No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Wednesday, April 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಶ್ರೀ ವಿದ್ಯಾಪ್ರಸನ್ನತೀರ್ಥರ ಸುವರ್ಣ ವೈಭವ…

ಡಿ.8ರಂದು ದೇವರಾಯನದುರ್ಗದಲ್ಲಿ ವಿದ್ಯಾಪ್ರಸನ್ನತೀರ್ಥರ ಆರಾಧನಾ ಮಹೋತ್ಸವ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 8, 2022
in Special Articles
0
ಶ್ರೀ ವಿದ್ಯಾಪ್ರಸನ್ನತೀರ್ಥರ ಸುವರ್ಣ ವೈಭವ…
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ವಿಶೇಷ ಲೇಖನ  |

ವಿಪ್ರ ಸಮಾಜದ ಇತಿಹಾಸದ ಪರ್ವಕಾಲವನ್ನೆಬಹುದಾದ ಈ ಶತಮಾನದಲ್ಲಿ ಹಿಂದೂ ಸಮಾಜದ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ಐತಿಹಾಸಿಕ ಕಾರಣಗಳಿಂದ ಹಿಂದೂ ಸಮಾಜದ ಮೇಲ್ಪದರದಲ್ಲಿದ್ದ ಬ್ರಾಹ್ಮಣ ಸಮಾಜ ಅನೇಕ ಒತ್ತಡಗಳಿಗೆ ಸಿಕ್ಕಿ ತನ್ನ ಸ್ವರೂಪವನ್ನೇ ಬದಲಾಯಿಸಿತೊಡಗಿತು. ಸಂಪ್ರದಾಯ ಮತ್ತು ಸುಧಾರಣೆಗಳ ನಡುವೆ ನಡೆಯುತ್ತಿದ್ದ ಸಂಘರ್ಷ, ಬ್ರಾಹ್ಮಣ ಸಮಾಜದ ಮಠಗಳಂತಹ ಧಾರ್ಮಿಕ ಸಂಸ್ಥೆಗಳ ಮೇಲೆಯೂ ತನ್ನ ಪ್ರಭಾವವನ್ನು ಬೀರತೊಡಗಿತು. ಇಂತಹ ಪರ್ವಕಾಲದಲ್ಲಿ ಕೇವಲ ಪರಂಪರೆಯ ದಾರಿಯನ್ನೇ ತುಳಿಯದೆ, ಆದರೆ ಪರಂಪರೆಯಲ್ಲಿ ಅತ್ಯಗತ್ಯವಾದ ಮತ್ತು ಸತ್ವಯುತವಾದ ಅಂಶಗಳನ್ನು ಉಳಿಸಿಕೊಂಡು, ಕಾಲಧರ್ಮಕ್ಕೆ ಅನುಗುಣವಾಗಿ ಬ್ರಾಹ್ಮಣಸಮಾಜಕ್ಕೆ ಅವಶ್ಯಕವಾದ ಸುಧಾರಣೆಗಳನ್ನು ತರಬಲ್ಲ ಧಾರ್ಮಿಕ ನಾಯಕರ, ಮಠಾಧಿಪತಿಗಳ ಅಗತ್ಯವಿದ್ದ ಕಾಲವದು. ಈ ಸನ್ನಿವೇಶದಲ್ಲಿ ಮಾಧ್ವಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡಬಲ್ಲ ಶಕ್ತಿಯನ್ನು, ವ್ಯಕ್ತಿಯನ್ನು, ಶ್ರೀಮಧ್ವಾಚಾರ್ಯರ ಮೂಲ ಸಂಸ್ಥಾನಗಳಲ್ಲಿ ಪ್ರಮುಖವಾದ ಶ್ರೀವ್ಯಾಸರಾಜಮಠ, ಮಾಧ್ವಸಮಾಜಕ್ಕೆ ನೀಡಿತು. ಅವರೇ ಶ್ರೀಮಠದ ಮೂವತ್ತೇಳನೆಯ ಸಂಸ್ಥಾನಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು.
ಶ್ರೀ ವ್ಯಾಸರಾಜ ವಿದ್ಯಾಕರ್ಣಾಟಕ ಸಿಂಹಾಸನದಲ್ಲಿ ಈಗಿನ ಅಧಿಪತಿಗಳಿಗೆ ಪರಮೇಷ್ಟಿ ಗುರುಗಳಾಗಿ ಮೆರೆದ ಕೀರ್ತಿಶೇಷ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರ ವ್ಯಕ್ತಿತ್ವವು ಬಹುಮುಖ ಪ್ರತಿಭೆಗಳಿಂದ ಕೂಡಿದುದು.

ಶ್ರೀ ವಿದ್ಯಾಪ್ರಸನ್ನತೀರ್ಥರ ಪೂರ್ವಾಶ್ರಮದ ಹೆಸರು ನರಸಿಂಹಾಚಾರ್ಯರು. ಪೂರ್ವಾಶ್ರಮದ ರತ್ನಾಕರತೀರ್ಥರ ಏಕೈಕ ಪುತ್ರರು. ಬಾಲ್ಯದಲ್ಲಿಯೇ ರತ್ನಾಕರತೀರ್ಥರಲ್ಲಿ ಸಂಸ್ಕೃತ ವಿದ್ಯಾಭ್ಯಾಸವನ್ನು ಮಾಡಿದ್ದರು. ನಂತರ ತಮ್ಮ ಮಾತಾಶ್ರೀಗಳಾದ ಸಾಧ್ವೀಮಣಿ ಸತ್ಯಭಾಮಮ್ಮನವರ ಜೊತೆಯಲ್ಲಿ ಮೈಸೂರಿಗೆ ಬಂದರು. ಅಲ್ಲಿಯೇ ಪ್ರೌಢವಿದ್ಯಾಭ್ಯಾಸ ಬಿ.ಎ.ಎಲ್.ಎಲ್.ಬಿ. ಪದವಿಯನ್ನು ಪಡೆದರು. ವಕೀಲ ವೃತ್ತಿಯಲ್ಲಿ ಅಲ್ಪ ಕಾಲದಲ್ಲಿ ಮುಂದುವರೆದರು. ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಅಕ್ಕನ ಮಗಳಾದ ಶ್ರೀಮತಿ ಲಕ್ಷ್ಮಮ್ಮ ಎಂಬುವವರನ್ನು ಮದುವೆಯಾಗಿ ಒಂದು ಹೆಣ್ಣು ಮತ್ತು ಒಂದು ಗಂಡು ಮಗುವನ್ನು ಪಡೆದರು.
ಶ್ರೀರತ್ನಾಕರತೀರ್ಥರ ಕರಕಮಲ ಸಂಜಾತರಾದ ಶ್ರೀವಿದ್ಯಾವಾರಿಧಿತೀರ್ಥರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಶ್ರೀಗಳವರು ಇವರನ್ನು “ಗುರುಪುತ್ರರು” ಎಂದೇ ಕರೆಯುತ್ತಿದ್ದರು. ಶ್ರೀಗಳವರು ಇವರನ್ನು ತಮ್ಮ ಸನ್ಯಾಸ ಶಿಷ್ಯರನ್ನಾಗಿ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದರು. ಇದಕ್ಕೆ ಅವರ ತಾಯಿಯವರು ಒತ್ತಾಸೆ ನೀಡಿ ಅನುಮತಿಯನ್ನು ಕೊಟ್ಟರು. ಒಂದು ದಿನ ಶ್ರೀಗಳವರು ಶ್ರೀನರಸಿಂಹಾಚಾರ್ಯರಿಗೆ “ಗುರುಪುತ್ರರಾದ ನೀವೇ ಮುಂದಿನ ಪೀಠಾಧಿಪತಿಗಳಾಗಬೇಕೆಂದೂ, ನಿಮ್ಮೊಡನೆ ನಾನು ಜೊತೆಯಲ್ಲಿದ್ದು ನಿಮ್ಮ ಮಠಾಧಿಪತ್ಯವನ್ನು ನೋಡಬೇಕು” ಎಂದರು.

ವಕೀಲ ವೃತ್ತಿಯಲ್ಲಿ ಹೆಸರು ಗಳಿಸಿದ್ದ ಇವರು ಸಂಸಾರ ಜೀವನವನ್ನು ತೊರೆದು ಸನ್ಯಾಸಾಶ್ರಮ ಪಡೆಯಲು ಮುಜುಗರಪಟ್ಟರು. ಆದರೆ ಗುರುವಾಕ್ಯ ಮೀರಲಾರದೆ ಶ್ರೀಗಳವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದ ಇವರು ಒಪ್ಪಲೇ ಬೇಕಾಯಿತು. ಒಂದು ಒಳ್ಳೆಯ ದಿವಸ ಇವರಿಗೆ ಸನ್ಯಾಸಾಶ್ರಮ ಕೊಟ್ಟು “ಶ್ರೀವಿದ್ಯಾಪ್ರಸನ್ನತೀರ್ಥರು” ಎಂದು ನಾಮಕರಣ ಮಾಡಿದರು. ಶ್ರೀಗಳವರು ತಮ್ಮ ನೂತನ ಶಿಷ್ಯರೊಂದಿಗೆ ಬಹಳ ಕಾಲವಿದ್ದು ಸನ್ಯಾಸಾಶ್ರಮ ಧರ್ಮವನ್ನು ಬೋಧಿಸಿ ಪೂಜಾಕೈಂಕರ್ಯವನ್ನು ಹೇಳಿಕೊಟ್ಟರು ಅಲ್ಲದೆ ವಯೂರು ಶ್ರೀನಿವಾಸಾಚಾರ್ಯರಲ್ಲೂ ಹೆಚ್ಚಿನ ವ್ಯಾಸಂಗವನ್ನು ಮಾಡಿಸಿದರು. ಇವರ ಬುದ್ಧಿಕುಶಲತೆ ಮಾತಿನ ವೈಖರಿ ಹಾಗೂ ಕಲ್ಪನಾಶಕ್ತಿಯನ್ನು ಕಂಡು ಶ್ರೀಗಳವರು ಆನಂದ ಪಡುತ್ತಿದ್ದರು. ಶ್ರೀಗಳವರು ಬೃಂದಾವನಸ್ಥರಾದ ಮೇಲೆ ಸಂಸ್ಥಾನದ ಆಡಳಿತ ಬುದ್ಧಿವಂತರೂ ಆದ ಇವರಿಗೆ ಆಡಳಿತ ಅಷ್ಟು ಕಷ್ಟವಾಗಲಿಲ್ಲ.
ದೇಶ ಪರ್ಯಟನೆಗಾಗಿ ತಮ್ಮ ಶಿಷ್ಯರುಗಳೊಂದಿಗೆ ದಕ್ಷಿಣ ದೇಶದ ಕೆಲವು ಸ್ಥಳಗಳನ್ನು ಸಂದರ್ಶಿಸಿದರು. ಇವರ ಅಲ್ಪಕಾಲದ ಸಂಚಾರದಲ್ಲಿ ವೇದ ಪ್ರವಚನ ಹಾಗೂ ಮಧ್ವಮತದ ತತ್ವಗಳನ್ನು ಉಪದೇಶಿಸಿದರು. ಹಾಗೂ ಉಪನ್ಯಾಸಗಳನ್ನು ಮಾಡಿದರು. ಇದರಿಂದ ಹೆಚ್ಚಿನ ಶಿಷ್ಯರನ್ನು ತಮ್ಮವರನ್ನಾಗಿ ಮಾಡಿಕೊಂಡರು. ತಮ್ಮ ಸಂಚಾರಕಾಲದಲ್ಲಿ ಸ್ಥಿರ-ಚರ ಆಸ್ತಿಗಳನ್ನು ಗುರ್ತಿಸಿ ಕೈಬಿಟ್ಟು ಹೋಗುತ್ತಿದ್ದ ಆಸ್ತಿಗಳಿಗೆ ಪುನಶ್ಚೇತನ ನೀಡಿದುದಲ್ಲದೆ. ಕೈಬಿಟ್ಟು ಹೋಗಿದ್ದ ಗ್ರಾಮ ಭೂಮಿಗಳನ್ನು ತಮ್ಮದನ್ನಾಗಿ ಮಾಡಿಕೊಂಡು ನೋಂದಣಿ ಮಾಡಿಸಿ ಭದ್ರಮಾಡಿಕೊಂಡರು.

ಶ್ರೀಪಾದಂಗಳವರು ವಿಚಾರಶೀಲರು. ಜೀವನವಿಕಾಸಕ್ಕೆ ವಿಚಾರ ಶೀಲತೆಯೂ ಅಗತ್ಯ. ವಿಜ್ಞಾನವು ಆಧ್ಯಾತ್ಮದ ನಾಶಕ್ಕೆ ಕಾರಣವಾಗುವುದೆಂಬುದು ತಪ್ಪು ಕಲ್ಪನೆ ಎಂಬುದು ಅವರ ಅನಿಸಿಕೆ. ಅಧ್ಯಾತ್ಮವು ವಿಜ್ಞಾನದ ಮಟ್ಟಕ್ಕೆ ಪ್ರಚಾರವಾಗಬೇಕು. ವಿಜ್ಞಾನ, ಅಧ್ಯಾತ್ಮಗಳು ಪರಸ್ಪರ ಪೂರಕವಾಗಿ ಸಮವಾಗಿ ಕೈಗೂಡಿಸಿ ಬೆಳೆದರೆ, ಅದು ಮನುಕುಲದ ಬಾಳು ಬಂಗಾರವಾಗಲು ಕಾರಣವಾಗುವುದು. ಆಧ್ಯಾತ್ಮದ ಸಮಸ್ಯೆಗಳನ್ನೂ ವೈಚಾರಿಕತೆಯ ಒರೆಗಲ್ಲಿಗೆ ಹಚ್ಚಬೇಕು ಎಂಬುದು ಅವರ ವಿಚಾರಸರಣಿ.

ಇವರು ಶಾಸ್ತ್ರನಿಷ್ಣಾತರೂ, ಉತ್ತಮ ಕವಿಗಳೂ, ಕೃತಿಕಾರರೂ, ಬದುಕಿನ ದಾರ್ಶನಿಕರೂ, ವಿಚಾರಶೀಲರೂ, ವಾಗ್ಮಿಗಳೂ, ಆಗಿದ್ದವರು. ಇವರ ಕಾವ್ಯ ಪ್ರತಿಭೆಗೆ ಕೈಗನ್ನಡಿಯಾಗಿ, “ವೈಕುಂಠ ವರ್ಣನೆ” “ಬದರಿಕಾಶ್ರಮ ವರ್ಣನೆ” “ಸುಮಧ್ವವಿಜಯ ಸಾರಸಂಗ್ರಹ” ಕಿರುಕಾವ್ಯಗಳು ಮೂಡಿ ಬಂದಿವೆ. ಶ್ರೀಪಾದಂಗಳವರು, ವೇದಾಂತಶಾಸ್ತ್ರ ನಿಷ್ಣಾತರಾಗಿ, ಹಲವಾರೆಡೆಗಳಲ್ಲಿ, ಹಲವಾರು ಬಾರಿ, ಭಾಷ್ಯ, ಚಂದ್ರಿಕಾ, ಸುಧಾ, ಗೀತಾ, ಮಹಾಪುರಾಣಗಳ ಪ್ರವಚನಗಳನ್ನು ಜರಗಿಸಿದ್ದಾರೆ. ವಾಗ್ಝರಿಯಿಂದ ಇವರು ಕೇಳುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ. ಇವರ ಕೃತಿಗಳು, ವಸ್ತುವೈವಿಧ್ಯತೆಯಿಂದ ಭರಿತವಾಗಿದೆ.
ದೇಹಸ್ಥಿತಿ ಕುಂಠಿತವಾಗುತ್ತಿರುವಾಗಲೇ ೧೯೬೯ರಲ್ಲಿ ತಮ್ಮ ನೆಚ್ಚಿನ ಶಿಷ್ಯರಾದ ವೇ|| ಶ್ರೀಪೂರ್ಣಬೋಧಾಚಾರ್ಯರಿಗೆ ಆಶ್ರಮ ನೀಡಿ ವೇದಾಂತ ಪೀಠವನ್ನು ಸಂಪೂರ್ಣವಾಗಿ ವಹಿಸಿಕೊಟ್ಟ ಮಾರ್ಗಶಿರ ಶುದ್ಧ ಪೂರ್ಣಿಮೆಯ ದಿನ ಬೃಂದಾವನಸ್ಥರಾದರು. ಇವರ ಇಚ್ಛೆಯಂತೆ ಇವರ ಬೃಂದಾವನವನ್ನು ಪೂರ್ವಾಶ್ರಮದ ತಂದೆಯವರಾಗಿದ್ದ ವಿದ್ಯಾರತ್ನಕರತೀರ್ಥರ ಸನ್ನಿಧಿಯಲ್ಲಿಯೇ ಮಾಡಲಾಯಿತು.
ಶ್ರೀಮತ್ಕೃಷ್ಣಪದಂಭೋಜಮಾನಸಂ ಕವಿಪುಂಗವಮ್ |
ಶ್ರೀಮದ್ವಿದ್ಯಾಪ್ರಸನ್ನಾಬ್ಧಿಂ ಗುರುಂ ವಂದೇ ನಿರಂತರಮ್ ||

ಇವರಿಗೆ ಮಧ್ವಮತ ಪ್ರಚಾರಕ್ಕಾಗಿ ದೇಶ ಸಂಚಾರ ಮಾಡಬೇಕೆಂಬ ಅಸೆಯೇನೋ ಇತ್ತು. ಆದರೆ ಅದೇ ಸಮಯದಲ್ಲಿ ಇಂಡಿಯಾ ಪಾಕಿಸ್ತಾನ ಯುದ್ಧವು ಪ್ರಾರಂಭವಾದುದರಿಂದ ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿ ಆ ಸಮಯದಲ್ಲಿ ದೇವರನಾಮಗಳನ್ನು ರಚಿಸಿ ಅದನ್ನು ತಮ್ಮ ಶಿಷ್ಯರಿಂದ ಹಾಡಿಸಿ ಸಂತೋಷ ಪಡುತ್ತಿದ್ದರು. ಇವರು ಸುಮಾರು ಮುನ್ನೂರು ದೇವರನಾಮಗಳನ್ನು ರಚಿಸಿದ್ದಾರೆ. ಇದರೊಂದಿಗೆ ವೇದ ಪ್ರವಚನ ಹಾಗೂ ಶಿಷ್ಯರಿಗೆ ವೇದ ಪಾಠಗಳನ್ನು ಹೇಳಿಕೊಡುತ್ತಿದ್ದರು. ಶ್ರೀಕೃಷ್ಣನ ಪೂಜೆಗಾಗಿ ಅಪಾರವಾದ ಹೂದೋಟವನ್ನು ನಿರ್ಮಿಸಿದರು. “ವ್ಯಾಸತೀರ್ಥ” ಎಂಬ ಹೆಸರಿನ ಕೊಳವನ್ನು ನಿರ್ಮಿಸಿ ಆ ಕೊಳದ ನೀರನ್ನು ಹೂ ತೋಟಕ್ಕೆ ಉಪಯೋಗಿಸುತ್ತಿದ್ದರು. ಜ್ಞಾನಾರ್ಜನೆಯನ್ನು ಉತ್ತಮ ಪಡಿಸಲು ಒಂದು ಪುಸ್ತಕ ಭಂಡಾರವನ್ನು ಸ್ಥಾಪಿಸಿದರು. ಎಳೆಯ ಮಕ್ಕಳಿಗೂ ಅರ್ಥವಾಗುವ ಹಾಗೆ ಪಾಠ ಹೇಳಿಕೊಡುತ್ತಿದ್ದರು. ವೇದಾಂತ, ಸಾಹಿತ್ಯ, ವ್ಯಾಕರಣದ ಅಧ್ಯಯನಕ್ಕಾಗಿ ಪಂಡಿತರುಗಳನ್ನು ನೇಮಿಸಿದ್ದರು. ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ದ್ವೈತವೇದಾಂತವನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುತ್ತಿದ್ದುದಲ್ಲದೇ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದವರಿಗೆ ಕಲಿತು ಸ್ಪಷ್ಟವಾದ ಉಚ್ಚಾರಣೆಯೊಂದಿಗೆ ಚೆನ್ನಾಗಿ ಹೇಳಿದವರಿಗೆ ಬಹುಮಾನವನ್ನು ಕೊಡುತ್ತಿದ್ದರು. ಬೆಂಗಳೂರಿನ ವಿಜಯ ಕಾಲೇಜು ಹಾಗೂ ಮೈಸೂರಿನ ಶಾರದಾವಿಲಾಸ ಕಾಲೇಜುಗಳಿಗೆ ಹೇರಳವಾಗಿ ಧನಸಹಾಯವನ್ನು ಮಾಡಿದ್ದಾರೆ. ತಮ್ಮ ಶಿಷ್ಯರುಗಳಿಗೆ ಧನಸಹಾಯದಿಂದ ಮಂಡ್ಯದಲ್ಲಿ ಒಂದು ಮಠವನ್ನು ಕಟ್ಟಿಸಿ ಶ್ರೀಗೋಪಾಲಕೃಷ್ಣದೇವರು ಹಾಗೂ ಪ್ರಾಣದೇವರನ್ನು ಪ್ರತಿಷ್ಠಾಪನೆ ಮಾಡಿದರು. ಬೆಂಗಳೂರು, ತಿರುಚನಾಪಳ್ಳಿ, ಕರೂರು, ಶ್ರೀರಂಗ ಮುಂತಾದ ಸ್ಥಳಗಳಲ್ಲಿ ಮಧ್ವ ಸಂಘವನ್ನು ಸ್ಥಾಪಿಸಿದರು ಅಖಿಲ ಭಾರತ ಮಾಧ್ವ ಮಹಾಮಂಡಲದ ಅಸ್ತಿತ್ವಕ್ಕೆ ಮೂಲಕಾರಣರಾಗಿದ್ದರು. ಅಷ್ಟೇ ಅಲ್ಲದೆ ಅದರ ಅಧ್ಯಕ್ಷ ಪದವಿಯನ್ನು ಪಡೆದರು.
ಜನರ ಕಷ್ಟ ಸುಖಗಳನ್ನು ಆಲಿಸಿ ಅದಕ್ಕೆ ಪರಿಹಾರವನ್ನು ನೀಡುತ್ತಿದ್ದರು. ಅಷ್ಟೇ ಅಲ್ಲದೆ ಶ್ರೀಮಠದ ಶಿಷ್ಯರ ಗಂಡು ಮಕ್ಕಳಿಗೆ ಉಪನಯನವನ್ನು ಮಾಡಿ “ಚಂದ್ರಿಕಾಗುರುಕುಲ”ವನ್ನು ಸ್ಥಾಪಿಸಿ ಗುರುಕುಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸ್ತೋತ್ರ, ವೇದ, ಶಾಸ್ತ್ರಗಳ ಪಾಠವನ್ನು ಬೋಧಿಸುತ್ತಿದ್ದರು. ಅದರೊಂದಿಗೆ ಲೌಕಿಕ ವಿದ್ಯೆಗೆ ಬೇಕಾದ ಪಾಠವನ್ನು ಪದವಿ ತರಗತಿಯವರೆಗೆ ಬೋಧಿಸುತ್ತಿದ್ದರು. ನಂತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿಯನ್ನು ಕೊಡಿಸಿದರು. ಮಠದೊಳಗಿನ ಆಚಾರ ವಿಚಾರಗಳೇನೇ ಇದ್ದರೂ ಹೊರ ಪ್ರಪಂಚದಲ್ಲಿ ಹೇಗಿರಬೇಕೋ ಹಾಗೆ ವ್ಯಾವಹಾರಿಕವಾಗಿ ಇದು ಒಂದು ಪಂಗಡಕ್ಕೆ ಮಾತ್ರ ಸೇರಿದ ಗುರುಗಳಾಗಿರದೆ ಎಲ್ಲ ಪಂಗಡದವರಿಗೂ ಬೇಕಾಗಿದ್ದು ಅವರಿಂದ ವಿಶ್ವಾಸ, ಪ್ರೀತಿ ಭಕ್ತಿಯನ್ನು ಪಡೆದಿದ್ದರು.

ಡಿ.8ರಂದು ದೇವರಾಯನದುರ್ಗದಲ್ಲಿ ವಿದ್ಯಾಪ್ರಸನ್ನತೀರ್ಥರ ಆರಾಧನಾ ಸುವರ್ಣ ಮಹೋತ್ಸವ
ಐತಿಹಾಸಿಕ- ಪೌರಾಣಿಕ ಹಿನ್ನೆಲೆಯ ಪ್ರಾಕೃತಿಕ ಸೊಬಗಿನ ಬೆಂಗಳೂರಿಗೆ ಸಮೀಪವಿರುವ ನಗರ ಜಂಜಡಗಳಿಂದ ಮುಕ್ತವಾಗಿ ದೇವರಾಯನದುರ್ಗದ ಶ್ರೀ ಭೋಗ ಲಕ್ಷ್ಮೀ ನರಸಿಂಹಸ್ವಾಮಿ ಮತ್ತು ಯೋಗ ನರಸಿಂಹ ದಿವ್ಯ ಸನ್ನಿಧಾನ ಆಸ್ತಿಕ ಭಕ್ತಕೋಟಿಯನ್ನು ತನ್ನೆಡೆಗೆ ಸೆಳೆಯುತ್ತಿರುವ ಪರಮ ಪಾವನ ತಾಣ.

ಶ್ರೀಸನ್ನಿಧಿಯ ಪಕ್ಕದಲ್ಲೇ ಇರುವ ಕೊಡಿಗೇಹಳ್ಳಿ ಪ್ರಸನ್ನ ಶ್ರೀರಾಮ ಮಂದಿರ ಟ್ರಸ್ಟ್ (ರಿ)ನಲ್ಲಿ ಸಂಸ್ಥೆಯ ಸಾಮ್ರಾಟ್ ಪೋಷಕರಾಗಿದ್ದ ಸೋಸಲೆ ಶ್ರೀ ವ್ಯಾಸರಾಜ ಯತಿ ಪರಂಪರೆ , ಹರಿದಾಸ – ಯತಿವರ್‍ಯ, ಸಂತಶ್ರೇಷ್ಠ, ಶಕಪುರುಷ, ಯುಗಯೋಗಿ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವವನ್ನು ಶ್ರೀ ಪಯೋನಿಧಿ ಸಭಾಂಗಣದಲ್ಲಿ ಮಾರ್ಗಶಿರ ಶುದ್ಧ ಹುಣ್ಣಿಮೆ – ಡಿಸೆಂಬರ್ 8 ಗುರುವಾರ ಆಯೋಜಿಸಲಾಗಿದೆ.

ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರ ಜೀವನ – ಸಾಧನೆ – ಮಹಿಮಾ ಕುರಿತು ಪ್ರವಚನ ನಂತರ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರಿಂದ ವಿರಚಿತ ದೇವರನಾಮಗಳ ಗಾಯನ- ವ್ಯಾಖ್ಯಾನ ಹರಿದಾಸ ನಮನ ಏರ್ಪಡಿಸಲಾಗಿದೆ ಎಂದು ಮಾನ್ಯೇಜಿಂಗ್ ಟ್ರಸ್ಟೀ ಕೆ.ಎಂ.ಫಣಿರಾಜ್ ತಿಳಿಸಿರುತ್ತಾರೆ.
ಸಂಸ್ಥೆಯು ಇದೀಗ 80 ವಸಂತಗಳನ್ನು ಪೂರೈಸಿ ಹಲವಾರು ಧಾರ್ಮಿಕ- ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಅವಿರತವಾಗಿ ನಡೆಸಿಕೊಂಡುಬರುತ್ತಿದೆ. ಸಂಸ್ಥೆಯ ವತಿಯಿಂದ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತವರ್ಗಕ್ಕೆ ಸಭಾಂಗಣ, ಪಾಕಶಾಲೆ, ಸ್ನಾನಗೃಹ ಸಕಲ ಸೌಕರ್ಯವಿರುವ ಕಟ್ಟಡವನ್ನು ಉಪನಯನ , ಮದುವೆ ಇನ್ನಿತರ ಕಾರ್ಯಕ್ರಮ ನಡೆಸಲು ನೀಡಲಾಗುವುದು. ಆಸಕ್ತರು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ದೂ: 98807 10168 .
ವಿಶೇಷ ಲೇಖನ: ಪರಗಿ ಭಾರತಿರಮಣಾಚಾರ್     

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaSpecial Articleವಿಶೇಷ ಲೇಖನಶ್ರೀ ವಿದ್ಯಾಪ್ರಸನ್ನತೀರ್ಥ
Share197Tweet123Send
Previous Post

ಆಗುಂಬೆ ಘಾಟಿಯಲ್ಲಿ ಲಾರಿ ಟೈರ್ ಸ್ಪೋಟ: ಟ್ರಾಫಿಕ್ ಜಾಮ್, ಪರದಾಡಿದ ಪ್ರಯಾಣಿಕರು

Next Post

ಮೈಸೂರಿನಲ್ಲಿ ವಿಂಧ್ಯಾ ಕಚೇರಿ ಉದ್ಘಾಟನೆ: ಅಂಗವಿಕಲರ ಉದ್ಯೋಗಕ್ಕೆ ವಿನೂತನ ವೇದಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮೈಸೂರಿನಲ್ಲಿ ವಿಂಧ್ಯಾ ಕಚೇರಿ ಉದ್ಘಾಟನೆ: ಅಂಗವಿಕಲರ ಉದ್ಯೋಗಕ್ಕೆ ವಿನೂತನ ವೇದಿಕೆ

ಮೈಸೂರಿನಲ್ಲಿ ವಿಂಧ್ಯಾ ಕಚೇರಿ ಉದ್ಘಾಟನೆ: ಅಂಗವಿಕಲರ ಉದ್ಯೋಗಕ್ಕೆ ವಿನೂತನ ವೇದಿಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ನಾಲ್ಕು ಸಾವು : ಸಚಿವ ಮಧುಬಂಗಾರಪ್ಪ

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ನಾಲ್ಕು ಸಾವು : ಸಚಿವ ಮಧುಬಂಗಾರಪ್ಪ

April 22, 2026
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ: ಶಿಕ್ಷಣ ಸಚಿವ ಮಧುಬಂಗಾರಪ್ಪ

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ: ಶಿಕ್ಷಣ ಸಚಿವ ಮಧುಬಂಗಾರಪ್ಪ

April 22, 2026
ಮೇ 15ರೊಳಗೆ ಶಿವಮೊಗ್ಗದ ಈ ಸಮಸ್ಯೆಗಳು ಬಗೆಹರಿಯದಿದ್ದರೆ ಉಗ್ರ ಹೋರಾಟ | ಕೆ.ಈ. ಕಾಂತೇಶ್ ಎಚ್ಚರಿಕೆ

ಮೇ 15ರೊಳಗೆ ಶಿವಮೊಗ್ಗದ ಈ ಸಮಸ್ಯೆಗಳು ಬಗೆಹರಿಯದಿದ್ದರೆ ಉಗ್ರ ಹೋರಾಟ | ಕೆ.ಈ. ಕಾಂತೇಶ್ ಎಚ್ಚರಿಕೆ

April 22, 2026
ಮುಸ್ಲಿಂರನ್ನು ಓಲೈಸುವ ಹಠ ಕಾಂಗ್ರೆಸ್ ಪಕ್ಷ ಇನ್ನೂ ಬಿಟ್ಟಿಲ್ಲ : ಕೆ.ಎಸ್. ಈಶ್ವರಪ್ಪ ದೂರು

ಮುಸ್ಲಿಂರನ್ನು ಓಲೈಸುವ ಹಠ ಕಾಂಗ್ರೆಸ್ ಪಕ್ಷ ಇನ್ನೂ ಬಿಟ್ಟಿಲ್ಲ : ಕೆ.ಎಸ್. ಈಶ್ವರಪ್ಪ ದೂರು

April 22, 2026
ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣದ ವಿಚಾರದಲ್ಲಿ ಎಂಪಿ ರಾಘವೇಂದ್ರ ಹೇಳಿದ್ದೇನು?

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣದ ವಿಚಾರದಲ್ಲಿ ಎಂಪಿ ರಾಘವೇಂದ್ರ ಹೇಳಿದ್ದೇನು?

April 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL