ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗ್ರೀನ್ ಝೋನ್’ನಲ್ಲಿದ್ದ ಶಿವಮೊಗ್ಗದಲ್ಲಿ 8 ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ನಿನ್ನೆ ಜಿಲ್ಲೆಗೆ ಆಗಮಿಸಿರುವ 9 ಜನರಲ್ಲಿ 8 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಡಪಟ್ಟಿದ್ದು, ಒಬ್ಬರ ಪರೀಕ್ಷಾ ವರದಿ ಬರಬೇಕಿದೆ ಎಂದಿದ್ದಾರೆ.
ಈಗ ದೃಢಪಟ್ಟವರು ಶಿಕಾರಿಪುರಕ್ಕೆ ಸೇರಿದವರಾಗಿದ್ದು, ತೀರ್ಥಹಳ್ಳಿಯ ಒಬ್ಬರ ವರದಿ ಬರಬೇಕಿದೆ. ದೃಢಪಟ್ಟ ಎಂಟು ಮಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕೊರೋನಾ ಸೋಂಕು ದೃಢಪಟ್ಟಿರುವ ಎಲ್ಲರೂ ತಬ್ಲೀಘೀ ಜಮಾತ್’ಗಾಗಿ ಅಹಮದಾಬಾದ್’ಗೆ ತೆರಳಿದವರಾಗಿದ್ದು, ಎಲ್ಲರೂ ಪುರುಷರೇ ಆಗಿದ್ದಾರೆ.
8 ಪಾಸಿಟಿವ್ ಪ್ರಕರಣ ಪತ್ತೆಯಾದರೂ ಸಹ ಜಿಲ್ಲೆಯನ್ನು ಗ್ರೀನ್ ಝೋನ್’ನಲ್ಲೇ ಮುಂದುವರೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಶಿಕಾರಿಪುರ ಮೂಲದ 65 ವರ್ಷದ ಪಿ808, ಪಿ809, ಪಿ810, ಪಿ811, ಪಿ812, ಪಿ813, ಪಿ815 ಹಾಗೂ ತೀರ್ಥಹಳ್ಳಿ 814 ಸಂಖ್ಯೆಯ ಸೋಂಕಿತರಾಗಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post