1871ರಲ್ಲಿ ಬಂದಿತ್ತು. ಆ ಸಮಯವು- ಧನುರಾಶಿಯಲ್ಲಿ ಶನಿ ಕೇತು ಯುತಿ 1871ರಲ್ಲಿ ಬಂದಿದ್ದಾಗ ಜಗತ್ತಿನಲ್ಲಿ ಆಘಾತಕಾರಿ(traumatic) ವಾತಾವರಣ ಬಂದಿತ್ತೆಂದು ಕೆಲ ಚರಿತ್ರೆಗಳು ಹೇಳುತ್ತದೆ. ಅಂದರೆ ಯಾವುದೋ ಒಂದು ವಾತಾವರಣದ ವೈಪರೀತ್ಯದಿಂದ body disable ಕಾಯಿಲೆ ಬಂದಿತ್ತೆಂದು ಹೇಳಿದೆ.
ಹಾಗಾಗಿ ವಾತಾವರಣಕ್ಕನುಗುಣವಾಗಿ ಮಾನವರ ವರ್ತನೆಗಳೂ ಇರುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿ ಎನ್ನಬಹುದು. ಒಟ್ಟಿನಲ್ಲಿ ಈಗಿನ ವಾತಾವರಣಕ್ಕೂ, ನಡೆಯುವ ವಿದ್ಯಮಾಕ್ಕೂ ಹೋಲಿಕೆಗಳಿವೆ.
ಒಂದು ಸಂಗ್ರಾಮ ನಡೆಯುವುದಕ್ಕೆ ಒಂದು ವರ್ಷ ಮುಂಚೆಯೇ ಅದರ symptoms ಗೋಚರಿಸುತ್ತದೆ. ಕೆಲವರು ಅದನ್ನು ignore ಮಾಡಬಹುದು. ಇನ್ನು ಕೆಲವರು ಸಂಶೋಧನೆ ಮಾಡಬಹುದು. ಮತ್ತೆ ಕೆಲವರು ಈಗ ತಿಂದುಕೊಂಡದ್ದು ಬಂತು ಎನ್ನಬಹುದು. ಆದರೆ ಅಮಾಯಕರು ಮಾತ್ರ ಸಾಯುತ್ತಾರೆ. ಮೊದಲು ನೋಡುವುದು ಮನುಷ್ಯರನ್ನು. ನಂತರ ಜಾತಿಯನ್ನು.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post