ಕಲ್ಪ ಮೀಡಿಯಾ ಹೌಸ್ | ಆಗುಂಬೆ |
ಇಲ್ಲಿನ ಘಾಟಿಯ 8ನೆಯ ತಿರುವಿನಲ್ಲಿ ಲಾರಿಯೊಂದರ ಟೈರ್ ಸ್ಪೋಟಗೊಂಡು ನಿಂತ ಪರಿಣಾಮ ಕಿಲೋ ಮೀಟರ್’ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆದಿದ್ದು, ಪರಿಣಾಮವಾಗಿ ಈ ಮಾರ್ಗದ ಪ್ರಯಾಣಿಕರು ಪರದಾಡುವಂತಾಗಿತ್ತು.
ಇಂದು ಮುಂಜಾನೆ ಸೋಮೇಶ್ವರದಿಂದ ಬಂದ ಕ್ಯಾಂಟರ್ ಘಟ್ಟ ಹತ್ತುವ ವೇಳೆ 8ನೆಯ ತಿರುವಿನಲ್ಲಿ ಟೈರ್ ಸ್ಪೋಟಗೊಂಡಿದೆ.
ಇದರಿಂದ ಹಿಂದಕ್ಕೂ, ಮುಂದಕ್ಕೂ ಚಲಿಸದೇ ನಿಂತಿತ್ತು. ಪರಿಣಾಮವಾಗಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಆನಂತರ ಕ್ರೇನ್ ಮೂಲಕ ಕ್ಯಾಂಟರನ್ನು ತೆರವುಗೊಳಿಸಿದ ನಂತರ ಸರಣಿಯಂತೆ ವಾಹನಗಳನ್ನು ಬಿಡಲಾಯಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















