Read - < 1 minute
ನವದೆಹಲಿ, ಸೆ.8: ಆಮ್ ಆದ್ಮಿ ಪಕ್ಷ ತನ್ನ 21 ಶಾಸಕರನ್ನು ಸಂಪುಟ ಕಾರ್ಯದರ್ಶಿಗಳಾನ್ನಾಗಿ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ.
ಕಾನೂನಿನಲ್ಲಿ ಸಾರ್ವಜನಿಕ ಸಾರ್ವಜನಿಕ ಹುದ್ದೆಯಲ್ಲಿರುವ ಆಯವುದೇ ವ್ಯಕ್ತಿ ಇನ್ನೊಂದು ಹುದೆಯನ್ನು ನಿರ್ವಹಿಸಲು ಅವಕಾಶವಿಲ್ಲವೆಂದು ಹೇಳಿದೆ. ಶಾಸಕರನ್ನು ಸಂಪುಟ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳುವ ಮೊದಲ ರಾಜ್ಯಪಾಲರ ಅಧೀನದಲ್ಲಿರುವ ಆಡಳಿತದಲ್ಲಿ ಅವರ ಬಳಿ ಒಪ್ಪಿಗೆ ಪಡೆಯಬೇಕು. ಆದರೆ ರಾಜ್ಯಾಪಾಲ ನಜೀಬ್ ಜಂಗ್ ಅವರಿಂಧ ಯಾಉದೇ ರಿತಿಯಾದ ಅಂಕಿತವನ್ನು ಪಡೆಯದೇ ದೆಹಲಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು ಎಂದು ನ್ಯಾ. ಜಿ ರೋಹಿಣಿ ಹಾಗೂ ನ್ಯಾ. ಸಂಗೀತ ಧಿಂಗ್ರಾ ಅವರನ್ನೊಳಗೊಂದ ದ್ವಿಸದಸ್ಯ ಪೀಠ ಹೇಳಿದೆ. ಶಾಸಕ ಅಥವಾ ಸಂಪುಟ ಕಾರ್ಯದರ್ಶಿ 2 ಹುದ್ದೆಗಳಲ್ಲಿ ಕೇಲವ 1 ಹುದ್ದೆಯನ್ನು ನಿರ್ವಹಿಸಲು ಅವಕಾಶವಿದೆ ಎಂದು ದೆಹಲಿ ಸರ್ಕಾರದ ಆದೇಶವನ್ನು ವಜಾಗೊಳಿಸಿದೆ.
ಕಳೆದ ಮಾ.4 ರಂದು ನ್ಯಾ. ಸುಧೀರ್ ನಂದ್ರಾಜೋಗ್ ಅವರು ಕೋರ್ಟ್ ರದ್ದುಗೊಳಿಸಿದ್ದ ಆಪ್ ಸರ್ಕಾರದ ವಿವಿಧ ಅಧಿಸೂಚನೆಗಳನ್ನು ಉಲ್ಲೇಖಿಸಿದ್ದರು. ಅಲ್ಲದೇ ನಮ್ಮ ವಿರುದ್ಧ ಈ ತೀರ್ಪನ್ನು ಒಪ್ಪಿಕೊಳ್ಳು ತ್ತೇನೆ ಎಂದು ಹೇಳಿದ್ದರು. ದೆಹಲಿ ಆಡಳಿತಾಧಿಕಾರಿಗಳ ಬಗ್ಗೆ ಸಂಪೂರ್ಣ ವಿವರ ನೀಡಿದ ಹೆಚ್ಚುವರಿ ಸಾಲಿಸೀಟರ್ ಜನರಲ್ ಅವರು ಚುನಾವಣಾ ಆಯೋಗವೂ ಸಹ ಈ ಬಗೆಗಿನ ಆದೇಶವನ್ನು ತಡೆಹಿಡಿದಿದೆ ಎಂದರು. ಚುನಾವಣಾ ಆಯೋಗ ಈ ಸಂಬಂಧದ ತನ್ನ ಆದೇಶವನ್ನು ಆ.29ರಂದೇ ತಡೆ ಹಿಡಿದಿದೆ ಎಂದು ಹೇಳಿದರು.
Discussion about this post